#ಪಂಚೆ_ಧರಿಸಿ_ಬಂದರೆ_ಪ್ರತಿಷ್ಟಿತ_ಕ್ಲಬ್_ಪ್ರವೇಶ_ನಿರಾಕರಿಸುತ್ತದೆ.
#ನಾನ್ಯಾಕೆ_ಪಂಚೆಗೆ_ಬದಲಾದೆ_ಗೊತ್ತಾ...
#ನಾನು_ಪ್ಯಾಂಟಿನಿಂದ_ಪಂಚೆಗೆ_ಬದಲಾಗಿ_ಹನ್ನೊಂದು_ವರ್ಷ_ಆಯಿತು
#ವಿಚಾರವಾದಿ_ಹೆಚ್_ಎನ್_ನರಸಿಂಹಯ್ಯ_ಮಾಜಿ_ಪ್ರಧಾನಿ_ದೇವೇಗೌಡರು
#ಮುಖ್ಯಮಂತ್ರಿ_ಸಿದ್ಧರಾಮಯ್ಯ_ಪಂಚೆ_ಪ್ರಿಯರು
#ಶಿವಮೊಗ್ಗದ_ಹಿರಿಯ_ಸಮಾಜವಾದಿ_ಪಿ_ಪುಟ್ಟಯ್ಯನವರ_ಉಡುಗೊರೆ_ಪಂಚೆಗಳು.
#Dothi #Panche #Traditional #Ramraj #Sourhindian #Temple #Religious.
ಶೃಂಗೇಶ್ ಹತ್ತಿರ ಪುಸ್ತಕಗಳು ಮತ್ತು ಬೆಲೆ ಬಾಳುವ ಎರೆಡು ಬಿಳಿ ಪಂಚೆಗಳನ್ನು ಉಡುಗೊರೆ ಆಗಿ ಕಳಿಸಿದ್ದಾರೆ ಅಂತ ಹಿಂದಿನ ಲೇಖನದಲ್ಲಿ ಬರೆದಿದ್ದೆ.
ಆಗಾಗ್ಗೆ ಪುಟ್ಟಯ್ಯನವರು ನೀಡುವ ಪಂಚೆಗಳು ನನಗೆ ಪಂಚ ಪ್ರಾಣ ಅಂತವರು ನೀಡುವ ವಸ್ತ್ರದಾನ ಸ್ಟೀಕಾರ ಶೇಷ್ಟವೂ ಹೌದು.
2013ರ ತನಕ ಪ್ಯಾಂಟ್ ಶರ್ಟ್, ಖಾದಿ ಜುಬ್ಬಾ ಪೈಜಾಮದಾರಿ ಆಗಿದ್ದೆ, 1980ರ ತನಕ SSLC ವರೆಗೆ ಚಡ್ಡಿ ಅಂಗಿದಾರಿ ಆಗಿದ್ದು ಮೊದಲ ವರ್ಷದ ಡಿಪ್ಲೋಮ ತರಗತಿಗೆ ಸೇರುವಾಗ ಆನಂದಪುರಂನ ಸರ್ಕಾರಿ ಆಸ್ಪತ್ರೆ ಎದುರಿನ ಖ್ಯಾತ ಟೈಲರ್ #ವಾಜೀದ್_ಸಾಬರಿಂದ ನನಗೆ ಪ್ಯಾಂಟ್ ಶರ್ಟ್ ನನ್ನಣ್ಣ ಹೊಲಿಸಿ ಕೊಟ್ಟಿದ್ದ.
2012ರಲ್ಲಿ ನಮ್ಮ ಮೊದಲ ಲಾಡ್ಜ್ ಪ್ರಾರಂಬಿಸಿದಾಗ ನಾನು ಬಣ್ಣ ಬಣ್ಣದ ಲುಂಗಿ ಧರಿಸಿ ಆಫೀಸಿಗೆ ಹೋಗುತ್ತಿದ್ದೆ.
ಒಂದು ದಿನ ಬಿಲ್ಡರ್ ಆಗಿರುವ ಮಿತ್ರರಾದ #ರವೀಂದ್ರಗಂಗೊಳ್ಳಿ ಬಂದವರು ನನ್ನ ಲುಂಗಿದಾರಣೆಗೆ ಆಕ್ಷೇಪಿಸಿದರು.
ಪ್ರಂಟ್ ಆಫೀಸಿನಲ್ಲಿರುವವರ ಡ್ರೆಸ್ ಕೋಡ್ ಜ್ಞಾಪಿಸಿದ್ದರು, ಪಂಚೆಯೇ ಧರಿಸುವುದಾದರೆ ಶುದ್ಧ ಬಿಳಿ ಪಂಚೆ ಧರಿಸಿ ಆಫೀಸಿಗೆ ಬನ್ನಿ ಅಂದಿದ್ದೇ ನನಗೆ ಪ್ಯಾಂಟಿನಿಂದ ಖಾಯಂ ಪಂಚೆದಾರಿಯಾಗಲು ಕಾರಣ ಆಯಿತು.
ಮೊದಲ ಬಾರಿಗೆ ಪಂಚೆ ಧರಿಸಿ ಶಿವಮೊಗ್ಗಕ್ಕೆ ಹೋದಾಗ ಒಂದು ರೀತಿ ಮುಜುಗರ ನಾಚಿಕೆ ಅನ್ನಿಸಿತ್ತು ಆದರೆ ಕಳೆದ 11 ವರ್ಷದ ಅಭ್ಯಾಸದಿಂದ ಪ್ಯಾಂಟ್ ಬಳಸುವುದು ಸಂಪೂರ್ಣ ತ್ಯಜಿಸಿದೆ.
ಭಾರತೀಯ ಉಪಖಂಡದ ಸಾಂಪ್ರದಾಯಿಕ ಉಡುಪಾದ ಪಂಚೆ ಭಾರತ ಮತ್ತು ನೇಪಾಳದಲ್ಲಿ ಹೆಚ್ಚು ಜನಪ್ರಿಯವಾಗಿದೆ.
ಪಂಚೆ-ದೋತಿ-ವೇಷ್ಠಿ - ಮರ್ಧಾನಿ - ಚಾದ್ರಾ - ದೋತರ್-ಜೈನ್ ಬೋಹ್ - ಕಚ್ಚೆಪಂಜೆ-ದೋತ್ರ - ಚುರಿಯಾ - ದುತಿ-ದೊಂಪರ್ - ಅಂಗೋಸ್ತರ್ - ಮುಂಡ - ಪಂಚ- ವೇಟ್ಟ - ದೌಟಿ ಅಂತೆಲ್ಲ ಭಾರತೀಯ ಬಾಷೆಗಳಲ್ಲಿ ಕರೆಯುತ್ತಾರೆ.
ಪಂಚೆ ತಯಾರಿಸುವ ರಾಮರಾಜ್ ನಂತಹ ಪ್ರಸಿದ್ಧ ಕಂಪನಿಗಳು ಸಾವಿರಾರು ಕೋಟಿಯ ದೊಡ್ಡ ಉದ್ಯಮವಾಗಿದೆ.
ಪಂಚೆ ಗಳಿಗೆ ಪ್ರಸಿದ್ಧ ಸಿನಿಮಾ ತಾರೆಯರು ರೂಪದರ್ಶಿಗಳಾಗಿದ್ದಾರೆ.
ಪಂಚೆ ಧರಿಸಿ ಬರುವವರಿಗೆ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಪ್ರವೇಶ ಕೂಡ ನಿರ್ಬಂದವಾಗಿಸಿದ್ದಾರೆ.
#ಮುಸ್ಲಿಂರ_ಮೆಕ್ಕಾ_ಯಾತ್ರೆಗೆ ಇರುವ ಡ್ರೆಸ್ ಕೋಡ್ ಕೂಡ ಬಿಳಿಯ ದೋತಿ ಮತ್ತು ಬಿಳಿಯ ಹೊದೆಯುವ ಶಾಲು ಮಾತ್ರ.
ಇದೇ ರೀತಿ #ಹಿಂದೂ_ಧರ್ಮದಲ್ಲಿ ಮತ್ತು #ಜೈನ_ಧರ್ಮದಲ್ಲಿ ಆಚರಣೆಯಲ್ಲಿದೆ.
ಹೊಲಿಗೆ ಮಾಡದ ಬಟ್ಟೆಗಳು ಮಾಲಿನ್ಯಕ್ಕೆ ಕಡಿಮೆ ಪ್ರವೇಶ ಸಾಧ್ಯ ಎಂಬ ನಂಬಿಕೆ ಈ ಮೂರು ಧರ್ಮಗಳಲ್ಲಿದೆ.
#ಹರೇ_ಕೃಷ್ಣ_ಪಂಥದ ಡ್ರೆಸ್ ಕೋಡ್, ಪಂಜಾಬ್ ರೈತರ ನಿತ್ಯ ಉಡುಗೆ, ಮಹಾತ್ಮ ಗಾಂಧಿ, ದೇವೇಗೌಡರು,ಸಿದ್ದರಾಮಯ್ಯರ ಉಡುಪು ಪಂಚೆ.
ಆಂಧ್ರಪ್ರದೇಶ -ತಮಿಳುನಾಡು - ಕೇರಳದಲ್ಲಿ ಪಂಚೆ ದಾರಿಗಳು ಜಾಸ್ತಿ, ನೇಪಾಳದಲ್ಲಿ ದೋತಿ ದಿವಸ್ ಆಚರಣೆಯಲ್ಲಿದೆ.
ಒಂದನೆ ಶತಮಾನದ ಶಿಲ್ಪ ಚಿತ್ರದಲ್ಲಿ ಪಂಚೆ ಧರಿಸಿದ ಚಿತ್ರ ಕಡೆದಿದ್ದಾರೆ, ವಿಚಾರವಾದಿ ಹೆಚ್.ಎನ್. ನರಸಿಂಹಯ್ಯನವರು ವಿದೇಶದಲ್ಲಿ ವ್ಯಾಸಂಗ ಮಾಡುವಾಗಲೂ ಪಂಚೆ ತ್ಯಜಿಸಲಿಲ್ಲ ವಿದೇಶಿಗರು ಇವರ ಪಂಚೆ ಬಗ್ಗೆ ವ್ಯಕ್ತಪಡಿಸುತ್ತಿದ್ದ ಕುತೂಹಲದ ಘಟನೆ ಅವರ ಆತ್ಮ ಚರಿತ್ರೆಯಲ್ಲಿ ನಮೂದಿಸಿದ್ದಾರೆ.
ಅರಾಮದಾಯಕವಾದ ಉಡುಪಾದ ಪಂಚೆ ಕಳೆದ ನನ್ನ 11 ವರ್ಷದ ನಿತ್ಯ ಜೀವನದ ಉಡುಪಾಗಿದೆ.
Comments
Post a Comment