Skip to main content

Blog number 1157. ಹಳೇಸೊರಬದ ಜೆ. ಶಿವಾನಂದಪ್ಪ ಬಂಗಾರಪ್ಪರ ನಂತರ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರೆಂದೇ ಬಾವಿಸಲಾಗಿತ್ತು ಆದರೆ ಕಾಣದ ಕೈಗಳು ಅವರನ್ನು ಕನಿಷ್ಟ ಜಿಲ್ಲಾ ರಾಜಕಾರಣಕ್ಕೂ ಹೋಗಲು ಬಿಡಲಿಲ್ಲ, ಇಹಲೋಕ ತ್ಯಜಿಸಿದ ಶಿವಾನಂದಪ್ಪರ ನೆನಪುಗಳು

#ಹಳೇ_ಸೊರಬದ_ಜೆ_ಶಿವಾನಂದಪ್ಪ

#ಬಂಗಾರಪ್ಪರ_ಬಲಗೈ_ಬಂಟರಾಗಿದ್ದರು.

#ಒಂದು_ಚುನಾವಣೆಯಲ್ಲಿ_ಅಜಿ೯_ಹಾಕಲು_ಬಂದ_ಬಂಗಾರಪ್ಪನವರು_ಮತ್ತೆ_ಬಂದದ್ದು_ಗೆದ್ದ_ಮೇಲೆ

#ಸಂಪೂರ್ಣ_ಚುನಾವಣೆ_ಮಾಡಿದ್ದು_ಶಿವಾನಂದಪ್ಪನವರೆ

#ತಮ್ಮ_ರಾಜಕೀಯ_ಜೀವನವನ್ನೆ_ಬಂಗಾರಪ್ಪರ_ಕುಟುಂಬಕ್ಕೆ_ಮೀಸಲಿಟ್ಟಿದ್ದರು

#ಮನಸ್ಸು_ಮಾಡಿದ್ದರೆ_ವಿದಾನ_ಸಭಾ_ಸದಸ್ಯರಾಗಿ_ಜಿಲ್ಲೆಯ_ಪ್ರಭಾವಿ_ರಾಜಕಾರಣಿ_ಆಗುತ್ತಿದ್ದರು.

#ಇಹಲೋಕ_ತ್ಯಜಿಸಿದ_ಶಿವಾನಂದಪ್ಪರ_ನೆನಪುಗಳು

   ಸೊರಬ ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನದ ನಂತರ ವರದಾ ನದಿ ಸೇತುವೆ ದಾಟಿ ಎಡಕ್ಕೆ ಇರುವ ಹಳೇಸೊರಬದ ಸಣ್ಣ ಹಂಚಿನ ಮನೆಯಲ್ಲಿ ಜೆ. ಶಿವಾನಂದಪ್ಪರ ಮೊದಲ ಬೇಟಿ ನನ್ನದು.
   ಸದಾ ಹಸನ್ಮುಖಿಯಾಗಿ ಇಡೀ ಕ್ಷೇತ್ರದ ಪ್ರತಿ ಕುಟುಂಬಕ್ಕೆ ಬಂಗಾರಪ್ಪರ ಪ್ರತಿನಿದಿ ಆಗಿ ಅವರ ಕಷ್ಟ ಸುಖಗಳಿಗೆ ಪ್ರತಿಸ್ಪಂದಿಸುತ್ತಾ ಪ್ರತಿ ಚುನಾವಣೆಯಲ್ಲಿ ಬಂಗಾರಪ್ಪರಿಗೆ ಅವರ ಮತಗಳು ತಪ್ಪದಂತೆ ನೋಡಿಕೊಳ್ಳುತ್ತಿದ್ದ ಯುವ ನಾಯಕರಾಗಿದ್ದ ಶಿವಾನಂದಪ್ಪ ಯಾವಾಗಲೂ ಬಂಗಾರಪ್ಪರ ಚುನಾವಣಾ ರಾಜಕಾರಣದ ಸೇನಾ ನಾಯಕರು.
  ಬಂಗಾರಪ್ಪನವರು ಮುಖ್ಯಮಂತ್ರಿ ಆಗಲೇ ಬೇಕು, ಅವರು ಮುಖ್ಯಮಂತ್ರಿ ಆಗಿದ್ದು ತಮ್ಮ ಕಣ್ಣಲ್ಲಿ ನೋಡಬೇಕೆಂಬುದೇ ಇವರ ಕನಸಾಗಿತ್ತು ಅಂತಹ ಸಂದರ್ಭಗಳು ಬಂಗಾರಪ್ಪರಿಗೆ ಬಂದರೂ ಈಡೇರದ ನೋವು ಎಲ್ಲರಿಗಿಂತ ಹೆಚ್ಚು ಬಾದಿಸಿದ್ದು ಶಿವಾನಂದಪ್ಪರಿಗೆ.
  ಇಂತಹ ಒಂದು ಚುನಾವಣೆಯಲ್ಲಿ ಶಿವಾನಂದಪ್ಪ ಒಂದು ಘೋಷಣೆ ಮಾಡಿದ್ದರು ಅದೇನೆಂದರೆ ಬಂಗಾರಪ್ಪನವರು ವಿದಾನ ಸಭಾ ಚುನಾವಣೆಗೆ ಅರ್ಜಿ ಸಲ್ಲಿಸಲು ಮಾತ್ರ ಸೊರಬಕ್ಕೆ ಬರುತ್ತಾರೆ ಇಡೀ ಚುನಾವಣೆ ಸೊರಬ ವಿಧಾನಸಭಾ ಕ್ಷೇತ್ರದ ಮತದಾರರೇ ಮಾಡಿ ಅವರನ್ನು ಗೆಲ್ಲಿಸುತ್ತೇವೆ ಅಂತ ಅದರಂತೆ ಬಂಗಾರಪ್ಪನವರು ಶಿವಾನಂದಪ್ಪರ ಆಶಯದಂತೆ ಸೊರಬಕ್ಕೆ ಬಂದು ಅಜಿ೯ಸಲ್ಲಿಸಿ ಹೋದರು.
   ಇಡೀ ವಿದಾನ ಸಭಾ ಕ್ಷೇತ್ರದಲ್ಲಿ ಪ್ರಚಾರದ ಜವಾಬ್ದಾರಿಯು  ಇದೇ ಶಿವಾನಂದಪ್ಪನವರದ್ದಾಗಿತ್ತು, ಜನತೆ ಇವರಲ್ಲಿ ಬಂಗಾರಪ್ಪನವರ ಪ್ರತಿಬಿಂಬ ನೋಡಿತ್ತು, ಅದರಂತೆ ಬಾರೀ ಬಹುಮತದಲ್ಲಿ ಬಂಗಾರಪ್ಪ ಗೆದ್ದರು ಬಹುಶಃ ಇದು ರಾಜ್ಯ ರಾಜಕಾರಣದಲ್ಲಿ ಮೊದಲು ಮತ್ತು ಕೊನೆಯ ಹೊಸ ಪ್ರಯೋಗ ಅನ್ನಿಸಿದೆ.
   ಇಡೀ ಸೊರಬ ಕ್ಷೇತ್ರದ ಜನ ಬಂಗಾರಪ್ಪರ ನಂತರ ಹಳೇ ಸೊರಬದ ಶಿವಾನಂದಪ್ಪನವರೆ ಶಾಸಕರಾಗುತ್ತಾರೆ, ಬಂಗಾರಪ್ಪ ಶಿವಾನಂದಪ್ಪನವರನ್ನೇ ಬೆಳೆಸುತ್ತಾರೆಂಬ ಭಾವನೆಯಲ್ಲಿದ್ದರು ಸ್ವತಃ ಶಿವಾನಂದಪ್ಪನವರಿಗೂ ಅದೇ ಭರವಸೆ ಇತ್ತು.
   ಆದರೆ ಶಿವಾನಂದಪ್ಪ ಸೊರಬ ತಾಲ್ಲೂಕ್ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ತೃಪ್ತಿ ಪಡುವ೦ತಾಯಿತು ಅವರನ್ನು ಕನಿಷ್ಟ ಜಿಲ್ಲಾ ಮಟ್ಟದ ರಾಜಕಾರಣಕ್ಕೂ ತಲುಪದಂತೆ ಕಾಣದ ಕೈಗಳು ನೋಡಿಕೊಂಡಿದ್ದು ವಿಪಯಾ೯ಸ.
  ಅವರು ಮನಸ್ಸು ಮಾಡಿ ಬಂಡಾಯ ಎದ್ದಿದ್ದರೆ ಶಾಸಕರೂ ಆಗಬಹುದಿತ್ತು ಮತ್ತು ಬಂಗಾರಪ್ಪನವರು ದೊಡ್ಡ ಮನಸ್ಸು ಮಾಡಿ ಇವರನ್ನು ಕನಿಷ್ಟ ನಿಗಮ ಮಂಡಳಿ ಅಧ್ಯಕ್ಷರನ್ನಾಗಿಯೂ ಮಾಡಬಹುದಿತು.
  ಈ ವಿಚಾರದಲ್ಲಿ ಶಿಕಾರಿಪುರದಲ್ಲಿ ಯಡಿಯೂರಪ್ಪನವರು ಅವರ ಆಪ್ತ ಸಾಗರದ ಗುರುಮೂರ್ತಿ ಅವರಿಗೆ ಸೂಕ್ತ ಸ್ಥಾನ ಮಾನ ನೀಡಿರುವ ಉದಾಹರಣೆ ಎದುರಿಗಿದೆ ಆದರೆ ಶಿವಮೊಗ್ಗ ಜಿಲ್ಲೆಯ ಬಂಗಾರಪ್ಪ ಮತ್ತು ಕಾಗೋಡು ತಮ್ಮ ಆಪ್ತರಿಗೆ ಇಂತಹ ಅವಕಾಶ ಯಾಕೆ ಮಾಡಲಿಲ್ಲವೋ ಗೊತ್ತಿಲ್ಲ.
  ಆನಂದಪುರಂ ಮಾರ್ಗದಲ್ಲಿ ಸಂಚರಿಸುವಾಗೆಲ್ಲ ಶಿವಾನಂದಪ್ಪನವರು ನನ್ನ ಬೇಟಿ ಮಾಡದೇ ಹೋಗುತ್ತಿರಲಿಲ್ಲ, ಸಪ್ಪೆ ಚಹಾದ ಜೊತೆ ಆಗೆಲ್ಲ ಅನೇಕ ರಾಜಕಾರಣದ ಸತ್ಯಕಥೆ ಹೇಳುತ್ತಿದ್ದರು ಅಂತಹ ಅನೇಕ ಘಟನೆಗಳು ದಾಖಲು ಆಗಿದೆ.
   ಕೆಲ ತಿಂಗಳ ಹಿಂದೆ ಚಂದ್ರಗುತ್ತಿ ಬೆತ್ತಲೆ ಸೇವೆ, ಬದರಿನಾರಾಯಣ ಅಯ್ಯಂಗಾರ್ ಮತ್ತು ಬಂಗಾರಪ್ಪರ ಒಡನಾಟದ ಬಗ್ಗೆ ಯುಟ್ಯೂಬ್ ಗಾಗಿ ವಿಡಿಯೋ ಸಂದರ್ಶನ ಮಾಡುವ ಬಗ್ಗೆ ಒಪ್ಪಿದ್ದರು ಆದರೆ ಅದಕ್ಕಿಂತ ಮೊದಲೇ ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿ ಎಸ್ ಬಂಗಾರಪ್ಪರ ನೆರಳಿನಂತಿದ್ದ ಅವರ ಕಟ್ಟಾ ಅಭಿಮಾನಿ, ಚುನಾವಣಾ ರಾಜಕಾರಣದ ಅವರ ಸೇನಾಧಿಕಾರಿ ಸೊರಬದ ಜನರ ಬಾಯಲ್ಲಿ ಹಳೇ ಸೊರಬದ ಶಿವಾನಂದಪ್ಪ ಎಂದೇ ಗುರುತಿಸಿಕೊಂಡಿದ್ದ ಜೆ. ಶಿವಾನಂದಪ್ಪ ಇಹಲೋಕ ತ್ಯಜಿಸಿದ್ದಾರೆ.
   ಅವರ ಆತ್ಮಕ್ಕೆ ಸದ್ಗತಿ - ಸ್ವರ್ಗ ಪ್ರಾಪ್ತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ