Skip to main content

Blog number 1185. ಟಾಮ್ಸ್ ವಲ್ಡ್೯ ವಾಕ್ ಯುರೋಪ್ - ಅಮೇರಿಕಾ - ಏಷ್ಯಾ- ಆಸ್ಟ್ರೇಲಿಯ ನಾಲ್ಕು ಖಂಡಗಳ ಸುಮಾರು 18 ಸಾವಿರ ಕಿಲೋ ಮೀಟರ್ ನ ಪಾದಯಾತ್ರೆ ಸಾಹಸ.

#ಇ೦ಗ್ಲೆಂಡಿನ_ಟಾಮ್ಸ್_ವರ್ಲ್ಡ್_ವಾಕ್ಸ್_ನನ್ನ_ಅತಿಥಿ

#ಖ೦ಡಾ೦ತರ_ಪಾದಯಾತ್ರಿ_ಜೊತೆ_ಸಂದರ್ಶನ

#ತೈವಾನನಲ್ಲಿ_ಇಂಗ್ಲೀಷ್_ಶಿಕ್ಷಕ_ವಯಸ್ಸು_56

#ಪ್ರಪಂಚದ_ನಾಲ್ಕು_ಭೂ_ಖಂಡದಲ್ಲಿ_18500_ಕೀಲೋ_ಮೀಟರ್_ನಡೆಯುವ_ಗುರಿ

#ಈಗ_ಏಷ್ಯಾ_ಖಂಡ_ದಾಟಿ_ಆಸ್ಟ್ರೇಲಿಯ_ತಲುಪಬೇಕು.

#ಇವರ_23ನೆ_ವಯಸ್ಸಲ್ಲಿ_ಸೈಕಲನಲ್ಲಿ_ಯುರೋಪಿನಿಂದ_ಆಸ್ಟ್ರೇಲಿಯ_ಪ್ರವಾಸ_ಮಾಡಿದ್ದರು.

#ಇವರ_30ನೇ_ವಯಸ್ಸಲ್ಲಿ_ಹೇಸರಗತ್ತೆಯಲ್ಲಿ_ಅಮೆರಿಕಾ_ಪ್ರವಾಸ_ಮಾಡಿದವರು.

  ಇವತ್ತು ಸಂಜೆ ಟಾಮ್ ತಮ್ಮ ತಳ್ಳು ಗಾಡಿಯಲ್ಲಿ ಬೆಳಿಗ್ಗೆ ಸಾಗರದಿಂದ ತಮ್ಮ ಪಾದಯಾತ್ರೆ ಪ್ರಾರಂಬಿಸಿ ಆನಂದಪುರಂನ ನಮ್ಮ ಹೊಂಬುಜ ಲಾಡ್ಜ್ ತಲುಪಿದ್ದಾರೆ.
  ಈಗಾಗಲೇ ಅಮೇರಿಕಾದಲ್ಲಿ 6000 ಕಿಮೀ ನಡೆದಿದ್ದಾರೆ, ಇ೦ಗ್ಲೆಂಡ್ನಿಂದ ಪ್ರಾನ್ಸ್, ಜಮ೯ನ್, ಹಂಗೇರಿ, ಬಲ್ಗೇರಿಯಾ, ಟರ್ಕಿ, ಆಸ್ಟ್ರಿಯ ಸರ್ಬಿಯ, ಲೆಬನಾನ್, ಸೈಪ್ರಸ್ ಗಳ ಪಾದಯಾತ್ರೆ ಮುಗಿಸಿ ಗೋವಾದಿಂದ ಭಾರತದಲ್ಲಿ ಸುಮಾರು 1500 ಕಿ ಮಿ ಸಾಗಿ, ಇಂಡೋನೇಷ್ಯಾದಲ್ಲಿ 1000 ಕಿ.ಮಿ. ಮುಗಿಸಿ ಆಸ್ಟ್ರೇಲಿಯದಲ್ಲಿ 4000 ಕಿ.ಮಿ. ನಂತರ ನ್ಯೂಜಿಲೆಂಡ್ ನಲ್ಲಿ 500 ಕಿ.ಮಿ. ಮತ್ತು ಐಸ್ ಲ್ಯಾಂಡ್ ನಲ್ಲಿ 500 ಕಿ.ಮಿ. ನಡೆದು ತೈವಾನ್ ನಲ್ಲಿ ಇವರಿಗೆ ಕಾಯುತ್ತಿರುವ ಪ್ರಿಯತಮೆಯನ್ನು ಸೇರುತ್ತೇನೆ ಅನ್ನುತ್ತಾರೆ.
  2018ರಲ್ಲಿ ಇವರು ಜಗತ್ತಿನ ನಾಲ್ಕು ಖಂಡದಲ್ಲಿ 28000 ಕಿ.ಮಿ. ಪಾದಯಾತ್ರೆಯ ಗುರಿಯಿ೦ದ ಪ್ರಾರಂಬಿಸಿದ್ದರು ಆದರೆ ಕೊರಾನಾದಿಂದ ಮದ್ಯದಲ್ಲಿ ಅನಿವಾರ್ಯವಾಗಿ ನಿಲ್ಲಿಸಬೇಕಾದ್ದರಿಂದ ಈ ಪಾದಯಾತ್ರೆ 18 ಸಾವಿರ ಅಥವ 18500 ಕಿ.ಮಿ. ಗೆ ಕುಗ್ಗಿಸಿದ್ದಾರೆ.
   ಇವರು ಬಾಲ್ಯದಿಂದ ಅನೇಕ ಸಾಹಸ ಯಾತ್ರೆ ಮಾಡಿದ್ದಾರೆ ಸೈಕಲ್ ನಲ್ಲಿ ಇಂಗ್ಲೇಂಡ್ ನಿಂದ ಪಾಕಿಸ್ತಾನ, ವಾಘಾ ಬಾರ್ಡರ್ ನಿಂದ ಬಾರತ ನೇಪಾಳ ಚೀನಾ ಇಂಡೋನೇಷ್ಯಾ, ಆಸ್ಟ್ರೇಲಿಯ ಪ್ರವಾಸ ಮಾಡಿದ್ದಾರೆ.
   30 ನೇ ವಯಸ್ಸಲ್ಲಿ ಅಮೇರಿಕಾದಲ್ಲಿ ಹೇಸರಗತ್ತೆ ಮೇಲೆ 6000 ಕಿ.ಮಿ. ಪ್ರವಾಸ ಮಾಡಿದ್ದಾರೆ, ಇಂಗ್ಲೆಂಡಿನಲ್ಲಿ ಪತ್ರಕರ್ತರಾಗಿ ಈಗ ತೈವಾನ್ ನಲ್ಲಿ ಇಂಗ್ಲೀಷ್ ಟೀಚರ್ ಆಗಿದ್ದಾರೆ ಇವರ ಪತ್ನಿ ಮಗಳು ನ್ಯೂಜಿಲೆಂಡ್ ನಲ್ಲಿದ್ದಾರೆ.
  ಈ ಬಗ್ಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
  ಇವರ ವೆಬ್ ಸೈಟ್ www.tomsworldwalk.com ನಲ್ಲಿ ಇವರ ಎಲ್ಲಾ ಸಾಹಸಗಳು ದಾಖಲು ಮಾಡುತ್ತಿದ್ದಾರೆ.
   ನಮ್ಮ ದೇಶದ ಪುಣೆಯ ರವೀಂದ್ರ ಬುಚಾಕೆ ಪ್ರಾನ್ಸ್ ದೇಶದಲ್ಲಿ ಈ ರೀತಿ ಪಾದಯಾತ್ರೆ ಮಾಡಿದವರು ಪೂನಾದಿಂದ ಶೃಂಗೇರಿಗೆ ಒಬ್ಬರೆ ನಡೆಯುತ್ತಾ ಬಂದು ನಮ್ಮಲ್ಲಿ ಅತಿಥಿ ಆದದ್ದನ್ನು ನಾನು ಪೋಸ್ಟ್ ಮಾಡಿದ್ದೆ ಅವರಂತೆ ಟಾಮ್ ಖಂಡಾಂತರ ಪಾದಯಾತ್ರೆಯಲ್ಲಿ ನನ್ನ ಅತಿಥಿ ಆಗಿದ್ದು ನನಗೆ ಖುಷಿ ತಂದಿತು ನಾಳೆ ಬೆಳಿಗ್ಗೆ ಶಿವಮೊಗ್ಗ ಮಾರ್ಗದಲ್ಲಿ ಸಾಗಲಿದ್ದಾರೆ ಅವರ ಸಾಹಸ ಯಾತ್ರೆಗೆ ಶುಭ ಹಾರೈಸಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...