Skip to main content

Blog number 1691. ಸಾಗರದ ವಿಬಿನ್ನ ರಾಜಕಾರಣಿ ಮಂಜುನಾಥ್ ಕೆ.ಎಲ್.ಇವರು ನಗರ ಸಭಾ ಸದಸ್ಯರಾಗಿದ್ದಾಗ ಸಾಗರದ ಮಾರಿಕಾಂಬಾ ದೇವಿಯ ಎದರು ಲಂಚ ಪಡೆದಿಲ್ಲ ಎಂದು ಪ್ರಮಾಣ ಮಾಡಿ ಆಶ್ರಯ ಹಕ್ಕು ಪತ್ರ ನೀಡಿದ್ದರು ಫಲಾನುಭವಿಗಳೂ ಲಂಚ ನೀಡಿಲ್ಲ ಎಂದು ಪ್ರಮಾಣ ಮಾಡಿ ಹಕ್ಕು ಪತ್ರ ಪಡೆದಿದ್ದು ಆಗ ದೊಡ್ಡ ಸುದ್ದಿ.

#ಸಾಗರದ_ನಗರ_ಸಭಾ_ಸದಸ್ಯರಾಗಿದ್ದಾಗ_ಮಂಜುನಾಥ್_ತಮ್ಮ_ವಾರ್ಡಿನಲ್ಲಿ_ಆಶ್ರಯ_ಹಕ್ಕು_ಪತ್ರ_ನೀಡುವಾಗ
#ಅವರೂ_ಮತ್ತು_ಫಲಾನುಭವಿಗಳು_ಸಾಗರ_ಮಾರಿಕಾಂಬಾ_ದೇವಾಲಯದಲ್ಲಿ_ಮಾಡಿದ_ಪ್ರಮಾಣ.

#ನಗರಸಭಾ_ಸದಸ್ಯನಾಗಿ_ಹಕ್ಕುಪತ್ರಕ್ಕೆ_ಲಂಚ_ಪಡೆದಿಲ್ಲ_ಅಂತ_ಮಂಜಣ್ಣ.

#ಹಕ್ಕು_ಪತ್ರಕ್ಕೆ_ಲಂಚ_ನೀಡಿಲ್ಲ_ಅಂತ_ಫಲಾನುಭವಿಗಳು_ದೇವರ_ಎದರು_ಪ್ರಮಾಣ_ಮಾಡಿದ್ದರು.

#ಇದು_ಅನುಕರಣೀಯ_ಆಗಬೇಕಾಗಿತ್ತು'

#ಈವರೆಗೆ_ಯಾರು_ಇಂತಹ_ದೈಯ೯_ಮಾಡಲಿಲ್ಲ.


  ಸಾಗರದ ನಗರ ಸಭೆ ವ್ಯಾಪ್ತಿಯಲ್ಲಿ ಕಳೆದ ಅವಧಿಯಲ್ಲಿ ಆಶ್ರಯ ಹಕ್ಕು ಪತ್ರ ವಿತರಣೆಯಲ್ಲಿ ಅವ್ಯವಹಾರದ ಸುದ್ದಿ ದೊಡ್ಡದಾಗಿ ಕೇಳಿಬಂದಿತ್ತು.
  ಆದರೆ ಇಲ್ಲಿನ ನಗರಸಭಾ ಸದಸ್ಯರು ತಮ್ಮ ವಾಡಿ೯ನ ಆಶ್ರಯ ಫಲಾನುಭವಿಗಳನ್ನ ಸಾಗರದ ಮಾರಿಕಾಂಭ ದೇವಾಲಯಕ್ಕೆ ಕರೆದೊಯ್ದು ಆಶ್ರಯ ಹಕ್ಕು ಪತ್ರ ನೀಡುವಲ್ಲಿ ತಾವು ಹಣ ಪಡೆದಿಲ್ಲ ಅಂತಲೂ ಹಾಗೆ ಫಲಾನುಭವಿಗಳೂ ತಾವೂ ನಗರಸಭಾ ಸದಸ್ಯ ಮಂಜಣ್ಣನಿಗೆ ಹಣ ನೀಡಿಲ್ಲ ಅಂತ ಪ್ರಮಾಣ ಮಾಡಿದ್ದರು.
   ಇದು ದೊಡ್ಡ ಸುದ್ದಿ ಆಗಿತ್ತು.


  ಇಲ್ಲಿ ಗಮನಿಸ ಬೇಕಾದದ್ದು ಜನಪ್ರತಿನಿದಿ ಒಬ್ಬರೆ ಪ್ರಮಾಣ ಮಾಡಿದರೆ ನಂಬಲು ಕಷ್ಟವಿತ್ತು ಆದರೆ ಫಲಾನುಭವಿಗಳು ಸೇರಿ ಪ್ರಮಾಣ ಮಾಡಿದ್ದಾರೆ.
   ಈಗೆಲ್ಲ ಆಶ್ರಯ ನಿವೇಶನ ಹಂಚಿಕೆಯಲ್ಲಿ ಹಣವೇ ನಿಣಾ೯ಯಕ ಯಾಕೆಂದರೆ ನಿವೇಶನದ ಬೆಲೆ ಮಾರುಕಟ್ಟೆಯಲ್ಲಿ 10 ಲಕ್ಷ ಮಾರುಕಟ್ಟೆ ಬೆಲೆ ಇದೆ, ಪ್ರತಿ ವಾಡ್೯ ಪ್ರತಿನಿದಿಗೆ 15 ಸೈಟ್ ಹಂಚಲು ಆಶ್ರಯ ಸಮಿತಿ ಅಧ್ಯಕ್ಷರು ಅವಕಾಶ ನೀಡಿರುತ್ತಾರೆ ಕನಿಷ್ಟ ಒಂದು ಲಕ್ಷದಿಂದ ಮೂರು ಲಕ್ಷ ಹಣ ಪಡೆದು ಅನಹ೯ರಿಗೆ ಹಂಚುವ ಕೆಲಸ ಎಲ್ಲಾ ಕಡೆ ಇದೆ, ಚುನಾವಣೆಗೆ ಹಣ ನೀಡಿ ಮತ ಪಡೆದು ಗೆಲ್ಲಬೇಕಾದ ಇವತ್ತಿನ ಚುನಾವಣೆಗಳು ಇದಕ್ಕೆ ಕಾರಣ.
   ಸಾಗರದ ಈ ಮಂಜಣ್ಣ ವಿಭಿನ್ನ ಯಾಕೆಂದರೆ ಇವರ ತಂದೆ ಪೈಲ್ವಾನ್ ಲಿಂಗಪ್ಪನವರದ್ದು ಒಂದು ಹಿನ್ನೆಲೆ ಇದೆ, ಇವರ ಜಾತಿಯ ಒಂದೇ ಮನೆ ಇಲ್ಲಿರುವುದು 40 ವಷ೯ದಿಂದ ಅವರು ಪುರಸಭೆಗೆ ಆಯ್ಕೆ ಆಗುತ್ತಿದ್ದರು ಎರೆಡು ಬಾರಿ ಅಧ್ಯಕ್ಷರೂ ಆಗಿದ್ದರು ವಯಸ್ಸಿನ ಕಾರಣದಿಂದ ಅವರು ರಾಜಕೀಯದಿಂದ ನಿವೃತ್ತರಾಗಿದ್ದಾರೆ ಅವರ ಮಗ ಮಂಜಣ್ಣ ಸತತ ಎರಡು ಅವಧಿಗೆ ನಗರಸಭೆಗೆ ಆಯ್ಕೆ ಆಗಿದ್ದಾರೆ.
   ನೇರ ನಡೆ ನುಡಿಯ ಇಡೀ ಕುಟುಂಬ ಸಾಗರದಲ್ಲಿ ಜನಮನ್ನಣೆಯನ್ನ ಪಡೆದಿದೆ ಪಕ್ಷಾತೀತವಾಗಿ ಎಲ್ಲರೂ ಗೌರವಿಸುವ ಈ ಕುಟುಂಬದ ಮಂಜಣ್ಣರ ಪ್ರಾಮಾಣಿಕತೆಯ ಪ್ರಮಾಣಕ್ಕೆ ಕಾಗೋಡು ತಿಮ್ಮಪ್ಪನವರ ನುಡಿ ಪ್ರೇರಣೆ ಆಗಿದೆಯಂತೆ  ಅದೇನೆ೦ದರೆ "ಜನಪ್ರತಿನಿದಿಗಳು ದೇವರ ಮೇಲೆ ಆಣೆ ಮಾಡಿ ಲಂಚ ಪಡೆಯದೆ ಬಡವರಿಗೆ ಅಹ೯ತೆ ಇದ್ದವರಿಗೆ ಆಯ್ಕೆ ಮಾಡುವಂತೆ ಸಾವ೯ಜನಕವಾಗಿ ಹೇಳಿದ್ದರಂತೆ."
  ಇಲ್ಲಿ ಒಂದು ವಿಶೇಷವೆಂದರೆ ಆಗ ಬಿಜೆಪಿಯಲ್ಲಿದ್ದ ಮಂಜಣ್ಣ ಮಾತ್ರ ಪ್ರಮಾಣ ಮಾಡಿದ್ದರು ನಂತರ ನಗರ ಸಭಾ ಚುನಾವಣೆಯಲ್ಲಿ ಇವರ ವಾರ್ಡನಲ್ಲಿ ಇವರಿಗೆ ಸ್ಪರ್ದೆಗೆ ಅವಕಾಶ ಸಿಗದೆ ಬೇರೆ ವಾರ್ಡಿನಲ್ಲಿ ಸ್ಪರ್ಧಿಸಿ ಪರಾಭವಗೊಂಡರು ಈಗ ಕಾಂಗ್ರೇಸ್ ಪಕ್ಷದಲ್ಲಿದ್ದಾರೆ.
   ಮುಂದಿನ ದಿನಗಳಲ್ಲಿ ಮತ್ತೆ ಇವರ ವಾರ್ಡನಿಂದ ಸ್ಪರ್ಧಿಸಿದರೆ ಅಧಿಕ ಮತದಲ್ಲಿ ಗೆಲ್ಲಿಸುವ ವಿಶ್ವಾಸ ಇವರ ಕ್ಷೇತ್ರದ ಮತದಾರರದ್ದು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ