Skip to main content

Blog number 3560.ಮಲೆನಾಡಿನ ಅಪ್ಪೆ ಮಿಡಿ ಭಾಗ -1

#ಮಲೆನಾಡಿನ_ಅಪ್ಪೆ_ಮಾವಿನ_ಮಿಡಿ_ಭಾಗ_1

#ಅರಸಾಳಿನ_ಹೊಳೆಸಾಲಿನ_ಅಪ್ಪೆ_ಮಿಡಿ_ಬಂತು

#ಮಿಡಿ_ಉಪ್ಪಿಗೆ_ಹಾಕುವ_ನನ್ನ_ಕೆಲಸ_ನೋಡಿ

#ಈ_ಅಪ್ಪೆ_ಮಿಡಿ_ಉಪ್ಪಿನಕಾಯಿಗೆ_GI_Tag_ದೊರೆತಿದೆ.

#ಅಪ್ಪೆ_ಮಿಡಿ_ಸ್ವಾಂಪ್_ಬಿಡುಗಡೆ_ಆಗಿದೆ


#Tendermango #APPEMIDI #Mavinakayi #PickleLovers #pickles #mangopickle 
#arasalu 

         ಮಾವಿನ ಅಪ್ಪೆ ಮಿಡಿ ಉಪ್ಪಿನಕಾಯಿ ವಿಶಿಷ್ಟ ಮತ್ತು ವಿಶೇಷ ಇದು ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡು ಭಾಗವಾದ ಕೆಲವೇ ತಾಲ್ಲೂಕಿನಲ್ಲಿ ಮಾತ್ರ ಬಳಕೆ ಮಾಡುತ್ತಾರೆ.

   ಈ ಪ್ರದೇಶದ ಜನ ವಿಶ್ವದ ಯಾವುದೇ ಮೂಲೆಗೆ ಹೋದರೂ ಈ ಮಾವಿನ ಮಿಡಿ ಉಪ್ಪಿನಕಾಯಿ ಮರೆಯುವುದಿಲ್ಲ.

       ಮಾವಿನ ಮರದಲ್ಲಿ ಮಾವಿನ ಹೂವು ಕಾಯಿಯಾಗಿ ಒಂದು ಹದಕ್ಕೆ ಬಂದಾಗ, ಚಿಗುರಾದ ಮತ್ತು ಮಾವಿನ ಮಿಡಿಯ ಒಳಗೆ ಬೀಜ ಎಳೆಯದಾಗಿರುವಾಗಲೇ ಹಾಗೂ ಅದರ ತೊಟ್ಟಿನಲ್ಲಿ ಮಾವಿನ ಕಾಯಿ ಸೊನೆ ಚಿಮ್ಮುವಾಗ ಕೊಯ್ಯುತ್ತಾರೆ.

    ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ #ಅರಸಾಳಿನ ಹೊಳೆಸಾಲಿನ ಮಾವಿನ ಅಪ್ಪೆ ಮಿಡಿ ಉತ್ಕೃಷ್ಟ ಎಂಬ ಬ್ರಾಂಡ್ ಆಗಿರುವುದರಿಂದ ಇದಕ್ಕೆ ಬೇಡಿಕೆ ಜಾಸ್ತಿ.

    ಮೊದಲೆಲ್ಲ ಮಾವಿನ ಮಿಡಿ ಎಣಿಸಿ ಸಾವಿರ ಮಿಡಿಗೆ ಇಷ್ಟು ದರ ಎಂದು ಮಾರಾಟಗಾರರು ಬೆಲೆ ನಿಗದಿ ಮಾಡುತ್ತಿದ್ದರು ಈಗ ಕಾಲ ಬದಲಾಗಿದ್ದು ಮಾವಿನ ಮಿಡಿ ಕಿಲೋ ಲೆಖ್ಬದಲಿ ತಕ್ಕಡಿಯಲ್ಲಿ ತೂಗಿ ಮಾರಾಟ ಮಾಡುತ್ತಾರೆ.

     ಈ ವರ್ಷದ ಅರಸಾಳು ಹೊಳೆ ಸಾಲಿನ ಮಾವಿನ ಮಿಡಿ ಕಿಲೋಗೆ ರೂ 500 ರ ಹತ್ತಿರ ಇದೆ, ಇದರಲ್ಲಿ ಜೀರಿಗೆ ಮಿಡಿಗೆ ನೂರಿನ್ನೂರು ಇನ್ನೂ ಜಾಸ್ತಿ.

    ಅಪ್ಪೆ ಮಿಡಿ ಪ್ರಿಯರು ಬೆಲೆಗೆ ಯೋಚಿಸುತ್ತಾ ಕಡಿಮೆ ಬೆಲೆಗೆ ಖರೀದಿಸಲು ಕಾಯುತ್ತಾ ಇದ್ದರೆ ಮಾವಿನ ಮಿಡಿ ಕಾಲ ಮುಗಿದು ಮಾವಿನ ಹಣ್ಣಿನ ಸೀಸನ್ ಬರುತ್ತದೆ.

   ನಾನು ಖರೀದಿಸಿದ ಅರಸಾಳಿನ ಹೊಳೆಸಾಲಿನ ಈ ಅಪ್ಪೆ ಮಿಡಿಯಲ್ಲಿ ಆಪ್ತರಿಗೂ ಕಳಿಸಿ ನನ್ನ ಪಾಲು ಉಪ್ಪಿಗೆ ಹಾಕುವ ಕೆಲಸ ಮಾಡಿದೆ ಮತ್ತು ಜೀರಿಗೆ ಮಿಡಿಗಾಗಿ ಕಾದಿದ್ದೇನೆ.

   ನಂತರ ಅದನ್ನು ತೊಟ್ಟು ಸಮೇತ ಬಿಡಿಸಿ ಒಣ ಬಟ್ಟೆಯಿಂದ ಬರೆಸಿ ಕ್ಯಾನ್, ಪಿಂಗಾಣಿ ಅಥವ ಗಾಜಿನ ಭರಣಿಯಲ್ಲಿ ಪದರ ಪದರವಾಗಿ ಮಿಡಿ ಮತ್ತು ಉಪ್ಪು ಹರಡಿ ಮುಚುಳ ಬಿಗಿ ಮಾಡಬೇಕು.

    ಹರಳು ಉಪ್ಪು ಬಾಂಡಲಿಯಲ್ಲಿ ಚಟಪಟ ಎನ್ನುವ ತನಕ ಹುರಿದು ತಣಿಸಿಕೊಳ್ಳ ಬೇಕು.

     ಎರೆಡು ದಿನದ ನಂತರ ಈ ಕ್ಯಾನ್ ಗಳನ್ನ ಕುಲುಕ ಬೇಕು ಅಥವ ಉಪ್ಪಿನ ಕಾಯಿ ತಯಾರಿಕೆಗೆ ಇರುವ ಮರದ ಸೌಟಿನಿಂದ ಮಿಡಿಗಳಿಗೆ ಪೆಟ್ಟಾಗದಂತೆ ಉಪ್ಪು ಮಿಡಿ ಮಿಶ್ರ ಮಾಡಬೇಕು.

    ಒಂದು ವಾರದಲ್ಲಿ ಈ ಮಿಡಿಗಳು ಚಟ್ಟಾಗುತ್ತದೆ ನಂತರ ಅದನ್ನ ತೆಗೆದು ಉತ್ತಮವಾದ ಮಿಡಿ ಆರಿಸಿ ಅದಕ್ಕೆ ಕಾರ ಹಾಕುವುದು ಇನ್ನೊಂದು ಹಂತದ ಕೆಲಸ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...