Skip to main content

Blog number 1176. ಕಾಗೋಡು ಹರತಾಳು ಜುಗಲ್ಬಂದಿ, ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ, ಗೆದ್ದವರು ಮತ್ತು ಸೋತವರ ಸೌಹಾರ್ದ ಸಂಬಂದ

#ಹರತಾಳುಕಾಗೋಡು ಜುಗಲ್ಬ೦ದಿ, ಹಾಲಪ್ಪರ ಜಾಣ ನಡೆ ಹತಾಷ ಕಾ೦ಗ್ರೇಸ್ ಕಾಯ೯ಕತ೯ರು#
  ಇಡೀ ರಾಜ್ಯದಲ್ಲೇ ಬಹುಶಃ ವಿಧಾನ ಸಭೆಗೆ ಪರಸ್ಪರ ಸ್ಪದಿ೯ಸಿದ ಸೋತವರೂ ಗೆದ್ದವರೂ ಈ ರೀತಿ ಸಾಮರಸ್ಯದಲ್ಲಿ ಇರುವುದು ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಅಂತ ನನ್ನ ಅಂದಾಜು.
  ಸೊರಬದಲ್ಲಿ ಕುಮಾರ್ ಮತ್ತು ಮದು, ತೀಥ೯ಹಳ್ಳಿಯಲ್ಲಿ ಜ್ಞಾನೆಂದ್ರ ಮತ್ತು ಕಿಮ್ಮನೆ, ಭದ್ರಾವತಿಯಲ್ಲಿ ಸಂಗಮೇಶ್ ಮತ್ತು ಅಪ್ಪಾಜಿಗೌಡರು, ಶಿವಮೊಗ್ಗದಲ್ಲಿ ಈಶ್ವರಪ್ಪ ಮತ್ತು ಪ್ರಸನ್ನ ಕುಮಾರ್,  ಶಿಕಾರಿಪುರದಲ್ಲಿ ಯಡೂರಪ್ಪ ಮತ್ತು ಗೋಣಿ ಮಾಲ್ತೇಶ್, ಶಿವಮೊಗ್ಗ ಗ್ರಾಮಾಂತರದಲ್ಲಿ ಅಶೋಕ ನಾಯಕ ಮತ್ತು ಶಾರದಾ ಪೂಯ೯ ನಾಯಕ್ ರ ಜಟಾಪಟಿ ಮತ್ತು ಆಯಾ ಪಕ್ಷದ ಕಾಯ೯ಕತ೯ರು ಹಾವು ಮುಂಗುಸಿಯ೦ತೆ ಇದ್ದಾರೆ.
  ಆದರೆ ಸಾಗರದ ಶಾಸಕರಾಗಿರುವ ಹರತಾಳು ಹಾಲಪ್ಪ ತಾವು ಸೋಲಿಸಿದ ಕಾಂಗ್ರೇಸ್ ನ ಮಂತ್ರಿ ಕಾಗೋಡು ತಿಮ್ಮಪ್ಪ ರ ಜೊತೆ ಗೆಳೆತನ ಬೆಳೆಸಿದ್ದಾರೆ, ಪರಸ್ಪರ ವೇದಿಕೆಯಲ್ಲಿ ಅವರವರ ಪಕ್ಷದ ಹಿತ ಕಾಪಾಡುವ ಮಾತು ವತ೯ನೆ ಕಡಿಮೆ ಏನು ಆಗಿಲ್ಲ.
  ಮತದಾರರಿಗೆ ಇವರಿಬ್ಬರ ಈ ಸಂಬಂದ ಆದಶ೯ವಾಗಿ ಕಂಡು ಬಂದರೂ ಬಿಜೆಪಿ ಮತ್ತು ಕಾಂಗ್ರೇಸ್ ಕಾಯ೯ಕತ೯ರಿಗೆ ಇದು ಬಿಸಿ ತುಪ್ಪ ಆಗಿದೆ ನುOಗಲು ಆಗುತ್ತಿಲ್ಲ ಉಗಳಲು ಸಾಧ್ಯವಿಲ್ಲ.
   ಹಾಲಿ ಶಾಸಕರಾದ ಹಾಲಪ್ಪರಿಗೆ ಇದರಿಂದ ಲಾಭವೇ ಹೊರತು ನಷ್ಟವಿಲ್ಲ ಆದರೆ ಕಾಗೋಡರ ಕಾಂಗ್ರೇಸ್ ಪಕ್ಷಕ್ಕೆ ನಷ್ಟವಲ್ಲದೆ ಬೇರೆ ಏನೂ ಇಲ್ಲ ಹಾಗ೦ತ ವೈಯಕ್ತಿಕವಾಗಿ ಕಾಗೋಡರಿಗೆ ಸೋತರು ತಾಲ್ಲೂಕ್ ಆಡಳಿತ ವಗ೯ದಿಂದ ಗೌರವ ಮತ್ತು ಅವರ ಮಾತಿಗೆ ಘನತೆ ಶಾಸಕ ಹಾಲಪ್ಪರಿಂದ ಲಭಿಸಿದೆ.
   ಕಾಂಗ್ರೇಸ್ ಪಕ್ಷ ಸಂಘಟನೆಗಾಗಿ ತಾಲ್ಲೂಕಿನ ಶಾಸಕರನ್ನ ಟೀಕಿಸುವ ಶಕ್ತಿ ಆ ಪಕ್ಷದ ಮುಖಂಡರು ಕಳೆದುಕೊಂಡಿರುವುದು ರಹಸ್ಯವಾಗಿಲ್ಲ ಅಲ್ಲಲ್ಲಿ ಕಾಗೋಡರ ಈ ವತ೯ನೆಗೆ ಕಾಯ೯ಕತ೯ರು ಚಚಿ೯ಸುತ್ತಾರಾದರೂ ಕಾಗೋಡರನ್ನ ಅವರ ಇಷ್ಟಕ್ಕೆ ತಕ್ಕ೦ತೆ ಬದಲಿಸಲು ಸಾಧ್ಯವಿಲ್ಲವಾದ್ದರಿಂದ ಹತಾಶರಾಗಿದ್ದಾರೆ.
  ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಈ ತಂತ್ರಗಾರಿಕೆ ಒಂದು ಕಾಲದ ಅವರ ಶ್ರೀಷ್ಯ ಹಾಲಪ್ಪ ಸಾಗರದಲ್ಲಿ ಅವರ ಎದುರಾಳಿ ಕಾಗೋಡರ ಮೇಲೆಯೆ ಪ್ರಯೋಗಿಸಿ ಯಶಸ್ವಿ ಆಗಿದ್ದಾರೆ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಾಲಪ್ಪನವರು ದಿಡೀರ್ ಆಗಿ ಬೇಳೂರು ಗೋಪಾಲಕೃಷ್ಣರನ್ನ ಕಾಗೋಡು ಅಪ್ಪಿಕೊಂಡಿದ್ದರಿಂದ ಸುಪ್ತವಾಗಿ ಬೇಸರಗೊಂಡಿದ್ದ ಸ್ಥಳಿಯ ಕಾಂಗ್ರೇಸ್ ಮುಖಂಡರು ಮತ್ತು ಪ್ರಮುಖ ಕಾಯ೯ಕತ೯ರನ್ನ ವೈಯಕ್ತಿಕವಾಗಿ ಬೇಟಿ ಮಾಡಿ ಸಹಕಾರ ಯಾಚಿಸಿದ್ದು ಕಾಗೋಡರನ್ನ ಸುಲಭವಾಗಿ ಸೋಲಿಸಲು ಸಾಧ್ಯವಾಗಿತ್ತು ಈಗ ಸಾವ೯ಜನಿಕವಾಗಿ ಇವರು ಹೆಚ್ಚು ಹೆಚ್ಚು ಕಾಗೋಡು ಸಖ್ಯ ಪ್ರದಶ೯ನದಿಂದ ಮುಂದಿನ ದಿನಗಳಲ್ಲಿ ಬರುವ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚು ಬಿಜೆಪಿ ಅಭ್ಯಥಿ೯ ಗೆಲ್ಲಿಸಿಕೊಂಡು ಬರುವ ಸುಲಭ ದಾರಿ ಕಂಡು ಹಿಡಿದಿದ್ದಾರೆ ಅಲ್ಲದೆ ಮುಂದಿನ ದಿನದಲ್ಲಿ ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚು ವಿರೋದಿಗಳು ಇಲ್ಲದಂತೆ ಮಾಡಿ ಕೊಂಡು ಮುಂದಿನ ಅವರ ಗೆಲುವಿಗೂ ಅವಕಾಶ ಮಾಡಿಕೊಳ್ಳುತ್ತಿದ್ದಾರೆ.
  ಈ ಮಧ್ಯೆ ಹಾಲಪ್ಪ ನಡೆ ನುಡಿಯಲ್ಲಿ ಪ್ರಬುದ್ಧತೆ ಕಂಡು ಬರುತ್ತಿರುವುದು ಕೂಡ ಅವರು ಬದಲಾಗಿರುವುದು ತೋರಿಸುತ್ತಿದೆ, ದ್ವೇಷದ ರಾಜಕಾರಣ ಮಾಡದೆ ವಿರೋದಿಗಳಿಗೂ ಸಹಾಯ ಮಾಡುವುದು, ಕಾಂಗ್ರೇಸ್ ಬೆಂಬಲಿಸುವ ಗುತ್ತಿಗೆದಾರರಿಗೂ ಕೆಲಸ ನೀಡುತ್ತಿದ್ದಾರೆ, ಕ್ಷೇತ್ರದಲ್ಲಿ ಆಗಬೇಕಾದ ಕೆಲಸಕ್ಕೆ ಆದ್ಯತೆ ನೀಡಿ ಹಣ ಮಂಜೂರು ಮಾಡಿಸಿ ಅನೂಷ್ಟಾನಗೊಳಿಸುತ್ತಿರುವುದು ಕೆಲಸಗಾರ ಕಾಗೋಡರ ಸೋಲಿನಿಂದ ಸಾಗರದಲ್ಲಿ ಅಭಿವೃದ್ಧಿ ನಿಂತಿದೆ ಎಂಬ ಬಾವನೆ ಬರದಂತಾಗಿದೆ.
  ಮತದಾರರಿಗೆ ಕಾಗೋಡು ಸೋತ ನೋವು ಆಗದಂತೆ ಗೆದ್ದ ಹಾಲಪ್ಪನವರು ನಡೆನುಡಿಯಿ೦ದ ಕ್ಷೇತ್ರದಲ್ಲಿ ಅಜಾತ ಶತ್ರು ಆಗುತ್ತಿದ್ದಾರೆ.
  ಇದು ರಾಜಕಾರಣಿಗಳ ಸಾವ೯ಜನಿಕ ಜೀವನಕ್ಕೆ ಮಾದರಿ ಕೂಡ, ಕಾಗೋಡು ಹರತಾಳರ ಜುಗಲ್ಬಂದಿ ಹೀಗೆ ಮುಂದುವರಿಯಲಿ ಎಂದು ಹಾರೈಸೋಣ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...