#ಹೋರಿ_ಬೆದರಿಸುವ_ಹಬ್ಬ
#ಶಿಕಾರಿಪುರದ_ಮಾಜಿ_ಶಾಸಕ_ಬಿ_ಎನ್_ಮಹಾಲಿಂಗಪ್ಪನವರಿ
#ಗೂಳಿ_ತಿವಿತಕ್ಕೆ_ಪ್ರಾಣಾಪಾಯದಿಂದ_ಪಾರಾಗಿದ್ದಾರೆ
#ಶಿವಮೊಗ್ಗ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ಬಳ್ಳಿಗಾವೆಯಲ್ಲಿ.
#bullock #race #deepavali #Shikaripura #exmla #BNMahalingappa #horihabba
ದೀಪಾವಳಿಯಲ್ಲಿ ಹೋರಿ ಬೆದರಿಸುವ ಸ್ವರ್ದೆಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು.
ಇತ್ತೀಚಿಗೆ ಇದು ಐಪಿಎಲ್ ಮಾದರಿಗೆ ತಲುಪಿದೆ ಲಕ್ಷಾಂತರ ರೂಪಾಯಿ ಹಣ ಬಹುಮಾನ ವಿತರಣೆ ಮಾಡುವ ಕ್ರೀಡೆ ಆಗಿದೆ.
ಆಯೋಜಕರು ಸೂಕ್ತ ವ್ಯವಸ್ಥೆ ಮತ್ತು ಪೋಲಿಸರ ಅನುಮತಿ ಪಡೆದು ಇದನ್ನು ನಡೆಸ ಬೇಕಾದ ಸ್ಪರ್ದೆ ಆಗಿದೆ.
ಮೊನ್ನೆ ಶುಕ್ರವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಸ್ಥಳೀಯ ಸಂಘಟನೆಗಳು ಆಯೋಜಿಸಿತು.
ಇದನ್ನು ನೋಡಲು ಶಿಕಾರಿಪುರದ ಮಾಜಿ ವಿದಾನ ಸಭಾ ಶಾಸಕ ಹಾಗೂ ವಕೀಲರಾದ ಬಿ.ಎನ್. ಮಹಾಲಿಂಗಪ್ಪರನ್ನ ಆಹ್ವಾನಿಸಲಾಗಿತ್ತು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ನಡೆದ ಸಾಂಪ್ರದಾಯಿಕ ಹೋರಿ ಹಬ್ಬದ ಸಂದರ್ಭದಲ್ಲಿ ಹಬ್ಬವನ್ನು ವೀಕ್ಷಿಸಲು ಆಗಮಿಸಿದ್ದ ಶಿಕಾರಿಪುರ ಕ್ಷೇತ್ರದ ಮಾಜಿ ಶಾಸಕರಾದ ಮಹಾಲಿಂಗಪ್ಪ ಅವರು ಅನಿರೀಕ್ಷಿತವಾಗಿ ಹೋರಿಯ ತಿವಿತಕ್ಕೆ ಒಳಗಾಗಿದ್ದಾರೆ.
ಈ ಘಟನೆಯು ಸ್ಥಳೀಯರಲ್ಲಿ ಕೆಲ ಕಾಲ ಆತಂಕ ಮೂಡಿಸಿತ್ತು.
ಶಿಕಾರಿಪುರ ಮಹಾಲಿಂಗಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದರು ಮತ್ತು 1999 ರಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಾಜಕಾರಣಿ ಬಿ.ಎನ್. ಮಹಾಲಿಂಗಪ್ಪ ಯಡ್ಯೂರಪ್ಪರನ್ನ ಸೋಲಿಸಿ ವಿಧಾನ ಸಭೆಗೆ ಪ್ರವೇಶಿಸಿದ್ದರು.
ತಕ್ಷಣ ಮಾಜಿ ಶಾಸಕರಾದ ಬಿ.ಎನ್. ಮಹಾಲಿಂಗಪ್ಪರನ್ನ ಚಿಕಿತ್ಸೆಗೆ ಕರೆದೊಯ್ಯಲಾಯಿತು.
ಈಗ ಅವರು ಚೇತರಿಸಿಕೊಳ್ಳುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಸುದ್ದಿ ಇದೆ.
ಅಪಾಯಕಾರಿ ಹೋರಿ ಬೆದರಿಸುವ ಸ್ಪರ್ಧೆ ಬಗ್ಗೆ ಜಿಲ್ಲಾಡಳಿತ ಯೋಚಿಸ ಬೇಕಾಗಿದೆ.
ಮಾಜಿ ಶಾಸಕ ಬಿ.ಎನ್. ಮಹಾಲಿಂಗಪ್ಪ ಹೋರಿಯ ದಾಳಿಗೆ ಒಳಗಾದ ವಿಡಿಯೋ ನೋಡಿ
#ಹೋರಿಯಿಂದ_ದಾಳಿಗೆ_ಒಳಗಾದ_ಮಾಜಿ_ಶಾಸಕರ_ವಿಡಿಯೊ
https://www.facebook.com/share/r/1DDQ33oosv/
Comments
Post a Comment