Skip to main content

Blog number 1186. ಎಸ್ ಆರ್ ಕೃಷ್ಣಪ್ಪ ಅವರನ್ನು SRK ಎಂದೇ ಅವರ ವಿದ್ಯಾರ್ಥಿಗಳು ಕರೆಯುತ್ತಾರೆ, ಇವರು ಆನಂದಪುರಂನ ಸಮಸ್ತ ಅಭಿವೃದ್ದಿಯ ಪ್ರೇರಕರಾಗಿದ್ದರು.

#SRK ಅಂದರೆ ಆನಂದಪುರಂನ ಸಮಸ್ತ ಅಭಿವೃದ್ಧಿ ಪ್ರೇರಕರು.

#ಎಸ್‌.ಆರ್.ಕೃಷ್ಣಪ್ಪ.

#ಅವರ ಅಭಿನಂದನಾ ಗ್ರಂಥದಲ್ಲಿ ನನಗೆ ಬರೆಯಲು ಸಿಕ್ಕಿದ ಅವಕಾಶ ನನ್ನ ಪುಣ್ಯ ಎಂದು ಬಾವಿಸಿದ್ದೇನೆ.

"SRK ಅಂದರೆ ಆನಂದಪುರಂನ ಸಮಸ್ತ ಅಭಿವೃದ್ದಿಗೆ ಪ್ರೇರಕರು"
ಹಾಗಂತ ನಾನು ಅವರ ಅಭಿನಂದನಾ ಗ್ರಂಥದಲ್ಲಿ ಬರೆದ ಲೇಖನ.
    ಅವರನ್ನ ನಮ್ಮ ಬಾಲ್ಯದಲ್ಲಿ ದೂರದಿಂದಲೇ ನೋಡಿದ್ದೆ ಆದರೆ ಅವರ ಜೊತೆ ಕುಳಿತು ಮಾತಾಡಿದ್ದು ಇತ್ತೀಚಿಗೆ, ಅವರ ಬಗ್ಗೆ ಅಭಿನಂದನಾ ಗ್ರಂಥ ತರುವ ಸಂದಭ೯ ಸಂಪಾದಕರಾದ ಎಸ್.ಎಂ.ಗಣಪತಿ ನನ್ನದೊಂದು ಲೇಖನ ಕೇಳಿದ್ದರು, ಆಗ ನಾನು ನನ್ನ ಅಣ್ಣ ಮತ್ತು ಅಕ್ಕಂದಿರಿಗೆ ಅವರು ಗುರುಗಳು,ನಾನು ಆ ವಯಸ್ಸಿಗೆ ಬರುವಾಗ ವಗ೯ವಾಗಿದ್ದರು ಅಂದೆ ಪರವಾ ಇಲ್ಲ ನೀವು ಜಿಲ್ಲಾ ಪಂಚಾಯತ್ ಸದಸ್ಯರಾದವರು SRK ಬಗ್ಗೆ ನಿಮ್ಮ ಅನುಭವ ಬರೆಯಿರಿ ಅಂದರು.
        ನಾನು ಒಂದು ಲೇಖನ ಬರೆದೆ, ಅದರಲ್ಲಿ ನಮ್ಮ ಬಾಲ್ಯದಲ್ಲಿ ಅವರು ಯಾವ ರೀತಿ ಪ್ರೇರಣೆ ಆದರು ಮತ್ತು ಅವರು ಕರೆಸುತ್ತಿದ್ದ ವಿಷೇಷ ಸಾದಕರನ್ನ ನೋಡಿ ಅವರ ಮಾತು ಕೇಳಿ ನಮ್ಮ ಜೀವನದಲ್ಲಿ ಯಾವ ರೀತಿ ಬದಲಾವಣೆ ಆಯಿತು ಹಾಗು ಇಡೀ ಆನಂದಪುರ ಆ ಕಾಲದಲ್ಲಿ ಸಣ್ಣ ಹಳ್ಳಿ ಇಲ್ಲಿನ ಬದರಿನಾರಾಯಣ್ ಅಯ್ಯOಗಾರ ಕುಟುಂಬ ದೊಡ್ಡ ಇನಾಂದಾರರು, ಅವರು ಶಾಸಕರು, ಸಂಸದರು ಮತ್ತು ವಿದ್ಯಾಮಂತ್ರಿಗಳಾದವರು, ಅವರ ಕುಟುಂಬಕ್ಕೆ ಶೃಂಗೇರಿ ಮಠಕ್ಕೆ ವಷ್೯ಕ್ಕೆ 2 ಟನ್ ಗಂದದ ಮರ ಹೋಮ ಹವನಗಳಿಗೆ ನೀಡಲೆಂದೆ 2000 ಎಕರೆ ಕಾಡು ಮೈಸೂರು ಅರಸರು ನೀಡಿದ್ದರು.ಕಾಲ ಬದಲಾದಂತೆ ಅವರಿಗೆ ಆನಂದಪುರಂ ಅಭಿವೃದ್ಧಿಗೆ SRK ಯವರಂತ ಒಬ್ಬ ಗುರಿಕಾರ ಆ ಸಂದಭ೯ದಲ್ಲಿ ಬೇಕಿತ್ತು ಹಾಗಾಗಿ ಇವರ ದೂರದಶಿ೯ ಚಿಂತನೆ ಅಯ್ಯOಗಾರರ ಅಧಿಕಾರ ಸೇರಿ ಆನಂದಪುರಂ ಇವತ್ತು ಮಾದರಿ ಗ್ರಾಮವಾಗಿದೆ ಅನ್ನುವ ಅಥ೯ದ ಲೇಖನ ಬರೆದಿದ್ದೆ ಮತ್ತು ಅದನ್ನ ಸಂಬ೦ದ ಪಟ್ಟವರಿಗೆ ಕಳಿಸಿ ಮರೆತಿದ್ದೆ.
          ಈ ಲೇಖನ ಅವರಿಗೆ ಹಿಡಿಸಿತಂತೆ ಹಾಗಾಗಿ ಅವರು ನನ್ನ ಭೇಟಿ ಮಾಡಲು ನನ್ನ ಕಛೇರಿಗೆ ಬಂದಾಗ ನನಗೆ ಏನು ಹೇಳಬೇಕು ಅಂತ ತೊಚಲಿಲ್ಲ, ಅವರ ಕಾಲಿಗೆ ನಮ್ಮಣ್ಣ, ಅವರ ಅನೇಕ ಶಿಷ್ಯರು ಕಾಲಿಗೆ ಬಿದ್ದು ಆಶ್ರೀವಾದ ಬೇಡಿದಾಗ ಅವರಲ್ಲಿ ನಾನೊಬ್ಬನಾಗಿದ್ದೆ.
        ಇದೇ ಜನವರಿ 29ಕ್ಕೆ 2017ಕ್ಕೆ ಅಭಿನಂದನಾ ಗ್ರಂಥ ಬಿಡುಗಡೆ ಅಂತ ಕರೆಯೋಲೆ ಬಂದಿದೆ ಜೊತೆಯಲ್ಲಿ ಅಭಿನಂದನಾ ಗ್ರಂಥ ಅದರಲ್ಲಿ ನನ್ನ ಲೇಖನ 9ನೆ ಪುಟದಲ್ಲಿ ಅಗ್ರ ಲೇಖನವಾಗಿ ಪ್ರಕಟಿಸಿದ್ದಾರೆ.
         ಈ ಗ್ರಂಥದಲ್ಲಿ ಆನಂದಪುರಂನಲ್ಲಿನ ಅವರ ಅನುಭವ ದಾಖಲಿಸಿದ್ದಾರೆ ನನಗೂ ಗೊತ್ತಿರಲಿಲ್ಲದ ವಿಷಯ ಆದರಲ್ಲಿದೆ, ಭಾರತದ ಮೊದಲ ಒನ್ ಮ್ಯಾನ್ ಬ್ಯಾಂಕ್ ಆನಂದಪುರಂಗೆ ಮಂಜೂರಾಗಿತ್ತು ಅದರ ಉದ್ಘಾಟನೆಗೆ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಬಂದಿದ್ದರು ಅಂತ.
         ಇನ್ನೂ ಅನೇಕ ವಿಷಯ ಅದರಲ್ಲಿದೆ ಅವರ ಬಲ್ಲವರು ಮತ್ತು ಆನಂದಪುರಂನ ಇತಿಹಾಸದ ಬಗ್ಗೆ ಆಸಕ್ತಿ ಇದ್ದವರು ಈ ಪುಸ್ತಕ ಖರೀದಿಸಿ ಓದಬಹುದು, ನಾನು 10 ಪುಸ್ತಕ ಖರೀದಿ ಮಾಡಿದ್ದೇನೆ ಎಲ್ಲಾ ಪ್ರಸ್ತಕದಲ್ಲೂ ಅವರು ಸಹಿ ಮಾಡಿದ್ದಾರೆ ಅವರ ವಿದ್ಯಾಥಿ೯ಗಳಾದವರಿಗೆ ಕಳಿಸಿ ಕೊಟ್ಟಿದ್ದೆನೆ.
       ಈ ಅಭಿನಂದನಾ ಗ್ರಂಥದಲ್ಲಿ ನಾ ಬರೆದ ಲೇಖನ ಮತ್ತು ಅವರು ಬರೆದ ಆನಂದಪುರದಲ್ಲಿನ ಅವರ ಅನುಭವದ ಲೇಖನ ಲಗತ್ತಿಸಿದ್ದೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...