Skip to main content

Blog number 1717. ನನ್ನ ಹೊಸ ಪೋನಿನಲ್ಲಿ ನನ್ನ ಲೇಖನಗಳು ಬ್ಲಾಗ್ ನಲ್ಲಿ 2000 ತಲುಪುವ ನಿರೀಕ್ಷೆಯಲ್ಲಿ.

#ನನ್ನ_ಬ್ಲಾಗ್_ಲೇಖನಗಳು_1717

#ಎರೆಡು_ಸಾವಿರ_ಲೇಖನ_ತಲುಪಲು_ಮೂರನೆ_ಸೆಲ್_ಫೋನ್

#ಮಗಳು_ಅಳಿಯ_ನೀಡಿದ_ಹೊಸ_ಫೋನ್

#ಇತ್ತೀಚೆಗೆ_ಸೆಲ್_ಫೋನ್_ಬಾಳಿಕೆ_ಬರುವುದಿಲ್ಲ_ಯಾಕೆ?

#ಅಪ್_ಗ್ರೇಡ್_ಆದ_ಹಾಗೆ_ಶಿಥಿಲವಾಗುವುದು.

#ಪ್ರತಿ_ವರ್ಷ_ಹೆಚ್ಚಾಗುವ_ಬೆಲೆ.

 ಬರಹಗಾರನಿಗೆ ತನ್ನ ಲೇಖನಗಳು ಸುರಕ್ಷಿತವಾಗಿಡುವ ಕಾಳಜಿ ಸದಾ ಇರುವಂತೆ ಆ ಲೇಖನಗಳು ಪುಸ್ತಕವಾಗಿ ಪ್ರಕಟವಾಗಲಿ ಎಂಬ ಹಂಬಲವೂ ಇರುತ್ತದೆ.
  ಇವತ್ತಿನ ಆಧುನಿಕ ಸಾಮಾಜಿಕ ಜಾಲ ತಾಣದಲ್ಲಿ ಹಾಳೆಯಲ್ಲಿ ಬರೆದಿಡುವ ಕೆಲಸ ಇಲ್ಲ, ಪೆನ್ನು ಇಂಕು ಬೇಕಾಗಿಲ್ಲ ಮೊಬೈಲ್ ಫೋನ್ ನಲ್ಲಿ ಬರೆದದ್ದು ಬ್ಲಾಗ್ ನಲ್ಲಿ ಸೇವ್ ಮಾಡಿದರೆ ಆಯಿತು.
   ಈ ರೀತಿ 2017 ಜನವರಿ 1 ರಿಂದ ಪ್ರಾರಂಬಿಸಿದ ನನ್ನ ಬ್ಲಾಗ್ ನಲ್ಲಿ ಇವತ್ತಿನ ಈ ಲೇಖನ ಸೇರಿ 1717ನೇ ಲೇಖನ ಆಗಿದೆ, ಈಗಾಗಲೇ 2 ಸೆಲ್ ಫೋನ್ ಗಳು ಶಿಥಿಲವಾಗಿದೆ ಈಗ 3 ನೇ ಹೊಸ ಸೆಲ್ ಫೋನ್ ಮಗಳು ಅಳಿಯ ಕಳಿಸಿದ್ದಾರೆ ಇದರಲ್ಲಿ ಹಿಂದಿನ ಫೋನಿಗಿಂತ 4 ಪಟ್ಟು ಕಾರ್ಯಕ್ಷಮತೆ ಇದೆ ಮತ್ತು ನನ್ನ ಹಿಂದಿನ ಫೋನಿನ 2 ಪಟ್ಟು ಬೆಲೆ ಜಾಸ್ತಿ.
   ನಾನು ಯಾರಿಂದಲೂ ಉಡುಗೊರೆ ಸ್ವೀಕರಿಸುವುದಿಲ್ಲ ಎ೦ದು ಗೊತ್ತಿದ್ದ ಮಗಳು ಫೋನ್ ನನಗೆ ತಲುಪುವ ಅಂತಿಮ ಘಳಿಗೆಯಲ್ಲಿ ಅಳಿಯರಿಂದ ಫೋನ್ ಕಳಿಸಿದ ಸುದ್ದಿ ತಿಳಿಸಿದ್ದಾಳೆ ಮತ್ತು ಇದು ಉಡುಗೊರೆ ಅಲ್ಲ ನಿಮ್ಮ ನಿರಂತರ ಬರವಣಿಗೆಗೆ ತಮ್ಮ ಸಣ್ಣ ಪಾಲು ಎಂದಿದ್ದಾರೆ.
  ಇವರ ಸಹೃದಯೀ ಮನಸ್ಸಿಂದ ಕಳಿಸಿದ ಫೋನ್ ಸ್ವೀಕರಿಸಿದ್ಧೇನೆ ಅವರಿಬ್ಬರಿಗೂ ಕೃತಜ್ಞತೆ ತಿಳಿಸಿ ಅವರಿಬ್ಬರಿಗೂ ಇದಕ್ಕೂ ಹೆಚ್ಚಿನ ಉಡುಗೊರೆ ನೀಡುವ ಶಕ್ತಿ ನನಗಿರಲಿ ಎಂದು ಹಾರೈಸಿದ್ಧೇನೆ.
  ಸೆಲ್ ಫೋನ್ ನ ಬಳಕೆ ನನಗೆ ಹೆಚ್ಚಿರುವುದು ನನ್ನ ಬರವಣಿಗೆಗೆ ಮತ್ತು ಅದನ್ನು ಪೇಸ್ ಬುಕ್ ಮತ್ತು ಅದರ ಗ್ರೂಪ್ ಗಳಿಗೆ, ವಾಟ್ಸಪ್ ಗ್ರೂಪ್ ಗಳಿಗೆ ಶೇರ್ ಮಾಡಲು ಅದರ ಜೊತೆ ನನ್ನ ಸಂಸ್ಥೆಯ ವ್ಯವಹಾರಗಳ ಮೈಲ್, ಹಣ ಪಾವತಿ ಮಾಹಿತಿ, ಬ್ಯಾಂಕ್ ಮಾಹಿತಿ ಇತ್ಯಾದಿಗಳಿಗೆ ಹೆಚ್ಚು ಬಳಸುತ್ತೇನೆ.
   ಈಗ ಹೊಸ ಪೋನಿನಲ್ಲಿ ಸಂಸ್ಥೆಯ 16 ಸಿಸಿ ಕ್ಯಾಮೆರಾ ಪೂಟೇಜ್ ನೋಡಲು, ನೆಟ್ ಪ್ಲೆಕ್ಸ್, ಅಮೇಜಾನ್ ಪ್ರೈಮ್ ವಿಡಿಯೋ ಸೇರಿದೆ ನಿನ್ನೆ ಇದರಲ್ಲಿ ಕಾಂತಾರ ಸಿನಿಮಾ ನೋಡಿದೆ ಇವತ್ತು ನೆಟ್ ಪ್ಲಿಕ್ಸ್ ನಲ್ಲಿ ವೀರಪ್ಪನ್ ನೋಡಬೇಕು .
   ಈ ಪೋನಿನಲ್ಲಿ ನನ್ನ ಮಹತ್ವಾಕಾಂಕ್ಷೆಯ 2000 ಲೇಖನ ಪೂರೈಸುವ ಅತ್ಯಾಸೆ ನನ್ನದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...