Skip to main content

3522. ರಣಜಿ ಟ್ರೋಪಿ ಶಿವಮೊಗ್ಗದಲ್ಲಿ

#ಶಿವಮೊಗ್ಗದ_ನೆಹರೂ_ಸ್ಟೇಡಿಯಂನಲ್ಲಿ

#ಕರ್ನಾಟಕ_ಆಂಧ್ರ_ರಣಜಿ_ಕ್ರಿಕೆಟ್

#ನವೆಂಬರ್_1974ರಲ್ಲಿ_ನಡೆದಿತ್ತು

#ಇಎಎಸ್_ಪ್ರಸನ್ನ_ನಾಯಕರು

#ಜಿಆರ್_ವಿಶ್ವನಾಥ್_ಬಿಎಸ್_ಚಂದ್ರಶೇಖರ್_ಬ್ರಿಜೇಶ್_ಪಟೇಲ್_ಸೈಯದ್_ಕಿರ್ಮಾನಿ_ರೋಜರ್_ಬಿನ್ನಿ_ಪ್ರಮುಖ_ಆಟಗಾರರು.

#ಆ_ವರ್ಷ_ಜೈಪುರದಲ್ಲಿ_ರಣಜಿ_ಟ್ರೋಪಿ_ಗೆದ್ದ_ಕರ್ನಾಟಕ_ತಂಡ_ಎರಡನೆ_ದರ್ಜೆ_ರೈಲು_ಬೋಗಿಯಲ್ಲಿ_ಬೆಂಗಳೂರು_ತಲುಪಿತ್ತು

#ನಟಿ_ಜಯಮಾಲ_ಈ_ಪಂದ್ಯ_ವೀಕ್ಷಣೆಗೆ_ಬಂದಿದ್ದರು

#ಆಗ_ರಾಜಕುಮಾರ್_ಜಯಮಾಲ_ಜೋಡಿಯ_ಗಿರಿಕನ್ಯೆ_ಸೂಪರ್_ಹಿಟ್_ಸಿನಿಮಾ


#Ranajicricket #shivamogga #Nehrustadiam #girikanye #jayamala #prasanna #grvishwanath #binny #kirmani #brijeshpatel #bschandrashekar

      ಶಿವಮೊಗ್ಗದಲ್ಲಿ ರಣಜಿ ಪಂದ್ಯ ಇವತ್ತಿನಿಂದ ನಡೆಯಲಿದೆ ಇವತ್ತಿಗೆ 51 ವರ್ಷದ ಹಿಂದೆ 1974ರ ನವೆಂಬರ್ ತಿಂಗಳಲ್ಲಿ ಶಿವಮೊಗ್ಗದಲ್ಲಿ ರಣಜಿ ಪಂದ್ಯ ನಡೆದಿತ್ತು.

    ಬಹುತೇಕ ಈಗಿನ ತಲೆಮಾರಿನವರಿಗೆ ಇದು ಗೊತ್ತಿರಲಿಕ್ಕಿಲ್ಲ ಆ ಕಾಲದಲ್ಲಿ ಇದು ಇಡೀ ಶಿವಮೊಗ್ಗದ ಯುವ ಜನರಿಗೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಬಾರೀ ದೊಡ್ಡ ಸುದ್ದಿ ಆಗಿತ್ತು.

    TV ಇತ್ಯಾದಿ ಇಲ್ಲದ ಕಾಲದಲ್ಲಿ ಕೇವಲ ರೇಡಿಯೋ ಕಾಮೆಂಟರಿಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಮಾತ್ರ ಕ್ರಿಕೆಟ್ ಆಟಗಾರರನ್ನ ನೋಡಿ ತಿಳಿದಿದ್ದ ಅಭಿಮಾನಿಗಳಿಗೆ ಅವರನ್ನೆಲ್ಲ ಶಿವಮೊಗ್ಗದ ನೆಹರೂ ಸ್ಟೇಡಿಯಂ ನಲ್ಲಿ ಪ್ರತ್ಯಕ್ಷ ನೋಡುವ ಮತ್ತು ಅವರ ಆಟದ ರಂಜನೆ ಅನುಭವಿಸುವ  ಅವಕಾಶ ಈ ರಣಜಿ ಪಂದ್ಯ ನೀಡಿತ್ತು.

    ಕರ್ನಾಟಕ ಮತ್ತು ಆಂಧ್ರ ಪ್ರದೇಶದ ತಂಡಗಳ ಈ ಪಂದ್ಯ ನಡೆದಿದ್ದು ಶಿವಮೊಗ್ಗದ #ನೆಹರೂ_ಸ್ಟೇಡಿಯಂ ನಲ್ಲಿ.

    ನನಗೆ ಆಗ ಹತ್ತು ವರ್ಷದ ಪ್ರಾಯ ಕ್ರಿಕೆಟ್ ರೇಡಿಯೋದಲ್ಲಿ ಕಾಮೆಂಟರಿ ಮಾತ್ರ ಕೇಳುವ ಅವಕಾಶದ ಆ ದಿನಗಳಲ್ಲಿ ಖ್ಯಾತ ಕ್ರಿಕೆಟ್ ತಾರೆಗಳಾದ ಪ್ರಸನ್ನ, ಚಂದ್ರಶೇಖರ್, ವಿಶ್ವನಾಥ್, ಕಿರ್ಮಾನಿ, ಬ್ರಿಜೆಶ್ ಪಟೇಲ್, ಬಿನ್ನಿ ಇವರನ್ನೆಲ್ಲ ಪ್ರತ್ಯಕ್ಷ ನೋಡುವ ಅವಕಾಶ ನನಗೆ ಸಿಕ್ಕಿತ್ತು.

   ಆ ಕಾಲದ ಆನಂದಪುರಂನ ಖ್ಯಾತ ಸುಭಾಷ್ ಕಬ್ಬಡಿ ತಂಡದ ಕ್ಯಾಪ್ಟನ್ ನನ್ನ ಹಿರಿಯ ಮಿತ್ರರಾದ ಕ್ಲೈಮೆಂಟ್ ರೆಬೆಲೋ ನನಗೆ ಶಿವಮೊಗ್ಗದ ನೆಹರು ಸ್ಟೇಡಿಯಂಗೆ ಈ ರಣಜಿ ಪಂದ್ಯ ತೋರಿಸಲು ಕರೆದೊಯ್ದಿದ್ದರು.

    ಮೂರು ದಿನ ಈ ರಣಜಿ ಪಂದ್ಯ ನೋಡಿದ್ದೆ ಬೌಂಡರಿ ಗೆರೆ ಸಮೀಪದ ನೆಲದ ಮೇಲೆ ಕುಳಿತು ಕ್ರಿಕೆಟ್ ಆಸ್ವಾದಿಸಿದ್ದೆ,ಈ ಪಂದ್ಯಕ್ಕೆ ಪ್ರವೇಶ ಶುಲ್ಕವಿತ್ತು ಮತ್ತು ಸೀಮಿತ ಸಂಖ್ಯೆಯ ಗ್ಯಾಲರಿ ಆಗ ಇತ್ತಷ್ಟೇ ಆದ್ದರಿಂದ ಕ್ರಿಕೆಟ ಅಭಿಮಾನಿಗಳಿಗೆ ವಿಶೇಷ ಸೌಲಭ್ಯ ಬೇಕೆನ್ನಿಸಿರಲಿಲ್ಲ.

   ಹತ್ತಿರದಿಂದಲೇ ಈ ಕ್ರಿಕೆಟ್ ಅತಿರಥ ಮಹಾರಥರನ್ನ ನೋಡಿದ್ದೆ, ಈ ಪಂದ್ಯ ನೋಡಲು ಇಡೀ ಸ್ಟೇಡಿಯಂ ತುಂಬಿ ತುಳುಕಿತ್ತು.

   ಆಗ ರಾಜಕುಮಾರ್ ಮತ್ತು ಜಯಮಾಲ ಜೋಡಿಯ #ಗಿರಿಕನ್ಯೆ ಸಿನಿಮಾ ಸೂಪರ್ ಹಿಟ್ ಸಿನಿಮಾ ಆಗಿತ್ತು.

   ಈ ರಣಜಿ ಪಂದ್ಯದ ಮಧ್ಯ ನಟಿ ಜಯಮಾಲ ಸ್ಟೇಡಿಯಂ ಗೆ ಬಂದು ಒಂದು ಸುತ್ತು ಕೈ ಬೀಸುತ್ತಾ ಸುತ್ತಿದರು ಅವರನ್ನ ನೋಡಿ ಇಡೀ ಸ್ಟೇಡಿಯಂ ಪ್ರೇಕ್ಷಕರು ರೋಮಾಂಚಿತರಾಗಿ ಕರತಾಡನೆ ಘೋಷಣೆಗಳಿಂದ ಕ್ರಿಕೆಟ್ ಪಂದ್ಯ ಕೆಲ ಕ್ಷಣ ನಿಂತಿತ್ತು.

   ಬಹುಶಃ ಇದೆಲ್ಲ ಹೆಚ್ಚು ಕ್ರಿಕೆಟ್ ಪ್ರೇಕ್ಷಕರ ಆಕರ್ಷಿಸುವ ಮಾರ್ಕೆಟ್ ತಂತ್ರ ಅಂತ ಆಗ ಗೊತ್ತಿರಲಿಲ್ಲ.

    ಆ ವರ್ಷ ಪ್ರಸನ್ನರ ನಾಯಕತ್ವದಲ್ಲಿ ರಾಜಸ್ಥಾನದ ಜೈಪುರದಲ್ಲಿ ರಣಜಿ ಟ್ರೋಪಿ ಕರ್ನಾಟಕ ಗೆದ್ದಿತ್ತು.

    ಟ್ರೋಪಿ ಜೊತೆಗೆ ಕರ್ನಾಟಕ ಕ್ರಿಕೆಟ್ ತಂಡ ರೈಲಿನ ಎರಡನೆ ದರ್ಜೆ ಡಬ್ಬಿಯಲ್ಲಿ ಬೆಂಗಳೂರಿಗೆ ಬಂದು ಸೇರಿದ್ದು ನನಗೆ ಬುದ್ಧಿ ಬಂದಮೇಲೆ ಓದಿದ್ದು ಆಗ ಕ್ರಿಕೆಟ್ ನಿಜವಾದ ಕ್ರೀಡಾ ಸ್ಪೂರ್ತಿಯ ಶ್ರೀಮಂತಿಗೆ ಹೊಂದಿದ್ದು ಆದರೆ ಹಣಕಾಸಿನ ಬಡತನ ಕ್ರಿಕೆಟ್ ಮಂಡಳಿಗಿತ್ತು.

      ಈಗ ಕಾಲ ಬದಲಾಗಿದೆ ಅದು ವಿಶ್ವದ ಶ್ರೀಮಂತ ಕ್ರೀಡೆ ಆಗಿದೆ ಇದೆಲ್ಲ ಇವತ್ತು ಶಿವಮೊಗ್ಗದಲ್ಲಿ ನಡೆಯುವ ರಣಜಿ ಕ್ರಿಕೆಟ್ ಮ್ಯಾಚ್ ನಿಂದ ನೆನಪಾಯಿತು.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...