Skip to main content

Blog number 1156. ನಿಂತ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿ ಸಮಯ ತೋರಿಸಿದಂತೆ ಧನಾತ್ಮಕವಾಗಿ ತಾಳ್ಮೆಯಿಂದ ನಿರೀಕ್ಷಿಸಿ, ನಿಮ್ಮ ಒಳಿತು ಭಗವಂತನ ಅರಿವಿನಲ್ಲಿದೆ. ಎಲ್ಲಾ ದುರ್ದೆಷೆಗಳಲ್ಲಿ ನೀತಿ ಪಾಠ ಲಭ್ಯವಿದ್ದೇ ಇದೆ.

#ಗಾದೆ_ನುಡಿ_ಮುತ್ತುಗಳು_ಸತ್ಯ_ಮತ್ತು_ಸಂಕ್ಷಿಪ್ತ 

#ಇಂತವುಗಳನ್ನು_ಹೆಕ್ಕಿ_ಕಳಿಸುತ್ತಾರೆ_ನಿಟ್ಟೂರು_ರವೀಶ್

#ಇದು_ನಿತ್ಯ_ಸತ್ಯ_ಮತ್ತು_ಪ್ರತಿಯೊಬ್ಬರು_ಅಳವಡಿಸಿ_ಕೊಳ್ಳಬೇಕಾದ್ದೆ.

#ನಾನು_ನನ್ನ_ಜೀವನದಲ್ಲಿ_ಕಷ್ಟ_ಮತ್ತು_ನಷ್ಟಗಳನ್ನು
#ಲಾಭಕ್ಕೆ_ಮತ್ತು_ನೆಮ್ಮದಿಗೆ_ಪರಿವರ್ತಿಸಿಕೊಳ್ಳುತ್ತಿರುತ್ತೇನೆ. 

#ನನ್ನ_ನೂತನ_ಉದ್ಯಮ_ರಾಜ್ಯದಾದ್ಯಂತ_ವಿಸ್ತರಿಸುವ_ಅಂತಿಮ_ತಯಾರಿಯ_ಹಂತದಲ್ಲಿ.

#ಈ_ನುಡಿಮುತ್ತುಗಳು_ಯಶಸ್ಸು_ಹಾರೈಸಿ_ನೀಡಿದ_ಮಂತ್ರಾಕ್ಷತೆಯ೦ತೆ.

 *ಎಲ್ಲಾ ದುರ್ದೆಷೆಗಳಲ್ಲೂ ಧನಾತ್ಮಕ ಅಂಶ ಇದ್ದೇ ಇರುತ್ತದೆ*
*ಕೆಟ್ಟು ನಿಂತ ಗಡಿಯಾರ ದಿನಕ್ಕೆ ಎರೆಡು ಬಾರಿ ಸರಿ ವೇಳೆ ತೋರಿಸಿದಂತೆ*
*ತಾಳ್ಮೆಯಿಂದ ಧನಾತ್ಮಕವಾಗಿ ಕಾಯಿರಿ*
*ದೇವರಿಗೆ ಗೊತ್ತು ನಿಮಗೆ ಯಾವುದು ಒಳ್ಳೆಯದೆಂದು*
  ಎಂಬ ಇಂಗ್ಲೀಷ್ ನುಡಿಮುತ್ತು ಶುಭೋದಯದೊಂದಿಗೆ ಇವತ್ತು ಬೆಳಿಗ್ಗೆ ಕಳಿಸಿದ್ದರು ನಿಟ್ಟೂರಿನ ರವೀಶ್.
 ಪ್ರತ್ಯುತ್ತರವಾಗಿ ನಾನು ನನ್ನ ಜೀವನದಲ್ಲಿ ಕಷ್ಟ ಮತ್ತು ನಷ್ಟಗಳನ್ನು ಲಾಭಕ್ಕೆ ಮತ್ತು ನೆಮ್ಮದಿಗೆ ಪರಿವರ್ತಿಸಿಕೊಳ್ಳುತ್ತಿರುತ್ತೇನೆ ಅಂತ ಬರೆದು ಅಂತಹ ಅನೇಕ ಜೀವನದ ಸಂದಿಗ್ದತೆಗಳನ್ನು ಎದುರಿಸಿದ ಸಂದರ್ಭಗಳನ್ನು ನೆನಪಿಸಿಕೊಂಡೆ.
   ಅನೇಕ ಪ್ರಯೋಗಗಳನ್ನು ಮಾಡಿ ಲಾಭ-ನಷ್ಟ, ಮಾನ-ಅವಮಾನಗಳ ಬೇವು ಬೆಲ್ಲದಂತೆ ಸವಿಯುವ ಜೀವನ ನನ್ನ ಒಬ್ಬನದ್ದೇನಲ್ಲ ಎಲ್ಲಾ ಪ್ರಯತ್ನ ಶೀಲರ ಮತ್ತು ಪ್ರಯತ್ನ ಮಾಡದೇ ಇದ್ದವರ ಜೀವನದಲ್ಲೂ ಸ೦ಭವಿಸುತ್ತಿರುತ್ತದೆ.
  ಆದರೆ ನಮ್ಮ ನಮ್ಮ ಅನುಭವ ನಮಗೇ ಸುಖಾನುಭವ ಆದ್ದರಿಂದ ನಮ್ಮದೇ ವಿಶೇಷ ಅನ್ನಿಸುವುದು ಸಹಜ.
   "ಜೀವನದಲ್ಲಿ ಏನೆಲ್ಲ ಸಾದನೆ ಮಾಡಲು ಹೋಗಿ ನೀವು ಏನೆಲ್ಲ ಕಳೆದುಕೊಂಡಿದ್ದರೂ ಈ ಸಾದನೆಯ ಹಾದಿಯಲ್ಲಿ ನಿಮಗೆ ಸಿಕ್ಕಿರುವ ಸಂಪರ್ಕಗಳನ್ನು ಮುಂದಿನ ಸಾದನೆಗೆ ಬಳಸಿಕೊಳ್ಳಿ ಅದು ಕಳೆದದ್ದನ್ನೆಲ್ಲ ಕೂಡಿಸಿಕೊಟ್ಟೀತು" ಅಂತ ಒಂದು ದೊಡ್ಡ ಪ್ರಹಾರದಿಂದ ಸಂಪೂರ್ಣ ಕಳೆದುಕೊಂಡು ಹತಾಶನಾಗಿದ್ದಾಗ ಮಿತ್ರರಾದ ಪತ್ರಕರ್ತ ಶೃಂಗೇಶ್ ಹೇಳಿದಾಗ ಅರೆ ಹೌದಲ್ಲ ಅನ್ನಿಸಿ ನಿರಾಸೆಗೆ ಬೆನ್ನು ಹಾಕಿದ್ದು ನೆನಪಾಯಿತು.
   2023ರ ಹೊಸ ವಷ೯ದಲ್ಲಿ ಅನೇಕರಿಗೆ ಅವಕಾಶ ಕಲ್ಪಿಸಿ ಅವರನ್ನು ನನ್ನ ಜೊತೆ ಯಶಸ್ವಿ ಉದ್ದಿಮೆದಾರರನ್ನಾಗಿಸುವ ನೂತನ ಉದ್ಯಮ ಒಂದನ್ನು ರಾಜ್ಯದಾದ್ಯಂತ ವಿಸ್ತರಿಸುವ ಯೋಜನೆಯ ಅಂತಿಮ ಹಂತದಲ್ಲಿರುವಾಗ ಈ ನುಡಿಮುತ್ತುಗಳು ಯಶಸ್ಸಿಗೆ ಹಾರೈಸುವ ಮಂತ್ರಾಕ್ಷತೆಗಳು ಅನ್ನಿಸಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ