Skip to main content

Blog number 1191. ಸೈದೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ತ್ಯಜಿಸಿ ಶಾಲಾ ಶಿಕ್ಷಕರಾದ ರಾಮಚಂದ್ರಪ್ಪ ಈಗ ಆದರ್ಶ ಶಿಕ್ಷಕರಾಗಿದ್ದಾರೆ

#ಅವತ್ತು_ಸಾಗರ_ತಾಲ್ಲೂಕಿನಲ್ಲಿ_ಇದು_ಸೆನ್ಸೇಷನಲ್_ಸುದ್ದಿ

   1993ರಲ್ಲಿ ಸಾಗರ ತಾಲ್ಲೂಕಿನ ಉತ್ತರ ಕನ್ನಡ ಜಿಲ್ಲೆಯ ಗಡಿ ಬಾಗದ ಸೈದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದವರು ಪೈರ್ ಬ್ರಾಂಡ್ ರಾಮಚಂದ್ರಪ್ಪ ಯುವಕರು ಮತ್ತು ಪದವೀದರರು ಅಷ್ಟೇ ಅಲ್ಲ ಲಂಚ ವಿರೋದಿ ಆಗಿ ನ್ಯಾಯದ ಪರವಾಗಿ ಅತ್ಯುತ್ತಮ ವಾಗ್ಮಿ ಆಗಿದ್ದರು.
  ಆಗ ನಾನು ನಮ್ಮ ಊರಿನ ಗ್ರಾಮ ಪಂಚಾಯತ್ ಉಪಾದ್ಯಕ್ಷನಾಗಿದ್ದೆ ನಾವೆಲ್ಲ ಸೇರಿ ಸಾಗರ ತಾಲ್ಲೂಕ್ ಗ್ರಾಮ ಪಂಚಾಯತನ ಅಧ್ಯಕ್ಷ ಉಪಾಧ್ಯಕ್ಷರ ವೇದಿಕೆ ಕೂಡ ಮಾಡಿದ್ದೆವು.
  ಈಡಿಗ ಸಮಾಜದ ವಿದ್ಯಾವಂತ, ಕೆಲಸಗಾರ,ವಾಗ್ಮಿ ಆಗಿದ್ದ ರಾಮಚಂದ್ರರನ್ನ ರಾಜಕೀಯವಾಗಿ ಬೆಳೆಸಬಹುದಾದ ಸಂದಭ೯ದಲ್ಲಿ ಅವರನ್ನ ಎಲ್ಲಾ ರೀತಿಯಲ್ಲೂ ಹಣಿಯಲು ಅವರ ಪಕ್ಷದವರೇ ಮುಂದಾಗಿದ್ದು ವಿಪಯಾ೯ಸ.
  ಇದೇ ಸಂದರ್ಭದಲ್ಲಿ ಇವರು ಶಿಕ್ಷಕರಾಗಿ ಆಯ್ಕೆ ಆದರು, ಎಲ್ಲರೂ ಬಾವಿಸಿದ್ದು ಶಿಕ್ಷಕರ ವೃತ್ತಿ ತಿರಸ್ಕರಿಸಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಆದರೆ ರಾಮಚಂದ್ರಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಶಿಕ್ಷಕರಾಗಿ ನಮ್ಮ ಊರಿನ ಸಮೀಪದ ಹೊಸನಗರ ತಾಲ್ಲೂಕಿನ ಹರತಾಳು ಶಾಲೆಗೆ ಕರ್ತವ್ಯಕ್ಕೆ ಬಂದರು.
   ಈ ಸುದ್ದಿ ಆ ಕಾಲದಲ್ಲಿ ತುಂಬಾ ಸೋಜಿಗದ ಸುದ್ದಿ, ಈ ಕಾಲದಲ್ಲೂ ಕೂಡ ಏಕೆಂದರೆ ಸಕಾ೯ರಿ ಉದ್ಯೋಗಕ್ಕೆ ರಾಜಿನಾಮೆ ನೀಡಿ ರಾಜಕೀಯಕ್ಕೆ ಬರುವವರೇ ಹೆಚ್ಚು ಇಂತವರ ಮಧ್ಯೆ ರಾಮಚಂದ್ರಪ್ಪರ ನಡೆ ವಿಭಿನ್ನವೇ.
   ರಾಜಕೀಯ ಬಿಟ್ಟು ದೂರದ ಊರಲ್ಲಿ ಶಿಕ್ಷಕರಾದರೂ ಇವರನ್ನ ದೂಷಿಸುವ ಶೋಷಿಸುವ ರಾಜಕೀಯ ವಿರೋದಿಗಳು ಇವರ ಮತ್ತು ಇವರ ಬೆಂಬಲಿಗರ ಬಗರ್ ಹುಕುಂ ಜಮೀನು ಕಸಿಯುವ  ಪ್ರಯತ್ನ ಮಾಡಿದಾಗ ಇದನ್ನು ವಿರೋದಿಸಿದ ಶಿಕ್ಷಕ ರಾಮಚಂದ್ರಪ್ಪ ಮತ್ತು ಸಂಗಡಿಗರನ್ನ ಜೈಲಿಗೂ ಕಳಿಸಿದರು.
   ಇವರು ಜೈಲಲ್ಲಿ ಇದ್ದಾಗ ಬೇಟಿ ಮಾಡಲು ಹೋಗಿದ್ದು ಮತ್ತು ಇವರ ಅಮಾನತ್ತು ರದ್ದಿಗಾಗಿ ಆಗಿನ ಡಿಡಿಪಿಐ ಗಂಗಪ್ಪ ಗೌಡರಿಗೆ ಸಾಹಿತಿ ಕೋಣಂದೂರು ವೆಂಕಪ್ಪ ಗೌಡರ ಶಿಪಾರಸ್ಸು ಮಾಡಿದ್ದು ಎಲ್ಲಾ ಇವತ್ತು ಸುಮಾರು 20 ವರ್ಷದ ನಂತರ ಬೇಟಿ ಆದ ರಾಮಚಂದ್ರಪ್ಪ ನೆನಪು ಮಾಡಿದರು.
  ಮಗ ಮೈಸೂರಲ್ಲಿ ಎಂ.ಎಸ್ಸಿಯಲ್ಲಿ ಬಯೋಕೆಮಿಸ್ಟ್ರಿಯಲ್ಲಿ ಡಿಸ್ಟಿಂಕ್ಷನ್ ಲ್ಲಿ ತೇಗ೯ಡೆ ಆದ ಬಗ್ಗೆ ಮತ್ತು ಮಗಳು ದ್ವಿತಿಯ ಪೀಯುಸಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಹಾಗೂ ಇವರು ತಾಳಗುಪ್ಪ ಸಮೀಪದ ತಲವಾಟ ಶಾಲೆಯಲ್ಲಿ ಕಾಯ೯ನಿವ೯ಹಿಸುತ್ತಿರುವ ವಿಚಾರ ಮತ್ತು ತಲವಾಟದ ವಿಚಾರವಂತ ಮೇಲ್ವಗ೯ದ ಜನರ ತುಂಬು ಹೃದಯದ ಸಹಕಾರದ ಬಗ್ಗೆ ಕೂಡ ತಿಳಿಸಿದರು.
  ನನಗಂತೂ ರಾಮಚಂದ್ರಪ್ಪ ರಾಜಕೀಯ ಬಿಟ್ಟು ಶಿಕ್ಷಕರಾಗುವ ತೀಮಾ೯ನವೇ ಸರಿ ಅನ್ನಿಸಿತ್ತು ಏಕೆಂದರೆ ಇವರ ಮತ್ತು ಇವರ ಹೋರಾಟಕ್ಕೆ ಇವರನ್ನ ಕೊಲೆ ಮಾಡಿಸಲು ಹೇಸದ ರಾಜಕೀಯ ವ್ಯವಸ್ಥೆ ಅವತ್ತು ಸಾಗರದಲ್ಲಿತ್ತು.
   ಈಗಾಗಲೇ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಹಣಾಹಣಿ ಮುಗಿದು ಅಧ್ಯಕ್ಷ ಉಪಾದ್ಯಕ್ಷರ ಮೀಸಲಾತಿಗೆ ಕಾಯುತ್ತಿರುವ ಪೈಪೋಟಿ ರಾಜಕಾರಣ ಜಾತಿ, ಹಣ, ಪಕ್ಷಗಳಲ್ಲಿ ಮುಳುಗಿ ಹೋಗಿರುವ ಸಂದಭ೯ದಲ್ಲಿ
 ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನ ತೊರೆದು ಮಾದರಿ ಶಿಕ್ಷಕರಾದ ಸೈದೂರು ರಾಮಚಂದ್ರರ ತೀಮಾ೯ನ ಎಲ್ಲರಿಗೂ ಒಂದು ಆದರ್ಶದ ನೀತಿ ಪಾಠ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...