Skip to main content

3502. ಮಹಾತ್ಮಾ ಗಾಂಧಿಜೀ ಶಿವಮೊಗ್ಗ ಪ್ರವಾಸ

#ಗಾಂಧಿ_ಜಯಂತಿ

#ಮಹಾತ್ಮ_ಗಾಂಧಿ_ಮತ್ತು_ಶಿವಮೊಗ್ಗ_ಜಿಲ್ಲೆ_ನಂಟಿಗೆ_98_ವರ್ಷ.

#ಶಿವಮೊಗ್ಗದ_ನ್ಯಾಷನಲ್_ಲಾಡ್ಜ್_ಶಿವಮೊಗ್ಗದ_ಕೇಂದ್ರ_ಅ0ಚೆ_ಕಛೇರಿ_ಎದರು 

#ನಂತರ_ಅದು_ಬೃಂದಾವನ_ಹೋಟೆಲ್_ಆಗಿತ್ತು

 #ಅಲ್ಲಿ_ಒಂದು_ವಾರ_ಗಾಂದೀಜಿ_ಮತ್ತು_ಕಸ್ತೂರಬಾ_ದಂಪತಿಗಳು_ತಂಗುತ್ತಾರೆ.

#ಶಿವಮೊಗ್ಗದಲ್ಲಿ_ದಿನಾಂಕ_14_ಆಗಸ್ಟ್_1927ರಲ್ಲಿ_ಸಾವ೯ಜನಿಕ_ಸಭೆ_ನಡೆಸುತ್ತಾರೆ.

#ಈ_ದಿನಾಂಕಕ್ಕೆ_ಸರಿಯಾಗಿ_20_ವರ್ಷದ_ನಂತರ_ದೇಶ_ಸ್ವಾತಂತ್ರ_ಪಡೆಯಿತು.

#ಗಾಂಧೀಜಿ_ಶಿವಮೊಗ್ಗ_ಜಿಲ್ಲೆಗೆ_ಕರೆತಂದವರು_ಖ್ಯಾತ_ವಕೀಲರಾದ_ವೆಂಕಟಸುಬ್ಬ_ಶಾಸ್ತ್ರಿಗಳು

#ಗಾಂಧೀಜಿ_ಸಾರ್ವಜನಿಕ_ಸಭೆ_ನಡೆಸಿದ_ಸ್ಥಳ_ಗಾಂಧೀ_ಪಾರ್ಕ್_ಆಗಿದೆ.

#ಗಾಂಧೀಜಿ_ಶಿವಮೊಗ್ಗ_ಬೇಟಿ_ಸ್ಮರಣೆಗಾಗಿ_ಪುರ_ಪ್ರಮುಖರು
#ಮುಖ್ಯ_ವ್ಯಾಪಾರಿ_ಕೇಂದ್ರಕ್ಕೆ_ಗಾಂಧೀಬಜಾರ್_ಎಂದು_ನಾಮಕರಣ_ಮಾಡುತ್ತಾರೆ

#ಗಾಂಧೀ_ದಂಪತಿ_ತಂಗಿದ್ದ_ನ್ಯಾಷನಲ್_ಲಾಡ್ಜ್_ಎದುರು_ಎರೆಡು_ತೆಂಗಿನ_ಸಸಿ_ಗಾಂದೀಜಿ_ಮತ್ತು_ಕಸ್ತೂರಬಾ_ನೆಡುತ್ತಾರೆ.

#ಭದ್ರಾವತಿಯಲ್ಲಿ_ಲಂಬಾಣಿ_ಮಹಿಳಾ_ಸಮಾವೇಶ_ನಡೆಸುತ್ತಾರೆ.

#ಆನಂದಪುರಂ_ಸಾಗರ_ಬಿದನೂರುನಗರ_ತೀರ್ಥಹಳ್ಳಿಗಳಿಗೂ_ಬೇಟಿ_ನೀಡುತ್ತಾರೆ..

#ಜಿಲ್ಲೆಯ_ಈಗಿನ_ತಲೆಮಾರಿಗೆ_ಗಾಂಧೀಜಿ_ಶಿವಮೊಗ್ಗ_ಜಿಲ್ಲಾ_ಪ್ರವಾಸದ_ಮಾಹಿತಿ.

 
#mahatmaghandhi #shivamogga #lambanimahilasamavesha
#sagar #Anandapuram #bidanurunagara #thirthhalli  
#Badravathi.

   ಶಿವಮೊಗ್ಗದ ಖ್ಯಾತ ವಕೀಲರಾದ ವೆಂಕಟ ಸುಬ್ಬಾಶಾಸ್ತ್ರಿಗಳು 1924ರ ಬೆಳಗಾವಿ ಅಧಿವೇಷನದಲ್ಲಿ ಗಾಂಧೀ ಅವರ ಪ್ರಭಾವದಿಂದ ಗಾಂಧೀಜಿಯವರನ್ನು ಶಿವಮೊಗ್ಗಕ್ಕೆ ಕರೆ ತರುವ ಸತತ ಪ್ರಯತ್ನ 1927 ರಲ್ಲಿ ಈಡೇರುತ್ತದೆ.

  ಶಿವಮೊಗ್ಗದ ನ್ಯಾಷನಲ್ ಲಾಡ್ಜ್ (ಶಿವಮೊಗ್ಗದ ಕೇಂದ್ರ ಅ0ಚೆ ಇಲಾಖೆ ಎದರು ನಂತರ ಅದು ಬೃಂದಾವನ ಹೋಟೆಲ್ ಆಗಿತ್ತು) ನಲ್ಲಿ ಒಂದು ವಾರ ಗಾಂದೀಜಿ ಮತ್ತು ಕಸ್ತೂರ ಬಾ ದಂಪತಿಗಳು ತಂಗುತ್ತಾರೆ.

  ವೆಂಕಟಸುಬ್ಬಾ ಶಾಸ್ತ್ರೀಗಳ ಕಾರಿನಲ್ಲಿ ಗಾಂಧೀ ದಂಪತಿಗಳು ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಡುತ್ತಾರೆ.

  14 ಆಗಸ್ಟ್ 1927 ರಲ್ಲಿ ಶಿವಮೊಗ್ಗದ ಉದ್ಯಾನವನದಲ್ಲಿ ಸ್ವಾತಂತ್ರ್ಯದ ಮಹತ್ವ ತಿಳಿಸುವ ಗಾಂಧೀಜಿಯವರ ಸಾರ್ವಜನಿಕ ಸಭೆ ನಡೆಯುತ್ತದೆ ಇದರ ಸ್ಮರಣೆಗಾಗಿ  ಈ ಉದ್ಯಾನ ವನಕ್ಕೆ #ಗಾಂಧೀ_ಪಾರ್ಕ್  ಎ೦ಬ ಹೆಸರು ಇಡಲಾಗುತ್ತದೆ.

 ಈ ಅವಧಿಯಲ್ಲಿ ದಿನಾಂಕ 16- ಆಗಸ್ಟ್ - 1927ರಂದು
ಆನಂದಪುರಂ - ಸಾಗರ - ನಗರ - ತೀರ್ಥಹಳ್ಳಿ - ಭದ್ರಾವತಿ ಪ್ರವಾಸ ಮಾಡುತ್ತಾರೆ ಇದೇ ದಿನ ಸಂಜೆ ಭದ್ರಾವತಿಯಲ್ಲಿ ಲಂಬಾಣಿ ಮಹಿಳೆಯರ ಸಮಾವೇಶದಲ್ಲಿ ಪಾಲ್ಗೊಂಡು ಹಿತವಚನ ಬೋದಿಸುತ್ತಾರೆ.

  ಗಾಂಧೀಜಿ ಶಿವಮೊಗ್ಗಕ್ಕೆ ಬಂದ ನೆನಪಿಗಾಗಿ ಪ್ರಮುಖ ವ್ಯಾಪಾರಿ ಕೇಂದ್ರಕ್ಕೆ #ಗಾಂಧೀ_ಬಜಾರ್ ಎಂದು ನಾಮಕರಣ ಮಾಡಲಾಗಿದೆ.

  ಗಾಂಧೀಜಿ ತಂಗಿದ್ದ ನೆನಪಿಗಾಗಿ ನ್ಯಾಷನಲ್ ಲಾಡ್ಜ್ ಮಾಲಿಕರು ಲಾಡ್ಜ್ ಎದರು ಎರೆಡು ತೆಂಗಿನ ಸಸಿ ಗಾಂದೀಜಿ ಮತ್ತು ಕಸ್ತೂರ ಬಾ ರಿಂದ ನೆಡೆಸಿದ್ದರು.

   1990 ನೇ ಇಸವಿ ತನಕ ಬೃಂದಾವನ ಲಾಡ್ಜ್ ಮತ್ತು ಆ ಎರೆಡು ತೆಂಗಿನ ಮರ ಇತ್ತು ಈಗ ಅವರೆಡೂ ಇಲ್ಲ ಅಲ್ಲಿ ಈಗ ಆದುನಿಕ ವಾಣಿಜ್ಯ ಕಟ್ಟಡ ನಿರ್ಮಾಣವಾಗಿದೆ.

  ಗಾಂಧೀಜಿ ಶಿವಮೊಗ್ಗದಲ್ಲಿ ಗಾಂಧೀ ಪಾರ್ಕಿನಲ್ಲಿ 14 - ಆಗಸ್ಟ್ - 1927 ರ ಸಭೆ ನಡೆಸಿದ ಇಪ್ಪತ್ತು ವರ್ಷಕ್ಕೆ ಸರಿಯಾಗಿ ಅಂದರೆ 14- ಆಗಸ್ಟ್ - 1947 ರ ರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು.

   2 - ಅಕ್ಟೋಬರ್ - 1869 ಗಾಂಧಿ ಜನ್ಮದಿನ ಆದ್ದರಿಂದ ಪ್ರತಿ ವರ್ಷ ಗಾಂಧಿ ಜಯಂತಿ ಆಚರಿಸಲಾಗುತ್ತದೆ ಈ ಸಂದರ್ಭದಲ್ಲಿ  ಮಹಾತ್ಮಾಗಾಂಧಿ ದಿನಚರಿ ಪುಸ್ತಕದಲ್ಲಿ ದಾಖಲಾಗಿರುವ ಶಿವಮೊಗ್ಗ ಪ್ರವಾಸ ಶಿವಮೊಗ್ಗ ಜಿಲ್ಲೆಯ ನಮಗೆಲ್ಲ ಹೆಮ್ಮೆಯ ವಿಷಯ.

   ಗಾಂಧೀಜಿ ದಂಪತಿಗಳು ಶಿವಮೊಗ್ಗ ಜಿಲ್ಲಾ ಪ್ರವಾಸಕ್ಕೆ 98 ವರ್ಷ ಆಯಿತು.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...