Skip to main content

3516. ಅನಾನಸ್ ಕಿಂಗ್

#ಬನವಾಸಿ_ರೋವೂಪ್_ಸಾಹೇಬರು_ಡಾಕ್ಟರ್_ಆದ_ಕಥೆ.

#ಅನಾನಸ್_ಕಿಂಗ್_ಬನವಾಸಿ_ರೋವೂಪ್_ಸಾಹೇಬರ_ಐದನೇ_ಪುಣ್ಯಸ್ಮರಣೆ.

#ದಾರವಾಡ_ಕೃಷಿ_ವಿಶ್ವವಿದ್ಯಾಲಯದ_ಗೌರವ

#ಡಾಕ್ಟರೇಟ್_ಪಡೆದ_ರಾಜ್ಯದ_ಮೊದಲ_ರೈತ.

#ನನ್ನ_ಮತ್ತು_ರೋವೂಪ್_ಸಾಹೇಬರ_ಮೊದಲ_ಬೇಟಿಯ_ನೆನಪು

#ಡಾಕ್ಟರ್_ಅಬ್ದುಲ್_ರೋವೂಪ್_ಅಬ್ದುಲ್_ಕರೀಂ_ಶೇಖ್_ಬನವಾಸಿ

 #ಅವರ_ಕೃಷಿ_ಸಾಧನೆ_ಮುಂದಿನ_ತಲೆಮಾರಿಗೂ_ಒಂದು_ಸಾಧನೆಯ_ಕೈಪಿಡಿ_ಆಗಿದೆ.


#ananas #ananasking #pineapple #pineapplelove #Banavasi #darwad #Agriuniversity #drrovopsaheb

    ಇವರಿಗೆ ಕನಾ೯ಟಕದ ಪೈನಾಪಲ್ ಕಿಂಗ್ ಎಂಬ ಅನ್ವಥ೯ ನಾಮವೂ ಇದೆ ಅದಕೆ ಕಾರಣ ಇವರು ಅನಾನಸ್ ಬೆಳೆ ಬೃಹತ್ ವಾಣಿಜ್ಯ ಬೆಳೆ ಆಗಿ ರಾಷ್ಟ್ರಮಟ್ಟದ ಮಾರುಕಟ್ಟೆಯಲ್ಲಿ ಪರಿಚಯಿಸಿದ ಸಾಧಕರು ಇವರು.

   ಕೃಷಿಯನ್ನು ಕೈಗಾರಿಕೆ ಮಾಡಿ ಯಶಸ್ವಿ ಆದ ಡಾಕ್ಟರ್ ಅಬ್ದುಲ್ ರೋವೂಪ್ ಅಬ್ದುಲ್ ಕರೀಂ ಶೇಖ್ ಬನವಾಸಿ ಅವರ ಕೃಷಿ ಸಾಧನೆ ಮುಂದಿನ ತಲೆಮಾರಿಗೂ ಒಂದು ಸಾಧನೆಯ ಕೈಪಿಡಿ ಆಗಿದೆ.

   ರಾಜ್ಯದ ಅನಾನಸ್ ಹಣ್ಣಿನ ಕಿಂಗ್ ರ ಸಾಧನೆ ಸಣ್ಣದಲ್ಲ.

   ಇವರ ಸಾದನೆ ಆ ಮಟ್ಟದ್ದು
  ಉ.ಕ.ಜಿಲ್ಲೆಯ ಬನವಾಸಿ ವಾಸಿ ಆದ ಇವರಿಗೆ 2006ರಲ್ಲಿ ದಾರವಾಡದ ಕೃಷಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿದ್ದು ದೊಡ್ಡ ಸುದ್ದಿ ಆಗಿತ್ತು.

    ಇದು ಕೃಷಿ ವಿಶ್ವವಿದ್ಯಾಲಯ ಇವರ ಸಾಧನೆಗೆ ನೀಡಿದ ಗೌರವ ಡಾಕ್ಟರೇಟ್ ಮತ್ತು ರೈತರೊರ್ವರಿಗೆ ಡಾಕ್ಟರೇಟ್ ನೀಡಿದ ಮೊದಲ ವ್ಯಕ್ತಿ ಈ ಅನಾನಸ್ ಕಿಂಗ್ ಬನವಾಸಿ ರೋವುಪ್ ಸಾಹೇಬರು.

    ರೋವೂಪ್ ಸಾಹೇಬರಿಗೆ ಡಾಕ್ಟರೇಟ್ ಕೊಟ್ಟ ಬಗ್ಗೆ ಅಪಸ್ವರ ಕೆಲವರದ್ದು ಕಾರಣ ಇವರು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆ ವಿಪರೀತ ಅಂತ.

  ಇವರನ್ನ ಬೇಟಿ ಮಾಡಲೇ ಬೇಕೆಂದು ಯೋಚಿಸುವಾಗಲೇ ಸೊರಬ ಮೂಲದ ಸಾಗರ ತಾಲ್ಲೂಕಿನ ಭೂ ಅಭಿವೃದ್ದಿ ಬ್ಯಾಂಕಿನ ಉದ್ಯೋಗಿ ಆಗಿದ್ದ #ಜಾನಕಪ್ಪನವರು ಡಾಕ್ಟರ್ ರೋವೂಪ್ ಸಾಹೇಬರ ಸಾದನೆ ಬಗ್ಗೆ ಹೇಳಿದಾಗ ನನಗೆ ಅವರ ಹತ್ತಿರ ಕರೆದೊಯ್ದು ಪರಿಚಯಿಸಲು ವಿನಂತಿಸಿದ್ದೆ.

  ನಿಗದಿತ ಬೆಳಿಗ್ಗೆ ಸೊರಬ ಮಾಗ೯ವಾಗಿ ಬನವಾಸಿ ತಲುಪಿ ಅವರ ಮನೆಯಲ್ಲಿ ಅವರ ಅಗಮನಕ್ಕೆ ಕಾಯುತ್ತಾ ಕುಳಿತಿದ್ದವು.

   ಆಗ ಒಂದು ವಿಶೇಷ ನಡೆಯಿತು ರೋವುಪ್ ಸಾಹೇಬರ ಮನೆಯ ಡೈನಿಂಗ್ ಹಾಲ್ ನಿಂದ ನನ್ನ ಮುಂಬೈನ  ಗೆಳೆಯ ವಿಜಯ್ ಗಡ್ಕರ್ ಬಂದರು ಅವರ ಹಿಂದೆ ರೋವುಪ್ ಸಾಹೇಬರು.

     ನನ್ನ ಗೆಳೆಯ ಅವರ ಅನಾನಸ್ ಹಣ್ಣಿನ ಸಂಸ್ಕರಣ ಘಟಕದ ಯಂತ್ರೋಪಕರಣ ಸರಬರಾಜು ಮತ್ತು ನಿರ್ವಹಣೆ ಮಾಡುತ್ತಾರೆಂದು ನಂತರ ತಿಳಿಯಿತು.

   ಆ ಕಾರಣದಿಂದ ಅವರು ರೋವುಪ್ ಸಾಹೇಬರ ಅತಿಥಿ ಆಗಿದ್ದರು ಇದರಿಂದ ರೋವೂಪ್ ಸಾಹೇಬರ ನನ್ನ ಪರಿಚಯ, ಚಚೆ೯ ಸರಾಗವಾಯಿತು.

  ಎಕರೆ ಒ0ದರಲ್ಲಿ ಸರಾಸರಿ 30 ಟನ್ ಅನಾನಸ್ ಬೆಳೆ ತೆಗೆಯುವ ಇವರ ವಿಧಾನವೇ ಬಿನ್ನ, ಇವರಿಂದಲೇ ಅನಾನಸ್ ಬೆಳೆಯ ಹಬ್ ಆಗಿದೆ ಬನವಾಸಿ.

  ಅನಾನಸ್ ಒಯ್ಯಲು ದೂರದ ದೆಹಲಿ ಪಂಜಾಬಿನಿಂದ ಖರೀದಿದಾರರು ಬರುತ್ತಾರೆ.

    ಅನಾನಸ್ ಸೀಸನ್ ನಲ್ಲಿ ಉತ್ತರ ಭಾರತದ ದೊಡ್ಡ ದೊಡ್ಡ ಟ್ರಕ್ ಗಳು ಅನಾನಸ್ ಹಣ್ಣು ತುಂಬಿಕೊಂಡು ಹೋಗುತ್ತದೆ.

  ಇವರದ್ದೇ ಸ್ವಂತ ಅನಾನಸ್ ಹಣ್ಣು ಸಂಸ್ಕರಣದ  ಘಟಕ ಸ್ಥಾಪಿಸಿದ್ದಾರೆ.

   ದಿನಕ್ಕೆ 10 ರಿಂದ 20 ಟನ್ ಹಣ್ಣು ಸಂಸ್ಕರಣ ಮಾಡುತ್ತಾರೆ.

  ಇವರ ಪುತ್ರ ಸಿಸಿ೯ ರಸ್ತೆಯಲ್ಲಿ ಇನ್ನೊಂದು ಸಂಸ್ಕರಣ ಘಟಕ ಸ್ಥಾಪಿಸಿದ್ದಾರೆ.

  ಇವರ ಕೃಷಿ ವಿದಾನ ವಿಬಿನ್ನ ನೂರಾರು ಎಕರೆ ಖುಷ್ಕಿ ಜಮೀನು ಅನಾನಸ್ ಬೆಳೆಯಲು ಗುತ್ತಿಗೆಗೆ ಪಡೆಯುತ್ತಾರೆ.

   ಅಲ್ಲಿ ನೀರಿಗಾಗಿ ಬೋರ್ ವೆಲ್ ತೆಗೆಸುತ್ತಾರೆ ನಂತರ ದೊಡ್ಡ ಮಟ್ಟದ ಅನಾನಸ್ ಕೃಷಿ ಪ್ರಾರಂಬಿಸುತ್ತಾರೆ.

   ಅನಾನಸ್ ಬೆಳೆ ತೆಗೆದು ಲಾಭದಿಂದ ಅದೇ ಜಮೀನು ಖರೀದಿಸಿ ಬಾಳೆ ಹಾಕಿ ಅದರ ಮಧ್ಯ ಅಡಿಕೆ ಹಾಕುತ್ತಾರೆ ಆರೇಳು ವರ್ಷದಲ್ಲಿ ಅದನ್ನು ಅತ್ಯುತ್ತಮ ಅಡಿಕೆ ತೋಟವಾಗಿ ಬದಲಿಸಿಬಿಡುವ ಕುಶಾಗ್ರಮತಿ ಅವರು.

  2007 ರಲ್ಲಿ ಅವರ ಹಿಡಿತದಲ್ಲಿ 2000 ಎಕರೆಗೂ ಹೆಚ್ಚಿನ ಜಮೀನಿನಲ್ಲಿ ಅನಾನಸ್, ಬಾಳೆ ಮತ್ತು ಅಡಿಕೆ ಬೆಳೆ ಇತ್ತು.

   ಅವರ ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬಂದದ್ದು, ಸುರಿಗಿ ಹೂವಿನ ದಂಡೆ ಮಾರಿ ಜೀವನ ಮಾಡಿದ್ದು ನೆನಪಿಸಿಕೊಂಡಾಗ ಅವರ ಕಣ್ಣು ತೇವ ಆಗಿತ್ತು.

  ಪ್ರಾಥಮಿಕ ಶಿಕ್ಷಣವೂ ಪೂಣ೯ ಮಾಡಲಾಗದ ಬಡತನ ಈಗಿನ ಕೃಷಿ ಸಾಹಸದಿಂದ ಕೃಷಿ ವಿಶ್ವವಿದ್ಯಾಲಯ ಒ೦ದು ಗೌರವ ಡಾಕ್ಟರೇಟ್ ಕೊಡುವ ಮಟ್ಟಕ್ಕೆ ಬೆಳೆದಿದ್ದನ್ನ ಸ್ವತಃ ಅವರೇ ಅವರು 1972 ರಲ್ಲಿ ಖರೀದಿಸಿದ ಹಳ್ಳಿ ಕೊಪ್ಪದ ತೋಟದಲ್ಲಿ ವಿವರಿಸಿದ್ದರು.

   ಅವತ್ತು ನಮಗೆಲ್ಲ ಅವರ ತೋಟದ ಎಳನೀರು ಕುಡಿಸಿ, ತಿನ್ನಲು ಅನಾನಾಸ್ ಕೊಟ್ಟು ಜೊತೆಗೆ ಸಂಸ್ಕರಿಸಿದ ಅನಾನಸ್ ಟಿನ್ ಗಳನ್ನ ಕೊಟ್ಟಿದ್ದರು.

    16 ಅಕ್ಟೋಬರ್ 2020 ರಂದು ಡಾಕ್ಟರ್ ರೋವೂಪ್ ಸಾಹೇಬರು ಇಹ ಲೋಕ ತ್ಯಜಿಸಿದರು.

  ಇವರ ಹತ್ತಿರ ಅವತ್ತು ದಾಸ್ತಾನಿದ್ದ ಕಾಳು ಮೆಣಸು ಒ0ದು ಸಾವಿರ ಕ್ವಿಂಟಾಲ್ ಗೂ ಹೆಚ್ಚು.

   ಕೃಷಿ ಒಂದನ್ನ ಕೈಗಾರಿಕೆ ಮಾಡಿ ಯಶಸ್ವಿ ಆದ ಡಾಕ್ಟರ್ ಅಬ್ದುಲ್ ರೋವೂಪ್ ಅಬ್ದುಲ್ ಕರೀಂ ಶೇಖ್ ಬನವಾಸಿ ಅವರ ಕೃಷಿ ಸಾಧನೆ ಮುಂದಿನ ತಲೆಮಾರಿಗೂ ಒಂದು. ಸಾಧನೆಯ ಕೈಪಿಡಿ ಆಗಿದೆ.

   ರಾಜ್ಯದ ಅನಾನಸ್ ಹಣ್ಣಿನ ಕಿಂಗ್ ರ ಸಾಧನೆ ಸಣ್ಣದಲ್ಲ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...