Skip to main content

Blog number 1690. ಆನಂದಪುರಂ ಇತಿಹಾಸ ಭಾಗ ಸಂಖ್ಯೆ 125.ನಮ್ಮ ಪ್ರೀತಿಯ ಹಮೀದಣ್ಣ.


#ಆನಂದಪುರಂ_ಇತಿಹಾಸ_ಭಾಗಸಂಖ್ಯೆ_125.

#ನಮ್ಮ_ಪ್ರೀತಿಯ_ಹಮೀದಣ್ಣ

#ನನ್ನ_ತಂದೆಯ_ಆಪ್ತ_ಗೆಳೆಯರು

#ಸುಬ್ಬಣ್ಣನಾಯಕರ_ರೈತಬಂದು_ಅಕ್ಕಿಗಿರಣಿಯಲ್ಲಿ_ಮುಖ್ಯ_ಮೆಕ್ಯಾನಿಕ್_ಆಗಿದ್ದರು.

#ನೈಲಾನ್_ಅವಲಕ್ಕಿ_ಯ೦ತ್ರ_ಅವಿಷ್ಕಾರ_ಮಾಡಿದವರು.

#ಆ_ಕಾಲದಲ್ಲಿ_ಆನಂದಪುರಂನಲ್ಲಿ_ರೇಡಿಯೋ_ವಾಚ್_ಗಡಿಯಾರ_ಅಲಾರಾಂ_ಟಾರ್ಚ್_ದುರಸ್ತಿ_ಹಮೀದಣ್ಣರದ್ದೆ .

#ಪ್ಯಾರಾಲಿಸಿಸ್_ಕಾಯಿಲೆಗೆ_ಹಮೀದಣ್ಣ_ನೀಡುತ್ತಿದ್ದ_ಜಾಷದಿ_ರಾಮಭಾಣ.


   ಹಮೀದಣ್ಣ ಆ ಕಾಲದಲ್ಲಿ ಇಡೀ ಆನಂದಪುರಂನಲ್ಲಿ ಒಂದು ರೀತಿಯ ಅರ್ಕಿಮಿಡೀಸ್ ಇದ್ದಂತೆ ಅವರ ಹತ್ತಿರ ದುರಸ್ತಿ ಆಗದ ವಸ್ತುವೇ ಇಲ್ಲ ಎಂಬ ಪ್ರತೀತಿ ಆ ಕಾಲದಲ್ಲಿ ಜನರ ಬಾಯಲ್ಲಿತ್ತು.
   ಯಾವುದೇ ಆ ಕಾಲದ ರೇಡಿಯೋ, ಗೋಡೆ ಗಡಿಯಾರ, ಅಲಾರಾಂ, ವಾಚುಗಳು, ಟಾರ್ಚ್ ಇತ್ಯಾದಿ ಹಮೀದಣ್ಣರ ಕೈಯಲ್ಲಿ ಜೀವ ಬರುತ್ತಿತ್ತು.
   ಆ ಕಾಲದಲ್ಲಿ ಪಾರ್ಶ್ವವಾಯು ಕಾಯಿಲೆ ಆದವರಿಗೆ ಹಮೀದಣ್ಣ ನೀಡುತ್ತಿದ್ದ ಆಯುರ್ವೇದ ಔಷದಿ ರಾಮಬಾಣವಾಗಿತ್ತು, ಪಾರ್ಶ್ವವಾಯು ಆದವರಿಗೆ ಮೂಗಿನಲ್ಲಿ ಬಿಡುವ ಔಷದ, ದೇಹಕ್ಕೆ ಮಾಲೀಷ್ ಮಾಡುವ ಎಣ್ಣೆ ನೀಡಿ ಊಟಕ್ಕೆ ಹುರುಳಿ ಕಟ್ಟಿನ ಸಾರು ಹೆಚ್ಚು ನೀಡಲು ಹೇಳುತ್ತಿದ್ದರು ಇದರಿಂದ ಹಾಸಿಗೆ ಹಿಡಿದ ರೋಗಿ ಹದಿನೈದು ದಿನದಲ್ಲಿ ರಿಕವರಿ ಆಗುತ್ತಿದ್ದರು.
   ನಮ್ಮ ತಂದೆಗೆ ಹಮೀದಣ್ಣ ಅತ್ಯಾಪ್ತರು ವಾರಕ್ಕೆರಡು ದಿನವಾದರೂ ನಮ್ಮ ಮನೆಗೆ ಸೈಕಲ್ ಹತ್ತಿ ಬರುತ್ತಿದ್ದರು ಅವರಿಂದಾಗಿಯೇ ನಮ್ಮ ಕುಟುಂಬ ರೈಸ್ ಮಿಲ್ ಉದ್ಯಮ ಪ್ರಾರಂಬಿಸಲು ಕಾರಣ.
   ಹಮೀದಣ್ಣರನ್ನು ಸರಿಯಾಗಿ ಬಳಸಿಕೊಂಡವರು ರೈತ ಬಂಧು ಗ್ರಾಮೋದ್ಯೋಗದ ಸುಬ್ಬಣ್ಣ ನಾಯಕರು ಮಾತ್ರ, ಆ ಕಾಲದಲ್ಲಿ ತಯಾರಾಗುತ್ತಿದ್ದ ಅವಲಕ್ಕಿ ಉದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆ ಅಂದರೆ ಅತ್ಯಂತ ತೆಳುವಾದ ನೈಲಾನ್ ಅವಲಕ್ಕಿ ತಯಾರಿ ಆಗಿತ್ತು.
  ಅವಲಕ್ಕಿ ಅಂದರೆ ಆ ಕಾಲದಲ್ಲಿ ದಪ್ಪ ಕುಟ್ಟವಲಕ್ಕಿ ಕಾಲ ನಂತರ ಯಂತ್ರಗಳು ತಯಾರಿಸುವ ದಪ್ಪ ಅವಲಕ್ಕಿ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಆಗಿತ್ತು.
   ಆ ಕಾಲದಲ್ಲಿ ಅವಲಕ್ಕಿ ಉದ್ಯಮದಲ್ಲಿ ಹೊಸ ಅವಿಷ್ಕಾರ ಅತ್ಯಂತ ತೆಳುವಾದ ನೈಲಾನ್ ಅವಲಕ್ಕಿ ಇದು ಭಾರತೀಯ ಆಹಾರೋದ್ಯಮದಲ್ಲಿ ಬಿರುಗಾಳಿ ಉಂಟು ಮಾಡಿತು ಆಗ ಆನಂದಪುರಂನಲ್ಲಿ ರೈತ ಬಂಧು ಗ್ರಾಮೋದ್ಯೋಗದಲ್ಲಿ ಸುಬ್ಬಣ್ಣ ನಾಯಕರು ನೈಲಾನ್ ಅವಲಕ್ಕಿ ತಯಾರಿಸಿ ಕರಾವಳಿ ಮತ್ತು ಕೇರಳಕ್ಕೆ ದೊಡ್ಡ ಪ್ರಮಾಣದಲ್ಲಿ ನೈಲಾನ್ ಅವಲಕ್ಕಿ ಮಾರಾಟ ಮಾಡಿ ಪ್ರಖ್ಯಾತಿ ಪಡೆದರು ಅವರ ಬ್ರಾಂಡ್ ತುಂಬಾ ಪ್ರಸಿದ್ದಿ ಆಯಿತು.
   ಆಗ ನೈಲಾನ್ ಅವಲಕ್ಕಿ ತಯಾರಿಸುವ 50 ಕ್ಕೂ ಹೆಚು ಅವಲಕ್ಕಿ ಮೆಷಿನ್ ತಯಾರಿಸಿದ್ದು ಹಮೀದ್ ಸಾಹೇಬರು ಈ ಯಂತ್ರದ ಪೇಟೆಂಟ್ ಪಡೆದಿದ್ದರೆ ಮುಂದೆ ದೊಡ್ಡ ಲಾಭ ಪಡೆಯುವ ಸಾಧ್ಯತೆ ಇತ್ತು ಆದರೆ ಆ ಕಾಲದಲ್ಲಿ ಅದನ್ನು ಪ್ರಯತ್ನಿಸಲಿಲ್ಲ.
   ಸುಬ್ಬಣ್ಣ ನಾಯಕರು ಹಮೀದಣ್ಣ ಇಂತಹ ಅನೇಕ ಹೊಸ ಪ್ರಯೋಗಗಳಿಗೆ ರಾಜ್ಯ ಪರರಾಜ್ಯಗಳ ಅನೇಕ ಪ್ರವಾಸ ಮಾಡಿದ್ದರು, ಆ ಕಾಲದಲ್ಲಿ ಹಮೀದ್ ಸಾಹೇಬರಿಗೆ ಸುಬ್ಬಣ್ಣ ನಾಯಕರು ನೀಡುತ್ತಿದ್ದ ಸಂಬಳ ದೊಡ್ಡ ಮೊತ್ತದ್ದೆಂದು ಜನ ಮಾತಾಡುತ್ತಿದ್ದರು, ಸುಬ್ಬಣ್ಣನಾಯಕರು ಹಮೀದಣರಿಗೆ ಹೊಸ ಮನೆಯೂ ಕಟ್ಟಿಸಿಕೊಟ್ಟರು ಕೊನೆಯ ದಿನಗಳಲ್ಲಿ ಇವರಿಬ್ಬರ ಸಂಬಂದ ಯಾಕೋ ಸರಿ ಬರದೆ ದೂರವಾದರು.
  ನಮ್ಮ ತಂದೆಗೆ ಮೂರು ಸಾರಿ ಪಾರ್ಶ್ವವಾಯು ಪೀಡಿತರಾಗಿದ್ದವರು ಗುಣವಾಗಿದ್ದು ಹಮೀದಣ್ಣನವರ ಔಷದಿಯಿಂದಲೇ.
   ಹಮೀದಣ್ಣರಿಗೆ  ನಾಲ್ಕು ಗಂಡು ಮತ್ತು ಆರು ಹೆಣ್ಣು ಮಕ್ಕಳು, ಹಿರಿಯ ಮಗ ಅಬ್ದುಲ್ ಖಾದರ್, ಎರಡನೆ ಮಗ ಹಾಶಂ, ಮೂರನೆ ಅಮ್ಜಾದ್ ಮತ್ತು ನಾಲ್ಕನೆ ಮಗ ಜಾಹೀರ್ ಅಬ್ಬಾಸ್ ಇವರೆಲ್ಲ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ.
  
 
   

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...