Skip to main content

Blog number 1174. ಭಾಗ 1.ಸಾಗರದ ಹಿರಿಯ ಪತ್ರಿಕೋದ್ಯಮಿ ಹರಿದ್ರಾವತಿ ವೆಂಕಟರಾವ್ ರಾಮಚಂದ್ರರಾವ್ ಅವರಿಗೆ 86 ವರ್ಷ, ಅವರ ಪತ್ರಿಕಾ ಉದ್ಯಮಕ್ಕೆ ಅರ್ಧ ಶತಮಾನ, HVR ಎಂದೇ ಜನ ಗುರುತಿಸುತ್ತಾರೆ ಇವರನ್ನು

#ಹೆಚ್_ವಿ_ಆರ್_ನೆನಪುಗಳು_ಭಾಗ_1

#ಸಾಗರದ_ಪತ್ರಿಕೋದ್ಯಮದ_ಅತ್ಯಂತ_ಹಿರಿಯರು

#ಸಾಗರ_ಸಂದೇಶ_ದಿನಪತ್ರಿಕೆಯ_ಹೆಚ್_ವಿ_ರಾಮಚಂದ್ರರಾವ್

#ಅರ್ದಶತಮಾನ_ಪತ್ರಿಕೋದ್ಯಮದಲ್ಲಿ

#ಇವರ_ವಯಸ್ಸು_86

#ತೀರ್ಥಹಳ್ಳಿಯ_ಜನಪ್ರಿಯ_ದಿನಪತ್ರಿಕೆ_ಟೈಟಲ್_ಇವರದ್ದೆ

#ಶಿವಮೊಗ್ಗದ_ಭೂಪಾಳಂ_ಚಂದ್ರಶೇಖರರ_ಪತ್ರಿಕೆಯಲ್ಲಿ_ಇವರ_ಸಹೋದರ_ನಾರಾಯಣರಾವ್_ವರದಿಗಾರರು

#ಸ್ಥಳಿಯ_ವರದಿಯಿಂದ_ಕೊಲೆ_ಆದ_ದುರಂತ_ಕುಟುಂಬ.

https://youtu.be/-1Bc6GamnzE

   ಹೆಚ್ ವಿ ಆರ್ ಎಂದೇ ಖ್ಯಾತರಾದ ಹರಿದ್ರಾವತಿ ವೆಂಕಟರಾವ್ ಪುತ್ರ ರಾಮಚಂದ್ರ ರಾವ್ ಮೊನ್ನೆ ಸಾಗರದ ಇನ್ನೊಬ್ಬ ಪತ್ರಕರ್ತ ಗಣಪತಿ ಶಿರಳಿಗೆ ಜೊತೆ ನನ್ನ ಕಛೇರಿಗೆ ಬಂದಿದ್ದರು.
   ಹೆಚ್ ವಿ ಆರ್ ಮತ್ತು ನಾನು ಮಾಜಿ ಶಾಸಕರಾದ ಶಿರನಾಳಿ ಚಂದ್ರಶೇಖರ್ ಜೊತೆ ಅನೇಕ ಸಂದಭ೯ಗಳಲ್ಲಿ ನಮ್ಮ ಊರಿನ ಪ್ರವಾಸಿ ಮಂದಿರದಲ್ಲಿ ಔತಣ ಕೂಟದಲ್ಲಿ ಅನೇಕ ವಿಚಾರಗಳ ನೆನಪು ಚರ್ಚೆ ಮಾಡಿದ್ದೇವೆ.
  ಬೀಮನಕೋಣೆಯ ಪಿ.ಎಲ್.ಡಿ.ಬ್ಯಾ೦ಕ್ ನಿರ್ದೇಶಕರಾಗಿ ಅಲ್ಲಿನ ಲೋಪದೋಷಗಳನ್ನು ಶೇರುದಾರರಿಗೆ ನೀಡಿ ಬ್ಯಾಂಕ್ ಸರಿ ದಾರಿಯಲ್ಲಿ ಸಾಗಲು ಕಾರಣಕರ್ತರು ಇವರು. 
   ಹೊರನಾಡಿನ ಅನ್ನಪೂಣೇ೯ಶ್ವರಿ ದೇವಾಲಯದ ಬೀಮೇಶ್ವರ ಜೋಷಿ ಸಹೋದರ ಇವರ ಅಳಿಯ.
   ಸಾಗರದ ಪ್ರಥಮ ದಿನ ಪತ್ರಿಕೆ ಮನೋಭೂಮಿ ರಾಮಚಂದ್ರ ಶೆಟ್ಟರು, ಉಳ್ಳೂರು ಸುಬ್ರಾಯರ ಸಾಗರವಾರ್ತಾ, ಕಮ೯ಚಾರಿ ದಿನಪತ್ರಿಕೆ ಟಿ.ಡಿ. ಕಮಲಾಕ್ಷ ಪಂಡಿತ್, ಜಿ.ಆರ್.ಜಿ ನಗರ್ ಅವರ ಪತ್ರಿಕೆ ಜೊತೆ ಜೊತೆಗೆ ಹೆಚ್.ವಿ.ಆರ್. ಸಾಗರ ಪತ್ರಿಕೋದ್ಯಮದಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.
  ವಿಶೇಷ ಅಂದರೆ ತೀರ್ಥಹಳ್ಳಿಯ ಛಲಗಾರ ಪತ್ರಿಕೆ ಟೈಟಲ್ ಇವರದ್ದೆ, ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಸಮೀಪದ ಆಲಗೇರಿ ಮಂಡ್ರಿಯ ಗಣಪತಿ ಅವರಿಗೆ ಇವರು ನೀಡಿದ್ದು, ಅದು ಸಾಗರದಿಂದ ಮೊದಲಿಗೆ ಪ್ರಕಟವಾಗುತ್ತಿತ್ತು ಎನ್ನುವ ನೆನಪು ಅವರು ಮಾಡಿದ್ದಾರೆ.
  ಒಂದು ದುರಂತ ಅಂದರೆ 1970 ರ ದಶಕದಲ್ಲಿ ಇವರ ಸಹೋದರ ಶಿವಮೊಗ್ಗದ ಭೂಪಾಳಂ ಚಂದ್ರಶೇಖರ್ ಅವರ ಮಲೆನಾಡು ವಾತಾ೯ ಪತ್ರಿಕಾ ಸ್ಥಳಿಯ ವರದಿಗಾರ ಮತ್ತು ಏಜೆಂಟರಾದ ಹೆಚ್.ವಿ.ನಾರಾಯಣ ರಾವ್ ಬರೆದ ಸ್ಥಳಿಯ ವರದಿಯಿಂದ ಅವರ ಕೊಲೆ ಆಗಿತ್ತು.
  ಹೀಗೆ ಅನೇಕ ವಿಚಾರಗಳನ್ನು ಹೆಚ್.ವಿ. ಆರ್ ನೆನಪಿನ ಸುರಳಿಯಿಂದ ಹೊರ ತೆಗೆಯುವ ಪ್ರಯತ್ನ ಮಾಡಿದ್ದೇನೆ ಕೆಲ ಕಂತುಗಳಾಗಿ ಮರೆತು ಹೋದ ಘಟನೆಗಳು ಇಲ್ಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ