Skip to main content

Blog number 1698. ಮುಂಗಾರು ಮಳೆಯಲ್ಲಿ ನೆನೆಯುತ್ತಾ ಪೈನಾಪಲ್ ಸ್ಲೈಸ್ ಸವಿಯುತ್ತಾ ಜೋಗ್ ಜಲಪಾತ ವೀಕ್ಷಣೆ ಮಾಡುವ ಪ್ರವಾಸಿಗರ ಹೊಸ ಟ್ರೆಂಡ್.

#ಜೋಗ್_ಪಾಲ್ಸ್_ಪ್ರವಾಸಿಗಳು_ಈಗ_ಬರುವ_ಕಾಲ

#ಈ_ಮಾರ್ಗದ_ಇಕ್ಕೆಲದಲ್ಲಿ_ಪೈನಾಪಲ್_ಸಂತೆ.

#ಮುಂಗಾರು_ಮಳೆಯಲ್ಲಿ_ನೆನೆಯುತ್ತಾ_ಹಣ್ಣು_ಸವಿಯುವ_ಈಗಿನ_ಯುವ_ಪ್ರವಾಸಿಗಳ_ಟ್ರೆಂಡ್.

#ರಸ್ತೆ_ಬದಿಯ_ಅಂಗಡಿಯಲ್ಲಿ_ಸ್ಥಳಿಯವಾಗಿ_ಬೆಳೆಯುವ_ಹಣ್ಣುಗಳ_ಕತ್ತರಿಸಿ_ಉಪ್ಪು_ಖಾರದೊಂದಿಗೆ.

#ಪ್ರಯಾಣದ_ಆಯಾಸ_ಪರಿಹಾರ_ಮುಂಗಾರು_ಮಳೆ_ಹನಿಯ_ಜೊತೆ_ಜಲಪಾತದ_ವೀಕ್ಷಣೆಗೆ_ಹುಮ್ಮಸ್ಸು .

#ಮನೆಯಲ್ಲೂ_ವಿವಿಧ_ರುಚಿಯ_ಪೈನಾಪಲ್_ಖಾಧ್ಯ_ಮಾಡ_ಬಹುದು.

   ಜೋಗ್ ಜಲಪಾತ ನೋಡಲು ಬರುವ ಪ್ರವಾಸಿಗಳು ಮುಂಗಾರು ಪ್ರಾರಂಭದಲ್ಲಿ ಜುಲೈ ತಿಂಗಳಲ್ಲಿ ವಾರಾಂತ್ಯದಲ್ಲಿ ಬರಲು ಪ್ರಾರಂಬಿಸಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜಮಾಯಿಸುತ್ತಾರೆ.
  ಮೊದಲೆಲ್ಲ ಬೆಂಗಳೂರಿಂದ ಅತಿ ಹೆಚ್ಚು ಬರುತ್ತಿದ್ದ ಪ್ರವಾಸಿಗಳು ಈಗ ಕೊಡಗು ಮತ್ತು ಚಿಕ್ಕಮಗಳೂರು ದಾರಿ ಹಿಡಿದಿದ್ದಾರೆ ಆಗೆಲ್ಲ ನಮ್ಮ ಊರಲ್ಲಿ ಶನಿವಾರ ಮತ್ತು ಭಾನುವಾರ ರಸ್ತೆ ದಾಟಲು ಸಾಧ್ಯವಿರುತ್ತಿರಲಿಲ್ಲ, ಕಾರಿನಿಂದ ಗಾಜಿನ ಮಧ್ಯದ ಬಾಟಲಿ ರಸ್ತೆಗೆ ಎಸೆಯುತ್ತಿದ್ದ ವಿಕೃತಿಗಳೆಲ್ಲ ಜಾಸ್ತಿ ಇರುತ್ತಿತ್ತು.
   ಈಗ ಜೋಗ ಜಲಪಾತ ವೀಕ್ಷಣೆಗೆ ಕರಾವಳಿ ಮಾರ್ಗವಾಗಿ ಮತ್ತು ಹುಬ್ಬಳ್ಳಿ ಸಿರ್ಸಿ ಮಾರ್ಗವಾಗಿ ಬರುವವರು ಹೆಚ್ಚು.
  ಜೋಗ ಜಲಪಾತಕ್ಕೆ ತಲುಪುವ ಎಲ್ಲಾ ಮಾರ್ಗಗಳಲ್ಲಿ ಸ್ಥಳಿಯ ರೈತರು ತಾವು ಬೆಳೆದ ಫೈನಾಪಲ್ ತಂದು ಸ್ಥಳದಲ್ಲೇ ಗ್ರಾಹಕರಿಗೆ ಅದರ ಸಿಪ್ಪೆ ತೆಗೆದು ಅದನ್ನು ತುಂಡರಿಸಿ ಅದಕ್ಕೆ ರುಚಿಗೆ ತಕ್ಕ ಉಪ್ಪು ಮತ್ತು ಮೆಣಸಿನ ಪುಡಿ ಸವರಿ ತಿನ್ನಲು ನೀಡುತ್ತಾರೆ.
   ಸತತ ಡ್ರೈವಿಂಗ್ ನಿಂದ ರಿಲಾಕ್ಸ್ ಪಡೆಯಲು ಇಲ್ಲಿ ನಿಲ್ಲುವ ವಾಹನಗಳು ಈ ಮುಂಗಾರಿನ ರಸಭರಿತ ರುಚಿಕರವಾದ ಪೈನಾಪಲ್ ಹಣ್ಣುಗಳನ್ನು ಸವಿಯುತ್ತಾರೆ ಮತ್ತು ಇಡೀ ಹಣ್ಣು ಮನೆಗೆ ತೆಗೆದುಕೊಂಡು ಹೋಗುತ್ತಾರೆ.
   ಈ ಭರಪೂರ ವ್ಯಾಪಾರ ನೋಡಿ ವ್ಯಾಪಾರಸ್ಥರು ಈ ಮಾರ್ಗದಲ್ಲಿ ಅಂಗಡಿ ಹಾಕಿದ್ದಾರೆ,ಸ್ಥಳಿಯವಾಗಿ ಪೈನಾಪಲ್ ಸಿಗದಿದ್ದರೆ ಪಕ್ಕದ ಸೊರಬ ತಾಲೂಕಿನಿಂದ ಅಥವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮತ್ತು ಜನವಾಸಿಗಳಿಂದ ಹಣ್ಣು ತಂದು ಮಾರುತ್ತಾರೆ.
   ಮುಂಗಾರಿನ ಮಳೆಯ ಹನಿಯಲ್ಲಿ ನೆನೆಯುತ್ತಾ ಪೈನಾಪಲ್ ಸವಿಯುವ ಅವಕಾಶ ಈ ಪ್ರವಾಸಿಗಳು ಅನುಭವಿಸಲು ಮರೆಯುವುದಿಲ್ಲ.
   ಕೇಂದ್ರ ಸರ್ಕಾರ ಶಿವಮೊಗ್ಗ ಜಿಲ್ಲಾ ಬೆಳೆ ಅಂತಾ ಪೈನಾಪಲ್ ಘೋಷಿಸಿದೆ.
   ಪೈನಾಪಲ್ ನಿಂದ ಕೇಸರಿ ಬಾತ್, ಕಾಯಿ ರಸ, ಸಾಸಿವೆ ಮತ್ತು ತಿಳಿ ಸಾರು ಮಾಡುತ್ತಾರೆ, ಜ್ಯೂಸ್, ಜಾಮ್, ಡ್ರೈ ಪ್ರೂಟ್ ಕೂಡ.
   ಹಣ್ಣು ಸ್ಲೈಸ್ ಆಗಿ ಕತ್ತರಿಸಿ ಜೇನು ಸಕ್ಕರೆ ಸವರಿ ತಿನ್ನಬಹುದು ಅಥವ ಉಪ್ಪು ಖಾರದ ಪುಡಿ ಸವರಿಯೂ ಸೇವಿಸ ಬಹುದು.
  ಇವತ್ತು ನಾನು ಪೈನಾಪಲ್ ಸ್ಲೈಸ್ ಮಾಡಿ ಸಕ್ಕರೆ ಜೇನುತುಪ್ಪದೊಂದಿಗೆ ಮತ್ತು ಉಪ್ಪು ಕಾಳು ಮೆಣಸಿನ ಪುಡಿ ಮತ್ತು ಚಾಟ್ ಮಸಾಲ ಉದುರಿಸಿ ಎರೆಡು ವಿದ ಮಾಡಿದ್ದೆ ಎರೆಡೂ ಸೂಪರ್ ಆಗಿತ್ತು.
   ನೀವೂ ಮಾಡಿ ನೋಡಿ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ