#ಭಾಗ_3
#ಭಾರಾ_ಪಂಥ_ಯಾತ್ರೆ
#ಉತ್ತರಪ್ರದೇಶದ_ಗೋರಕ್_ಪುರದ_ಶಾಖಾ_ಮಠ
#ಸಿದ್ದಾಪುರದ_ಕಮಲಶಿಲೆ_ಸಮೀಪದ_ಹಲವಾರಿಮಠ
#ನಾಸಿಕ್_ಕುಂಭಮೇಳದಿಂದ_ಪ್ರತಿ_12_ವರ್ಷಕ್ಕೊಮ್ಮೆ_ಹೊರಡುತ್ತದೆ.
#ಮುಂದಿನ_ಬಾರಾಪಂಥ್_ಯಾತ್ರೆ_2027ಕ್ಕೆ_ನಾಸಿಕ್_ನಿಂದ_ಹೊರಟು
#ಮಂಗಳೂರು_ಕದ್ರಿಗೆ_2028_ಜನವರಿಯಲ್ಲಿ_ತಲುಪಲಿದೆ.
#ಬಾರಾಪಂಥ_ಯಾತ್ರೆ_ಹಲವಾರಿ_ಮಠದಲ್ಲಿ_ತಂಗುತ್ತದೆ.
#nathapanth #barapanth #jondiyatre #gorakpura #nasik #kumbamela #siddapeeta #kodachadri #halavarimutt #YogiAdityanath
ಗೋರಖ್ಪುರ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿರುವ ಪ್ರಮುಖ ಐತಿಹಾಸಿಕ ಮತ್ತು ಸಾಂಸ್ಕೃತಿಕ ನಗರವಾಗಿದೆ.
ರಪ್ತಿ ನದಿಯ ದಡದಲ್ಲಿರುವ ಇದು ನಾಥ ಪಂಥದ ಪ್ರಸಿದ್ಧ ಸಂತ ಗೋರಕ್ಷನಾಥರ ಹೆಸರಿನಿಂದ (ಗೋರಕ್ಷಾಪುರ) ಬಂದಿದೆ.
ಇದು ಪ್ರಸಿದ್ಧ ಗೋರಖನಾಥ ಮಠ ಈ ಮಠದ ಮಹಾಂತರೇ ಬಾರಾಪಂತ್ ಯಾತ್ರೆಯ ರೂವಾರಿಗಳು ಆಗಿರುತ್ತಾರೆ.
ಗೋರಖ್ ನಾಥ ಮಠದ ಈಗಿನ ಮಹಾಂತರು ಯೋಗಿ ಆದಿತ್ಯನಾಥ್ ಜೋಗಿ ಇವರು ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಗಳೂ ಆಗಿದ್ದಾರೆ.
ಪಶ್ಚಿಮ ಘಟ್ಟದ ತಪ್ಪಲಿನ ಮಧ್ಯ ನಡೆದು ಬರುವ ನಾಥ ಪಂಥದ ಸಾದು ಸಂತರ ಈ ಬಾರಾಪಂಥ್ ಯಾತ್ರೆಗೆ ಸಾವಿರರಾರು ವರ್ಷದ ಇತಿಹಾಸವಿದೆ.
ನಾಥಪ೦ಥದ ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಹಲವಾರಿ ಮಠ ಎಡಮೊಗೆ (ಕಮಲಶಿಲೆ ಸಮೀಪ) ಸಿದ್ದಾಪುರ - ಕುಂದಾಪುರ ಉಡುಪಿ ಜಿಲ್ಲೆಯಲ್ಲಿದೆ.
ಈ ಮಠ ಉತ್ತರ ಪ್ರದೇಶದ ನಾಥಪಂಥದ ಗೋರಖ್ ಪುರದ ಶಾಖಾ ಮಠ ಆಗಿದೆ.
ಇಲ್ಲಿನ ಈಗಿನ ಪೀಠಾದಿಪತಿಗಳು ಶ್ರೀ ಫೀರ್ ಯೋಗಿ ಜಗದೀಶ್ ನಾಥಜೀ ಸ್ವಾಮೀಜಿ.
ಯೋಗಿ ಜಗದೀಶ್ ಜಿ ಮತ್ತು ಕುಂದಾಪುರದ ರಮೇಶ್ ಜೋಗಿ ಹಾಗೂ ಹಲವಾರಿ ಮಠದ ಪ್ರಮುಖರ ನಿಯೋಗ 20 - ಪೆಬ್ರವರಿ -2020 ರಂದು
ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗು ಗೋರಕ್ ಪುರದ ನಾಥಪಂಥ್ ದ #ಮಹಾಂತರಾದ #ಶ್ರೀಯೋಗಿ_ಆದಿತ್ನಾಥರನ್ನ ಬೇಟಿ ಮಾಡಿ ಗೌರವ ಸಮಪಿ೯ಸಿದ ಚಿತ್ರ ಇಲ್ಲಿದೆ.
ಪ್ರತಿ 12 ವರ್ಷಕ್ಕೊಮ್ಮೆ ನಾಸಿಕ್ - ತ್ರಯಂಬಕ ಕುಂಭಮೇಳದ ಮರು ದಿನ ಹೊರಡುವ ನಾಥಪಂಥದ ಬಾರಾ ಪಂಥ್ ಜೊಂಡಿ ಯಾತ್ರೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ಸಮೀಪದ ಎಡಮೊಗೆಯ ಶ್ರೀಕ್ಷೇತ್ರ ಸಿದ್ಧಪೀಠ ಕೊಡಚಾದ್ರಿ ಹಲವಾರಿ ಮಠದಲ್ಲಿ ತಂಗುತದೆ.
Comments
Post a Comment