Skip to main content

Blog number 1177. ಒಂದು ಕಾಲದಲ್ಲಿ ಸಾಗರದ ಪ್ರಸಿದ್ಧ ಕಾಮಾಕ್ಷಿ ಮುದ್ರಣಾಲಯದ ಯಶಸ್ವಿ ಉದ್ಯಮ ನಡೆಸಿದ ಉಲ್ಲಾಸ್ ಶೇಟ್

#ಸಾಗರದ_ಕಾಮಾಕ್ಷಿ_ಪ್ರಿಂಟರ್_ಉಲ್ಲಾಸ್_ಶೇಟ್  #ಎರೆಡು_ದಶಕದ_ಮುದ್ರಣ_ಕ್ಷೇತ್ರದ_ಸಾದನೆ_ಸ್ಮರಣೀಯ.
#ಜನಪರ_ಹೋರಾಟಗಳಿಗೆ_ಸದಾ_ಬೆಂಬಲ_ನೀಡಿದವರು
 

1980 ರಿಂದ 2000 ಇಸವಿವರೆಗಿನ ಎರೆಡು ದಶಕಗಳ ಕಾಲ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕ್ ಕೇಂದ್ರದಲ್ಲಿ ಸ್ಥಳಿಯ ದಿನ ಪತ್ರಿಕೆಗಳದ್ದೆ ಕಾರುಬಾರು, ಅತಿ ಹೆಚ್ಚು ಪತ್ರಿಕೆಗಳು ಸಾಗರದಲ್ಲಿ ಪ್ರಕಟ ಆಗುತ್ತಿತು.
   ಆಗೆಲ್ಲ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಸ್ಥಳಿಯ ಸುದ್ದಿಗೆ ಹೆಚ್ಚು ಪ್ರಾಮುಖ್ಯತೆ ಇಲ್ಲದ್ದರಿಂದ ಸ್ಥಳಿಯರಿಗೆ ಸ್ಥಳಿಯ ಪತ್ರಿಕೆಗಳು ಬೇಕೇ ಬೇಕು ಆಗಿತ್ತು.
  ಸ್ಥಳಿಯ ಪತ್ರಿಕೆಗೆ ಅಂತಹ ಜಾಹಿರಾತು ಆದಾಯ ಇಲ್ಲದ ಕಾಲದಲ್ಲಿ ಪತ್ರಿಕೆಯ ಮಾಸಿಕ ಬಿಲ್ ಒಂದೇ ಸಂಪಾದಕರಿಗೆ ಪತ್ರಿಕೆ ಮುದ್ರಣಕ್ಕೆ, ಪತ್ರಿಕೆ ವಿತರಿಸುವವರಿಗೆ ಸಂಬಳ, ಪೋನ್ ಬಿಲ್, ಅಂಚೆ ವೆಚ್ಚ, ಪತ್ರಿಕಾ ಕಛೇರಿ ಬಾಡಿಗೆ ಮತ್ತು ತಿಂಗಳ ಉಟೋಪಚಾರಕ್ಕೆ ಮೂಲ ಆದಾಯ ಆಗಿತ್ತು.
  ಸ್ಥಳಿಯವಾಗಿ ಸಾವ೯ಜನಿಕವಾಗಿ ಪತ್ರಿಕೆ ಸಂಪಾದಕರಿಗೆ ಬಡತನ ಇದ್ದರೂ ಅವರ ವೃತ್ತಿಗಾಗಿ ವಿಶೇಷ ಗೌರವ ಇರುತ್ತಿತ್ತು.
  ಹೆಚ್ಚಿನ ಪತ್ರಿಕೆಗೆ ವರದಿಗಾರ ಸಂಪಾದಕ ಎರೆಡೂ ಹುದ್ದೆ ಒಬ್ಬರೇ ಆಗಿರುತ್ತಿದ್ದರು.
  ಆಗ ದಿನ ಪತ್ರಿಕೆಯ ಸುದ್ದಿ ಬರೆದು ಮಧ್ಯಾಹ್ನ 3 ರ ಒಳಗೆ ಪ್ರಿಂಟಿಂಗ್ ಪ್ರೆಸ್ ಗೆ ತಲುಪಿಸಿದರೆ ಅಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲಿಕರು ಅಕ್ಷರದ ಮೊಳೆ ಜೋಡಿಸಿ ಪ್ರಿಂಟಿಂಗ್ ಗೆ ತಯಾರಿ ಮಾಡಿಕೊಳ್ಳಬೇಕು ನಂತರ ಸಂಪಾದಕರು ಪ್ರಿ೦ಟಿಂಗ್ ಪೇಪರ್ ತಂದುಕೊಟ್ಟರೆ? ರಾತ್ರಿ 10 ರ ಒಳಗೆ ನಾಳಿನ ಪೇಪರ್ ತಯಾರ್, ಬೆಳಿಗ್ಗೆ ಪತ್ರಿಕೆ ವಾಚಕರ ಮನೆ ತಲುಪುವುದು.
  ಇದರಲ್ಲಿ ಯಾವುದೇ ಒಂದು ವಿಳಂಬ ಆದರೂ ಪತ್ರಿಕೆ ಬರುವುದಿಲ್ಲ.
  ಇಂತಹ ಸಂದಭ೯ದಲ್ಲಿ ಸಾಗರದಲ್ಲಿ ಕಾಮಾಕ್ಷಿ ಪ್ರಿಂಟರ್ ಮಾಲಿಕರಾದ ಉಲ್ಲಾಸ್ ಶೇಟ್ ಸಾಗರದ ಸಣ್ಣ ಪತ್ರಿಕೆಗೆ ಗಳಿಗೆ ಆ ಕಾಲದಲ್ಲಿ ಜೀವಾಳವಾಗಿದ್ದರು.
  ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಒಡನಾಡಿ ಎಸ್.ಎಸ್. ಕುಮುಟಾ (ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪದ್ಮಾ ಕುಮುಟಾ ತಂದೆ) ರವರ ದಿನ ಪತ್ರಿಕೆ, ಕಾಗೋಡು ಹೋರಾಟದ ನೇತಾರ ಹೆಚ್. ಗಣಪತಿಯಪ್ಪರ ದಿನಪತ್ರಿಕೆ, ಹಾಲಿ ರಾಜ್ಯದ ಖ್ಯಾತ ಪತ್ರಕತ೯ ಮತ್ತು ಬರಹಗಾರ ಆರ್.ಟಿ. ವಿಠಲ್ ಮೂತಿ೯ ತಂದೆಯವರಾದ ತಾರಾನಾಥರ ದಿನ ಪತ್ರಿಕೆ, ಎ.ಡಿ. ಸುಬ್ರಣ್ಯರ ದಿನ ಪತ್ರಿಕೆ ಮತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ಸಾಗರದ ತೀ.ನಾ. ಶ್ರೀನಿವಾಸರ ದಿನಪತ್ರಿಕೆ ಗಳು ಇಲ್ಲೇ ಮುದ್ರಣ ಆಗುತ್ತಿತ್ತು.
  ಆ ಕಾಲದಲ್ಲಿ ಪತ್ರಿಕೆ ಸಂಪಾದಕರೂ ಬಡವರು, ಪ್ರಿ೦ಟಿಂಗ್ ಪ್ರೆಸ್ ಮಾಲಿಕರೂ ಬಡವರೆ ಆದರೆ ಸುದ್ದಿ ಬರೆದು ಪ್ರಿಂಟ್ ಆದ ಪತ್ರಿಕೆ ಹಂಚಿಸುವ ಕೆಲಸ ಸರಾಗವಾಗಿ ಸಂಪಾದಕರು ಮಾಡುತ್ತಿದ್ದರು ಹಾಗೆಯೇ ಅಕ್ಷರದ ಮೊಳೆ ಜೊಡಿಸಿ ಇಂಕ್ ಹಾಕಿ ಮುದ್ರಿಸುವ ಕೆಲಸ ಪ್ರೆಸ್ ಮಾಲಿಕರು ಮಾಡುತ್ತಿದ್ದರು ಇದಕ್ಕೆ ಬೇಕಾದ ಮುದ್ರಣದ ಪೇಪರ್ ಮಾತ್ರ ಯಾವುದೇ ಅಂಗಡಿಯಲ್ಲಿ ಸಾಲ ಕೊಡುತ್ತಿರಲಿಲ್ಲ ಕೊಟ್ಟರೂ ಸರಿಯಾದ ಸಮಯದಲ್ಲಿ ಅವರಿಗೆ ಬಾಕಿ ಪಾವತಿ ಆಗುತ್ತಿರಲಿಲ್ಲವಾದ್ದರಿಂದ ಪ್ರೆಸ್ ಮಾಲಿಕರೂ ದಿನ ಪತ್ರಿಕೆ ಮುದ್ರಣಕ್ಕೆ ಕೊನೆಯ ಪ್ರಾಶಸ್ತ ನೀಡುತ್ತಿದ್ದದ್ದು ಸುಳ್ಳಲ್ಲ.
  ಆದರೆ ಆ ಕಾಲದಲ್ಲಿ ಪದವೀದರರಾಗಿದ್ದ ವಿದ್ಯಾವಂತ ಉಲ್ಲಾಸ್ ಶೇಟ್ ಬೇರೆಲ್ಲ ಪ್ರೆಸ್ ನವರಿಗಿಂತ ಭಿನ್ನರಾಗಿದ್ದರು ಹಾಗಾಗಿ ಪತ್ರಿಕೆ ಸಕಾಲದಲ್ಲಿ ಮುದ್ರಿಸಿ ಕೊಡಲು ಶ್ರಮ ಹಾಕುತ್ತಿದ್ದರು 1985-88 ರಲ್ಲಿ ತಡರಾತ್ರಿ ತನಕ ನಾನು, ತೀನಾ ಶ್ರೀನಿವಾಸ್ ಕಾಮಾಕ್ಷಿ ಪ್ರಿಂಟರ್ ಲ್ಲಿ ಪತ್ರಿಕೆ ಮುದ್ರಣ ಆಗುವ ತನಕ ಅನೇಕ ರಾತ್ರಿ ಕಾಯುತ್ತಾ ಇರುತ್ತಿದ್ದೆವು.
  ಉಲ್ಲಾಸ್ ಶೇಟ್ ಪತ್ರಿಕೆ ಹೆಡ್ಡಿಂಗ್ ಕಾಲಂ ಇತ್ಯಾದಿ ಈಗಿನ ಕಾಲದ ಆಫ್ ಸೆಟ್ ಮುದ್ರಣದಂತೆ ಸುಂದರವಾಗಿ ಮಾಡುವ ಕಲಾಕಾರರಾಗಿದ್ದರಿಂದ ಇವರ ಕಾಮಾಕ್ಷಿ ಪ್ರಿಂಟಿಂಗ್ ಪ್ರೆಸ್ ಪ್ರಸಿದ್ದಿ ಆಗಿತ್ತು.
   ಒಮ್ಮೆ ತೀನಾ ಶ್ರೀನಿವಾಸರಿಗೆ ಪೋಲಿಸ್ ಸಬ್ ಇನ್ಸೆಸ್ಪೆಕ್ಟರ್ ಜಮೀಲ್ ಎಂಬುವವರು ತಮ್ಮ ವಿರುದ್ದ ವರದಿ ಪ್ರಕಟಿಸಿದ್ದರಿಂದ ದೈಹಿಕ ಹಲ್ಲೆ ಮಾಡಿದ ಘಟನೆ ಪ್ರತಿಭಟನೆಗೆ ಹಾಗೂ ವಿಧಾನ ಸೌದದಲ್ಲೂ ಸದ್ದು ಮಾಡಿತ್ತು, ಆ ಘಟನೆ ನಡೆದ ದಿನ ತೀ .ನಾ. ಶ್ರೀನಿವಾಸ್ ರು ಆಸ್ಪತ್ರೆ ಅಡ್ಮಿಟ್ ಆಗಿದ್ದರಿಂದ ಅವತ್ತಿನ ಪತ್ರಿಕೆ ಬರೆದು ಪ್ರಕಟಿಸುವ ಜವಾಬ್ದಾರಿ ನನ್ನದಾಗಿತ್ತು, ಸಂಪಾದಕೀಯ  ಮತ್ತು ಮರುದಿನದ ಪ್ರತಿಭಟನಾ ಸಭೆಯ ಕರ ಪತ್ರ ಬರೆದದ್ದು ನಾನೆ ಅದೆಲ್ಲ ರಾತ್ರೋ ರಾತ್ರಿ ನಿದ್ದೆ ಬಿಟ್ಟು ಅಕ್ಷರದ ಮೊಳೆ ಜೋಡಿಸಿ ಪ್ರಿಂಟ್ ಮಾಡಿಕೊಟ್ಟವರು ಉಲ್ಲಾಸ್ ಶೇಟ್.
   1995ರಲ್ಲಿ ನಾನು ಜಿಲ್ಲಾ ಪಂಚಾಯತಿಗೆ ಸ್ಪದೆ೯ ಮಾಡಿದಾಗ ಉಚಿತವಾಗಿ ಕರಪತ್ರ ಮುದ್ರಿಸಿಕೊಟ್ಟಿದ್ದು ನಾನು ಮರೆಯಲಾರೆ.
  ಆ ಕಾಲದಲ್ಲಿ ಉಲ್ಲಾಸ್ ಶೇಟ್ ರದ್ದು ಪ್ರೇಮ ವಿವಾಹ ಅದೂ ಸಾಗರದ ಪ್ರತಿಷ್ಟಿತ ಮತ್ತು ಶ್ರೀಮಂತರಾದ ನರಸಿಂಹ ಭಟ್ & ಸನ್ಸ್ ರ ಮಗಳೊಂದಿಗೆ, ಸಾಗರದ ಎಲ್.ಬಿ.ಕಾಲೇಜಿನ ಖ್ಯಾತ ಉಪನ್ಯಾಸಕರಾಗಿದ್ದ ರಮೇಶ್ ಭಟ್ಟರ(ಆ ಕಾಲದಲ್ಲಿ ರಮೇಶ್ ಭಟ್ಟರು ಹಿಂದಿ ಸಿನಿಮಾದ ಚಾಕೋಲೆಟ್ ಪೇಸ್ ಹೀರೋ ಹಾಗೆ ಸುರಸುಂದರಾಂಗ)ಸಹೋದರಿ ಅವರೊಂದಿಗೆ, ಸ್ವಂತ ಮನೆಯಿಂದಲೂ ಬೆಂಬಲವಿಲ್ಲದೆ ಸ್ವತಂತ್ರವಾಗಿ ಕಷ್ಟದ ಜೀವನ ಮಾಡಿದ ಸಾಹಸ ಉಲ್ಲಾಸ್ ಇವರದ್ದು.
  ಈಗ ಉಲ್ಲಾಸ್ ಶೇಟ್ ಸಾಗರ ತೊರೆದು ಬೆಂಗಳೂರಿನಲ್ಲಿ ವಿಪ್ರೋದಲ್ಲಿ ಇಂಜಿನಿಯರ್ ಆಗಿರುವ ಮಗ ಸೊಸೆ ಮತ್ತು ಮೊಮ್ಮಗಳ ಜೊತೆ ಸುಖಿ: ಮತ್ತು ವಿಶ್ರಾಂತ ಜೀವನ ನಡೆಸಿದ್ದಾರೆ ಇವತ್ತು ಬೆಳಿಗ್ಗೆ ಪೋನಿನಲ್ಲಿ ಸುಮಾರು ಹೊತ್ತು ಸವಕಳಿಸಿದ್ದ ಹಳೆಯ ನೆನಪನ್ನ ಪುನಃ ಹೊಳಪು ನೀಡಿ ಪರಸ್ಪರ ಮಾತಾಡಿದ್ದು ಮನಸ್ಸಿಗೆ ಒಂದು ರೀತಿ ಉಲ್ಲಾಸವಾಯಿತು.
 
  ಕಾಮಾಕ್ಷಿ ಪ್ರಿಂಟರ್ಸ್‌ ಉಲ್ಲಾಸ್ ಶೇಟ್ ರ ಸೆಲ್ ನಂಬರ್
+919986049924.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ