Skip to main content

Blog number 1197. ಕಾರ್ಗಿಲ್ ನಲ್ಲಿ ವಾಸ ಇರುವ ಭಾರತ ರಾಷ್ಟ್ರಪ್ರೇಮಿ, ಭಾರತೀಯ ಸೈನ್ಯದ ಪ್ರೀತಿಪಾತ್ರ ಕುಟುಂಬದ ಮೊಹಮದ್ ಅಲೀ ಅಕ್ಬರ್.

ಮೊಹಮದ್ ಆಲೀ ಅಕ್ಬರ್ ಕಾಗಿ೯ಲ್ ನಿವಾಸಿ ಇವತ್ತು ನಮ್ಮ ಅತಿಥಿ ಇವರು ಮಹಾನ್ ದೇಶ ಪ್ರೇಮಿ ಇವರ ಕುಟುಂಬ ಸಮಾಜ ಸೇವೆಯಲ್ಲಿ ಮು೦ದೆ ದೇಶದ ರಕ್ಷಣಾ ಇಲಾಖೆಗೆ ಇವರು ತುಂಬಾ ಸಹಾಯ ಮಾಡುತ್ತಾರೆ ಇವರ ಮಾವನಿಗೆ ಕ್ಯಾನ್ಸರ್ ಎಲ್ಲಾ ಕಡೆ ಚಿಕಿತ್ಸೆ ಮಾಡಿದರೂ ಪ್ರಯೋಜನ ಆಗಿಲ್ಲ ಹಾಗಾಗಿ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಆಯುವೆ೯ದ ಪಂಡಿತರಾದ ನರಸೀಪುರ ನಾರಾಯಣ ಮೂತಿ೯ ಜಾಷದಿಗಾಗಿ ಬರುತ್ತಿದ್ದಾರೆ ಆದರೆ ಆದನ್ನೆಲ್ಲ ಅವರು ಹೇಳಿಕೊಳ್ಳುವುದಿಲ್ಲ       ಅವರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಬೇಕಾಗಿ ಕಾಗಿ೯ಲ್ ಆಮಿ೯ ಬೇಸ್ ನಿಂದ ಬಂದ ಕರೆಯOತೆ ಇವರ ಕುಟುಂಬವನ್ನ ನಮ್ಮ ಲಾಡ್ಜ್ ನಲ್ಲಿ ಉಳಿಸಿ ವೈದ್ಯರನ್ನ ಬೇಟಿ ಮಾಡಿಸಿ ಔಷದಿ ಕೊಡಿಸಿ ವಿದಾಯ ಮಾಡಿದೆ.#
   ಇವರ ತಂದೆ ಕಾಗಿ೯ಲ್ ನಲ್ಲಿ ವಿದ್ಯಾಭ್ಯಾಸಕ್ಕಾಗಿ ದೊಡ್ಡ ಕೊಡುಗೆ ನೀಡಿದವರು ಇವರ ಪ್ರಯತ್ನದಿಂದ ಇಡೀ ಜಿಲ್ಲೆ 75% ಅಕ್ಷರಸ್ಥರಾಗಿದ್ದಾರೆ, ಬಂದ ಪ್ರಶಸ್ತಿಗಳನ್ನ ನಯವಾಗಿ ನಿರಾಕರಿಸಿದವರು ಅವರು ಒಪ್ಪಿದ್ದರೆ ಶಾಸಕ ಸಂಸದರಾಗ ಬಹುದಿತ್ತು ಅವರು ಅದನ್ನೆಲ್ಲ ಬಯಸದೆ ಕಿಂಗ್ ಮೇಕರ್ ಆಗಿದ್ದರು ಅಂತ ಅಕ್ಬರ್ ವಿವರಿಸಿದರು.
  ಸ್ಥಳಿಯರ ಸಹಕಾರ ಇಲ್ಲದೆ ಕಾಗಿ೯ಲ್ ಯುದ್ಧ ಗೆಲ್ಲಲಾಗುತ್ತಿರಲಿಲ್ಲ ಅಂತ ಅವತ್ತಿನ ಮುಂಚೂಣಿ ಸೇನಾ ಅಧಿಕಾರಿಗಳ ಹೇಳಿಕೆ 1999ರಲ್ಲಿ ನೆನಪಿತ್ತು ಇದನ್ನ ಪ್ರಸ್ತಾಪಿಸಿದಾಗ ಅವರು ಹೇಳಿದ್ದು ಕಾಗಿ೯ಲ್ ನಲ್ಲಿ 85% ಮುಸ್ಲಿ೦ ಇದ್ದಾರೆ ಅವರೆಲ್ಲ ಶಿಯಾ ಪಂಥದವರು ಭಾರತವನ್ನ ಬೆಂಬಲಿಸುತ್ತಾರೆ 15 %  ಬೌದ್ಧರಿದ್ದಾರೆ, ಕಾಗಿ೯ಲ್ ಯುದ್ಧದಲ್ಲಿ ಪಾಕಿಸ್ತಾನದ ಬಾಂಬ್ ನಿಂದ 23 ಜನ ಕಾಗಿ೯ಲ್ ನ ಮುಸ್ಲಿಂ ರೇ ಮೃತರಾದರು ಆ ಎಲ್ಲಾ ದೇಹಗಳ ಗುರುತು ಮಾಡಲು ಇವರೇ ಹೋಗ ಬೇಕಾಯಿತಂತೆ ನಮ್ಮನ್ನ ಕೊಲ್ಲುವವರನ್ನ ನಾವು ಬೆಂಬಲಿಸುವುದು ದಾದರೂ ಹೇಗೆ? ಅಂದರು
 
  ಕಾಗಿ೯ಲ್ ಯುದ್ಧ ಪ್ರಾರಂಬ ಆದಾಗ ಆರು ತಿಂಗಳು ಊರು ತ್ಯಜಿಸಿ 30 ಕಿ.ಮಿ ದೂರದಲ್ಲಿ ಪುನರ್ ವಸತಿ ಕೇಂದ್ರದಲ್ಲಿ ವಾಸಿಸುವಂತಾಯಿತು ಸ್ಥಳಿಯ ಯುವಕರು ಭಾರತೀಯ ಸೇನೆಗೆ ಅವಶ್ಯ ವಸ್ತು ಸಾಗಾಣಿಕೆಗೆ ಸ್ವಯಂ ಸೇವಕರಾಗಿ  ಸಹಕರಿಸಿದರು ಅಂದರು.
  ಇವತ್ತೂ ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿಸುವವರ ಸಂಖ್ಯೆ 25% ಮೀರಿಲ್ಲ ಭಾರತದ ಪರ 25% ಇದಾರೆ ಶೇಕಡಾ 50% ಯಾರದೇ ಪರವಾಗಿಲ್ಲ ಅಂತ ವಿವರಿಸಿದ್ದಾರೆ.
 
  ಅಲ್ಲಿ ಚಳಿಗಾಲ 2 ಅಡಿ ದಪ್ಪ ಮಂಜುಗಡ್ಡೆ ಇದೆ, ಶಾಲಾ ಕಾಲೇಜು ಮಾಚ್೯ ತನಕ ರಜಾ, ಎಲ್ಲಾ ರಸ್ತೆಗಳು ಬಂದ್ ಆಗಿದೆ, ವಿಮಾನ ಮಾಗ೯ ಒಂದೇ ಸಂಪಕ೯ ಅಂದರು.
  ಅಲ್ಲಿನ ಅಹಾರ ಸಂಪ್ರದಾಯದ ಬಗ್ಗೆ ತುಂಬಾ ಚಚಿ೯ಸಿದರು ಅಕ್ಬರ್ ಒಬ್ಬ ಪ್ರಬುದ್ದ ಭಾರತೀಯ ಪ್ರಜೆ ಇವರ ಮನೆ LOC ಯಿOದ ಕೇವಲ 5 KM ದೂರದಲ್ಲಿದೆ ನಾವೆಲ್ಲ ಜಮ್ಮ ಕಾಶ್ಮೀರದ ಮುಸ್ಲಿಂರೆಲ್ಲರ ಬಗ್ಗೆ ತಪ್ಪುಗ್ರಹಿಕೆಯಲ್ಲೇ ಇದ್ದೇವೆ ಆದರೆ ವಾಸ್ತವವೇ ಬೇರೆ ಅಂತ ಅಕ್ಬರ್ ಕುಟುಂಬದ ಜೊತೆ ಒಂದು ದಿನದಲ್ಲಿ ಅನುಭವ ಆಯಿತು.
  ಅವರಿಗೆ ಮಲೆನಾಡಿನ ಸಾವಯವ ಜೋನಿ ಬೆಲ್ಲ ನೆನಪಿಗಾಗಿ ನೀಡಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...