Skip to main content

Blog number 1688. ಲಿಂಗಾಯಿತ ದಳವಾಯಿ ಅಕ್ಕಮ್ಮನಿಗೆ ನ್ಯಾಯ ಕೊಡಿಸಿದ ದೀವರ ಮಂಡಾನಿ ಯುವಕ ಅದಕ್ಕೆ ಪಂಚಾಯಿತಿದಾರರ ನ್ಯಾಯ ಪಂಚಾಯಿತಿ ತೀರ್ಪು ನ್ಯಾಯವೆ?... ದುರಂತ ಕಥೆ.

#ಸುದೀಂದ್ರಭಂಡಾರ್ಕರ್_ಸಶೇಷ_ಐತಿಹಾಸಿಕ_ಕಾದಂಬರಿಯಲ್ಲಿ.

#ದಳವಾಯಿ_ವಂಶದ_ಅಕ್ಕಮ್ಮ_ಮಾಸ್ತಿಯಾದ_ನಿಜಕಥೆ.

#ದೀವರಮಂಡಾನಿ_ಯುವಕನನ್ನ_ನೇಣಿಗೇರಿಸಿ_ಲಿಂಗಾಯಿತ_ಅಕ್ಕಮ್ಮನ_ಸತಿ_ಮಾಡಿದ_ಪ೦ಚಾಯಿತಿ.

#ಅವಳನ್ನು_ಅಕ್ಕಮಹಾದೇವಿಗೆ_ಹೋಲಿಕೆ_ಮಾಡಿ_ಗುಡಿ_ಕಟ್ಟಿದ್ದಾರೆ.

#ಕೆಳದಿಸಂಸ್ಥಾನದ_ಪ್ರಥಮ_ಕವಿ_ತುರಂಗಬಾರತ_18ಪರ್ವ_ರಚಿಸಿದ_ಲಕ್ಷ್ಮೀಷ್_ನಿಟ್ಟೂರಿನವರು.

#ಭೀಮನಕೋಣೆಯ_ಲಕ್ಷ್ಮೀನಾರಾಯಣ_ದೇವಾಲಯದ_ಅರ್ಚಕರಾಗಿರುತ್ತಾರೆ.

#ಹೆಗ್ಗೋಡಿನ_ರಸ್ತೆಗೆ_ಕವಿ_ಲಕ್ಷ್ಮೀಷ್_ನಾಮಕರಣ_ಮಾಡಿದ್ದಾರೆ.


 ಅಕ್ಕಮ್ಮ.....ಹಿಂದೆ ಅಳಿದು ಹೋದ ದಳವಾಯಿ ಲಿಂಗಪ್ಪನ ವಂಶದವಳು.
  ಟಿಪ್ಪು ಅಂತ್ಯವಾಗಿ ಮೈಸೂರಿನವರ ಆಡಳಿತ ಮುಗಿದ ಬಿದನೂರು ಸಾಮ್ರಾಜ್ಯದಲ್ಲಿ ಯಾರು ಬಲಿಷ್ಟರೋ ಆ ಜಮೀ ನ್ದಾರನದೇ ಸುಬೇದಾರಿಕೆ. ಆ ಗ್ರಾಮ ಬಲಿಷ್ಟ ದೀವರು - ಶೈವ ದಳವಾಯಿಗಳ ಪ್ರದೇಶ ಅಲ್ಲಿಯವರೆಗೆ ಅನ್ಯೋನ್ಯವಾಗಿದ್ದರು.
  ಇಲ್ಲಿದ್ದರು ದಳವಾಯಿ ವಂಶದ ಸಹೋದರರು... ಅಣ್ಣ ಶಿವಪ್ಪ ಗೌಡ ತಮ್ಮ ವೀರಭದ್ರಪ್ಪ ಗೌಡ,
  ಶಿವಪ್ಪ ಗೌಡ ಸಾದು, ಸಾತ್ವಿಕ.ಪತ್ನಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿನ ಸಂಸಾರ.
  ತಮ್ಮ ವೀರಭದ್ರಗೌಡ ಇದಕ್ಕೆ ತದ್ವಿರುದ್ದ. ಕ್ರೂರಿ ಇಂತಹ ಕಾಲದಲ್ಲೇ ಅಣ್ಣ ಶಿವಪ್ಪ ಗೌಡ ತೀರಿಕೊಳ್ಳುತ್ತಾರೆ, ಶಿವಪ್ಪ ಗೌಡನ ಪತ್ನಿ, ಮಗ ಮತ್ತು ಪುತ್ರಿ ದುಷ್ಟ ವೀರಭದ್ರಪ್ಪನ ಅಡಿಯಲ್ಲಿ ಬಾಳಬೇಕಾಗುತ್ತದೆ.
  ಅಣ್ಣನ ಸಣ್ಣ ಬಾಲಕನನ್ನು ಕೋಣ ಮೇಯಿಸುವ ಕೆಲಸಕ್ಕೆ ಹಾಕುತ್ತಾನೆ, ಆಷಾಡದ ಮಳೆಗಾಲದಲ್ಲಿ ಕೋಣಗಳು ಬಾಲಕನ ಕಣ್ತಪ್ಪಿಸಿ ಗದ್ದೆ ತಿಂದಿದ್ದ ನೋಡಿ ಕ್ರೂರಿ ವೀರಭದ್ರಪ್ಪ ಅಣ್ಣನ ಮಗನ ಕಪಾಳ ಮೋಕ್ಷ ಮಾಡಿದಾಗ ಉಸಿರು ನಿಂತು ಹೋದ ಬಾಲಕನ ಶವ ಗದ್ದೆಯ ಕೆಸರಲ್ಲಿ ಕಾಲಿಂದ ಮೆಟ್ಟಿ - ಮೆಟ್ಟಿ ಕೆಸರಿನ ಆಳದಲ್ಲಿ ಹುಗಿದು ಬಿಡುತ್ತಾನೆ.
  ಇದನ್ನು ಒಬ್ಬ ಹಸಲರವನು ಮೀನಿನ ಬೇಟೆಗೆ ಹೋದವನು ನೋಡಿ ಬಿಡುತ್ತಾನೆ ಗೌಡ ಅವನನ್ನು ಬೆದರಿಸಿ, ದಿನವಹಿ ಹೆಂಡದ ಆಸೆ ತೋರಿಸಿ ಬಾಯಿ ಮುಚ್ಚಿಸುತ್ತಾನೆ.
  ಸಂಜೆ ಕೋಣಗಳು ಮನೆಗೆ ಬಂದರೂ ಸಣ್ಣ ಬಾಲಕ ಬರದಿದ್ದಾಗ ತಾಯಿ ಆತಂಕದಿಂದ ವೀರಭದ್ರಗೌಡನಿಗೆ ಕೇಳಿದರೆ ಅಜ್ಜಿ ಮನೆಗೆ ಹೋಗಿರಬಹುದು ಅನ್ನುತ್ತಾನೆ.
  ಮರುದಿನ ಊರೆಲ್ಲ ಹುಡುಕಿದರು ಬಾಲಕ ಪತ್ತೆ ಇಲ್ಲ ಗೌಡ ಹೊಸ ಸುದ್ದಿ ಹರಡುತ್ತಾನೆ ಬಾಲಕನನ್ನು ಕಾಡು ಕುರುಕ ಹೊತ್ತಿ ಒಯ್ಯಿತು ಎಂದು.
   ತನ್ನ 11 ವರ್ಷದ ಮಗಳ ಜೊತೆ ಊರೆಲ್ಲ ಹುಡುಕುತ್ತಾ ತಾಯಿ ಹಸಲವರ ಮನೆ ಹಿಂದೆ ಬಂದಾಗ ಕುಡಿದ ಮತ್ತಿನಲ್ಲಿ ತನ್ನ ಮಗನಿಗೆ ಬೈಯುತ್ತಾ "ಗೌಡರು, ಹುಡುಗನ್ನ ಕೊಂದ ಹಾಗೆ ನಿನ್ನ ಕೊಲ್ತೀನಿ ಕಾಣು" ಅನ್ನುವಾಗ ಬಾಲಕನ ತಾಯಿ ದಂಗಾಗುತ್ತಾಳೆ ಊರೆಲ್ಲ ಕೇಳಿಕೊಂಡರೂ ಒಬ್ಬರೂ ಮುಂದೆ ಬರೊಲ್ಲ.
  ಆಕೆ ನೇರ ಮ೦ಡಾನಿಯ ದೀವರ ದೊಡ್ಡ ಮನೆಗೆ ಹೋಗಿ ಎಲ್ಲಾ ವಿಚಾರ ತಿಳಿಸುತ್ತಾಳೆ ಅವರ ಮಗ ಕೋವಿ ಸ್ವಚ್ಚ ಮಾಡುತ್ತಾ ನೇರವಾಗಿ ಕೇಳುತ್ತಾನೆ " ಆ ಕ್ರೂರಿ ಗೌಡನ ಕೊಂದರೆ ಏನು ಕೊಡ್ತೀ?" ಅದಕ್ಕೆ ಬಾಲಕನ ತಾಯಿ "ನಾನೇನು ಕೊಡಲಿ ನನ್ನ ಆಸ್ತಿ ಅಂದರೆ ಈ ಒಬ್ಬ ಮಗಳೇ ಮತ್ತೇನಿದೆ... ಭೂಮಿ, ಆಸ್ತಿ ಎಲ್ಲಾ ವೀರಭದ್ರಗೌಡನ ಪಾಲಾಗಿದೆ..ನನ್ನ ಈ ಮಗಳನ್ನೆ ನಿನಗೆ ಧರ್ಮಧಾರೆ ಎರೆಯುವೆ " ಅನ್ನುತ್ತಾಳೆ.
   ಏನೂ ಅರಿಯದ ಅಕ್ಕಮ್ಮನ ಹೆಸರಲ್ಲಿ ರಣವೀಳ್ಯ ಪಡೆದ ಮ೦ಡಾನಿಯ ಯುವಕ ಮುಂದೇನಾಗ ಬಹುದೆಂಬ ಯೋಚನೆ ಮಾಡಲಿಲ್ಲ.
  ಮರುದಿನ ಐವತ್ತು ಆಳಿನ ದೊಡ್ಡ ನಟ್ಟಿಯಲ್ಲಿ ಹಾಳಿಯ ಮೇಲೆ ನಿಂತ ಗೌಡರು ಎದುರಿಗೆ ಕೋವಿ ಹಿಡಿದ ಮ೦ಡಾನಿ ಯುವಕ.
  ಗೌಡರೆ ಇದೆ೦ತಾ ಕಂಪದ ಗದ್ದೆ! ಇಡೀ ಹೆಣ ಹುಗಿದರೂ ಗೊತ್ತಾಗೊಲ್ಲ ಅಂದಾಗ ಗೌಡರು ಸಾವರಿಸಿಕೊಂಡು ಕೇಳುತ್ತಾರೆ ತಮ್ಮಾ ಎತ್ತ ಹೊಂಟಿಯೋ? ಅದಕ್ಕೆ ಮ೦ಡಾನಿ ಹುಡುಗ ಅದೇ ಇಲ್ಲೆಲ್ಲೋ ಕಾಡು ಕುರುಕ ಇದೆಯಂತೆ ನೀವೇ ಹೇಳಿದರಂತೆ! ಅದ ಶಿಕಾರಿ ಮಾಡಲು ಹೊಂಟೆ ಅಂತ ಮೀಸೆಯಲಿ ನಕ್ಕ.
  ಗೌಡರ ಮುಖ ಕಪ್ಪಿಟ್ಟಿತು, ಮಾತು ಮುಂದುವರಿಸಲಿಲ್ಲ, ತಗ್ಗಿಸಿದ ತಲೆ ಗೌಡ ಎತ್ತುವುದರೊಳಗೆ ಮ೦ಡಾನಿ ಯುವಕ ಗೌಡರೆದೆಗೆ ಕೋವಿ ಗುಂಡು ಹಾರಿಸಿದ.
  ದೀವರ ಹುಡುಗ ಲಿಂಗಾಯಿತರ ಕೊಂದಿದ ದೊಡ್ಡ ಗಲಾಟೆ ಆಯಿತು, ಜಾತಿಯ ವಿಷ ಬೀಜ ಚಿಗುರಿತು.
  ಪಂಚಾಯಿತಿ ಕಟ್ಟೆಗೆ ಅಕ್ಕಮ್ಮನನ್ನು ಕರೆದುಕೊಂಡು ಬಂದ ತಾಯಿ ತಾನು ರಣವೀಳ್ಯ ಕೊಟ್ಟ ವಿಚಾರ ತಿಳಿಸುತ್ತಾಳೆ ಮ೦ಡಾಣಿ ಯುವಕನೂ ಒಪ್ಪುತ್ತಾನೆ.
  ದೀವರ ಗುಂಪು ಹುಡುಗಿಯ ಆಮಿಷ ತೋರಿಸಿದ್ದರಿಂದ ನಮ್ಮ ಹುಡುಗ ಕೊಲೆ ಮಾಡಿದ ಅಂತ.
  ಮಾತಿನಂತೆ ಹನ್ನೊಂದರ ಬಾಲೆ ಶೈವ  ಅಕ್ಕಮ್ಮನ ಜೊತೆ ದೀವರ ಮಂಡಾನಿ ಜೊತೆ ಮದುವೆ ಆಗಲಿ ಎಂದಿತು ಪಂಚಾಯಿತಿ,ಹಾರ ಅರಿಶಿಣ ಕೊಂಬು ತ೦ದು ಕಟ್ಟಿಸಿಯೇ ಬಿಡುತ್ತೆ, ಬಾಲೆ ಅಕ್ಕಮ್ಮ ಕಕ್ಕಾಬಿಕ್ಕಿಯಾಗುತ್ತಾಳೆ, ಕಣ್ಣೀರಾಗುತ್ತಾಳೆ.
  ಪಂಚಾಯಿತಿ ಮತ್ತೊಂದು ತೀಪು೯ ನೀಡುತ್ತದೆ " ಕೊಲೆಗಾರ ಮಂಡಾಣಿ ಹುಡುಗನನ್ನು ನೇಣಿಗೆ ಹಾಕುವುದು"! ನೋಡ ನೋಡುತ್ತಲೇ ಮಾವಿನ ಮರಕ್ಕೆ ಒಯ್ದು ನೇಣು ಹಾಕಿಯೇ ಬಿಡುತ್ತಾರೆ.
  ಆ ಕ್ಷಣಕ್ಕೆ ಕೆಲ ಸಮಯ ಮುಂಚೆ ತಾಳಿ ಕಟ್ಟಿಸಿಕೊಂಡ ಅಕ್ಕಮ್ಮ ಈಗ ವಿದವೆ, ತಮ್ಮ ಹುಡುಗ ನೇಣಾದ ಬಗ್ಗೆ ಕನಲಿದ ದೀವರು ನಿಮ್ಮ ವಿಧವೆ ಹುಡುಗಿ ಸಹಗಮನ ಮಾಡಲಿ ಎ೦ದು ಲಿಂಗಾಯತರಿಗೆ ಒತ್ತಾಯಿಸಿತು.
  ಪತಿ ಮ೦ಡಾಣಿಯ ದೀವರ ಹುಡುಗನ ಜೊತೆ ಅಕ್ಕಮ್ಮನ ಸಹಗಮನ ಮಾಡಲಿ ಎಂದಿತು ಪಂಚಾಯಿತಿ.
   ಸಹಗಮನ ವಿರೋದಿಸಿ ಪ್ರತಿಭಟಿಸಿದ ಅಕ್ಕಮ್ಮನ ಹೋರಾಟ ವ್ಯರ್ಥವಾಯಿತು " ಯಾರನ್ನೂ ಕಾಯದ ಈ ದೇವರು, ಮಠ ಸರ್ವನಾಶವಾಗಲಿ " ಎಂದು ಶಾಪ ಹಾಕುತ್ತಾಳೆ.
   ಮಂಡಾಣಿಯ ಸುತ್ತಮುತ್ತಲಿನ ದೀವರು ಮುಂದೆ ಅಕ್ಕಮ್ಮನಿಗೆ ಜಕಣಿ ಕೂರಿಸುವ ಕಾರ್ಯ ಮಾಡಿ ಸ್ಥಾನ ಕೊಡುತ್ತಾರೆ ಅಕ್ಕಮ್ಮ ಮಾಸ್ತಿಯಾಗುತ್ತಾಳೆ.
  ನಂತರ ಅಕ್ಕಮ್ಮನಿಗೆ ಒಂದು ಗುಡಿಯಾಗುತ್ತದೆ.
***   ****   ****   ****   ****

  #ಬಿದನೂರು_ಸಂಸ್ಥಾನದ_ಮೊದಲ_ಕವಿ.
  
  ತುರಂಗ ಭಾರತ ಎಂಬ 18 ಪರ್ವಗಳ ಮಹಾಬಾರತ ಕಾವ್ಯ ರೂಪದಲ್ಲಿ ರಚಿಸಿದ ಬಿದನೂರು ಸಂಸ್ಥಾನದ ಪ್ರಥಮ ಕವಿ ಲಕ್ಷ್ಮೀಶ್ ಕವಿ ಹುಟ್ಟಿ ಬೆಳೆದದ್ದು ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ.
   ತುರಂಗ ಭಾರತ ಇದನ್ನು ಖರ ಪುಟ ಕುದುರೆಯ ಓಟದ ಶಬ್ದದ ತಾಳದಲ್ಲಿ ಓದುವುದೇ ಹಾಡುವುದೇ ಒಂದು ಸುಂದರ ಅನುಭವ.
  ಇವರು ಸಾಗರ ತಾಲ್ಲೂಕಿನ ಹೆಗ್ಗೋಡಿನ ಸಮೀಪದ ಭೀಮನ ಕೋಣೆಯ ಲಕ್ಷ್ಮೀನಾರಾಯಣ ದೇವಾಲಯದ ಅರ್ಚಕರಾಗಿ ಜೀವಿಸುತ್ತಾರೆ.
   ಹೆಗ್ಗೋಡಿನ ಒಂದು ರಸ್ತೆಗೆ ಕವಿ ಲಕ್ಷ್ಮೀಷರ ಹೆಸರು ಇಟ್ಟಿದ್ದಾರೆ.
   ಹೀಗೆ ಅನೇಕ ವಿಷಯಗಳು #ಸಶೇಷ ಐತಿಹಾಸಿಕ ಕಾದಂಬರಿಯಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ.
  ಈ ಕಾದಂಬರಿ ಬೇಕಾದವರು ಲೇಖಕರಾದ ಸುದೀಂದ್ರ ಭಂಡಾರ್ಕರ್ ಸಂಪರ್ಕ ಸಂಖ್ಯೆ 94488 85151 ಸಂಪರ್ಕಿಸ ಬಹುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...