Skip to main content

3504. ಹುಲಿ ವೇಷ

#ಹುಲಿ_ವೇಷ

#ಹುಲಿ_ನರ್ತನ

#ಹುಲಿ_ವೇಷದ_ಮೂಲ_ಎಲ್ಲಿ ?

#ದಸರಾ_ಕೃಷ್ಣಜನ್ಮಾಷ್ಟಮಿ_ಗಣೇಶಚತುರ್ಥಿ_ಓಣಂಗಳಲ್ಲಿ_ಹುಲಿವೇಷ

#ದುರ್ಗಾದೇವಿಯ_ವಾಹನ_ಹುಲಿ

#ಮನುಷ್ಯ_ಹುಲಿಯಾಗಿ_ಬದಲಾಗಿ_ದೇವರ_ಸೇವೆಯ_ಹುಲಿವೇಷ,

#ಕರಾವಳಿಯ_ಹುಲಿವೇಷ_ಕೇರಳದ_ಪುಲಿಕಲಿ 


#hulivesh #pulinalike
#bhagnach #durgadevi #dussara #tiger

   ದಸರಾ ಮಹೋತ್ಸವದಲ್ಲಿ ಹುಲಿ ವೇಷ ಹೆಚ್ಚು ಪ್ರಸಿದ್ಧಿ ಪಡೆದಿದೆ ಇದಕ್ಕೆ ಕಾರಣ ದುಗಾ೯ ದೇವಿ ವಾಹನ ಹುಲಿ ಕೂಡ ಆಗಿರುವುದು.

   ಕರಾವಳಿಯ ಹುಲಿ ವೇಷ, ಕೇರಳದ ಪುಲಿ ನಲಿಕೆ, ಒಡಿಷಾದ ಬಾಗ್ ನಾಚ್, ನಾಗಪುರದ ಮಾನವೀ ವಾಗ್, ತಮಿಳುನಾಡಿನ ಪುಲಿಯಟ್ಟಮ್ ಗಳು ಮನುಷ್ಯ ಹುಲಿಯಾಗಿ ಬದಲಾಗಿ ದೇವಿಯ ಸೇವೆ ಮಾಡುವುದು ಆಗಿದೆ.

ನಮ್ಮ ಆನಂದಪುರಂನಲ್ಲಿ ಪ್ರತಿ ದಸರಾದಲ್ಲಿ ಹುಲಿ ವೇಷ ಹಾಕುತ್ತಿದ್ದವರು ಸ್ಕೂಲ್ ಜಗನಾಥಣ್ಣ ಅದೂ ಆಯಿಲ್ ಪೇಯಿಂಟ್ ನಲ್ಲಿ ಹುಲಿಯಾಗಿ ಕುಣಿಯುತ್ತಿದ್ದರು ಜೊತೆಗೆ ಕುಪ್ಪಣ್ಣನ ಹಲಿಗೆಯ ನಕ್ಕ-ಚಕ್ಕ ಆಕರ್ಷಣೆ ಊರಿಗೆಲ್ಲ ಮನೋರಂಜನೆ ಆಗಿರುತ್ತಿತ್ತು.

ಈ ಹುಲಿ ವೇಷ ಏಕೆ? ಅದರ ಮೂಲ ಎಲ್ಲಿ? ಎಂಬ ಪ್ರಶ್ನೆಗಳಿಗೆ ಉತ್ತರ ಕೂಡ ಆಸಕ್ತಿದಾಯಕವಾಗಿದೆ.

ಕರಾವಳಿಯಲ್ಲಿ ನವರಾತ್ರಿಯಲ್ಲಿ ಮನುಷ್ಯ ಹುಲಿಯಾಗಿ ಬದಲಾಗಿ ದೇವಿ ಸೇವೆ ಮಾಡುವುದೇ ಹುಲಿ ವೇಷ ಮತ್ತು ದುರ್ಗಾ ದೇವಿಯ ವಾಹನ ಹುಲಿ ಎಂಬುದು ಇಲ್ಲಿ ಗಮನಾರ್ಹ ವಿಷಯವಾಗಿದೆ.

   200 ವರ್ಷದ ಹಿಂದೆ ಕೇರಳದ ಮಹಾರಾಜ ರಾಮ ವರ್ಮ ಸಕ್ತಾನ ಪಂಪಪುರವನ್ ಕೇರಳದ ದೊಡ್ಡ ಸಂಖ್ಯೆಯ ಕಲಾವಿದರಿಗೆ ತರಬೇತಿ ನೀಡಿ ಹುಲಿ ವೇಷವನ್ನು ಒಣಂ ಹಬ್ಬದ ನಾಲ್ಕನೆ ದಿನ ದೈಯ೯ - ಶೌರ್ಯದ ಸಂಕೇತವಾಗಿ ನಡೆಸಿದ್ದೆ ಮಲೆಯಾಳಂನಲ್ಲಿ ಪುಲಿಕಲಿ ಎಂದೇ ಇವತ್ತಿಗೂ ಪ್ರಸಿದ್ಧಿ ಆಗಿದೆ.

ಹುಲಿ ವೇಷದ ಮೂಲ ಕರ್ನಾಟಕದ ಕರಾವಳಿಯೋ? ಅಥವ ಕೇರಳದ ಪುಲಿಕಲಿಯೇ ಮೂಲವೋ ಎಂಬ ಬಗ್ಗೆ ಚರ್ಚೆಗಳಿದೆ.

   ಆದರೆ ಈ ಹುಲಿ ವೇಷ ಆಯಾ ಪ್ರಾದೇಶಿಕ ಹೆಸರಲ್ಲಿ ಒಡಿಷಾದ ಗ೦ಜಾಂ ಡಿಸ್ಟ್ರಿಕ್ಟ್ ನಲ್ಲಿ ಬಾಗ್ ನಾಚ್ ಅಂತ, ಮಹಾರಾಷ್ಟ್ರದ ನಾಗಪುರದಲ್ಲಿ ಮಾನವಿ ವಾಗ್, ತಮಿಳುನಾಡಿನಲ್ಲಿ ಪುಲಿಯಾಟ್ಟಮ್ ಹೆಸರಿನಲ್ಲಿ ಭಾರತದಲ್ಲಿ ಹುಲಿ ವೇಷಗಳು ನಡೆಯುತ್ತಿದೆ ಅದು ಯಾವಾಗಿಂದ ಪ್ರಾರಂಭ ಆಗಿದೆ ಎಂಬ ಮಾಹಿತಿ ಇಲ್ಲ.

   ನೇಪಾಳದಲ್ಲಿ, ಚೈನಾದಲ್ಲಿ, ಹಾಂಕಾಂಗ್, ಜಪಾನ್, ಥಾಯ್ ಲ್ಯಾಂಡ್ ಅಷ್ಟೆ ಅಲ್ಲ ಕೊಲ೦ಬಿಯಾದ ಕಾರ್ನಿವಲ್ ನಲ್ಲೂ ಹುಲಿ ವೇಷಗಳಿದೆ.

  ಹುಲಿ ವೇಷದಾರಿಗಳು ಬಾರ್ ಗೆ ಹೋಗಿ ಬ್ರಾಂಡಿ ಕುಡಿಯುವ ಪನ್ನಿ ಸಂದರ್ಭಗಳ ಪೋಟೋಗಳು ತಮಾಷೆ ಅನ್ನಿಸಿ ನಗು ತರಿಸುತ್ತದೆ.

   ಒಮ್ಮೆ ಮಂಗಳೂರಿಂದ ಬರುವಾಗ ಕಾಪು ಸಮೀಪದ ಹೋಟೆಲ್ ನಲ್ಲಿ ಊಟ ಮಾಡುವಾಗ 8-10 ಜನರ ಹುಲಿ ವೇಷದ ತಂಡ ಬಾಯಾರಿಸಿಕೊಳ್ಳಲು ಬಾರ್ ಗೆ ಬಂದಾಗ ಎಲ್ಲಾ ಹುಲಿಗಳು ಕುಡಿದ ಪಾನಿಯದ ಬಿಲ್ ನಾನೇ ಕೊಟ್ಟಿದ್ದು ಒಂದು ಗಮ್ಮತ್ತಿನ ಸನ್ನಿವೇಷ ಆಗಿತ್ತು.

ಈಗೆಲ್ಲ ಮೊದಲಿನ ರೀತಿ ದೇಹದ ಚರ್ಮಕ್ಕೆ ಅಪಾಯಕಾರಿ ಆದ ಸೀಸದ ಅಂಶದ ಆಯಿಲ್ ಪೇಯಿಂಟ್ ಬಳಸುವುದಿಲ್ಲ, ಸಿನಿಮಾ ನಾಟಕ ಕ್ಷೇತ್ರದಲ್ಲಿ ಬಳಸುವ ವಾಟರ್ ಬೇಸ್ ಬಣ್ಣಗಳಿಂದ ಈಗಿನ ಹುಲಿ ವೇಷದಾರಿಗಳು ಸೇಪ್ ಆಗಿದ್ದಾರೆ.

ಇತ್ತೀಚಿನ ಕನ್ನಡದ ಚಲನಚಿತ್ರಗಳಲ್ಲೂ ಹುಲಿ ವೇಷಗಳು ಸಿನಿಮಾ ಗಲ್ಲಾಪೆಟ್ಟಿಗೆ ತುಂಬಿಸಿದೆ, ಮೊನ್ನೆ ದಸರಾ ಕೊನೆಯ ದಿನ ನವರಾತ್ರಿಯಂದು ಕನ್ನಡದ ಚಲನಚಿತ್ರ ಮಾರುಕಟ್ಟೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ ಕರಾವಳಿಯ ಶೆಟ್ಟಿ ತ್ರಿಯತ್ರರು ಈ ಹುಲಿ ವೇಷದ ನೃತ್ಯ ಮಾಡಿ ಹುಲಿ ವೇಷಕ್ಕೆ ತಾರಾಮೌಲ್ಯವೂ ತಂದಿದ್ದಾರೆ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...