Skip to main content

Blog number 1692. ಬ್ರಾಂತೇಶ - ಕಾಂತೇಶ - ಶಾಂತೇಶ ಎಂಬ ಮೂರು ಪುರಾಣ ಪ್ರಸಿದ್ಧ ಆಂಜನೇಯರ ದರ್ಶನ ಅಧಿಕ ಮಾಸದ ಶ್ರಾವಣ ಶನಿವಾರ ಸೂಯೋ೯ದಯದಿಂದ ಸೂರ್ಯಸ್ತದ ಒಳಗೆ ಮಾಡಿದರೆ ಕಾಶಿ ಯಾತ್ರೆಯಷ್ಟೇ ಪುಣ್ಯ ಎಂಬ ಶತಮಾನಗಳ ನಂಬಿಕೆ ಇದೆ.

#ಅದಿಕ_ಮಾಸದ_ಶ್ರಾವಣ_ಶನಿವಾರದಂದು.

#ಶಿಕಾರಿಪುರದ_ಹುಚ್ಚರಾಯಸ್ವಾಮಿ_ಕದರಮಂಡಲಗಿ_ಶ್ರೀಆಂಜನೇಯ_ಸಾತೇನಳ್ಳಿ_ಆಂಜನೇಯರನ್ನು 

#ಸೂರ್ಯಾಸ್ತದ_ಒಳಗೆ_ದಶ೯ನ_ಮಾಡಿದರೆ_ಕಾಶಿಯಾತ್ರೆ_ಮಾಡಿದಷ್ಟು_ಪುಣ್ಯ. 

#ಬ್ರಾ೦ತೇಶ_ಕಾಂತೇಶ_ಶಾಂತೇಶರೆಂದೇ_ಪ್ರಸಿದ್ದಿ .

#ನಿನ್ನೆ_ಶನಿವಾರ_ಈ_ಮೂರು_ಸ್ಥಳದಲ್ಲಿ_ಆಂಜನೇಯ_ದರ್ಶನ_ಸಾಧ್ಯವಾಯಿತು.

#ಕೊನೆಯ_ಅಧಿಕಶ್ರಾವಣ_ಮುಂದಿನ_ಶನಿವಾರ_ತಪ್ಪಿದರೆ_ನಾಲ್ಕು_ವರ್ಷ_ಕಾಯಬೇಕು.

 
   1993ರಲ್ಲಿ ಶಿವಮೊಗ್ಗದ ಅಬಕಾರಿ ಜಿಲ್ಲಾಧಿಕಾರಿ ಆಗಿದ್ದ ಹೊಸನೇಮತಿ ಸಾಹೇಬರು ನನಗೆ ಕದರಮಂಡಲಗಿ ಕಾಂತೇಶರ ದರ್ಶನ ಮಾಡಿಸಿದ್ದರು ಆಗ ಅವರು ಈ ಮೂರು ಕ್ಷೇತ್ರ ದರ್ಶನ ಅಧಿಕ ಮಾಸದ ಶ್ರಾವಣದ ಶನಿವಾರ ಸೂರ್ಯೋದಯದಿಂದ ಸೂರ್ಯಾಸ್ತದ ಒಳಗೆ ಮಾಡಿದರೆ ಕಾಶಿ ಯಾತ್ರೆಯಷ್ಟೇ ಪುಣ್ಯ ಎಂಬ ಪ್ರತೀತಿ ಇದೆ ನೀವೂ  ಮಾಡಿ ಅಂದಿದ್ದರು.
  ಆದರೆ ಅದು ಸಾಧ್ಯವೇ ಆಗಿರಲಿಲ್ಲ, 2019ರ ಅಕ್ಟೋಬರ್ 14 ರಂದು ನನ್ನ ಮಗಳ ಮದುವೆ ಪೂರ್ವದಲ್ಲಿ ಈ ಯಾತ್ರೆ ಮಾಡಿದ್ದೆ (ಆಗ ಅಧಿಕ ಮಾಸ ಶ್ರಾವಣ ಮುಗಿದಿತ್ತು) ಆಗಲೂ ಮುಂದಿನ ಅಧಿಕ ಮಾಸ ಶ್ರಾವಣದಲ್ಲಿ  ಈ ಯಾತ್ರೆ ಮಾಡಲೇ ಬೇಕೆಂದು ಮನಸ್ಸಲ್ಲೇ ನಿಶ್ಚಯ ಮಾಡಿದ್ದೆ.
  ಆದರೆ ಈ ವಷ೯ ಅದಿಕ ಮಾಸದ ಶ್ರಾವಣ ಪ್ರಾರಂಭ ಆದರೂ ಈ ಯಾತ್ರೆಯ ನೆನಪಾಗಲೇ ಇಲ್ಲ.ಈ ಸಂದರ್ಭದಲ್ಲೇ ನನ್ನ ಆಪೀಸಿಗೆ ಬಂದಿದ್ದ ನಮ್ಮ ಊರಿನ ಶುಂಠಿ ವ್ಯಾಪಾರಿಗಳಾದ ಪ್ರಮೋದ ಶೇಟ್ ಅವರು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬ್ರಾಂತೇಶ ಕಾಂತೇಶ ಶಾಂತೇಶರ ದರ್ಶನ ತಪ್ಪದೇ ಮಾಡುವುದಾಗಿ ಮತ್ತು ಈ ವರ್ಷ ಅಧಿಕ ಮಾಸದ ಶ್ರಾವಣ ಬಂದಿರುವುದರಿಂದ ವಿಶೇಷವಾಗಿ ಶನಿವಾರ ದರ್ಶನ ಮಾಡಿದರೆ ಶ್ರೇಷ್ಟ ಅಂದಾಗ ಪುನಃ ನನಗೆ ನನ್ನ 2019 ರ ಸಂಕಲ್ಪ ನೆನಪಾಯಿತು.
     ಅದಿಕಸ್ಯ ಅಧಿಕ ಫಲ ಎಂಬಂತೆ ನಿನ್ನೆ ಶನಿವಾರ (5- ಆಗಸ್ಟ್ -2023) ಬೆಳಿಗ್ಗೆ 7ಕ್ಕೆ ಆನಂದಪುರ೦ ಬಿಟ್ಟು ಶಿಕಾರಿಪುರ ಹುಚ್ಚರಾಯಸ್ವಾಮಿ(ಬ್ರಾಂತೇಶ) ದೇವಾಲಯ ದರ್ಶನ ಪೂಜೆ ಮಾಡಿಸಿ ಕೊಂಡು ಮಾಸೂರು ಮಾಗ೯ವಾಗಿ  ಕದರಮಂಡಲಗಿ ತಲುಪಿ ಕಾಂತೇಶರ ದಶ೯ನ ಪೂಜೆ ಮುಗಿಸಿ ಸಾತೇನಳ್ಳಿಯ ಶಾಂತೇಶರ ದರ್ಶನ ಪೂಜೆ ಮುಗಿಸಿ ಹೊರಬರುವಾಗ ಮಧ್ಯಾಹ್ನ 3 ದಾಟಿತ್ತು.
   ಅಧಿಕ ಮಾಸದ ಶ್ರಾವಣ ಶನಿವಾರವಾದ್ದರಿಂದ 30 ಸಾವಿರಕ್ಕೂ ಅಧಿಕ ಭಕ್ತರು ಈ ಯಾತ್ರೆ ಮಾಡಿದ್ದಾರೆ ಆದ್ದರಿಂದ ಈ ಮೂರು ದೇವಾಲಯದಲ್ಲಿ ಅಪಾರ ಜನ ಸಂದಣಿ ಮತ್ತು ನೂಕು ನುಗ್ಗಲು ಉಂಟಾಗಿತ್ತು.
    ಕಡೆಯ ಅಧಿಕ ಮಾಸದ ಶ್ರಾವಣ ಶನಿವಾರ ಮುಂದಿನ ಶನಿವಾರ (12- ಆಗಸ್ಟ್ - 2023) ಕೂಡ ಇದಕ್ಕೂ ಹೆಚ್ಚಿನ ಭಕ್ತರು ಸೇರುವ ನಿರೀಕ್ಷೆ ಇದೆ.
  ನಿಜ ಶ್ರಾವಣದ ಎಲ್ಲಾ ಶನಿವಾರಗಳಲ್ಲೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ ಆದರೆ ನಾಲ್ಕು ವರ್ಷಕೊಮ್ಮೆ ಬರುವ ಅಧಿಕ ಮಾಸದ ಶನಿವಾರಗಳು ಹೆಚ್ಚು ಅಧಿಕ ಫಲ ಎಂಬ ನಂಬಿಕೆ ಇದೆ.
   ನನ್ನಣ್ಣ ಮತ್ತು ಅವರ ಮಗ, ನಾನೂ ನನ್ನ ಮಗ, ನನ್ನ ಸಣ್ಣ ಬಾವ, ಗೆಳೆಯರಾದ ರಿಪ್ಪನಪೇಟೆ ಶಿವಕುಮಾರ್ ಮತ್ತು ಪ್ರಮೋದ್ ಶೇಟ್ ಸೇರಿ ಈ ಯಾತ್ರೆ ಮಾಡಿದ ಸಂತೃಪ್ತಿ ನನ್ನದು.
  ಸಪ್ತ ಚಿರ೦ಜೀವಿಗಳಲ್ಲಿ ಒಬ್ಬರಾದ ಆಂಜನೇಯ ಕಲಿಯುಗದ ಅಂತ್ಯದವರೆಗೂ ಭೂಲೋಕದಲ್ಲಿರುತ್ತಾರೆಂದು ಪುರಾಣಗಳು ಹೇಳಿದೆ ಆದ್ದರಿಂದ ನಂಬಿಕೆ ಇರುವವರು ಅಧಿಕ ಮಾಸದ ಶ್ರಾವಣದ ಕೊನೆಯ ಶನಿವಾರ (12- ಆಗಸ್ಟ್ -2023) ಈ ದರ್ಶನ ಮಾಡುವ ಅವಕಾಶ ತಪ್ಪಿದರೆ ಮತ್ತೆ ಈ ಅವಕಾಶಕ್ಕೆ ನಾಲ್ಕು ವರ್ಷ ಕಾಯಬೇಕು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...