Skip to main content

Blog number 1725. ಕರ ಎಂದು ಸಿಖ್ ಧರ್ಮಿಯರು ಕರೆಯುವ ಕೈ ಬಳೆ ಎಂಬ ಕಡ ನಾನು 8 ವರ್ಷದಿಂದ ಧರಿಸುತ್ತಿದ್ದೇನೆ.

#ಕಡ_ಕ್ಕೆಬಳೆ_ಎಂಬ_ಬ್ರೇಸಲೇಟ್_ವ್ಯಾಮೋಹ
#ಚಲನ_ಚಿತ್ರ_ನಟ_ವಿಷ್ಣುವರ್ದನ್_ಪ್ರಭಾವ
#ಅನೇಕ_ರೀತಿಯ_ಕಡ_ಧರಿಸಿದ್ದೆ
#ಅಮೃತಸರದಿಂದ_ಕೆಲವು_ತಂದಿದ್ದೆ
#ಕಳೆದ_ಎಂಟು_ವರ್ಷದಿಂದ_ದರಿಸಿರುವ_ಈ_ಬಳೆ
#ಕೆನಡಾದ_ಟ್ರಾನ್ಸ್_ಪೋರ್ಟ್_ಮಾಲಿಕ_ನೀಡಿದ_ಉಡುಗೊರೆ.

   ಖ್ಯಾತ ಚಲನ ಚಿತ್ರ ನಟ ವಿಷ್ಣುವರ್ದನ್ ಧರಿಸುತ್ತಿದ್ದ ಉಕ್ಕಿನ ಕೈ ಬಳೆ ನನಗೆ ಕೈ ಬಳೆ ದರಿಸಲು ಪ್ರೇರಣೆ ಆಗಿತ್ತು.
   1998 ರಿಂದ ಆಗಾಗ್ಗೆ ಕೈ ಬಳೆ ಧರಿಸುತ್ತಿದ್ದೆ ನಂತರ 2007ರಲ್ಲಿ ಪಂಜಾಬಿನ ಅಮೃತಸರದ ಸ್ವರ್ಣ ದೇವಾಲಯಕ್ಕೆ ಸಾಗರದ ಹಾಲಿ ಸಿಗಂದೂರು ಪ್ಯೂಯಲ್ ಸ್ಟೇಷನ್ ಮಾಲಿಕರಾದ ನಾರಾಯಣರಾವ್ ಜೊತೆ ಹೋಗಿದ್ದಾಗ ಕೆಲ ಬಳೆಗಳನ್ನು ದೇವಾಲಯದ ಸಂಕೀರ್ಣದಲ್ಲೇ ಖರೀದಿಸಿ ತಂದಿದ್ದೆ.
   ಪ್ರತಿಯೊಬ್ಬ ಸಿಖ್ ದರ್ಮಿಯ ಪುರುಷರು ಈ ಬಳೆ ಕಡ್ಡಾಯವಾಗಿ ಧರಿಸುತ್ತಾರೆ ಇದು ಅವರ ದರ್ಮ ಮತ್ತು ದೇವರ ಸಂಬಂದ ದೃಡೀಕರಿಸುವ ಸಂಕೇತ.
   ಅವರ ಗುರು ಗೋವಿಂದ್ ಸಿಂಗ್ ರು ಹೇಳಿರು ಪಂಚ "ಕ" ಕಾರಗಳಾದ ಕೇಶ - ಕಂಗಾ-ಕರ - ಕಚೇರ- ಕಿರ್ಪಾಣ ಪ್ರತಿಯೊಬ್ಬ ಸಿಖ್ ಧರ್ಮ ಅನುಯಾಯಿ ಪುರುಷರು ಪಾಲಿಸುತ್ತಾರೆ.
   #ಕೇಶ.. ಇದು ಸಿಖ್ ಧರ್ಮ ಅನುಯಾಯಿ ತನ್ನ ತಲೆಗೂದಲು ಗಡ್ಡ ಯಾವ ಕಾರಣಕ್ಕೂ ಕ್ಷೌರ ಮಾಡಬಾರದು.
  #ಕ೦ಗಾ... ನೀಳವಾದ ಕೇಶ ಬಾಚಲು ಸದಾ ಜೊತೆಗೆ ಇಟ್ಟು ಕೊಳ್ಳುವ ಮರದ ಬಾಚಣಿಗೆ.
  #ಕರ... ತನ್ನ ಬಲಗೈಯಲ್ಲಿ ಸ್ಟೀಲ್ ಅಥವ ಕ್ಯಾಸ್ಟ್ ಐರನ್ ನ ಮಳೆ ದರಿಸಬೇಕು.
  #ಕಚೇರ... ನಿರ್ಧಿಷ್ಟ ಶೈಲಿಯ ಪುರುಷ ಒಳ ಉಡುಪು.
  #ಕಿರ್ಪಾಣ... ಕುರುಪಿ ಆಕಾರದ ಲೋಹದ ಕತ್ತಿ ಕಡ್ಡಾಯ ದಾರಣೆ.
   ಬೇರೆ ದರ್ಮಿಯರು ಕರ ಎಂಬ ಕಡ ಧರಿಸುತ್ತಾರೆ ಉತ್ತರ ಭಾರತೀಯ ಹಿಂದೂ ದರ್ಮದ ಅನೇಕ ಜಾತಿಗಳಲ್ಲಿ ಈ ಕಡದಾರಣೆ ಧಾರ್ಮಿಕ ಕಡ್ಡಾಯ ಇಲ್ಲದಿದ್ದರು ಶೋಕಿಗಾಗಿ ಧರಿಸುತ್ತಾರೆ.
   ಮುಸ್ಲಿಂರಲ್ಲಿ ಕಡ ಅಥವ ಕೈ ಬಳೆ ಪುರುಷರು ದರಿಸುವುದಿಲ್ಲ ಅವರಿಗೆ ಇದು ಹರಾಮ್ ಆಗಿದೆ.
  ಈಗ ನಾನು 2015 ರಿಂದ ದರಿಸುತ್ತಿರುವ ಕರ (ಕಡ) ಕೆನಡಾದ ಪ್ರಖ್ಯಾತ ಟ್ರಾನ್ಸ್ ಪೋರ್ಟ್ ಮಾಲಿಕ ಸರ್ದಾರ್ಜಿ ನನಗೆ ಉಡುಗೊರೆ ಆಗಿ ನೀಡಿದ್ದು ಅವರಿಗೆ ನನ್ನಿಂದ ಸಣ್ಣ ಸಹಾಯ ಆಗಿತ್ತು ಅದಕ್ಕಾಗಿ ಅವರು ನೀಡಿದ ನೆನಪಿನ ಕಾಣಿಕೆ ಈಗ 8 ವರ್ಷದಿಂದ ನನ್ನ ಕೈಯಲ್ಲಿದೆ.
   ಅವರ ಮತ್ತು ನನ್ನ ನೆನಪಿನ ಪೋಟೊ ಕಳೆದು ಹೋಗಿತ್ತು ಅಂತ ಭಾವಿಸಿದ್ದೆ ಮೊನ್ನೆ ಹೊಸ ಪೋನಿಗೆ update ಆಗುವಾಗ ಸಿಕ್ಕಿತು ಆದರೆ ಅವರ ಹೆಸರು ಮರೆತು ಬಿಟ್ಟಿದ್ದೇನೆ.. ಏನಂತ ಅವರ ಹೆಸರು ಪೋನ್ ನಲ್ಲಿ ಸೇವ್ ಮಾಡಿದ್ದೀನಿ ನೆನಪಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...