Skip to main content

Blog 3578. ಪಂಚೆ

#ಪಂಚೆ_ಧರಿಸಿ_ಬಂದರೆ_ಪ್ರತಿಷ್ಟಿತ_ಕ್ಲಬ್_ಪ್ರವೇಶ_ನಿರಾಕರಿಸುತ್ತದೆ.

#ನಾನ್ಯಾಕೆ_ಪಂಚೆಗೆ_ಬದಲಾದೆ_ಗೊತ್ತಾ...

#ನಾನು_ಪ್ಯಾಂಟಿನಿಂದ_ಪಂಚೆಗೆ_ಬದಲಾಗಿ_ಹನ್ನೊಂದು_ವರ್ಷ_ಆಯಿತು

#ವಿಚಾರವಾದಿ_ಹೆಚ್_ಎನ್_ನರಸಿಂಹಯ್ಯ_ಮಾಜಿ_ಪ್ರಧಾನಿ_ದೇವೇಗೌಡರು

#ಮುಖ್ಯಮಂತ್ರಿ_ಸಿದ್ಧರಾಮಯ್ಯ_ಪಂಚೆ_ಪ್ರಿಯರು

#ಶಿವಮೊಗ್ಗದ_ಹಿರಿಯ_ಸಮಾಜವಾದಿ_ಪಿ_ಪುಟ್ಟಯ್ಯನವರ_ಉಡುಗೊರೆ_ಪಂಚೆಗಳು.


#Dothi #Panche #Traditional #Ramraj #Sourhindian #Temple #Religious.

   ಶೃಂಗೇಶ್ ಹತ್ತಿರ ಪುಸ್ತಕಗಳು ಮತ್ತು  ಬೆಲೆ ಬಾಳುವ ಎರೆಡು ಬಿಳಿ ಪಂಚೆಗಳನ್ನು ಉಡುಗೊರೆ ಆಗಿ ಕಳಿಸಿದ್ದಾರೆ ಅಂತ ಹಿಂದಿನ ಲೇಖನದಲ್ಲಿ ಬರೆದಿದ್ದೆ.

   ಆಗಾಗ್ಗೆ ಪುಟ್ಟಯ್ಯನವರು ನೀಡುವ ಪಂಚೆಗಳು ನನಗೆ ಪಂಚ ಪ್ರಾಣ ಅಂತವರು ನೀಡುವ ವಸ್ತ್ರದಾನ ಸ್ಟೀಕಾರ ಶೇಷ್ಟವೂ ಹೌದು.

   2013ರ ತನಕ ಪ್ಯಾಂಟ್ ಶರ್ಟ್, ಖಾದಿ ಜುಬ್ಬಾ ಪೈಜಾಮದಾರಿ ಆಗಿದ್ದೆ, 1980ರ ತನಕ SSLC ವರೆಗೆ ಚಡ್ಡಿ ಅಂಗಿದಾರಿ ಆಗಿದ್ದು ಮೊದಲ ವರ್ಷದ ಡಿಪ್ಲೋಮ ತರಗತಿಗೆ ಸೇರುವಾಗ ಆನಂದಪುರಂನ ಸರ್ಕಾರಿ ಆಸ್ಪತ್ರೆ ಎದುರಿನ ಖ್ಯಾತ ಟೈಲರ್ #ವಾಜೀದ್_ಸಾಬರಿಂದ ನನಗೆ ಪ್ಯಾಂಟ್ ಶರ್ಟ್ ನನ್ನಣ್ಣ ಹೊಲಿಸಿ ಕೊಟ್ಟಿದ್ದ.

   2012ರಲ್ಲಿ ನಮ್ಮ ಮೊದಲ ಲಾಡ್ಜ್ ಪ್ರಾರಂಬಿಸಿದಾಗ ನಾನು ಬಣ್ಣ ಬಣ್ಣದ ಲುಂಗಿ ಧರಿಸಿ ಆಫೀಸಿಗೆ ಹೋಗುತ್ತಿದ್ದೆ.

   ಒಂದು ದಿನ ಬಿಲ್ಡರ್ ಆಗಿರುವ ಮಿತ್ರರಾದ #ರವೀಂದ್ರಗಂಗೊಳ್ಳಿ ಬಂದವರು ನನ್ನ ಲುಂಗಿದಾರಣೆಗೆ ಆಕ್ಷೇಪಿಸಿದರು.

    ಪ್ರಂಟ್ ಆಫೀಸಿನಲ್ಲಿರುವವರ ಡ್ರೆಸ್ ಕೋಡ್ ಜ್ಞಾಪಿಸಿದ್ದರು, ಪಂಚೆಯೇ ಧರಿಸುವುದಾದರೆ ಶುದ್ಧ ಬಿಳಿ ಪಂಚೆ ಧರಿಸಿ ಆಫೀಸಿಗೆ ಬನ್ನಿ ಅಂದಿದ್ದೇ ನನಗೆ ಪ್ಯಾಂಟಿನಿಂದ ಖಾಯಂ ಪಂಚೆದಾರಿಯಾಗಲು ಕಾರಣ ಆಯಿತು.

    ಮೊದಲ ಬಾರಿಗೆ ಪಂಚೆ ಧರಿಸಿ ಶಿವಮೊಗ್ಗಕ್ಕೆ ಹೋದಾಗ ಒಂದು ರೀತಿ ಮುಜುಗರ ನಾಚಿಕೆ ಅನ್ನಿಸಿತ್ತು ಆದರೆ ಕಳೆದ 11 ವರ್ಷದ ಅಭ್ಯಾಸದಿಂದ ಪ್ಯಾಂಟ್ ಬಳಸುವುದು ಸಂಪೂರ್ಣ ತ್ಯಜಿಸಿದೆ.

   ಭಾರತೀಯ ಉಪಖಂಡದ ಸಾಂಪ್ರದಾಯಿಕ ಉಡುಪಾದ ಪಂಚೆ ಭಾರತ ಮತ್ತು ನೇಪಾಳದಲ್ಲಿ ಹೆಚ್ಚು ಜನಪ್ರಿಯವಾಗಿದೆ.

   ಪಂಚೆ-ದೋತಿ-ವೇಷ್ಠಿ - ಮರ್ಧಾನಿ - ಚಾದ್ರಾ - ದೋತರ್-ಜೈನ್ ಬೋಹ್ - ಕಚ್ಚೆಪಂಜೆ-ದೋತ್ರ - ಚುರಿಯಾ - ದುತಿ-ದೊಂಪರ್ - ಅಂಗೋಸ್ತರ್ - ಮುಂಡ - ಪಂಚ- ವೇಟ್ಟ - ದೌಟಿ ಅಂತೆಲ್ಲ ಭಾರತೀಯ ಬಾಷೆಗಳಲ್ಲಿ ಕರೆಯುತ್ತಾರೆ.

   ಪಂಚೆ ತಯಾರಿಸುವ ರಾಮರಾಜ್ ನಂತಹ ಪ್ರಸಿದ್ಧ ಕಂಪನಿಗಳು ಸಾವಿರಾರು ಕೋಟಿಯ ದೊಡ್ಡ ಉದ್ಯಮವಾಗಿದೆ.

   ಪಂಚೆ ಗಳಿಗೆ ಪ್ರಸಿದ್ಧ ಸಿನಿಮಾ ತಾರೆಯರು ರೂಪದರ್ಶಿಗಳಾಗಿದ್ದಾರೆ.

   ಪಂಚೆ ಧರಿಸಿ ಬರುವವರಿಗೆ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಪ್ರವೇಶ ಕೂಡ ನಿರ್ಬಂದವಾಗಿಸಿದ್ದಾರೆ.

   #ಮುಸ್ಲಿಂರ_ಮೆಕ್ಕಾ_ಯಾತ್ರೆಗೆ ಇರುವ ಡ್ರೆಸ್ ಕೋಡ್ ಕೂಡ ಬಿಳಿಯ ದೋತಿ ಮತ್ತು ಬಿಳಿಯ ಹೊದೆಯುವ ಶಾಲು ಮಾತ್ರ.

   ಇದೇ ರೀತಿ #ಹಿಂದೂ_ಧರ್ಮದಲ್ಲಿ ಮತ್ತು #ಜೈನ_ಧರ್ಮದಲ್ಲಿ ಆಚರಣೆಯಲ್ಲಿದೆ.

  ಹೊಲಿಗೆ ಮಾಡದ ಬಟ್ಟೆಗಳು ಮಾಲಿನ್ಯಕ್ಕೆ ಕಡಿಮೆ ಪ್ರವೇಶ ಸಾಧ್ಯ ಎಂಬ ನಂಬಿಕೆ ಈ ಮೂರು ಧರ್ಮಗಳಲ್ಲಿದೆ.

  #ಹರೇ_ಕೃಷ್ಣ_ಪಂಥದ ಡ್ರೆಸ್ ಕೋಡ್, ಪಂಜಾಬ್ ರೈತರ ನಿತ್ಯ ಉಡುಗೆ, ಮಹಾತ್ಮ ಗಾಂಧಿ, ದೇವೇಗೌಡರು,ಸಿದ್ದರಾಮಯ್ಯರ ಉಡುಪು ಪಂಚೆ.

   ಆಂಧ್ರಪ್ರದೇಶ -ತಮಿಳುನಾಡು - ಕೇರಳದಲ್ಲಿ ಪಂಚೆ ದಾರಿಗಳು ಜಾಸ್ತಿ, ನೇಪಾಳದಲ್ಲಿ ದೋತಿ ದಿವಸ್ ಆಚರಣೆಯಲ್ಲಿದೆ.

   ಒಂದನೆ ಶತಮಾನದ ಶಿಲ್ಪ ಚಿತ್ರದಲ್ಲಿ ಪಂಚೆ ಧರಿಸಿದ ಚಿತ್ರ ಕಡೆದಿದ್ದಾರೆ, ವಿಚಾರವಾದಿ ಹೆಚ್.ಎನ್. ನರಸಿಂಹಯ್ಯನವರು ವಿದೇಶದಲ್ಲಿ ವ್ಯಾಸಂಗ ಮಾಡುವಾಗಲೂ ಪಂಚೆ ತ್ಯಜಿಸಲಿಲ್ಲ ವಿದೇಶಿಗರು ಇವರ ಪಂಚೆ ಬಗ್ಗೆ ವ್ಯಕ್ತಪಡಿಸುತ್ತಿದ್ದ ಕುತೂಹಲದ ಘಟನೆ ಅವರ ಆತ್ಮ ಚರಿತ್ರೆಯಲ್ಲಿ ನಮೂದಿಸಿದ್ದಾರೆ.

   ಅರಾಮದಾಯಕವಾದ ಉಡುಪಾದ ಪಂಚೆ ಕಳೆದ ನನ್ನ 11 ವರ್ಷದ ನಿತ್ಯ ಜೀವನದ ಉಡುಪಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...