Skip to main content

Blog number 1167. ಒಂದು ಕಾಲದ ಸಮುದಾಯದ ಮುಖಂಡರು ಆಗಿದ್ದ ಘಂಟಿನ ಕೊಪ್ಪದ ತಾರೇಸಿಕ್ಕಿ ಹಿರೇನಾಯಕರ ನೆನಪು ಅವರ ಮೊಮ್ಮಗಳಿಂದ

#ಘ೦ಟಿನಕೊಪ್ಪದ_ತಾರೇಸಿಕ್ಕಿ_ಮನೆತನದವರು.

#ತಾರೇಸಿಕ್ಕಿ_ಹಿರೇನಾಯ್ಕರು_ತಾಲ್ಲೂಕು_ಬೋರ್ಡ್_ಮೆಂಬರ್_ಆಗಿದ್ದರು.

#ಅವರ_ಮಗ_ಯೋಗೇಂದ್ರಪ್ಪ_ಮತ್ತು_ಮೊಮ್ಮಗಳು_ಚಂದ್ರಕಲಾ_ನಿನ್ನೆ_ಬಂದಿದ್ದರು.
  
    ಆನಂದಪುರಂ ಹೋಬಳಿ ಯಡೇಹಳ್ಳಿ ಗ್ರಾಮ ಪಂಚಾಯತ್ ನ ತಾರೇಸಿಕ್ಕಿ ಹಿರೇನಾಯ್ಕರು ಆರು ಅಡಿಗಿಂತ ಎತ್ತರದ ನೀಳಕಾಯರು, ಪಂಚಾಯ್ತಿ, ಸಭೆ ಸಮಾರಂಭದಲ್ಲಿ ಇವರ ಮಾತು ಕಥೆ ಮತ್ತು ಇವರ ದೈರ್ಯದ ಮುಂದೆ ಅವರ ಎದರು ನಿಂತು ಮಾತಾಡುವ ದೈಯ೯ ಯಾರಿಗೂ ಇರುತ್ತಿರಲಿಲ್ಲ ಆಗ ತಾಲ್ಲೂಕ್ ಬೋರ್ಡ್ ಅಧ್ಯಕ್ಷರು ಕಾಗೋಡು ತಿಮ್ಮಪ್ಪನವರು, ಹಿರೇನಾಯ್ಕರು ತಾಲ್ಲೂಕ್ ಬೋರ್ಡ್ ಮೆಂಬರ್ ಆಗಿದ್ದರಂತೆ.
   1986-87ರ ಮಂಡಲ್ ಪಂಚಾಯತ್ ಪ್ರದಾನರ ಆಯ್ಕೆ ಚುನಾವಣೆಯಲ್ಲಿ ನಾನು ಮತ್ತು ತಾರೇಸಿಕ್ಕಿ ಹಿರೇನಾಯ್ಕರು ಒಂದಾಗಿ ಹೊಸಗುಂದದ ಕೋವಿ ನಾರಾಯಣಪ್ಪರನ್ನು ಪ್ರದಾನರಾಗಿ ಮತ್ತು ಹೊಸಗುಂದದ ಎ.ಕೆ. ಕೊಲ್ಲಪ್ಪರನ್ನು ಉಪ ಪ್ರದಾನರಾಗಿ ಆಯ್ಕೆ ಮಾಡಿದ್ದು ಇತಿಹಾಸ.
   ಇವರ ಉಲ್ಲೇಖಿಸಿ ಪೇಸ್ ಬುಕ್ ನಲ್ಲಿ ಪೋಸ್ಟ್ ಒಂದು ಹಾಕಿದ್ದೆ.
   ನಿನ್ನೆ ಬೆಳಿಗ್ಗೆ ಶಿವಮೊಗ್ಗದ ಮಿನಾಕ್ಷಿ ಭವನದ ಹತ್ತಿರದ ಬಾಪೂಜಿ ಕಾಲೇಜಿನ ಅಧ್ಯಾಪಕಿ ಶ್ರೀಮತಿ ಚಂದ್ರಕಲಾ ಪೋನ್ ಮಾಡಿದ್ದರು ನಂತರ ತಮ್ಮ ತಂದೆ ಜೊತೆ ಕಛೇರಿಗೆ ಬಂದಾಗಲೇ ಗೊತ್ತಾಗಿದ್ದು ಇವರು ತಾರೇಸಿಕ್ಕಿ ಹಿರೇನಾಯಕರ ಪುತ್ರ ಯೋಗೇಂದ್ರರ ಎರಡನೆ ಪುತ್ರಿ ಅಂತ.
 ಇವರ ಅಜ್ಜ ಸಾಯುವಾಗ ಇವರಿಗೆ 3 - 4 ವರ್ಷವಾದ್ದರಿಂದ ಅವರ ನೆನಪು ಮಸಕು ಮಸುಕಾಗಿದೆ ಆದರೆ ಅಜ್ಜನ ಬಗ್ಗೆ ಹೆಚ್ಚು ತಿಳಿಯುವ ಆಸಕ್ತಿ ಮತ್ತು ಅಜ್ಜನ ನೆನಪು ಹಸಿರಾಗಿಡುವ ಆಸೆ ಮೊಮ್ಮಗಳಿಗೆ.
   ಆದ್ದರಿಂದ ನಾನು ಬರೆದ ಪೋಸ್ಟ್ ಅವರ ವಾಟ್ಸಪ್ ಗೆ ಕಳಿಸಲು ವಿನಂತಿಸಿದರು,ಕೂಡಲೇ ಕಳಿಸಿದೆ ಮತ್ತು ನಿಮ್ಮ ಅಜ್ಜನ ಪೋಟೋ ವಾಟ್ಸಪ್ ಮಾಡಮ್ಮ ಅಂದಿದ್ದಕ್ಕೆ ಅವರ ಚೀಲದಲ್ಲಿದ್ದ ಅವರ ಅಜ್ಜನ ಪೋಟೋವನ್ನೆ ಹೊರತೆಗೆದರು ಅದನ್ನು ನಾನು ನನ್ನ ಮೊಬೈಲ್ ನಲ್ಲಿ ಸೆರೆ ಹಿಡಿದೆ.
  ಅಜ್ಜನ ಪೋಟೋ ಹಳೆಯದಾಗಿದ್ದರಿಂದ ಅದನ್ನು ಸಾಗರಕ್ಕೆ ಒಯ್ದು ಹೊಸದಾಗಿ ಸ್ಟುಡಿಯೋದಲ್ಲಿ ಪ್ರತಿ ಮಾಡಿಸಿ ಪ್ರೇಂ ಹಾಕಿಸಿಕೊಂಡು ಊರಿಗೆ ಹೋಗುವಾಗ ನನ್ನ ಬೇಟಿಗೆ ಬಂದಿದ್ದರು ಅಪ್ಪ ಮತ್ತು ಮಗಳು.
  ನಿಜಕ್ಕೂ ಹಿರೇನಾಯ್ಕರ ಮೇಲೆ ಮೊಮ್ಮಗಳ ಈ ಪ್ರೀತಿ ನನಗೆ ತುಂಬಾ ಇಷ್ಟ ಆಯಿತು ಈಗಿನ ಮಕ್ಕಳಲ್ಲಿ ಅಜ್ಜ ಅಜ್ಜಿ ನೆನಪೇ ಇಲ್ಲದ ಕಾಲದಲ್ಲಿ ಚಂದ್ರಕಲಾ ಬಿನ್ನರಾಗಿ ಕಾಣುತ್ತಾರೆ ತಂದೆ ಮಗಳಿಗೆ ನನ್ನ ಪುಸ್ತಕಗಳನ್ನು ನೆನಪಿಗಾಗಿ ನೀಡಿ ಬಿಳ್ಕೊಟ್ಟೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...