#ತುಂಬೆ_ಗಿಡದಲ್ಲಿ
#ತುಂಬೆ_ಹೂವು_ಅರಳುವ_ಕಾಲ
#ಶಿವರಾತ್ರಿಗೆ_ಶಿವನ_ಶಿರದ_ಮೇಲೆ_ತುಂಬೆ_ಹೂವು_ಮುಡಿಸುತ್ತಾರೆ.
#ಶಿವನಿಗೆ_ಪ್ರಿಯವಾದ_ಸಸ್ಯ_ತುಂಬೆ.
#ಶಿವನ_ದೇಹದ_ವಿಷ_ಶಮನ_ಮಾಡಲು_ಬಳಸಿದ_ಸಸ್ಯವಾದ್ದರಿಂದ
#ತುಂಬೆಗೆ_ರುದ್ರ_ಪುಷ್ಪಾ_ಎಂಬ_ಹೆಸರೂ_ಇದೆ.
#Thumba #Leucasaspera #Dronapushpa #Commonleucas #MahaShivaratri #Rudrapushpa
ಮಹಾ ಶಿವರಾತ್ರಿ ಇದೇ ಫೆಬ್ರುವರಿ 15 ರಂದು ಆಚರಿಸಲಾಗುತ್ತದೆ.
ಶಿವನಿಗೆ ಪ್ರಿಯವಾದ ಹೂವು ತುಂಬೆ ಹೂವು ಈ ಕಾಲದಲ್ಲಿ ಅರಳಿದೆ ಇದಕ್ಕೆ ರುದ್ರ ಪುಷ್ಪಾ ಎಂಬ ಹೆಸರೂ ಇದೆ.
ನನ್ನ ಮತ್ತು ಶಂಭೂರಾಮನ ವಾಕಿಂಗ್ ಪಾತ್ ನಲ್ಲಿರುವ ಗಾರ್ಡನ್ ನ ಕೆಲ ಹೂಕುಂಡದಲ್ಲಿ ತುಂಬೆ ಗಿಡಗಳು ಬಿಳಿಯ ತುಂಬೆ ಹೂವು ನಿತ್ಯ ಸೂರ್ಯೋದಯದಲ್ಲಿ ಅರಳುಸುತ್ತಿದೆ.
ತುಂಬೆ ಹೂವನ್ನು ಇಂಗ್ಲಿಷ್ನಲ್ಲಿ Leucas aspera (ಲ್ಯೂಕಾಸ್ ಆಸ್ಪೆರಾ) ಅಥವಾ Thumba Flower ಎಂದು ಕರೆಯುತ್ತಾರೆ.
ಇದು ಸಾಮಾನ್ಯವಾಗಿ ಬಿಳಿ ಬಣ್ಣದ, ಸಣ್ಣ ಗಂಟೆಯಾಕಾರದ ಹೂವುಗಳನ್ನು ಬಿಡುವ ಮೂಲಿಕೆ ಸಸ್ಯವಾಗಿದೆ..
ಸಂಸ್ಕೃತದಲ್ಲಿ ದ್ರೋಣ ಪುಷ್ಪಂ ಎನ್ನುತ್ತಾರೆ,ಸಾಂಪ್ರದಾಯಿಕ ಆಯುರ್ವೇದ ವೈದ್ಯಕೀಯದಲ್ಲಿ ಜ್ವರ, ಕೆಮ್ಮು ಮತ್ತು ಶೀತದ ಚಿಕಿತ್ಸೆಗಾಗಿ ಬಳಸಲಾಗುತ್ತದೆ.
ಇದು ಭಾರತದಾದ್ಯಂತ ಹೆಚ್ಚಾಗಿ ಕಳೆ ಸಸ್ಯವಾಗಿ ಕಂಡುಬರುತ್ತದೆ.
ತುಂಬೆ ಹೂವು ಶಿವನಿಗೆ ಪ್ರಿಯವಾದ, ಸಾಂಪ್ರದಾಯಿಕವಾಗಿ ರುದ್ರಪುಷ್ಪ ಎಂದು ಕರೆಯಲ್ಪಡುವ ಪವಿತ್ರ ಸಸ್ಯ.
ಇದು ಕೇವಲ ಧಾರ್ಮಿಕ ಮಹತ್ವವಲ್ಲದೆ, ಜ್ವರ, ಕೆಮ್ಮು, ಚರ್ಮದ ತುರಿಕೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಅತ್ಯುತ್ತಮ ಆಯುರ್ವೇದ ಮನೆಮದ್ದಾಗಿದೆ.
ಇದರ ರಸ ಮತ್ತು ಎಲೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಕೀಟನಾಶಕ ಗುಣಗಳನ್ನು ಹೊಂದಿವೆ.
ಶಿವನ ಪೂಜೆಯಲ್ಲಿ ತುಂಬೆ ಹೂವಿಗೆ ವಿಶೇಷ ಸ್ಥಾನವಿದೆ, ಶಿವನ ದೇಹದಲ್ಲಿನ ವಿಷವನ್ನು ಕಡಿಮೆ ಮಾಡಲು ಬಳಸಲಾದ ಸಸ್ಯವೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಆದ್ದರಿಂದ ಇದನ್ನು #ರುದ್ರಪುಷ್ಪ ಎಂದು ಕರೆಯುತ್ತಾರೆ.
ತುಂಬೆ ಗಿಡವು ಶಿವನಿಗೆ ಅತ್ಯಂತ ಪ್ರಿಯವಾದ ಸಸ್ಯವಾಗಿದ್ದು ಅದರ ಬಿಳಿ ಹೂವುಗಳನ್ನು ಸೋಮವಾರ ಅಥವಾ ಶಿವರಾತ್ರಿಯಂದು ಶಿವಲಿಂಗಕ್ಕೆ ಅರ್ಪಿಸುವುದರಿಂದ ಸಕಲ ಸಂಕಷ್ಟಗಳು ದೂರವಾಗಿ, ಧನ ಲಾಭವಾಗುತ್ತದೆ ಎಂಬ ನಂಬಿಕೆ ಇದೆ.
ಈ ಹೂವನ್ನು ಶಿವನ ತಲೆಯ ಮೇಲೆ ಮಾತ್ರ ಇಡಬೇಕು, ಪಾದಗಳ ಮೇಲೆ ಅಲ್ಲ.
Comments
Post a Comment