Skip to main content

3529. ಶಿವಮೊಗ್ಗದಲ್ಲಿ ಮೊದಲ ರಣಜಿ ಕ್ರಿಕೆಟ್

#ಶಿವಮೊಗ್ಗದಲ್ಲಿ_1974ರಲ್ಲಿ_ನಡೆದ_ರಣಜಿ_ಟ್ರೋಪಿ

#ನೆಹರೂ_ಸ್ಟೇಡಿಯಂನಲ್ಲಿ_ಮೂರು_ದಿನ_ನಡೆದಿತ್ತು.

#ದೇಶದ_ಟೆಸ್ಟ್_ಅರ್ದ_ತಂಡ_ರಣಜಿ_ತಂಡವಾಗಿತ್ತು

#ಅದೇ_ವರ್ಷ_ಜೈಪುರದಲ್ಲಿ_ರಣಜಿ_ಫೈನಲ್_ಟ್ರೋಪಿ_ಈ_ತಂಡ_ಗೆದ್ದಿತ್ತು.

#ಪ್ರಸನ್ನ_ಕ್ಯಾಪ್ಟನ್

#ಪ್ರಸನ್ನ_ಜಿ_ಆರ್_ವಿಶ್ವನಾಥರು_ಶಿವಮೊಗ್ಗದವರು.


#Cricket #Ranaji #Shivamogga #Nehrustadium 

  1974ರ ನವೆಂಬರ್ ನಲ್ಲಿ ಶಿವಮೊಗ್ಗದಲ್ಲಿ ನಡೆದ ರಣಜಿ ಟ್ರೋಪಿ ನನ್ನ 10ನೇ ವಯಸ್ಸಿನಲ್ಲಿ ನೋಡಿದ್ದು ನನ್ನ ವಿಶೇಷ ಅನುಭವ.

   ಅವತ್ತಿನ ರಣಜಿ ತಂಡದಲ್ಲಿ ಕರ್ನಾಟಕ ಪ್ರತಿನಿಧಿಸಿದ ಬಹುತೇಕರು ನಮ್ಮ ದೇಶದ ಟೆಸ್ಟ್ ಕ್ರಿಕೆಟ್ ತಂಡದಲ್ಲಿದ್ದರು.

    ಅದೇ ವರ್ಷ ಜೈಪುರದಲ್ಲಿ ನಡೆದ ರಣಜಿ ಫೈನಲ್ ನಲ್ಲಿ ಕರ್ನಾಟಕ ಟ್ರೋಪಿ ಗೆದ್ದಿತ್ತು.

   ಟ್ರೋಪಿಯೊಂದಿಗೆ ಕರ್ನಾಟಕ ತಂಡ ರಾಜಸ್ಥಾನದ ಜೈಪುರದಿಂದ ದ್ವಿತಿಯ ದರ್ಜೆ ರೈಲು ಡಬ್ಬಿಯಲ್ಲಿ ಪ್ರಯಾಣಿಸಿ ಬೆಂಗಳೂರು ತಲುಪಿತ್ತು.

    ಇನ್ನೊಂದು ವಿಶೇಷ ಅಂದರೆ 1974ರಲ್ಲಿ ಶಿವಮೊಗ್ಗದಲ್ಲಿ ಜ್ಯೂವೆಲ್ ರಾಕ್ ಹೋಟೆಲ್ ಕಾರ್ಯಾರಂಭ ಮಾಡಿತ್ತು ಆದರೆ ಅದರ ಬಾಡಿಗೆ ದುಬಾರಿ ಎಂದು ಇಡೀ ರಣಜಿ ತಂಡವನ್ನು ಶಿವಮೊಗ್ಗದ ದುರ್ಗಾ ಲಾಡ್ಜ್ ನಲ್ಲಿ ಉಳಿಸಿದ್ದರಂತೆ.

   ಅವತ್ತಿನ ಪಂದ್ಯದ ಪ್ರವೇಶ ದರ ಎರೆಡು ರೂಪಾಯಿ, ಮೂರು ದಿನದ ಪಂದ್ಯದ ಸೀಸನ್ ಟಿಕೇಟ್ ದರ ಐದು ರೂಪಾಯಿ.

     ನನ್ನ ಲೇಖನ ಓದಿದ ಕೆಲವರ ಪ್ರತಿಕ್ರಿಯೆ ಇನ್ನೊಮ್ಮೆ
  #ರವೀಶ್_ನಿಟ್ಟೂರು ಪ್ರತಿಕ್ರಿಯೆ...
       ನಾನು , ನನ್ನ ಚಿಕ್ಕಪ್ಪ , ಅವರ ಮಗ ಮೂರೂ ದಿನ ನೋಡಿದ್ದೆವು . ಮೂರನೇ ದಿನ ಬೇಗ ಮುಗಿದಿತ್ತು 👍

#ತುಂಬೆಸುಬ್ರಾಯರ_ಮೊಮ್ಮಗ ನಿವೃತ್ತ ಪ್ರಿನ್ಸಿಪಾಲ್ #ನರಹರಿ ಪ್ರತಿಕ್ರಿಯೆ...
     ಆ ಪಂದ್ಯಕ್ಕೆ ನಾನೂ ಹೋಗಿದ್ದೆ.

ಸಾಗರದ ಖ್ಯಾತ ಕ್ರಿಕೆಟ್ ಪಟು #ನಾಗೇಂದ್ರ_ಪಂಡಿತ್ ಪ್ರತಿಕ್ರಿಯೆ...
    I watched that match for all the three days.

ನಿವೃತ್ತ DFO #ಲಕ್ಷ್ಮಿನಾರಾಯಣರ ಪ್ರತಿ ಕ್ರಿಯೆ....
ಆಗಷ್ಟೇ jewel rock hotel ಶುರುವಾಗಿತ್ತು ಅದು costly ಅಂತ ಆಟಗಾರರು ದುರ್ಗಾ ಲಾಡ್ಜಿನಲ್ಲಿ ತಂಗಿದ್ದರು.

#ಪ್ರಶಾಂತ್_ಹೆಗಡೆ ಪ್ರಸಿದ್ದ ಜಾದೂಗಾರರ ಪ್ರತಿಕ್ರಿಯೆ...
   ನಾನು ನೋಡಿದ್ದೆ,
ಒಂದು ದಿನದ ಟಿಕೆಟ್ ಗೆ ಎರಡು ರೂ ಸೀಜನ್ ಟಿಕೆಟ್ ಗೆ ಐದು ರೂ ಇತ್ತು.
ನಾನು ಸೀಜನ್ ಟಿಕೆಟ್ ಖರೀದಿ ಮಾಡಿ ನೋಡಿದ್ದೆ,ಕರ್ನಾಟಕ ರಣಜಿ ತಂಡದಲ್ಲಿ ಅರ್ದಕ್ಕೂ ಹೆಚ್ಚು ಜನ ಇಂಡಿಯಾ ತಂಡದ ಟೆಸ್ಟ್ ಮ್ಯಾಚ್ ನ ಆಟಗಾರರು ಇದ್ದರು. ಆಗಿನ ಕಾಲದಲ್ಲಿ ಹೆಚ್ಚಾಗಿ ನಮ್ಮ ‌ಕರ್ನಾಟಕದವರೇ ಟೆಸ್ಟ್ ಮ್ಯಾಚ್ ತಂಡದಲ್ಲಿ ಇದ್ದರು.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...