Skip to main content

Blog 3590. ಕೊಡಚಾದ್ರಿ ಶಿವರಾತ್ರಿ

#ಕೊಡಚಾದ್ರಿಯ_ಶಿವರಾತ್ರಿಯ_ಮೂರು_ಕೊಳಗದ_ದೀಪಾರಾದನೆ

#ಕಬ್ಬನಾಡು_ಹನ್ನಾರ_ಸೌಳುನಾಡು_ಸೀಮೆಯಿಂದ_ತರುವ_ದೀಪದ_ಎಣ್ಣೆ

#ಬುಡಕಟ್ಟು_ಕುಣುಬಿ_ಜನರು_ಎಣ್ಣೆ_ಸoಗ್ರಹಿಸಿ_ತಂದು_ಬೆಳಗುವ_ಪದ್ದತಿ

#ಈ_ಆಚರಣೆಗೆ_ಇದೆ_ಸಾವಿರಾರು_ವರ್ಷದ_ಇತಿಹಾಸ.

ಪ್ರತಿ ವರ್ಷ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಪರ್ವತದ ತುತ್ತ ತುದಿಯಲ್ಲಿ ನಡೆಯುವ ವಿಶಿಷ್ಟವಾದ ಕೊಳಗದ ದೀಪಾರಾದನೆ.

  ಪ್ರತಿ ವರ್ಷ  ಶಿವರಾತ್ರಿಯಂದು ಕೊಡಚಾದ್ರಿ ಪರ್ವತದ ತುತ್ತ ತುದಿಯ ಸರ್ವಜ್ಞ ಮಂಟಪದ ಸ್ಥಳದಲ್ಲಿ ಮೂರು ಸೀಮೆಯ ಭಕ್ತರ ಮನೆಗಳಿಂದ ಸಂಗ್ರಹಿಸಿ ತಂದ ದೀಪದ ಎಣ್ಣೆಯನ್ನ ಆಯಾ ಸೀಮೆಗೆ ಮೀಸಲಿಡುವ ಕೊಳಗಕ್ಕೆ ಸುರಿದು ಬತ್ತಿಯನ್ನ ಹಚ್ಚಿ ದೀಪ ಬೆಳಗುವ ಪುರಾತನ ಪದ್ಧತಿ ಈಗಲೂ ಮುಂದುವರಿದಿದೆ.

   ಇದೇನು ಪದ್ದತಿ? ಇದಕ್ಕೆ ಕಾರಣ ಏನು? ಎಂಬ ಮಾಹಿತಿ ಇಲ್ಲಿದೆ.

#kodachadri #sarvajnamantapa #jogi #kunubi #mulamukambika #sowparnika #shivaratri 

  ಪ್ರತಿ ವರ್ಷ ಶಿವರಾತ್ರಿಯ ದಿನ ಕೊಡಚಾದ್ರಿ ಪರ್ವತದ ಮೇಲಿರುವ ಮೂಲ ಮೂಕಾಂಬಿಕಾ ದೇವಿಯ ಉತ್ಸವ -ಜಾತ್ರೆ ಅದ್ದೂರಿಯಾಗಿ ಭಕ್ತಿಪೂರ್ವಕವಾಗಿ ನೆರವೇರುತ್ತದೆ.

  ಇದಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ, ಈ ಮೂಲ ಮೂಕಾಂಬಿಕಾ ದೇವಿಯ ಪೂಜೆ ಮಾಡಿಕೊಂಡು ಬರುವ ಬಳೆಗಾರ ಜೋಗಿ ಕುಟುಂಬದವರಾದ ನಿಟ್ಟೂರುವಾಸಿ ನಾಗೇಶ ಜೋಗಿ ಪ್ರಧಾನ ಅರ್ಚಕರಾಗಿದ್ದಾರೆ, ಇವರ ಸಹೋದರ ನಾಗೇಂದ್ರ ಜೋಗಿ ಈ ದೇವಾಲಯದ ಅರ್ಚಕರಾಗಿದ್ದಾರೆ.

     ಅರ್ಚಕರಾದ ನಾಗೇಂದ್ರ ಜೋಗಿ ಕೆಲವು ಕಾಲ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಆಗಿದ್ದರು, ಈಗ ಹೊಸನಗರ ತಾಲೂಕಿನ ಕೆ ಡಿ ಪಿ ಸಮಿತಿ ಸದಸ್ಯರಾಗಿದ್ದಾರೆ.

   ಕೊಡಚಾದ್ರಿಯ ಮುಜರಾಯಿ ಸಮಿತಿ ಅಧ್ಯಕ್ಷರು ಶಿವರಾಂ ಶೆಟ್ಟರು ಇವರು ಕೂಡ ನಿಟ್ಟೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು.

   ಪ್ರತಿ ಶಿವರಾತ್ರಿಯ ಸಂಜೆ ಮೂಲ ಮುಕಾಂಬಿಕಾ ದೇವಿಯ ಉತ್ಸವಮೂರ್ತಿಯ ಉತ್ಸವ ಕೊಡಚಾದ್ರಿಯ ಮೂಲ ಮುಕಾಂಬಿಕ ದೇವಾಲಯದಿಂದ ಹೊರಟು ರಾತ್ರಿ ಕೊಡಚಾದ್ರಿ ಪರ್ವತದ ತುತ್ತ ತುದಿಯ ಸರ್ವಜ್ಞ ಮಂಟಪ ತಲುಪುತ್ತದೆ.

   ಈ ಸಂದರ್ಭದಲ್ಲೇ ಅಲ್ಲಿ ಮೂರು ಮರದ ಕಂಬಗಳನ್ನು ಮಣ್ಣಿನಲ್ಲಿ ಹುಗಿದು ನಿಲ್ಲಿಸಿರುತ್ತಾರೆ ಅದಕ್ಕೆ ಮೂರು ಕೊಳಗಳನ್ನು ಭದ್ರವಾಗಿ ಕಟ್ಟಿ ಇಟ್ಟಿರುತ್ತಾರೆ.

   ಮೂಲ ಮೂಕಾಂಬಿಕಾ ದೇವಿಯ ಉತ್ಸವ ಅಲ್ಲಿಗೆ ತಲುಪಿದಾಗ ಮೂರು ಸೀಮೆಯ ಭಕ್ತರು ಸಂಗ್ರಹಿಸಿ ತಂದ ಎಣ್ಣೆಯನ್ನು ಪ್ರತ್ಯೇಕವಾಗಿ ಅವರ ಸೀಮೆಗೆ ಮೀಸಲಿಟ್ಟ ಕೊಳಗಗಳಿಗೆ ಸುರಿಯುತ್ತಾರೆ.

 ನಂತರ ಅದಕ್ಕೆ ಬತ್ತಿಯನ್ನು ಜೋಡಿಸಿ  ದೀಪ ಹಚ್ಚಿ ಬೆಳಗುತ್ತಾರೆ, ಅದು ಆ ಎತ್ತರದ ಕೊಡಚಾದ್ರಿ ಪರ್ವತ ಶ್ರೇಣಿಯ ತುತ್ತ ತುದಿಯಿಂದ ಪೂರ್ವ ಇಳಿಜಾರಿನ ಶಿವಮೊಗ್ಗ ಜಿಲ್ಲೆ ಮತ್ತು ಪಶ್ಚಿಮ ಇಳಿಜಾರಿನ ಉಡುಪಿ ಜಿಲ್ಲೆಗೆ ಕಾಣುತ್ತದೆ.

 ಅದನ್ನು ಆಯಾ ಭಾಗದ ಊರವರು ಈ ಸಂದರ್ಭದಲ್ಲಿ ನೋಡಿ ನಮಸ್ಕರಿಸುತ್ತಾರೆ.

   ರಾಜರ ಕಾಲದಲ್ಲಿ ಇದ್ದ ಮೂರು ಸೀಮೆಗಳಾದ ಕಬ್ಬನಾಡು ಸೀಮೆ, ಹನ್ನಾರು ಸೀಮೆ ಮತ್ತು ಸೌಳುನಾಡು ಸೀಮೆ ಎಂಬ ಪ್ರದೇಶಗಳು ಈಗ ಸಾಗರ ಹೊಸನಗರ ತಾಲೂಕುಗಳಿಗೂ ಉಳಿದ ಭಾಗ ಉಡುಪಿ ಜಿಲ್ಲೆಗೂ ಹಂಚಿ ಹೋಗಿದೆ.

 ಆದರೂ ಈ ಧಾರ್ಮಿಕ ಪದ್ಧತಿಯಾದ ಕೊಡಚಾದ್ರಿಯ ಶಿವರಾತ್ರಿಯ ಕೊಳಗದ ದೀಪಾರಾಧನೆಗೆ ಮಾತ್ರ ಈ ಪ್ರದೇಶದ ಭಕ್ತರಿಂದ ದೀಪದ ಎಣ್ಣೆ ಸಂಗ್ರಹಿಸಿ ತಂದು ಹಚ್ಚುವ ಪದ್ಧತಿ ಮಾತ್ರ ನಿರಂತರವಾಗಿ ಮುಂದುವರೆದಿದೆ.

   ಈ ಐತಿಹಾಸಿಕ ಪುರಾಣ ಪದ್ದತಿಯ ಕೊಡಚಾದ್ರಿಯ ಶಿವರಾತ್ರಿಯ ಕೊಳಗದ ದೀಪಕ್ಕೆ ದೀಪದ ಎಣ್ಣೆ ಸಂಗ್ರಹಿಸಿ ತರುವ ಕೆಲಸ ಪಶ್ಚಿಮ ಘಟ್ಟದ ಬುಡಕಟ್ಟು ಜನಾಂಗವಾದ ಕುಣುಬಿ ಜನಾಂಗದವರು ಭಕ್ತಿಪೂರ್ವಕವಾಗಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

  ಕೊಡಚಾದ್ರಿಯ ಶಿವರಾತ್ರಿಯ ದಿನ ಇಲ್ಲಿಗೆ ಬಂದು ಭಾಗವಹಿಸುವ ಭಕ್ತರಿಗೂ, ಈ ದೀಪ ಆರಾಧನೆ ಮಾಡುವವರೆಗೂ,ಈ ದೀಪಾರಾದನೆಗೆ ಬೆಟ್ಟದ ತುದಿಗೆ ಅ ಹೋಗಲಾಗದಿದ್ದವರು ಕೊಡಚಾದ್ರಿ ಶಿಖರ ಶ್ರೇಣಿಯ ಕೆಳಗಿನ ತಪ್ಪಲಿನಿಂದ ನೋಡುವುದರಿಂದಲೂ ಅವರಿಗೆ ಮತ್ತು ಅವರ ಕುಟುಂಬಕ್ಕೆ ಪುಣ್ಯಪ್ರಾಪ್ತಿ ಆಗುತ್ತದೆ, ಅವರು ಬೆಳೆದ ಬೆಳೆಗಳುಅವರ ಕಣಜಗಳಿಂದ ತುಂಬಿ ತುಳುಕುತ್ತದೆ, ಅವರ ಕುಟುಂಬ ಮತ್ತು ಊರಿಗೆ ಮೂಲ ಮೂಕಾಂಬಿಕೆಯ ಶ್ರೀರಕ್ಷೆ ಮತ್ತು ನಾಥಪಂಥದ ದೈವ ಕಾಲಭೈರವನ ರಕ್ಷಣೆ ಸದಾ ಇರುತ್ತದೆ ಎಂಬ ನಂಬಿಕೆ ತಲೆಮಾರುಗಳಿಂದ ಈ ಪ್ರದೇಶದ ನಂಬಿಕೆ ಆಗಿ ನಡೆದು ಬಂದಿದೆ.

 ತಲತಲಾಂತರದಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಕೊಡಚಾದ್ರಿ ಬೆಟ್ಟದ ಶಿವರಾತ್ರಿಯ ಮೂರು ಸೀಮೆಯ 3 ಕೊಳಗದ ದೀಪ ಬೆಳಗುವ ಸಂಪ್ರದಾಯದ ಬಗ್ಗೆ ಇತಿಹಾಸ ಆಸಕ್ತರು ಹೆಚ್ಚಿನ ಮಾಹಿತಿ ನೀಡಬಹುದಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...