Skip to main content

Blog number 1694. ನಮ್ಮ ಊರಿನ ಪದ್ಮಾವತಿ ಲಾರಿ ಮಾಲಿಕ ರಾಮಣ್ಣ ಇನ್ನಿಲ್ಲ.

#ಶ್ರದ್ಧಾಂಜಲಿಗಳು.

#ಸಜ್ಜನ_ಮಿತಭಾಷಿ_ನಮ್ಮ_ಊರಿನ_ಪದ್ಮಾವತಿ_ಲಾರಿ_ಮಾಲಿಕ_ರಾಮಣ್ಣ.

#ಚಾಮರಾಜ_ನಗರ_ಜಿಲ್ಲೆಯ_ಕಾಡಳ್ಳಿಯವರು.

#ಆನಂದಪುರಂನ_ಗುತ್ತಿಗೆದಾರ_ಕೊಲ್ಲಾ_ಮೇಸ್ತ್ರಿಗಳ_ಲಾರಿ_ಡ್ರೈವರ್_ಮಾದಣ್ಣ_ಇವರ_ಅಣ್ಣ.

#ಸೂರ್ಯಾಸ್ತದ_ನಂತರ_ಮತ್ತು_ಮಳೆಗಾಲದಲ್ಲಿ_ಲಾರಿ_ಓಡಿಸುತ್ತಿರಲಿಲ್ಲ

#ದುಡ್ಡಿನ_ಹಪಾಹಪಿ_ಇಲ್ಲದ_ನಿರ್ಲಿಪ್ತ_ಮನುಷ್ಯ.


   ಲಾರಿ ರಾಮಣ್ಣ ಅಂತನೇ ಆನಂದಪುರಂನಲ್ಲಿ ಪ್ರಸಿದ್ಧಿ ಆಗಿದ್ದ ಪದ್ಮಾವತಿ ಲಾರಿ ಮಾಲೀಕರಾದ ರಾಮಣ್ಣರ ಸ್ವಂತ ಊರು ಚಾಮರಾಜ ನಗರದ ಸಮೀಪದ ಕಾಡಳ್ಳಿ.
   ಇವರ ಅಣ್ಣ ಮಾದಣ್ಣ ಆನಂದಪುರಂನ ಆ ಕಾಲದ ಗುತ್ತಿಗೆದಾರರಾದ ಕೊಲ್ಲಾ ಬೋವಿ ಮೇಸ್ತ್ರಿಗಳ ಲಾರಿ ಚಾಲಕರಾಗಿ ಬಂದವರು ನಂತರ ಚಿಕ್ಕ ಬಾಲಕನಾದ ಅವರ ತಮ್ಮ ರಾಮುನನ್ನ ಕರೆದುಕೊಂಡು ಬಂದು ತಮ್ಮ ಜೊತೆ ಕಂಡಕ್ಟರಾಗಿ ಇಟ್ಟುಕೊಂಡು ನಂತರ ಡ್ರೈವರ್ ಮಾಡುತ್ತಾರೆ.
   ನಂತರ ಡ್ರೈವರ್ ಆದ ರಾಮಣ್ಣ ಬಹಳ ವರ್ಷ ಸೌದಿಯಿಂದ ಬಂದು ಲಾರಿ ಮಾಲಿಕರಾಗಿದ್ದ ಆನಂದಪುರಂ ರೋಡ್ ಲೈನ್ಸ್ ನ ಗೌಸು ಅವರ ಲಾರಿಯಲ್ಲಿ ಡ್ರೈವರ್ ಆಗಿದ್ದರು.
   ಗೌಸ್ ಅವರ ಲಾರಿ ಆನಂದಪುರಂನ ಲಾಟೆರೇಟ್ (ಜಂಬಿಟ್ಟಿಗೆ) ಕಲ್ಲು ಸಾಗಾಣಿಕೆ ಮಾಡುತ್ತಿತ್ತು ಆಗ ಗೌಸ್ ಅವರ ರೂಲ್ಸ್ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಓಡಿಸಬೇಕಿತ್ತು, ಅವಸರ - ವೇಗದ ಚಾಲನೆ ಅವರಿಗೆ ನಿಶೇದವಾಗಿತ್ತು.
  ನಂತರ ಸ್ವಂತ ಲಾರಿ ಖರೀದಿಸಿದ್ದ ರಾಮಣ್ಣ ಅದಕ್ಕೆ ಹುಂಚಾದ ಪದ್ಮಾವತಿ ದೇವರ ಹೆಸರು ಇಟ್ಟಿದ್ದರಿಂದ ಇವರಿಗೆ ಪದ್ಮಾವತಿ ರಾಮಣ್ಣ ಅಂತಲೇ ಹೆಸರಾಯಿತು ರಾಮಣ್ಣ ಕೂಡ ಅವರ ಹಳೆಯ ಮಾಲಿಕರಾದ ಗೌಸ್ ಸಾಹೇಬರಂತೆ ಸೂರ್ಯಾಸ್ತದ ನಂತರ ಲಾರಿ ಓಡಿಸುತ್ತಿರಲಿಲ್ಲ.
  ನಮ್ಮ ಯಡೇಹಳ್ಳಿಯ ಹೊಸನಗರ ರಸ್ತೆಯಲ್ಲಿ ಸ್ವಂತ ಮನೆ ಮಾಡಿದ್ದಾರೆ, ನಮ್ಮ ಊರಿನ ವರಸಿದ್ಧಿವಿನಾಯಕ ದೇವರ ದೇವಾಲಯ ನಿರ್ಮಾಣದಲ್ಲಿ, ಪ್ರತಿಷ್ಟಾಪನೆಯಲ್ಲಿ ಮತ್ತು ಪ್ರತಿ ವರ್ಷದ ಜಾತ್ರೆಯಲ್ಲಿ ನನ್ನ ಜೊತೆ ಇದ್ದವರು.
  ಸ್ವಭಾವತ ರಾಮಣ್ಣ ಮಿತಭಾಷಿ ಮತ್ತು ಸಜ್ಜನರಾಗಿದ್ದರು ವ್ಯವಹಾರದಲ್ಲಿ ಮೋಸ ದಗಾ ಅವರಿಗೆ ಆಗಿ ಬರುತ್ತಿರಲಿಲ್ಲ, ಯಾರೊಬ್ಬರ ಮನಸ್ಸೂ ನೋಯಿಸದ ವ್ಯಕ್ತಿತ್ವ ಅವರದ್ದು.
     ಇತ್ತೀಚೆಗೆ ತೀವ್ರವಾದ ಜಾಂಡೀಸ್ ಕಾಯಿಲೆಯಿಂದ ಮಂಗಳೂರಿನ ವೆನ್ ಲಾಕ್ ಆಸ್ಟತ್ರೆಗೆ ಅಡ್ಮಿಟ್ ಆದವರು ಮೊನ್ನೆ ಅಲ್ಲೇ ಜೀವ ತ್ಯಾಗ ಮಾಡಿದರು (8- ಆಗಸ್ಟ್ -2023) ನಿನ್ನೆ ಅವರ ಅಂತ್ಯ ಸಂಸ್ಕಾರ ಚಾಮರಾಜನಗರದ ಕಾಡಳ್ಳಿಯಲ್ಲಿ ನೆರವೇರಿತು.
   ನನಗೆ ತಡವಾಗಿ ಸುದ್ದಿ ತಿಳಿಯಿತು ಇವರ ಅತ್ಯಾಪ್ತ ಗೆಳೆಯ ಕ್ಯಾಂಟೀನ್ ನಾಗರಾಜ ಮತ್ತು ಇವರು ಸದಾ ಜೊತೆಯಲ್ಲಿರುವವರು ಅವರೂ ರಾಮಣ್ಣರ ಅಕಾಲಿಕ ಸಾವಿನಿಂದ ದಿಗ್ಮೂಡರಾಗಿದ್ದಾರೆ.
  ಸಜ್ಜನ ಮಿತಭಾಷಿ ನಮ್ಮ ಊರಿನ ಪದ್ಮಾವತಿ ಲಾರಿ ರಾಮಣ್ಣರಿಗೆ ಸದ್ಗತಿ ಸ್ವರ್ಗ ಪ್ರಾಪ್ತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...