Skip to main content

Blog number 1702. ಮಂದಾರ ಪುಷ್ಪವು ನೀನೇ .... ಎಂಬ ಹಾಡಿನ ಮಂದಾರ ಹೂವು ನನ್ನ ಮನೆಯಲ್ಲಿ ರಾಶಿ ರಾಶಿ.

https://youtu.be/U3F0stfmQ-c

#ನಮ್ಮ_ಮನೆಯಲ್ಲಿ_ಮಂದಾರ_ಹೂವುಗಳ_ರಾಶಿ.

#ಆಲೆಮನೆ_ಸಿನಿಮಾದ_ನಮ್ಮೂರ_ಮಂದಾರ_ಹೂವೆ_ಹಾಡು.

#ರ೦ಗನಾಯಕಿ_ಸಿನಿಮಾದ_ಮಂದಾರ_ಪುಷ್ಟವು_ನೀನು_ಹಾಡು_ನನ್ನ_ಪೆವರಿಟ್

#ಆ_ಹಾಡು_ಇಷ್ಟ_ಪಟ್ಟು_ಕೇಳುವಾಗ_ಈ_ಹೂವು_ನೋಡೇ_ಇರಲಿಲ್ಲ.
   ರೇಷ್ಮೆಯಂತ ನಯವಾದ ಅತಿ ಸೂಕ್ಷ್ಮ ದಳಗಳ ತೆಳು ಹಳದಿ ಬಣ್ಣದ ಮಂದಾರ ಹೂವು ಹಾಡು ಇತ್ಯಾದಿಯಲ್ಲಿ ಸ್ತ್ರೀ ಸೌಂದರ್ಯ ಬಣ್ಣಿಸಲು ಹೆಚ್ಚು ಬಳಸಿದ್ದಾರೆ ಮತ್ತು ಮಂದಾರ ಹೂವಿನ ಹಾಡುಗಳು ಅತ್ಯಂತ ಜನಪ್ರಿಯವಾಗಿದೆ.
  80 ರ ದಶಕದ ಪ್ರಾರಂಭದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ರೆಡಿಯೋ ಸಿಲೋನ್ ನಲ್ಲಿ ಈ ಹಾಡಿಗಾಗಿ ಅನೇಕರು ಅಂಚೆ ಕಾರ್ಡ್ ಮೂಲಕ ವಿನಂತಿಸುತ್ತಿದ್ದರು.
   ಸಿಲೋನ್ ಭಾಷೆಯ ಆಕ್ಸೆಂಟಿನಲ್ಲಿ ಅಂಚೆ ಕಾರ್ಡ್ ನಲ್ಲಿ ವಿನಂತಿಸಿದವರ ಹೆಸರು ರೇಡಿಯೋದಲ್ಲಿ ಹೇಳಿ ನಂತರ ಈ ಆಲೆಮನೆ ಮತ್ತು ರಂಗನಾಯಕಿ ಸಿನಿಮಾದ ಮಂದಾರ ಹೂವಿನ ಹಾಡು ಕೇಳಿಸುತ್ತಿದ್ದರು.
   ಈ ಹಾಡುಗಳಿಗೆ ಮಾರುದ್ದದ ಅಭಿಮಾನಿಗಳ ಪಟ್ಟಿ ರೇಡಿಯೋ ಜಾಕಿ ಮಹಿಳೆ ರಾಗವಾಗಿ ಹೇಳುವುದು ಕೇಳುವುದೇ ಒಂದು ವಿಶೇಷ ಮತ್ತು ಆ ಹೆಸರಿನ ಪಟ್ಟಿಯಲ್ಲಿ ಪ್ರತಿ ವಾರ ನನ್ನ ಹೆಸರೂ ತಪ್ಪದಂತೆ ಕಾರ್ಡ್ ಬರೆಯುತ್ತಿದ್ದೆ ಆಗ ನನ್ನ ಹೆಸರು ರೇಡಿಯೊದಲ್ಲಿ ಕೇಳಿ ನಿಜಕ್ಕೂ ಪುಳುಕಿತವಾಗುತ್ತಿದ್ದ ದಿನಗಳು.
   ನನ್ನ ಆ ಅವತಾರ SSLC ಪೇಲ್ ಆಗಿ ದಿನಸಿ ಅಂಗಡಿ ತೆರೆದಿದ್ದ ಕಾಲ, ಅಂಗಡಿ ಹೊರಗೆ ಒಂದು ಸ್ವೀಕರ್ ನಮ್ಮ ಅಣ್ಣ ಜೋಡಿಸಿದ್ದ ಇದರಿಂದ ಒಳಗಿರುತ್ತಿದ್ದ ರೇಡಿಯೋ ಧ್ವನಿ ಅಂಗಡಿ ಹೊರಗಿನ ಕಟ್ಟೆಯ ಮೇಲೆ ಕುಳಿತಿರುತ್ತಿದ್ದ ಗ್ರಾಹಕರಿಗೆ ಕೂಡ ಕೇಳುತ್ತಿತ್ತು.
  ಈ ಹಾಡು ಕೇಳಲು ನಮ್ಮ ಊರಿನ ಅಮೀರ್ ಸಾಹೇಬರು (ಆಗ ಸಣ್ಣ ಬಾಲಕ) ತಪ್ಪದೇ ಬಂದು ಕಾಯುತ್ತಿದ್ದರು.

   ಮಂದಾರ ಪುಷ್ಪದ ಮೇಲಿನ ಆ ಹಾಡು ಅಷ್ಟು ನಮಗೆಲ್ಲ ಇಷ್ಟವಾಗುತ್ತಿದ್ದ ಕಾಲದಲ್ಲಿ ನಮಗೆಲ್ಲ ಮಂದಾರ ಹೂವಿನ ಬಗ್ಗೆ ಬಾರೀ ಕುತೂಹಲ ಆದರೆ ಆ ಹೂವು ನಾವು ನೋಡೇ ಇರಲಿಲ್ಲ, ನಮ್ಮ ಊರಲ್ಲಿ ಯಾರಿಗೂ ಮಾಹಿತಿ ಇರಲಿಲ್ಲ.
   ಈಗ ನಮ್ಮ ಮನೆಯಲ್ಲಿ ಮಂದಾರ ಹೂವಿನ ಅನೇಕ ಗಿಡಗಳಿದೆ ನಿತ್ಯ ಅರಳುವ ಹೂವು ಪೂಜೆಗೆ ಲಭ್ಯವಿದೆ.
  ಉಷ್ಣವಲಯದ ಆಫ್ರಿಕಾ- ಜಿಂಬಾಬ್ವೆ - ಶ್ರೀಲಂಕಾ ಮತ್ತು ನಮ್ಮ ದೇಶದಲ್ಲಿ ಮಂದಾರ ಪುಷ್ಪದ ಹೂವು ಹೆಚ್ಚು ಇದರ ಸಸ್ಯಶಾಸ್ತ್ರೀಯ ಹೆಸರು ಬೌಹಿನಿಯ ಟೋಮೆಂಟೋಸಾ ಇದಕ್ಕೆ ವನಸಂಪಿಕೆ ಅಂತಲೂ ಕರೆಯುತ್ತಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...