Skip to main content

Blog number 1690. ಆನಂದಪುರಂ ಇತಿಹಾಸ ಭಾಗ ಸಂಖ್ಯೆ 125.ನಮ್ಮ ಪ್ರೀತಿಯ ಹಮೀದಣ್ಣ.


#ಆನಂದಪುರಂ_ಇತಿಹಾಸ_ಭಾಗಸಂಖ್ಯೆ_125.

#ನಮ್ಮ_ಪ್ರೀತಿಯ_ಹಮೀದಣ್ಣ

#ನನ್ನ_ತಂದೆಯ_ಆಪ್ತ_ಗೆಳೆಯರು

#ಸುಬ್ಬಣ್ಣನಾಯಕರ_ರೈತಬಂದು_ಅಕ್ಕಿಗಿರಣಿಯಲ್ಲಿ_ಮುಖ್ಯ_ಮೆಕ್ಯಾನಿಕ್_ಆಗಿದ್ದರು.

#ನೈಲಾನ್_ಅವಲಕ್ಕಿ_ಯ೦ತ್ರ_ಅವಿಷ್ಕಾರ_ಮಾಡಿದವರು.

#ಆ_ಕಾಲದಲ್ಲಿ_ಆನಂದಪುರಂನಲ್ಲಿ_ರೇಡಿಯೋ_ವಾಚ್_ಗಡಿಯಾರ_ಅಲಾರಾಂ_ಟಾರ್ಚ್_ದುರಸ್ತಿ_ಹಮೀದಣ್ಣರದ್ದೆ .

#ಪ್ಯಾರಾಲಿಸಿಸ್_ಕಾಯಿಲೆಗೆ_ಹಮೀದಣ್ಣ_ನೀಡುತ್ತಿದ್ದ_ಜಾಷದಿ_ರಾಮಭಾಣ.


   ಹಮೀದಣ್ಣ ಆ ಕಾಲದಲ್ಲಿ ಇಡೀ ಆನಂದಪುರಂನಲ್ಲಿ ಒಂದು ರೀತಿಯ ಅರ್ಕಿಮಿಡೀಸ್ ಇದ್ದಂತೆ ಅವರ ಹತ್ತಿರ ದುರಸ್ತಿ ಆಗದ ವಸ್ತುವೇ ಇಲ್ಲ ಎಂಬ ಪ್ರತೀತಿ ಆ ಕಾಲದಲ್ಲಿ ಜನರ ಬಾಯಲ್ಲಿತ್ತು.
   ಯಾವುದೇ ಆ ಕಾಲದ ರೇಡಿಯೋ, ಗೋಡೆ ಗಡಿಯಾರ, ಅಲಾರಾಂ, ವಾಚುಗಳು, ಟಾರ್ಚ್ ಇತ್ಯಾದಿ ಹಮೀದಣ್ಣರ ಕೈಯಲ್ಲಿ ಜೀವ ಬರುತ್ತಿತ್ತು.
   ಆ ಕಾಲದಲ್ಲಿ ಪಾರ್ಶ್ವವಾಯು ಕಾಯಿಲೆ ಆದವರಿಗೆ ಹಮೀದಣ್ಣ ನೀಡುತ್ತಿದ್ದ ಆಯುರ್ವೇದ ಔಷದಿ ರಾಮಬಾಣವಾಗಿತ್ತು, ಪಾರ್ಶ್ವವಾಯು ಆದವರಿಗೆ ಮೂಗಿನಲ್ಲಿ ಬಿಡುವ ಔಷದ, ದೇಹಕ್ಕೆ ಮಾಲೀಷ್ ಮಾಡುವ ಎಣ್ಣೆ ನೀಡಿ ಊಟಕ್ಕೆ ಹುರುಳಿ ಕಟ್ಟಿನ ಸಾರು ಹೆಚ್ಚು ನೀಡಲು ಹೇಳುತ್ತಿದ್ದರು ಇದರಿಂದ ಹಾಸಿಗೆ ಹಿಡಿದ ರೋಗಿ ಹದಿನೈದು ದಿನದಲ್ಲಿ ರಿಕವರಿ ಆಗುತ್ತಿದ್ದರು.
   ನಮ್ಮ ತಂದೆಗೆ ಹಮೀದಣ್ಣ ಅತ್ಯಾಪ್ತರು ವಾರಕ್ಕೆರಡು ದಿನವಾದರೂ ನಮ್ಮ ಮನೆಗೆ ಸೈಕಲ್ ಹತ್ತಿ ಬರುತ್ತಿದ್ದರು ಅವರಿಂದಾಗಿಯೇ ನಮ್ಮ ಕುಟುಂಬ ರೈಸ್ ಮಿಲ್ ಉದ್ಯಮ ಪ್ರಾರಂಬಿಸಲು ಕಾರಣ.
   ಹಮೀದಣ್ಣರನ್ನು ಸರಿಯಾಗಿ ಬಳಸಿಕೊಂಡವರು ರೈತ ಬಂಧು ಗ್ರಾಮೋದ್ಯೋಗದ ಸುಬ್ಬಣ್ಣ ನಾಯಕರು ಮಾತ್ರ, ಆ ಕಾಲದಲ್ಲಿ ತಯಾರಾಗುತ್ತಿದ್ದ ಅವಲಕ್ಕಿ ಉದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆ ಅಂದರೆ ಅತ್ಯಂತ ತೆಳುವಾದ ನೈಲಾನ್ ಅವಲಕ್ಕಿ ತಯಾರಿ ಆಗಿತ್ತು.
  ಅವಲಕ್ಕಿ ಅಂದರೆ ಆ ಕಾಲದಲ್ಲಿ ದಪ್ಪ ಕುಟ್ಟವಲಕ್ಕಿ ಕಾಲ ನಂತರ ಯಂತ್ರಗಳು ತಯಾರಿಸುವ ದಪ್ಪ ಅವಲಕ್ಕಿ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಆಗಿತ್ತು.
   ಆ ಕಾಲದಲ್ಲಿ ಅವಲಕ್ಕಿ ಉದ್ಯಮದಲ್ಲಿ ಹೊಸ ಅವಿಷ್ಕಾರ ಅತ್ಯಂತ ತೆಳುವಾದ ನೈಲಾನ್ ಅವಲಕ್ಕಿ ಇದು ಭಾರತೀಯ ಆಹಾರೋದ್ಯಮದಲ್ಲಿ ಬಿರುಗಾಳಿ ಉಂಟು ಮಾಡಿತು ಆಗ ಆನಂದಪುರಂನಲ್ಲಿ ರೈತ ಬಂಧು ಗ್ರಾಮೋದ್ಯೋಗದಲ್ಲಿ ಸುಬ್ಬಣ್ಣ ನಾಯಕರು ನೈಲಾನ್ ಅವಲಕ್ಕಿ ತಯಾರಿಸಿ ಕರಾವಳಿ ಮತ್ತು ಕೇರಳಕ್ಕೆ ದೊಡ್ಡ ಪ್ರಮಾಣದಲ್ಲಿ ನೈಲಾನ್ ಅವಲಕ್ಕಿ ಮಾರಾಟ ಮಾಡಿ ಪ್ರಖ್ಯಾತಿ ಪಡೆದರು ಅವರ ಬ್ರಾಂಡ್ ತುಂಬಾ ಪ್ರಸಿದ್ದಿ ಆಯಿತು.
   ಆಗ ನೈಲಾನ್ ಅವಲಕ್ಕಿ ತಯಾರಿಸುವ 50 ಕ್ಕೂ ಹೆಚು ಅವಲಕ್ಕಿ ಮೆಷಿನ್ ತಯಾರಿಸಿದ್ದು ಹಮೀದ್ ಸಾಹೇಬರು ಈ ಯಂತ್ರದ ಪೇಟೆಂಟ್ ಪಡೆದಿದ್ದರೆ ಮುಂದೆ ದೊಡ್ಡ ಲಾಭ ಪಡೆಯುವ ಸಾಧ್ಯತೆ ಇತ್ತು ಆದರೆ ಆ ಕಾಲದಲ್ಲಿ ಅದನ್ನು ಪ್ರಯತ್ನಿಸಲಿಲ್ಲ.
   ಸುಬ್ಬಣ್ಣ ನಾಯಕರು ಹಮೀದಣ್ಣ ಇಂತಹ ಅನೇಕ ಹೊಸ ಪ್ರಯೋಗಗಳಿಗೆ ರಾಜ್ಯ ಪರರಾಜ್ಯಗಳ ಅನೇಕ ಪ್ರವಾಸ ಮಾಡಿದ್ದರು, ಆ ಕಾಲದಲ್ಲಿ ಹಮೀದ್ ಸಾಹೇಬರಿಗೆ ಸುಬ್ಬಣ್ಣ ನಾಯಕರು ನೀಡುತ್ತಿದ್ದ ಸಂಬಳ ದೊಡ್ಡ ಮೊತ್ತದ್ದೆಂದು ಜನ ಮಾತಾಡುತ್ತಿದ್ದರು, ಸುಬ್ಬಣ್ಣನಾಯಕರು ಹಮೀದಣರಿಗೆ ಹೊಸ ಮನೆಯೂ ಕಟ್ಟಿಸಿಕೊಟ್ಟರು ಕೊನೆಯ ದಿನಗಳಲ್ಲಿ ಇವರಿಬ್ಬರ ಸಂಬಂದ ಯಾಕೋ ಸರಿ ಬರದೆ ದೂರವಾದರು.
  ನಮ್ಮ ತಂದೆಗೆ ಮೂರು ಸಾರಿ ಪಾರ್ಶ್ವವಾಯು ಪೀಡಿತರಾಗಿದ್ದವರು ಗುಣವಾಗಿದ್ದು ಹಮೀದಣ್ಣನವರ ಔಷದಿಯಿಂದಲೇ.
   ಹಮೀದಣ್ಣರಿಗೆ  ನಾಲ್ಕು ಗಂಡು ಮತ್ತು ಆರು ಹೆಣ್ಣು ಮಕ್ಕಳು, ಹಿರಿಯ ಮಗ ಅಬ್ದುಲ್ ಖಾದರ್, ಎರಡನೆ ಮಗ ಹಾಶಂ, ಮೂರನೆ ಅಮ್ಜಾದ್ ಮತ್ತು ನಾಲ್ಕನೆ ಮಗ ಜಾಹೀರ್ ಅಬ್ಬಾಸ್ ಇವರೆಲ್ಲ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ.
  
 
   

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ