Skip to main content

Blog number 1709. ನನ್ನ ಪ್ರೀತಿಯ ಶಂಭೂರಾಮನ ಬಗ್ಗೆ ವಿಚಾರಿಸಿದ ಖ್ಯಾತ ಸಾಹಿತಿ ಶ್ರೀಕಂಠ ಕೂಡಿಗೆ .

#ಜ್ಞಾನದ_ಭಂಡಾರವಾಗಿರುವ_ಶ್ರೀಕಂಠ_ಕೂಡಿಗೆ_ಅವರ_ಬೆಳಗಿನ_ಪೋನು.

#ಅವರಿಗಾಗಿ_ನನ್ನ_ಪ್ರೀತಿಯ_ಶಂಭೂರಾಮನ_ಸೌತೆಕಾಯಿ_ಸಮರ್ಪಣೆಯ_ಇವತ್ತಿನ_ವಿಡಿಯೋ.

#ರಾಟ್_ವೀಲರ್_ನಿನ್ನೆ_ಕೊಡಗಿನಲ್ಲಿ_ಮನೆಗೆ_ಬಂದ_ಆರೋಗ್ಯ_ಕಾಯ೯ಕತೆ೯_ಮೇಲೆ_ದಾಳಿ.

https://youtu.be/peEskYb3Vl0


    ಬೆಳಿಗ್ಗೆ ಏಳಕ್ಕೆ ಫೋನ್ ಬಂತು "ವಾಕಿಂಗ್ ಮಾಡ್ತಾ ಇದೀರಾ ?"...
   ಹೌದು ಸಾರ್ ನಿಮ್ಮ ಆರೋಗ್ಯ ಹೇಗಿದೆ ಅಂದೆ.
  "ಆರಾಮಾಗಿದೀನಿ ನಿನ್ನೆ ಬೆಳಿಗ್ಗೆ ಪುಟ್ಟಯ್ಯ ಹೊಸ ಬಾಡಿಗೆ ಮನೆಯಲ್ಲಿದಾರೆ ಒಂದೂವರೆ ಕಿ.ಮಿ ದೂರ ಅಲ್ಲಿಗೆ ವಾಕಿಂಗ್ ನಲ್ಲಿ ಹೋಗಿ ಮಾತಾಡಿಸಿ ಬಂದೆ ನಿಮ್ಮ ಜೊತೆ ರಾಟ್ ವೀಲರ್ ನಾಯಿ ಜೊತೆಗೆ ಇದೆಯಾ? " ಅಂದರು.
   ಆ ಸಮಯದಲ್ಲೆ ನಾನು ಯೋಚಿಸುತ್ತಾ ಇದ್ದದ್ದು ನಿನ್ನೆ ಕೊಡಗಿನಲ್ಲಿ ರಾಟ್ ವೀಲರ್ ಸಾಕು ನಾಯಿ ಆರೋಗ್ಯ ಕಾಯ೯ಕರ್ತೆಗೆ ಕಚ್ಚಿದ ಸಾಮಾಜಿಕ ಜಾಲ ತಾಣದ ಸುದ್ದಿ.
 ಪೋನ್ ಮಾಡಿದವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನವರಾದ ಅನೇಕ ಪದವಿ, ಪಿ ಹೆಚ್ ಡಿ - ನೂರಾರು ಪ್ರಶಸ್ತಿ, ಅನೇಕ ಅಕಾಡಮಿಗಳ ನಿರ್ದೇಶಕರಾಗಿ, ರಾಜ್ಯ ಸರ್ಕಾರದ ಪುಸ್ತಕ ಪ್ರಾಧಿಕಾರದ ಅದ್ಯಕ್ಷರೂ ಆಗಿದ್ದ, ಚಿನ್ನದ ಪದಕ ವಿಜೇತರು, ಸುಂದರವಾದ ಕನ್ನಡ ಅಕ್ಷರ ಬರೆಯುವ ಶ್ರೀಕಂಠ ಕೂಡಿಗೆ ಅವರು.
   ಅವರಿಗಾಗಿ ನನ್ನ ಪ್ರೀತಿಯ ಶಂಭೂರಾಮನಿಗೆ ನಿತ್ಯ ಬೆಳಗಿನ ಸೌತೆಕಾಯಿ ಸಮರ್ಪಣೆ ಮತ್ತು ಸ್ವಾಹದ ವಿಡಿಯೋ ಮಾಡಿದ್ದೇನೆ.
  ರಾಟ್ ವೀಲರ್ ಯಾವ ದೇಶದಲ್ಲೂ ಬ್ಯಾನ್ ಮಾಡಿಲ್ಲ ನಮ್ಮ ದೇಶದಲ್ಲೂ ಬ್ಯಾನ್ ಮಾಡಿಲ್ಲ, ಅಮೆರಿಕನ್ ಪಿಟ್ ಬುಲ್ US ನ ಕೆಲ ಪ್ರಾಂತ್ಯದಲ್ಲಿ, ದೆಹಲಿ ಹೊರ ಬಾಗ ಗುರು ಗಾಂ ಮತ್ತು ಉತ್ತರ ಪ್ರದೇಶದಲ್ಲಿ ಸಾಕಲು ಕೆಲ ಶರತ್ತು ಅನುಮತಿ ಪಡೆಯ ಬೇಕಾಗಿದೆ.
   ಮೂಡಿಯಾದ ರಾಟ್ ವೀಲರ್ ಗೆ ಸರಿಯಾಗಿ ತರಬೇತಿ ಸಣ್ಣಿಂದಲೇ ನೀಡದಿದ್ದರೆ ಈ ರೀತಿ ಅನಾಹುತಗಳು ಶತಸಿದ್ಧ ಆದ್ದರಿಂದ ಮನೆಯ ಗೇಟ್ ಗಳನ್ನು ಯಾವತ್ತೂ ಲಾಕ್ ಮಾಡಿರ ಬೇಕು, ಚೈನ್ ಇಲ್ಲದೆ ಇವುಗಳು ತಿರುಗಾಡಲು ಬಿಡುವ ಜಾಗ ಸರಿಯಾದ ರಕ್ಷಣಾ ವಲಯವಾಗಿ ಪರಿವತಿ೯ಸ ಬೇಕು ಇಂತಹ ಮುಂಜಾಗೃತೆ ರಾಟ್ ವೀಲರ್ ಸಾಕುವವರು ಮಾಡಲೇ ಬೇಕು.
  ರಾಟ್ ವೀಲರ್ ತನ್ನ ಸಾಕುವವರಿಗೆ ವಿಧೇಯವಾಗಿರುತ್ತದೆ ನನ್ನ ರಾಟ್ ವೀಲರ್ ನನ್ನ ಬೆಡ್ ರೂಂನ ನನ್ನ ಮಂಚದ ಪಕ್ಕದಲ್ಲೇ ಕೆಳಗೆ ಅವನ ಬೆಡ್ ಮೇಲೆ ಮಲಗುತ್ತಾನೆ.
  ಕೊಡಗಿನ ಘಟನೆ ಬಗ್ಗೆ ಯಾರೊ ಒಬ್ಬರು ಇದು ಹುಲಿ ಮತ್ತು ನಾಯಿಯಿಂದ ಬಂದ ತಳಿ ಅಂತ ಬರೆದಿದ್ದಾರೆ ಇದು ತಪ್ಪು ಜರ್ಮನ್ ದೇಶದಲ್ಲಿ ಹುಲಿ ಇಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...