Skip to main content

Blog number 1196. ಪತ್ರಕರ್ತ ಹರತಾಳು ಹೆಚ್.ವಿ.ನಾರಾಯಣ ರಾವ್ ಕೊಲೆ 1970 ರ ದಶಕದಲ್ಲಿ ರಾಜ್ಯದಾದ್ಯಂತ ಸೆನ್ಸ್ ಸೇಷನಲ್ ಸರಣಿ ಲೇಖನಗಳ ಸುದ್ದಿ.


https://youtu.be/tPLY21R1V-c

#ಹೆಚ್_ವಿ_ಆರ್_ನೆನಪುಗಳು_ಭಾಗ_3

#ಹರತಾಳಿನ_ಪತ್ರಕರ್ತ_ನಾರಾಯಣ್_ರಾವ್_ಕೊಲೆ

#ಜಿಲ್ಲಾ_ಪತ್ರಿಕೆ_ಮಲೆನಾಡು_ವಾರ್ತಾ_ವರದಿಗಾರರು

#ಭೂಪಾಳಂ_ಚಂದ್ರಶೇಖರಯ್ಯ_ಸಂಪಾದಕತ್ವದಲ್ಲಿ

#ಸಾಕ್ಷಿ_ಕೊರತೆಯಿಂದ_ಕೇಸ್_ಖುಲಾಸೆ

#ಪ್ರಜಾವಾಣಿ_ಕನ್ನಡಪ್ರಭದಲ್ಲಿ_ಸರಣಿ_ಲೇಖನ

#ಹೆದರಿಸಲು_ಹೋಗಿ_ಕೊಲೆ_ಆರೋಪದಿಂದ_ಬಂದಿಸಲ್ಪಟ್ಟವರು.

#ಪಶ್ಚಾತ್ತಾಪದಿಂದಲೇ_ಇಹಲೋಕ_ತ್ಯಜಿಸಿದ_ಹತ್ಯಾ_ಆರೋಪಿ 

#ಬ್ರಾಹ್ಮಣ_ಹತ್ಯಾ_ದೋಷದಿಂದ_ಕುಷ್ಟ_ರೋಗ_ಬಂದಿತೆಂಬ_ಅವನ_ಸುಪ್ತಮನಸ್ಸಿನ_ಭಯ.

#ಹರತಾಳು_ಹಾಲಪ್ಪಗೌಡರ_ಕುಟುಂಬ_ವೈದ್ಯರು_ನಮ್ಮ_ತಂದೆ

   ಹೊಸನಗರ ತಾಲ್ಲೂಕಿನ ಹರತಾಳಿನ ಪತ್ರಕರ್ತ ಹೆಚ್.ವಿ. ನಾರಾಯಣ ರಾವ್ ಸಾಗರದ ಹಿರಿಯ ಪತ್ರಕರ್ತ ಸಾಗರ ಸಂದೇಶದ ಹೆಚ್.ವಿ. ಆರ್. ಅಣ್ಣ.
  1960-70 ರ ದಶಕದ ಶಿವಮೊಗ್ಗ ಜಿಲ್ಲೆಯ ಅತ್ಯಂತ ಹೆಚ್ಚು ಪ್ರಸರಣದ ಭೂಪಾಳಂ ಚ೦ದ್ರಶೇಖರಯ್ಯನವರ ಮಲೆನಾಡು ವಾರ್ತಾ ಪತ್ರಿಕೆ ವರದಿಗಾರರು.
   ಇವರ ಕೊಲೆ ಪ್ರಕರಣ ಆಗ ಇಡೀ ರಾಜ್ಯದಲ್ಲಿ ಸೆನ್ಸೆಷನಲ್ ನ್ಯೂಸ್ ಆಗಿತ್ತು, ಪ್ರಜಾವಾಣಿ ಮತ್ತು ಕನ್ನಡ ಪ್ರಭದಲ್ಲಿ ಸರಣಿ ಲೇಖನವಾಗಿತ್ತು.
  ಆಗ ಜಿಲ್ಲಾ ರಕ್ಷಣಾಧಿಕಾರಿಗಳು ಗರುಡಾಚಾರ್ ನಂತರ ಬೆಂಗಳೂರಿನ ದಾಖಲೆಯ ದೀರ್ಘ ಕಾಲಾವದಿಯ ಪೋಲಿಸ್ ಕಮಿಷನರ್ ಆಗಿದ್ದವರು, ಇವರ ಪುತ್ರ ಉದಯ ಗರುಡಾಚಾರ್ ಬೆಂಗಳೂರಿನ ಚಿಕ್ಕಪೇಟೆಯಿಂದ ಹಾಲಿ ಬಿಜೆಪಿ ಶಾಸಕರು.
  ಇವರ ಆಪ್ತರಾದ ಸಮಾಜವಾದಿ ಸಾಹಿತಿ ಕೋಣ೦ದೂರು ವೆಂಕಪ್ಪ ಗೌಡರ ಜೊತೆ ಬೆಂಗಳೂರಿನ ಜೆ ಪಿ ನಗರದ ಗರುಡಾಚಾರ್ ಮನೆಯಲ್ಲಿ ಅವರ ಬೇಟಿಯನ್ನು ಮಾಡಿದ್ದೆ, ಅವರು ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿ ಬಗ್ಗೆ ಬರೆದ ಪುಸ್ತಕದ ಬಗ್ಗೆ ತಿಳಿಸಿದ್ದರು.
   ಸಣ್ಣದಾದ ಬಿನ್ನಾಭಿಪ್ರಾಯ ಪ್ರಾರಂಭವಾಗಿದ್ದು ಸ್ಥಳಿಯ ಪತ್ರಿಕೆ ವರದಿಗಾರರ ವರದಿ, ಅದರ ಮರುದಿನ ನಡೆದ ಅಬಕಾರಿ ದಾಳಿಗಳು ಪತ್ರಕರ್ತರ ಕೊಲೆಗೆ ಕಾರಣ ಎಂಬುದು ಪೋಲಿಸರ ದೋಷಾರೋಪ.
   ಸಾಕ್ಷಿ ಕೊರತೆಯಿಂದ ಕೊಲೆ ಆರೋಪದಿಂದ ಖುಲಾಸೆ ಆಯಿತು ಆದರೆ ನಿಜವಾಗಿ ಕೊಲೆ ಮಾಡಿದವ ನನ್ನ ಶಿಷ್ಯನಾಗಿ ಅಂತಿಮ ಜೀವನ ಕಳೆದ, ಅವನಿಗೆ ಕುಷ್ಟರೋಗ ಆಯಿತು ಇದು ಬ್ರಾಹ್ಮಣ ಹತ್ಯೆಯ ಶಾಪ ಅನ್ನುವ ಅವನ ಪಾಪ ಪ್ರಜ್ಞೆ ಅವನ ಸುಪ್ತ ಮನಸ್ಸಿನಿಂದ ತೆಗೆಯಲು ನನ್ನ ಪ್ರಯತ್ನಗಳು ವಿಫಲ ಆಯಿತು.
   ಹರತಾಳು ಹಾಲಪ್ಪ ಗೌಡರನ್ನು ಹಳಿಯಲು ಆಗ ದೊಡ್ಡ ಮಟ್ಟದಲ್ಲಿ ಅನೇಕ ಪ್ರಯತ್ನಗಳು ನಡೆಯಿತು ಅವರನ್ನು ಬಂದಿಸಿದರು ಆದರೆ ಅವರು ಎಲ್ಲಾ ಆರೋಪದಿಂದ ಖುಲಾಸೆ ಆದರು.
   ಆಗ ನನಗೆ 5-6 ವರ್ಷದವನು ಹರತಾಳು ಹಾಲಪ್ಪ ಗೌಡರು ಜಾಮೀನು ಪಡೆದು ಮದ್ಯಾಹ್ನದ ಜಗದೀಶ್ವರ ಬಸ್ಸಿಗೆ ನಮ್ಮ ಮನೆ ಎದುರಿನ ಯಡೇಹಳ್ಳಿ ಸರ್ಕಲ್ ನಲ್ಲಿ ಬಂದು ಇಳಿಯುತ್ತಾರೆಂಬ ಸುದ್ದಿಯಿಂದ ನೂರಾರು ಜನ ಸೇರಿದ್ದರು ಗೌಡರನ್ನು ಕರೆದೊಯ್ಯಲು ಹರತಾಳಿನಿಂದ ಜೀಪು ಬಂದು ನಮ್ಮ ಮನೆ ಎದರು ನಿ೦ತಿತ್ತು.
   ಬಸ್ಸಿನಿಂದ ಇಳಿದ ಅಜಾನುಬಾಹು ಹಾಲಪ್ಪ ಗೌಡರು "ಕೃಷ್ಣಪ್ಪಾ" ಅಂತ ನನ್ನ ತಂದೆಯನ್ನು ಅಪ್ಪಿಕೊಂಡಾಗ ನಾನು ಭಯ ಪಟ್ಟಿದ್ದೆ ಆದರೆ ನಮ್ಮ ತಂದೆ ಅವರ ಕುಟುಂಬ ವೈದ್ಯರು.
  2017ರಲ್ಲಿ ಹರತಾಳು ಹಾಲಪ್ಪ ಗೌಡ ದಂಪತಿಗಳು ನನ್ನ ಆಫೀಸಿಗೆ ಬಂದಿದ್ದರು ಅವರ ಬಗ್ಗೆ ನನಗೆ ಈಗಲೂ ಅಭಿಮಾನ ಒಂದು ಕೆಟ್ಟ ಕ್ಷಣದಿಂದ ಆವೇಶದಿಂದ ನಿಯತ್ತಿನ ಕೆಲಸಗಾರರ ಬೌದ್ದಿಕ ಶಕ್ತಿಯ ಕೊರತೆ ಮತ್ತು ಅವರ ಹುಂಬ ಮಸಲ್ ಪವರ್ ಗಳ ವಿಜೃಂಬಣೆಯಿಂದ ಪತ್ರಕರ್ತ ಹೆಚ್.ವಿ.ನಾರಾಯಣ ರಾವ್ ಹತ್ಯಾ ಪ್ರಕರಣದ ಕಾರಣದಿಂದ ಅವರು ಆರೋಪಿ ಆಗಿದ್ದು ವಿಪರ್ಯಾಸ.
   ಇದು ಅವರ ಜೀವನ ಪಯ೯೦ತ ನೋವು ಪಶ್ಚಾತ್ತಾಪಕ್ಕೆ ಕಾರಣವಾಯಿತು, ನಿಜ ಕೊಲೆಗಾರ ನನ್ನ ಶಿಷ್ಯನಾಗಿದ್ದ ಮತ್ತು ಕೊಲೆಯಾದ ಹರತಾಳಿನ ಹೆಚ್.ವಿ.ನಾರಾಯಣ ರಾವ್ ಸಹೋದರ ಸಾಗರದ ಹಿರಿಯ ಪತ್ರಕರ್ತ ಹೆಚ್.ವಿ.ಆರ್. ಈ ಘಟನೆಯ 50 ವರ್ಷದ ನಂತರ ತಮ್ಮ ನೆನಪಿನ ಸರಣಿಯಲ್ಲಿ ವಿವರಿಸಿದ್ದಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ