#ಶಿವಮೊಗ್ಗ_ಜಿಲ್ಲೆಯ_ಕುಮುದ್ವತಿ_ನದಿ
#ತುಂಗಾಭದ್ರಾ_ನದಿಯ_ಉಪನದಿ
#ಶಿಕಾರಿಪುರ_ತಾಲ್ಲೂಕಿನ_ಅಂಜನಾಪುರದ_ಆಣೆಕಟ್ಟು
#ಮದಗಮಾಸೂರು_ಕೆರೆಗೆ_ತುಂಬಿಸುತ್ತದೆ
#ಹರಿಹರದ_ಮುದೇನೂರು_ಸಮೀಪ_ತುಂಗಾಭದ್ರಾ_ನದಿಗೆ_ಸೇರುತ್ತದೆ.
#ಕುಮುದ್ವತಿ_ಅಂದರೆ_ಕಮಲದ_ಹೂವು_ಎಂಬ_ಅರ್ಥ_ಕೂಡ_ಇದೆ.
#ಬಿಲ್ಲೇಶ್ವರ_ಐದು_ನದಿಗಳ_ಉಗಮ_ಸ್ಥಾನ_ಎಂಬುದು_ಆಶ್ಚಯ೯_ಆದರೂ_ಸತ್ಯ
#shimogadistrictriver #kumadvathiriver #hosanagara #karnatakastateirrigationdept #Shikaripura #anjanapuradam #madagkere
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಸಮೀಪದ ಬಿಲ್ಲೇಶ್ವರ ದೇವಾಲಯದ ಸಮೀಪದ ಬೆಟ್ಟದಲ್ಲಿ ಕುಮುದ್ವತಿ ನದಿ ಉಗಮವಾಗಿ 96 ಕಿ.ಮಿ. ಹರಿದು ತುಂಗಾಭದ್ರಾ ನದಿ ಸೇರುತ್ತದೆ.
ಈ ನದಿಗೆ ಶಿಕಾರಿಪುರ ತಾಲ್ಲೂಕಿನ ಅಂಜನಾಪುರದಲ್ಲಿ 1936 ರಲ್ಲಿ 1600 ಅಡಿ ಉದ್ದದ ಮತ್ತು 23 ಅಡಿ ಎತ್ತರದ ಮಣ್ಣಿನ ಏರಿಯಾ ಆಣೆಕಟ್ಟು ಮೈಸೂರು ಮಹಾರಾಜರು ನಿರ್ಮಿಸಿದ್ದರು.
1996-97 ರಲ್ಲಿ ಆಗಿನ ಜೆ.ಹೆಚ್.ಪಟೇಲರ ಸರ್ಕಾರ 200 ಕೋಟಿ ವೆಚ್ಚದಲ್ಲಿ ಈ ಅಣೆಕಟ್ಟು ನವೀಕರಣಗೊಂಡಿತು.
ಬಿಲ್ಲೇಶ್ವರದಲ್ಲಿ ಕುಮುದ್ವತಿ ನದಿ ಜೊತೆಗೆ ಕುಶಾವತಿ ನದಿ ಕೂಡ ಹುಟ್ಟುತ್ತದೆ ಅದು ತೀರ್ಥಹಳ್ಳಿ ಮೂಲಕ ತುಂಗಾ ನದಿ ಸೇರುತ್ತದೆ ಮತ್ತು ಇಲ್ಲಿನ ಆದಿಶೇಷನ ಹಿಂಬಾಗದಲ್ಲಿ ಶರಾವತಿ ನದಿ ಸೇರುವ ಹರಿದ್ರಾವತಿ, ಶರ್ಮಣ್ವತಿ ಮತ್ತು ಶರ್ಮಣಾವತಿ ಕೂಡ ಉದ್ಭವ ಆಗುತ್ತದೆ.
ಶಿವಮೊಗ್ಗ ಜಿಲ್ಲೆಯ ಬಿಲ್ಲೇಶ್ವರ ಐದು ನದಿಗಳ ಉಗಮ ಸ್ಥಾನ ಎಂಬುದು ವಿಶೇಷ ಸುದ್ದಿ ಹಾಗೂ ಜೈನ ಕಾಶಿ ಎಂಬ ಪ್ರತೀತಿಯ ಹುಂಚಾದಲ್ಲಿ ಇರುವ ಜೈನ ಬಸದಿ ಕೂಡ ಐದು.
ಕುಮುದ್ವತಿ ಅಂದರೆ ಕಮಲದ ಹೂವು ಎಂಬ ಅರ್ಥ ಕೂಡ ಇದೆ.
Comments
Post a Comment