Skip to main content

Blog number 1711.ಮಲೆನಾಡು ಗಿಡ್ಡ ಗೋ ಸಂರಕ್ಷಣೆಗಾಗಿ ತ್ರಿಮದುರಾ ದೇಶಿಯಾ ಪಾರಮ್ಸ್ ನ ಅಭಿಯಾನದಲ್ಲಿ ಉದ್ದಿಮೆದಾರ ರವೀಂದ್ರ ರಾವ್ ಸಾರಥ್ಯ.

#ದೇಶಿ_ಗೋತಳಿ_ಮಲೆನಾಡು_ಗಿಡ್ದ_ಸಂರಕ್ಷಣೆಗಾಗಿ_ಅಭಿಯಾನ

#ಉಡುಪಿ_ಜಿಲ್ಲೆಯ_ತ್ರಿಮದುರ_ದೇಶಿಯಾ_ಪಾರಂನ

#ಪಂಚಗವ್ಯ_ಪ್ರಾಡಕ್ಟಗಳು_ಪರಿಸರ_ಸ್ನೇಹಿ

#ದೇಶದಾದ್ಯಂತ_ಮಾರುಕಟ್ಟೆಯಲ್ಲಿ_ದಾಪುಗಾಲು_ಇಡುತ್ತಿದೆ

#ಮಠಗಳು_ಗೋಶಾಲೆಗಳು_ಈ_ಸಂಸ್ಥೆ_ಜೊತೆ_ಕೈ_ಜೋಡಿಸಿದೆ.

#ಇದು_ವಾಣಿಜ್ಯ_ಉದ್ದೇಶದ_ಸಂಸ್ಥೆ_ಅಲ್ಲ.

#ಉತ್ಸಾಹಿ_ಉದ್ದಿಮೆದಾರ_ರವೀಂದ್ರರಾವ್_ಪ್ರಾಯೋಜಕತ್ವದಲ್ಲಿ.

https://youtu.be/64i6_Fnd4-I

    ಉಡುಪಿ ಜಿಲ್ಲೆಯ ಗಂಗೊಳ್ಳಿಯ ಉತ್ಸಾಹಿ ಉದ್ದಿಮೆದಾರರಾದ ರವೀಂದ್ರ ರಾವ್ ತಮ್ಮ ಮಲೆನಾಡು ಗಿಡ್ದ ಸಂರಕ್ಷಣೆಯ ಅಭಿಯಾನದಲ್ಲಿ ತ್ರಿಮದುರ ದೇಶಿಯಾ ಪಾರಮ್ಸ್ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ.
   ಈ ಸಂಸ್ಥೆ ಈಗಾಗಲೇ ಅನೇಕ ಪಂಚಗವ್ಯ ಉತ್ಪನ್ನಗಳನ್ನು ತಯಾರಿಸಿ ದೇಶದಾದ್ಯಂತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.
  ಮುಂದಿನ ದಿನಗಳಲ್ಲಿ ಮಲೆನಾಡು ಗಿಡ್ಡ ಜಾನುವಾರುಗಳಿಂದ ನಾಲ್ಕುನೂರಕ್ಕೂ ಹೆಚ್ಚು ಉತ್ಪನ್ನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ ಇವರ ಸಂಸ್ಥೆ ಈಗ ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಿದೆ.
   ಇವರ ಸಂಸ್ಥೆಯು ಮಲೆನಾಡು ಗಿಡ್ಡದ ಹಾಲಿನಿಂದ ತಯಾರಿಸಿದ A - 2 ಮಿಲ್ಕ್ ಸೋಪಿಗೆ ಮತ್ತು ಚಾರ್ ಕೋಲ್ ಸೋಪಿಗೆ ತುಂಬಾ ಬೇಡಿಕೆ ಇದೆ 
   ಇವರ ಸಂಸ್ಥೆಯ ಡಿಶ್ ವಾಷ್ ದೇಸಿ ಗೋಮಯ ಭಸ್ಮ ನಿಂಬೆಹಣ್ಣು ಕಡಲೆ ಹಿಟ್ಟು ಇತ್ಯಾದಿ ಬಳಸಿ ತಯಾರಿಸಿದ್ದು ಇದು ಪಾತ್ರೆ ತೊಳೆಯುವವರ ಕೈ ಚರ್ಮಕ್ಕೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ.
  ಇವರ ಸಂಸ್ಥೆಯ ದಂತ ಮಂಜನ, ಹರ್ಬಲ್ ಪಿನಾಲ್, ಕೇಶ ತೈಲ, ಗ್ಯಾಸ್ಟ್ರಿಕ್ ಗುಳಿಗೆ, ನೋಸಲ್ ಡ್ರಾಪ್, ಚರ್ಮ ರೋಗ ಉಪಶಮನಕ್ಕಾಗಿ ಚರ್ಮ ಶೋದಕ ಸ್ಕಿನ್ ಕೇರ್ ಪ್ರಸಿದ್ದಿ ಪಡೆದಿದೆ.
   ಇವರ ಪುತ್ರ ರಂಜಿತ್ ರಾವ್ ಗವ್ಯ ಪಂಡಿತ ತರಬೇತಿ ಪಡೆದು ಸಂಸ್ಥೆಯ ಜವಾಬ್ದಾರಿ ವಹಿಸಿದ್ದಾರೆ.
   ಅವರ ಸಂಸ್ಥೆಯ ಕೆಲವು ಉತ್ಪನ್ನಗಳನ್ನು ಬಳಸಿ ನೋಡಲು ನೀಡಿದ್ದಾರೆ ಒಂದು ವಿಶೇಷ ಅಂದರೆ ಈ ಎಲ್ಲಾ ದೇಶಿ ಗೋ ಉತ್ಪನ್ನಗಳಿಗೆ ಅತ್ಯುತ್ತಮ ಪ್ಯಾಕಿಂಗ್ ಮಾಡಿದ್ದಾರೆ ಇದರಿಂದ ಮಾರುಕಟ್ಟೆಯ ಸ್ಪರ್ಧಾತ್ಮಕ ಯುಗದಲ್ಲಿ ಇವರ ಉತ್ಪನ್ನಗಳು ಜನರ ಗಮನ ಸುಲಭವಾಗಿ ಸೆಳೆಯಲಿದೆ.
     ಒಂದು ಕಾಲದಲ್ಲಿ ಭಾರತೀಯ ಕುಟುಂಬದಲ್ಲಿ ಒಬ್ಬ ಮನುಷ್ಯನಿಗೆ 5 ಹಸುಗಳಿರುತ್ತಿತ್ತಂತೆ ಈಗ ನೂರು ಜನರಿಗೆ ಒಂದು ಹಸುವೂ ಇಲ್ಲ, ಮಲೆನಾಡು ಗಿಡ್ದ ಗೋತಳಿಯಲ್ಲಿ ಅತ್ಯುತ್ತಮ ಔಷದಿ ಗುಣವಿದೆ ಮತ್ತು ಮಲೆನಾಡು ಗಿಡ್ದ ತಳಿಯ ಜಾನುವಾರಿನ ತುಪ್ಪಕ್ಕೆ ಬಾರೀ ಬೇಡಿಕೆಯಿದೆ ಒಂದು ಕಿಲೋ ಮಲೆನಾಡು ಗಿಡ್ಡ ತುಪ್ಪ ತಯಾರಿಗೆ 25 ಲೀಟರ್ ಮಲೆನಾಡು ಗಿಡ್ಡದ ಹಾಲು ಬೇಕಂತೆ.
  ಮುಂದಿನ ದಿನಗಳಲ್ಲಿ ಈ ಸಂಸ್ಥೆ ಗೋಶಾಲೆಗಳನ್ನ ಸ್ಥಾಪಿಸಿ ಆ ಮೂಲಕ ಗೋ ಉತ್ಪನ್ನಗಳ ಹೆಚ್ಚು ತಯಾರಿಗೆ ಮತ್ತು ಅನೇಕ ರೋಗಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡುವ ಉದ್ದೇಶವೂ ಈ ಸಂಸ್ಥೆಗಿದೆ.
  ಪ್ರತಿ ಮನೆಯಲ್ಲಿ ಎಷ್ಟು ಜನ ಇರುತ್ತಾರೆ ಅಷ್ಟು ಗೋವುಗಳು ಇರಲಿ ಎಂಬ ಉದ್ದೇಶ ತ್ರಿಮದುರ ದೇಶಿಯಾ ಪಾರಮ್ಸ್ ನ ಗುರಿ ಆಗಿದೆ.
  ಈ ಪಂಚಗವ್ಯ ಪ್ರಾಡಕ್ಟ್ ನ ಸಂಸ್ಥೆ ವಿಳಾಸ...
   ತ್ರಿಮದುರ ದೇಶಿಯಾ ಪ್ರಾಡಕ್ಟ್ಸ್
    ರಾಮ ಗೋದಾಮ
   ಗುಜ್ಜಾಡಿ ಅಂಚೆ ಕುಂದಾಪುರ ತಾಲೂಕು
    ಉಡುಪಿ ಜಿಲ್ಲೆ 576247.
    ಸೆಲ್ ಫೋನ್ ನಂಬರ್ 7353329900.
ಆನ್ ಲೈನ್ ನಲ್ಲಿ ಈ ಸಂಸ್ಥೆಯ ಉತ್ಪನ್ನ ಖರೀದಿಗಾಗಿ ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ
 https://trimadhuradesiyafarms.com

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...