Skip to main content

Blog number 929. ಆನಂದಪುರಂ ಇತಿಹಾಸ ಭಾಗ 79.ಬಿದನೂರು ನಗರ ಸಂಸ್ಥಾನದ ರಾಜನೆಂದು ಘೋಷಿಸಿಕೊಂಡ, ಮೈಸೂರು ಮಹಾರಾಜರ ಭೂಕಂದಾಯ ಮತ್ತು ಸುಂಕದ ಸುಲಿಗೆ ವಿರುದ್ದ ಬಿದನೂರು ನಗರ ಪ್ರಾಂತ್ಯದ ರೈತರ ಚಳವಳಿ ನೇತೃತ್ವ ವಹಿಸಿದ್ದ ಮತ್ತು ಮೊದಲ ರೈತ ಸಮಾವೇಶ ಆನಂದಪುರಂ ಹೋಬಳಿಯ ಹೊಸಂತೆಯಲ್ಲಿ ನಡೆಸಿದ ಬೂದಿ ಬಸಪ್ಪ ನಾಯಕರು

#ಆನ೦ದಪುರಂ_ಇತಿಹಾಸ_ಭಾಗ_79.

#ಬೂದಿಬಸಪ್ಪ_ನಾಯಕರು_ಆನಂದಪುರಂನ_ಬೆಳಂದೂರು_ಗೌಡರ_ಹೊಸಮನೆಗೆ_ಬೇಟಿ_ನೀಡುತ್ತಾರೆ

#ಮೈಸೂರು_ಅರಸರ_ಜನವಿರೋದಿ_ಭೂಕಂದಾಯ_ಸುಂಕದ_ವಿರುದ್ದ_ಆನಂದಪುರಂ_ಹೋಬಳಿಯ_ಬ್ಬಹತ್_ರೈತ_ಸಮಾವೇಶ.

#ಹೊಸಂತೆ_ರೈತಸಮಾವೇಷಕ್ಕೆ_ಸಹಕರಿಸಿದ್ದ_ಬೆಳಂದೂರು_ಗೌಡರ_ಮನೆತನ

#ಏಪ್ರಿಲ್_1830ರಲ್ಲಿ_ಕೆಳದಿ_ಬಿದನೂರು_ಸಂಸ್ಥಾನದ_ರಾಜನೆಂದು_ಘೋಷಣೆ.

#ಆನಂದಪುರಂ_ಕೋಟೆ_ಮುತ್ತಿಗೆ_ವಿಪಲ.

#ಇತಿಹಾಸದಲ್ಲಿ_ಬೂದಿಬಸಪ್ಪನಾಯಕ_ದರೋಡೆಕೋರ_ಎಂದು_ಬರೆದು_ಇತಿಹಾಸಕ್ಕೆ_ಅಪಚಾರ_ಮಾಡಿದ್ದಾರೆ.
   ಬೂದಿ ಬಸಪ್ಪ ನಾಯಕ ಯಾರು ಅಂತ ಇತಿಹಾಸದ ದಾಖಲೆಗಳಲ್ಲಿ ಹುಡುಕಿದರೆ ಆತ ಶಿಕ್ಷೆಗೆ ಒಳಗಾದ ದರೋಡೆಕೋರ, ಕೆಳದಿ ಅರಸರ ಹಿತೈಷಿ ಜಂಗಮರ ಹತ್ತಿರದ ರಾಜ ಮುದ್ರೆ ಉಂಗುರ ಕದ್ದು ತಾನು ಕೆಳದಿ ವಂಶಸ್ಥರವನು ಅಂತೆಲ್ಲ ಬರೆದಿದ್ದಾರೆ.
  ಆದರೆ ಜನಪದದಲ್ಲಿ ಬೂದಿ ಬಸಪ್ಪನಾಯಕರು ನಿಜ ಹೋರಾಟಗಾರರು ಅವರು ಮೈಸೂರು ಕೃಷ್ಣರಾಜ ಒಡೆಯರ್ III ರ ವಿಪರೀತ ಭೂಕಂದಾಯ ಮತ್ತು ಸುಂಕದ ವಿರುದ್ಧ ನಡೆಸಿದ ರೈತ ಹೋರಾಟವನ್ನು ಕೆಳದಿಬಿದನೂರು ಪ್ರಾಂತ್ಯ ಮಾತ್ರವಲ್ಲ ದೂರದ ಬೆಂಗಳೂರು, ಚಿತ್ರದುರ್ಗ ಮತ್ತು ಬಳ್ಳಾರಿಯ ಮುನಿರಾಬಾದ್ ತನಕ ವ್ಯಾಪಿಸುತ್ತದೆ.
  ಇವರ ಜೊತೆ ಬಿದನೂರುನಗರ ಪ್ರಾಂತ್ಯದ ರಂಗಪ್ಪ ನಾಯಕರು ಕೈಜೋಡಿಸುತ್ತಾರೆ, ಆಗ ಇವರು ನಡೆಸುತ್ತಿದ್ದ ಸಾವಿರಾರು ರೈತರು ಸೇರುತ್ತಿದ್ದ ರೈತ ಸಮಾವೇಷಕ್ಕೆ ಕುಟ್ಟ೦ ಎಂದು ಕರೆಯುತ್ತಿದ್ದರು.
   ಈ ಭಾಗದ ರೈತರು ಸಂಪೂರ್ಣ ಕರನಿರಾಕರಣೆಗೆ ಕಾರಣವೇನೆಂದರೆ ಕೆಳದಿ ಅರಸರ ಕಾಲದಲ್ಲಿ ಭೂಕಂದಾಯ ರಾಜ ಶಿವಪ್ಪನಾಯಕರು ಭೂಮಿಯ ಪಲವತ್ತತೆಯ ವಿಂಗಡನೆಯ ಶಿಸ್ತು ಆದಾರದಲ್ಲಿದ್ದರಿಂದ ಪ್ರಜೆಗಳಿಗೆ ಹೊರೆ ಆಗಿರಲಿಲ್ಲ.
   1763 ರಲ್ಲಿ ಹೈದರಾಲಿ ಕೆಳದಿ ಸಾಮ್ರಾಜ್ಯ ವಶ ಪಡಿಸಿಕೊಂಡು ಮೈಸೂರು ಸಂಸ್ಥಾನಕ್ಕೆ ಸೇರುತ್ತದೆ ನಂತರ 9 ಅಕ್ಟೋಬರ್ 1831 ರವರೆಗೆ ಸುಮಾರು 68 ವರ್ಷ ಮೈಸೂರು ಅರಸರ ಆಡಳಿತದಲ್ಲಿರುತ್ತದೆ.
1820 ರಲ್ಲಿ ಮುಮ್ಮುಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಮಿತಿ ಮೀರಿದ ರಾಜವಂಶಸ್ಥರ ವೆಚ್ಚ, ಆಡಳಿತದಲ್ಲಿ ಬ್ರಷ್ಟಾಚಾರದ ನಿಯಂತ್ರಣ ಸಾಧ್ಯವಾಗದೆ ಆರ್ಥಿಕ ಸಂಕಷ್ಟ ಉಂಟಾಗುತ್ತದೆ ಅದರಿಂದ ಹೊರಬರಲು ಮೈಸೂರು ಅರಸರು ಶುರ್ಟಿ ಮತ್ತು ಸಾಯರ್ ಎಂಬ ಹೊಸ ತೆರಿಗೆ ಜಾರಿ ಮಾಡುತ್ತಾರೆ.
  ಶುರ್ಟಿ ಎಂಬ ಭೂಕಂದಾಯ ವಸೂಲಿಯಲ್ಲಿ, ಭೂಕಂದಾಯ ನೀಡುವ ರೈತರು ಮತ್ತು ಅದನ್ನು ಬೊಕ್ಕಸಕ್ಕೆ ಪಡೆಯುವ ರಾಜನ ಮದ್ಯೆ ಮಧ್ಯವತಿ೯ಗಳು ಹರಾಜು ಮೂಲಕ ನೇಮಕ ಆಗುತ್ತಾರೆ ಅವರು ರಾಜರು ನಿರ್ದರಿಸಿದ ಕಡಿಮೆ ಕಂದಾಯ ರಾಜರಿಗೆ ನೀಡಿ ರೈತರಿಂದ ಅನದಿಕೃತವಾಗಿ ವಿಪರೀತ ಕಂದಾಯ ಸುಲಿಗೆ ಮಾಡಲು ಪ್ರಾರಂಭಿಸುತ್ತಾರೆ.
   ಸಾಗುವಳಿ ಮಾಡದ, ಪಲ ಭರಿತ ಅಲ್ಲದ ಜಮೀನಿಗೂ ರೈತರು ತೆರಿಗೆ ವಿದಿಸುತ್ತಾರೆ ಆದರೆ ಅದು ರೈತರಿಗೆ ಭರಿಸಲಾಗುವುದಿಲ್ಲ.
    ಇದರ ಮೇಲೆ ರೈತರು ತಮ್ಮ ಫಸಲು ಸಾಗಾಣಿಕೆಗೆ ವಿಪರೀತ ಸುಂಕ ವಿದಿಸುವ ಸಾಯರ್ ಪದ್ಧತಿಯಿಂದ ಕೆಳದಿ ಸಂಸ್ಥಾನದ ರಾಜರ ಆಡಳಿತದಲ್ಲಿ ನೆಮ್ಮದಿಯಲ್ಲಿದ್ದ ರೈತರು ಮೈಸೂರು ಅರಸರ ಕಾಲದಲ್ಲಿ ಸಂಕಷ್ಟಕ್ಕೆ ಈಡಾಗುತ್ತಾರೆ ಆಗ ಬಿದನೂರು ನಗರ ಪ್ರಾಂತ್ಯದಲ್ಲಿ ಪ್ರಸಿದ್ದ ಜನಪರ ಹೋರಾಟಗಾರ ರಂಗಪ್ಪ ನಾಯಕರ ನೇತೃತ್ವದಲ್ಲಿ ರೈತರು ಪ್ರತಿಭಟನೆಗೆ ತಯಾರಾಗುತ್ತಾರೆ ಆಗ ಬೂದಿಬಸಪ್ಪ ನಾಯಕರು ಈ ಹೋರಾಟಕ್ಕೆ ಹೊಸ ರೂಪ ನೀಡುತ್ತಾರೆ ಮತ್ತೊಮ್ಮೆ ಕೆಳದಿ ಸಂಸ್ಥಾನ ಆಡಳಿತ ಪಡೆಯುವ ಆಶಾಭಾವನೆಯಿಂದ ಜನಗಳೂ ಈ ಹೋರಾಟಕ್ಕೆ ದುಮುಕುತ್ತಾರೆ, ಆಗ ಇಲ್ಲಿನ ಬಹುಸಂಖ್ಯಾತ ಲಿಂಗಾಯಿತರು ಮತ್ತು ದೇಶಸ್ಥ ಬ್ರಾಹ್ಮಣರು,ಸ್ಥಳಿಯ ಸರ್ಕಾರಿ ಅಧಿಕಾರಿಗಳಾಗಿದ್ದ ಶಾನುಬೋಗರು, ಪಟೇಲರುಗಳು ರೈತರ ಹೋರಾಟಕ್ಕೆ ಬೆಂಬಲಿಸುತ್ತಾರೆ.
   ಮೈಸೂರು ಅರಸರು ತಮ್ಮ ಸೈನಿಕರಿಗೆ ಸುಮಾರು 18 ತಿಂಗಳು ಕಾಲ ಸಂಬಳವೇ ನೀಡಲಾಗದ ಆರ್ಥಿಕ ಸಂಕಷ್ಟದಿಂದ ಕೋಪಗೊಂಡ ಸುಮಾರು 15 ಸಾವಿರ ಸೈನಿಕರು ಈ ಹೋರಾಟಕ್ಕೆ ಬೆಂಬಲಿಸುತ್ತಾರೆ ಇದೇ ಸಂದರ್ಭದಲ್ಲಿ ವಿವಾಹ ಆಗುವ ಬೂದಿ ಬಸಪ್ಪ ನಾಯಕರು ಏಪ್ರಿಲ್ 1830 ರಲ್ಲಿ ತಾವು ಬಿದನೂರು ನಗರದ ರಾಜ ಎಂದು ಘೋಷಿಸಿಕೊಳ್ಳುತ್ತಾರೆ.
1830 ರಲ್ಲಿ ಬೂದಿ ಬಸಪ್ಪ ನಾಯಕರ ಸೈನ್ಯ ಆನಂದಪುರಂ ಮುತ್ತಿಗೆ ಹಾಕಿದರೂ ಪ್ರಯತ್ನ ವಿಫಲವಾಗುತ್ತದೆ.
 ಬೂದಿ ಬಸಪ್ಪ ನಾಯಕ ಬಿದನೂರು ನಗರ ರಾಜರೆಂದು ಘೋಷಿಸಲು ಕಾರಣ ಬೂದಿ ಬಸಪ್ಪ ನಾಯಕ ಹೊನ್ನಾಳಿ ತಾಲ್ಲೂಕಿನ ಚಿನ್ನಿಕಟ್ಟೆಯ ಜಂಗಮ ಕನ್ಯೆ ಮತ್ತು ಕೆಳದಿಯ ಕೊನೆಯ ಅರಸರ ಚೆನ್ನಬಸವ ನಾಯಕರ ಪ್ರೇಮ ವಿವಾಹದಿಂದ ಜನಿಸಿದ ರಾಜವಂಶಸ್ಥ ಆದರೆ ಬ್ರಿಟಿಷರ ವಿರುದ್ಧ  ಮೈಸೂರು ಮಹಾರಾಜರ ವಿರುದ್ಧ ರೈತರನ್ನು ಹೋರಾಟಕ್ಕೆ ತಯಾರು ಮಾಡಿದ್ದ ಬೂದಿ ಬಸಪ್ಪರನ್ನು ದರೋಡೆಕೋರನೆಂದೆ ದಾಖಲಿಸುತ್ತಾರೆ.
  ಇಲ್ಲಿ ಜನಪದದ ಸಾಕ್ಷಿಯೊಂದಿದೆ ಕೆಳದಿ ಅರಸರು ಶಿಕಾರಿಗಾಗಿ ಹೊನ್ನಾಳಿ ಸಮೀಪದ ಬಿದಿರಳ್ಳಿ ಕಣಿವೆಗೆ ಹೋಗುವಾಗ ಕುಂಸಿಯಲ್ಲಿ ತಂಗುತ್ತಿರುತ್ತಾರೆ ನಂತರ ಬಿದಿರಳ್ಳಿ ಕಣಿವೆಗೆ ಸಮೀಪದ ಚಿನ್ನಿಕಟ್ಟೆಯಲ್ಲಿ ವಾಡೆ ನಿರ್ಮಿಸಿ ತಂಗುತ್ತಾರೆ ಆಗ ಅಲ್ಲಿನ ಸುಂದರ ಜಂಗಮ ಕನ್ಯೆಯಲ್ಲಿ ಪ್ರೇಮ ಉಂಟಾಗಿ ಚೆನ್ನಬಸವ ನಾಯಕರು ವಿವಾಹ ಆಗುತ್ತಾರೆ ಆಗ ಚೆನ್ನಬಸವ ನಾಯಕರು ಜಂಗಮ ಕನ್ಯೆಗೆ ನೀಡಿದ ರಾಜ ಮುದ್ರೆ ಉಂಗುರವೇ ಅವರ ಪುತ್ರ ಬೂದಿಬಸಪ್ಪ ನಾಯಕರಿಗೆ ತಾಯಿಯಿಂದ ಬಂದಿರುತ್ತದೆ.
  23- ಆಗಸ್ಟ್ - 1830 ರಲ್ಲಿ ಅಂದರೆ 192 ವಷ೯ದ ಹಿಂದೆ ಆನಂದಪುರಂ ಹೋಬಳಿಯ ಹೊಸಂತೆ ಊರಿನಲ್ಲಿ ಬೃಹತ್ ರೈತ ಸಮಾವೇಶ ಬೂದಿ ಬಸಪ್ಪ ನಾಯಕರು ಹಮ್ಮಿಕೊಳ್ಳುತ್ತಾರೆ ಈ ಐತಿಹಾಸಿಕ ರೈತ ಸಮಾವೇಶಕ್ಕೆ ಸಾವಿರಾರು ರೈತರು ನೂರಾರು ಎತ್ತಿನಗಾಡಿಗಳು ಭಾಗವಹಿಸುತ್ತಾರೆ, ದೂರ ದೂರದ ಊರಿನ ಪ್ರತಿನಿಧಿಗಳೂ ಸೇರುತ್ತಾರೆ.
        #ಹೊಸಂತೆಯ  ಈ ರೈತ ಹೋರಾಟದ ಸಮಾವೇಶದ ಕಿಚ್ಚು ದಿನದಿಂದ ದಿನಕ್ಕೆ ಬೃಹದಾಕಾರ ತಾಳಿ ಮೈಸೂರು ಮಹಾರಾಜರಾದ ಮುಮ್ಮಡಿ  ಕೃಷ್ಣರಾಜ ಒಡೆಯರ್ ತಮ್ಮ ರಾಜ್ಯ 4ನೇ ಆಂಗ್ಲೋ ಮೈಸೂರು ಯುದ್ದದಿಂದ ಪರೋಕ್ಷವಾಗಿ ಮೈಸೂರು ಆಡಳಿತ ನಡೆಸುತ್ತಿದ್ದ ಬ್ರಿಟೀಷರಿಗೆ ಬಿಟ್ಟುಕೊಡುವಂತಾಗುತ್ತದೆ (9 ಅಕ್ಟೋಬರ್ 1831) ಮುಂದಿನ 50 ವರ್ಷ ಮೈಸೂರು ಆಡಳಿತ ಬ್ರಿಟೀಶರಾಗುತ್ತದೆ.
   ಹೊಸಂತೆ ರೈತ ಸಮಾವೇಶದ ನಂತರ ಬಿದನೂರು ನಗರ ಪ್ರಾಂತ್ಯದ ರೈತರು ಎಲ್ಲಾ ಕಡೆಗೂ ಈ ಕರನಿರಾಕರಣೆಗಾಗಿ ಬೇವಿನ ಎಲೆಗಳನ್ನೇ ಆಹ್ವಾನ ಪತ್ರಿಕೆಯಂತೆ ಬಳಸುತ್ತಾ ಜನರನ್ನು ಕರನಿರಾಕರಣೆ ಆಹ್ವಾನಿಸುತ್ತಾರೆ ಇದರಿಂದ ಮೈಸೂರು ಅರಸರು ಆಡಳಿತದಲ್ಲಿ ವಿಫಲರಾಗುತ್ತಾರೆ ಈಸ್ಟ್ ಇಂಡಿಯಾ ಕಂಪನಿ ರಾಜರಿಗೆ ಈ ಸ್ಥಳಗಳಿಗೆ ಸ್ವತಃ ಹೋಗಿ ಬಗೆಹರಿಸಲು ಸೂಚಿಸುತ್ತಾರೆ ಇದನ್ನೆಲ್ಲ ಮದ್ರಾಸ್ ಪ್ರಾವಿನ್ಸಿಗೆ ವರದಿ ಮಾಡುತ್ತಾ ತಟಸ್ಥರಾಗಿರುತ್ತಾರೆ.
  ಮೈಸೂರು ಒಡೆಯರ್ ಈ ಭಾಗದಲ್ಲಿ ಸಾಗುವಾಗ 7 ಡಿಸೆಂಬರ್ 1830 ರಲ್ಲಿ ಹೊನ್ನಾಳಿಯಲ್ಲಿ ಬೂದಿ ಬಸಪ್ಪ ನಾಯಕರ ಪ್ರಚೋದಿತ ರೈತ ಸಮಾವೇಶ ಕುಟ್ಟಂನಲ್ಲಿ 20 ಸಾವಿರಕ್ಕೂ ಮಿಕ್ಕಿದ ರೈತರು ಸೇರಿರುತ್ತಾರೆ ಇದನ್ನು ಸಹಿಸದ ಮೈಸೂರು ಮಹಾರಾಜರು ಬಿದನೂರು ನಗರದ ಅವರ ಆಡಳಿತಾಧಿಕಾರಿ ಕಿಶನ್ ರಾವ್ ನೇತೃತ್ವದಲ್ಲಿ ರೈತ ಸಮಾವೇಶದ ಮೇಲೆ ದೊಡ್ಡ ನರಮೇದಕ್ಕೆ ಅವಕಾಶ ನೀಡಿದ್ದು ಇತಿಹಾಸದಲ್ಲಿ ಘನ ಘೋರ ಕಪ್ಪು ಚುಕ್ಕೆ ಆದರೆ ಈ ಘಟನೆ ನಂತರ 50 ವರ್ಷದ ನಂತರ ಪುನಃ ಮೈಸೂರು ಮಹಾರಾಜರೇ ಆಡಳಿತಕ್ಕೆ ಬಂದಿದ್ದರಿಂದ ಈ ಘಟನೆಗಳು ಇತಿಹಾಸದ ಪುಟದಲ್ಲಿ ಕತ್ತಲಲ್ಲಿ ಇಡಲಾಗಿದೆ.
  ಈ ಚಳವಳಿ ನಿರತ ರೈತರ ಮೇಲೆ ನಿರಂತರ ಬಂದೂಕಿನ ಗೋಲಿ ಹಾರಿಸಿ ಚಳವಳಿಗಾರರನ್ನು ಕೊಂದ ನಂತರವೂ ಹೊನ್ನಾಳಿಯ ಮಾರಿಕೊಪ್ಪ ಹಳದಮ್ಮ ದೇವಾಲಯದಲ್ಲಿ ಅಡುಗಿದ್ದ ನೂರಾರು ರೈತ ಹೋರಾಟಗಾರನ್ನು ಹೊನ್ನಾಳಿ ಶಿಕಾರಿಪುರ ಮಾರ್ಗದ ಬೇವಿನ ಮರಕ್ಕೆ ನೇಣಿಗೆ ಹಾಕುತ್ತಾರೆ, ಹೋರಾಟಕ್ಕೆ ರೈತರನ್ನು ಸೇರಿಸಲು ಬೇವಿನ ಎಲೆಯನ್ನೆ  ಸಂಕೇತಿಕ ಆಹ್ವಾನ ಪತ್ರಿಕೆ ಮಾಡಿದ್ದಕ್ಕೆ ಪ್ರತಿಯಾಗಿ ಬೇವಿನ ಮರಕ್ಕೆ ರೈತ ಹೋರಾಟಗಾರರನ್ನ ಬೇವಿನ ಮರಕ್ಕೆ ನೇಣು ಹಾಕುತ್ತಾರೆ.
   12 ಮಾರ್ಚ್ 1831 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸೈನ್ಯ ಹೊನ್ನಾಳಿ ವಶಪಡಿಸುಕೊಳ್ಳುತ್ತದೆ.
   12 ಜೂನ್ 1831 ರಂದು ರೈತ ಹೋರಾಟಗಾರರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತದೆ, ಬೂದಿ ಬಸಪ್ಪ ನಾಯಕರು ಹೈದ್ರಾಬಾದ್ ಸಂಸ್ಥಾನದ ಕಡೆ ಪರಾರಿ ಆದರು ಎಂದು ಮತ್ತು ರಂಗಪ್ಪ ನಾಯಕರು ಮರಣ ಹೊಂದಿದರೆಂಬ ಸುದ್ದಿ ಹರಡುತ್ತದೆ ಈ ರೀತಿ ಕೆಳದಿ ರಾಜ್ಯ ಪುನಃ ವಶಪಡಿಸಿಕೊಳ್ಳುವ ಬೂದಿ ಬಸಪ್ಪ ನಾಯಕರ ಪ್ರಯತ್ನ ವಿಫಲವಾಗುತ್ತದೆ ಒಂದು ಅಂದಾಜಿನಂತೆ ಬಿದನೂರು ನಗರ ಪ್ರಾಂತ್ಯದ ರೈತ ಹೋರಾಟದಲ್ಲಿ ಜೀವಕಳೆದುಕೊಂಡವರ ಸಂಖ್ಯೆ ಕೆಲವು ಸಾವಿರವಾದರೂ ದಾಖಲೆಗಳಲ್ಲಿ ಇದು 700 ಅಂತ ದಾಖಲಾಗಿದೆ.
  ಖ್ಯಾತ ಬರಹಗಾರ ಪುರಶೋತ್ತಮ ಬಿಳಿಮಲೆ ಅವರ #ಅಮರ_ಸುಳ್ಯದ_ರೈತ_ಹೊರಾಟ ಪುಸ್ತಕದಲ್ಲಿ ಬರುವ  ಹೋರಾಟಗಾರ ಸ್ಟಾಮಿ ಅಪರಂಪರ/ ಕಲ್ಯಾಣಸ್ವಾಮಿ ವಿಫಲ ಬಿದನೂರು ನಗರ ಪ್ರಾಂತ್ಯದ ರೈತ ಹೋರಾಟದ ನಾಯಕ ಹಾಗೂ 1830ರ ಏಪ್ರಿಲ್ ನಲ್ಲಿ ರಾಜನೆಂದು ಘೋಷಿಸಿಕೊಂಡ ಹೊನ್ನಾಳಿ ತಾಲ್ಲೂಕಿನ ಚಿನ್ನಿಕಟ್ಟೆಯ ಜಂಗಮ ಕನ್ಯೆ ಮತ್ತು ಕೆಳದಿ ಕೊನೆಯ ರಾಜ ಚೆನ್ನಬಸವ ನಾಯಕರ ಪುತ್ರ ಬೂದಿ ಬಸಪ್ಪ ನಾಯಕರೇ ಆಗಿರಬೇಕೆಂಬ ವಾದವೂ ಇದೆ ಇದು ಸಂಶೋದನೆಯಾಗಬೇಕು.
    ಆಗ ಆನಂದಪುರಂನ ಲಿಂಗಾಯಿತ ದೊಡ್ಡ ರೈತರೂ ಮತ್ತು ರೈತ ಮುಖಂಡರಾಗಿದ್ದ ಬೆಳಂದೂರು ಗೌಡರು (ಅವರ ಹೆಸರು ಸಿಕ್ಕಿಲ್ಲ) ಇವರು ಬೂದಿ ಬಸಪ್ಪ ನಾಯಕರ ಐತಿಹಾಸಿಕ ಹೊಸಂತೆಯಲ್ಲಿ ನಡೆದ ರೈತ ಹೋರಾಟದ ಯಶಸ್ಸಿಗೆ ಸಹಕರಿಸಿ ಭಾಗವಹಿಸುತ್ತಾರೆ, ಆ ಸಮಯದಲ್ಲಿಯೇ ಹೊಸ ಮನೆ ನಿರ್ಮಿಸಿರುತ್ತಾರೆ ಈ ಮನೆಗೆ ಬೂದಿ ಬಸಪ್ಪ ನಾಯಕರು ಬಂದು ಹೋಗಿದ ನೆನಪುಗಳು ಈ ಮನೆತನದಲ್ಲಿದೆ.
  ಈ ಮನೆತನದ ಬೆಳಂದೂರು ಹೊಳೆಯಪ್ಪ ಗೌಡರು, ಬೆಳಂದೂರು ಮರಿಯಪ್ಪ ಗೌಡರು ಮತ್ತು ಬೆಳಂದೂರು ಪುಟ್ಟಪ್ಪ ಗೌಡರ ನಂತರದ ತಲೆಮಾರಿನ ಮಾಹಿತಿ ಮಾತ್ರ ಲಭ್ಯ ಇದೆ.
    ಬೆಳಂದೂರು ಹೊಳೆಯಪ್ಪ ಗೌಡರ ಪುತ್ರ ಬೆಳ೦ದೂರು ತಮ್ಮಣಪ್ಪ ಗೌಡರು ಮತ್ತು ಬಿ. ಗುರು ಬಸಪ್ಪ ಗೌಡರು  
ತಮ್ಮಣಪ್ಪ ಗೌಡರಿಗೆ ಇಬ್ಬರು ಪತ್ನಿಯರು ಮೊದಲ ಪತ್ನಿಯಿಂದ ಶಿವಪ್ಪ ಗೌಡ, ಚೆನ್ನಬಸಪ್ಪ ಗೌಡ, ಷಣ್ಮುಖಪ್ಪ ಗೌಡ ಮತ್ತು ಶಾರದಾ ಎಂಬ ಹೆಣ್ಣು ಮಗಳು.
  ಎರಡನೆ ಪತ್ನಿ ಗಂಗಮ್ಮರಿಂದ ಜ್ಞಾನೇಂದ್ರ, ಈಶ್ವರ, ನಾಗರಾಜ, ಶಂಕರಮ್ಮ ಮತ್ತು ಮೋಹಿನಿ ಎಂಬ ಹೆಣ್ಣು ಮಕ್ಕಳು ಇದ್ದಾರೆ.
    ತಮ್ಮಣಪ್ಪ ಗೌಡರು ಆನಂದಪುರಂ ವಿಲೇಜ್ ಪಂಚಾಯತ್ ಸದಸ್ಯರಾಗಿದ್ದರು ಇವರ ಪುತ್ರ ಷಣ್ಮುಖ ಆನಂದಪುರಂ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು, ಇನ್ನೊಬ್ಬ ಪುತ್ರ ಜ್ಞಾನೇಂದ್ರ ಯಡೇಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾಗಿದ್ದರು.
    ಬಿ. ಗುರು ಬಸಪ್ಪ ಗೌಡರು ಸಾಗರದ ಉಪ ವಿಭಾಗಾಧಿಕಾರಿ ಕಛೇರಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು ಇವರ ಪತ್ನಿ ಚಂದ್ರಮ್ಮ ಈ ದಂಪತಿಗಳಿಗೆ
ಚಂದ್ರಶೇಖರ್ (ಬಿ.ಎಸ್.ಎನ್.ಎಲ್. ನಿವೃತ್ತ ಅಧಿಕಾರಿ) ದೇವರಾಜ್,
ಶಶಿದರ್ ಮತ್ತು ಶೈಲಜ ಎಂಬ ಹೆಣ್ಣು ಮಗಳು.
  ಬೆಳಂದೂರು ಹೊಳೆಯಪ್ಪ ಗೌಡರ ಸಹೋದರ ಮರಿಯಪ್ಪ ಗೌಡರಿಗೆ ಮುರುಗೇಂದ್ರ ಮತ್ತು ಶಂಕರ ಎಂಬ ಪುತ್ರರಿದ್ದಾರೆ.
    ಬೂದಿ ಬಸಪ್ಪ ನಾಯಕರಿಗೂ ಆನಂದಪುರಂಗೂ ಇರುವ ಈ ಸಂಬಂದ ಮತ್ತು ಐತಿಹಾಸಿಕ ಬೃಹತ್ ಸಮಾವೇಶ ನಡೆದ ಹೊಸಂತೆ ರೈತ ಸಮಾವೇಶ ಇನ್ನೊಮ್ಮೆ ನೆನಪು ಮಾಡಿಕೊಳ್ಳುತ್ತಾ ಮರೆತು ಹೋಗಿದ್ದ ಬೂದಿ ಬಸಪ್ಪ ನಾಯಕರ ಬಗ್ಗೆ ಮುಂದಿನ ದಿನದಲ್ಲಿ ಹೆಚ್ಚಿನ ಸಂಶೋದನೆಗಳಾಗಲಿ ಎಂದು ಹಾರೈಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ