Skip to main content

Blog number 1162. ಅರವಿಂದ ಚೊಕ್ಕಾಡಿ ಕ್ಷಬ್ ನಲ್ಲಿ?! ಹೌದು ವಿಶ್ವ ವಾಣಿ ಕ್ಲಬ್ ಹೌಸ್ ಇವತ್ತು 5- ಜನವರಿ -2022 ರಂದು ನಡೆಸಿದ ಹಾವೇರಿ ಸಾಹಿತ್ಯ ಪರಿಷತ್ ಸಮ್ಮೇಳನ ಮತ್ತು ಬೆಂಗಳೂರಿನ ಜನ ಸಾಹಿತ್ಯ ಸಮ್ಮೇಳನದ ವಿವಾದದ ಬಗ್ಗೆ ಚರ್ಚೆ.

#ಇವತ್ತಿನ_ವಿಶ್ವವಾಣಿ_ಕ್ಲಬ್_ಹೌಸ್_ಅರವಿಂದ_ಚೊಕ್ಕಾಡಿ

#ಸಾಹಿತ್ಯ_ಸಮ್ಮೇಳನ_ಮತ್ತು_ಜನಸಾಹಿತ್ಯ_ಸಮ್ಮೇಳನದ

#ವಿವಾದ_ಕುರಿತು.

 ಪ್ರಾರಂಭದಲ್ಲಿ ವಿಶ್ವವಾಣಿ ಕ್ಲಬ್ ಹೌಸ್ ಕೇಳುತ್ತಿದ್ದೆ ನಂತರ ಬಿಟ್ಟಿದ್ದೆ ಇವತ್ತು ಅರವಿಂದ ಚೊಕ್ಕಾಡಿ ಅವರು ಲಿಂಕ್ ವಾಟ್ಸಪ್ ಮಾಡಿದ್ದರು.
  ಪ್ರಸ್ತುತ ಹಾವೇರಿಯ ಸಾಹಿತ್ಯ ಸಮ್ಮೇಳನ ಮತ್ತು ಬೆಂಗಳೂರಿನ ಜನ ಸಾಹಿತ್ಯ ಸಮ್ಮೇಳನದ ವಿವಾದ ಕುರಿತು ಕ್ಲಬ್ ಹೌಸ್ ಇವರೊಂದಿಗೆ ಮಾತಾಡುವುದು ಕೇಳಿದೆ.
   ಪ್ರಾರಂಭದಲ್ಲಿ ಅರವಿಂದರ ಸಂಪರ್ಕದಲ್ಲಿ ಅಡಚಣೆ ಆಯಿತು ನಂತರ ಸಂಪರ್ಕ ಏರ್ಪಟ್ಟು ಸಾಂಗವಾಗಿ ನೆರವೇರಿತು ಮತ್ತು ಕ್ಲಬ್ ನ ಮುಖ್ಯಸ್ಥೆ ಅರವಿಂದ ಚೊಕ್ಕಾಡಿಯವರನ್ನು ಕನ್ನಡ ಸಾಹಿತ್ಯದ ವಿವಾದ ಕಾಲದಲ್ಲಿ ನೀವು ಹಿರಿಯಣ್ಣನ ರೀತಿ ಮಾತಾಡಿದಿರಿ ಎಂದು ಅಭಿನಂದಿಸಿದ್ದು ಸರಿ ಅನ್ನಿಸಿತು.
  ಒಂದು ಕಡೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜೋಷಿ ಮತ್ತೊಂದು ಕಡೆ ಜನ ಸಾಹಿತ್ಯ ಸಮ್ಮೇಳನದ ಪುರುಶೋತ್ತಮ ಬಿಳಿಮಲೆ ಇದ್ದಾರೆ ಇವರಿಬ್ಬರ ಆರೋಪ ಪ್ರತ್ಯಾರೋಪದ ಪೆಂಡಾಲ್ ಬಗ್ಗೆ ಅರವಿಂದ ಚೊಕ್ಕಾಡಿ ಏನು ಹೇಳುತ್ತಾರೆಂಬ ಕುತೂಹಲವಿತ್ತು.
  ಅರವಿಂದ ಚೊಕ್ಕಾಡಿ ಅವರು ತಾವು ವೈಯಕ್ತಿಕವಾಗಿ ಬಲ್ಲ ಪುರುಶೋತ್ತಮ ಬಿಳಿಮಲೆ ಅವರ ಮೇಲೆ ಜೋಷಿ ಅವರ ಆರೋಪ ನಿರಾಕರಿಸಿದರು ಬಿಳಿಮಲೆ ಅಂತಹ ವ್ಯಕ್ತಿ ಅಲ್ಲವೆಂದರು ಮತ್ತು ಜೋಷಿ ಅವರ ಆರೋಪಕ್ಕೆ ಸಾಕ್ಷಿಗಳು ಏಕಿಲ್ಲ ಎಂಬ ಪ್ರಶ್ನೆ ಅವರದ್ದು.
   ಇನ್ನೊಂದು ಈ ಸಂದರ್ಭದಲ್ಲಿ ಜೋಷಿ ಗುರು ಗೋವಿಂದ ಭಟ್ಟರ ಮೊಮ್ಮಗ ಅಪ್ರಸ್ತುತ ಎಂದರು.
  ಸಾಹಿತ್ಯ ಪರಿಷತ್ ಮತ್ತು ಜನ ಸಾಹಿತ್ಯ ಪರಿಷತ್ತು ಎರೆಡೂ ಕನ್ನಡದ ಕೆಲಸ ಎಂದರು ಹಾಗೆಯೇ ಅವರು ಎರೆಡೂ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ ಕಾರಣ ಮೈಸೂರಲ್ಲಿ ಅವರ ಮಾವ ಸುಬ್ರಾವ್ ಚೊಕ್ಕಾಡಿ ಅವರ ಸಮಗ್ರ ಸಾಹಿತ್ಯ ಪುಸ್ತಕ ಬಿಡುಗಡೆ ಆಗುವುದು ಆ ಪುಸ್ತಕದ ಸಂಪಾದಕರು ಇವರೇ ಆದ್ದರಿಂದ ಇವರು ಅಲ್ಲಿರಲೇ ಬೇಕು.
  ಗಾಂಧಿ ಅವರ ಚರಕ ಚಳವಳಿ ದೇಶಕ್ಕೆ ಸ್ವಾತಂತ್ರ ತರಲಿಲ್ಲ ಎನ್ನುವವರು ಚರಕದ ಚಳವಳಿ ಗೊತ್ತಿಲ್ಲ ಅದು ಯುರೋಪಿನ ಆ ಕಾಲದ ಟೆಕ್ಸಟ್ಟೆಲ್ಸ್ ಉಧ್ಯಮಕ್ಕೆ ದೊಡ್ಡ ಚೆಕ್ ಮೇಟ್ ಆದ ಹೋರಾಟ, ಸಾಹಿತ್ಯ ಪರಿಷತ್ ನಲ್ಲಿ ಬ್ಯಾರಿ ಭಾಷೆ ಸಾಹಿತ್ಯ, ಎಡ ಮತ್ತು ಬಲಪಂಥೀಯ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಅಂತರಿಕ್ಷ ಬ್ರಹ್ಮ ವ್ಯಾಖ್ಯಾನವನ್ನು ಸುಂದರವಾಗಿ ಪ್ರಸ್ತಾವಿಸಿದರು.
   ಪ್ರಶ್ನೋತ್ತರದಲ್ಲಿ ಸಾಹಿತ್ಯ ಪರಿಷತ್ ಸಾಂವಿದಾನಕ ಸಂಸ್ಥೆ ಅಲ್ಲ ಕಸಾಪ ಸರ್ಕಾರದ ಆರ್ಥಿಕ ಸಹಾಯ ಪಡೆಯುವ ಸಂಸ್ಥೆ ಸಾಂವಿಧಾನಿಕ ಸಂಸ್ಥೆ ಅಂದರೆ ಚುನಾವಣಾ ಆಯೋಗ ಇತ್ಯಾದಿ ಎಂದು ವಿವರಿಸಿದರು.
   ಅರವಿಂದ ಚೊಕ್ಕಾಡಿ ಅವರು ತಾತ್ವಿಕವಾಗಿ ಈ ವಿಚಾರದಲ್ಲಿ ತಾವು ಎಡಪಂತಿಯರ ಜೊತೆ ಇದ್ದೇನೆ ಕಾರಣ ಅಧಿಕಾರ ಇಲ್ಲದವರ ಪರ ಅದು ಅವರಿಗೆ ಅಧಿಕಾರ ಸಿಗುವ ತನಕ ಮಾತ್ರ ಅಂದಿದ್ದು ವಿಶೇಷ.
   ತುಂಬಾ ಸ್ವಾರಸ್ಯಕರ - ಅಥ೯ಪೂರ್ಣವಾದ ಪ್ರಸ್ತುತ ಸಾಹಿತ್ಯ ಪರಿಷತ್ತು ಮತ್ತು ಜನ ಸಾಹಿತ್ಯ ಪರಿಷತ್ ವಿವಾದದ ಬಗ್ಗೆ ಇವತ್ತಿನ ವಿಶ್ವವಾಣಿ ಕ್ಲಬ್ ಹೌಸ್ ಲ್ಲಿ ಅರವಿಂದ ಚೊಕ್ಕಾಡಿ ಮಾತುಗಳು ಕೇಳಿದೆ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...