Skip to main content

ಶಿವಮೊಗ್ಗ ಜಿಲ್ಲೆಯ ಪವಾಡ ಪುರುಷ ಅವದೂತ ಹನುಮಂತಪ್ಪರವರು

#ಹೊಳಲೂರು_ಮೈಲಾರಪ್ಪನವರು_ಅಂದರೆ_ಸಜ್ಜನ_ರಾಜಕಾರಣಿ
#ಅಷ್ಟೇ_ಅಲ್ಲ_ಅವರ_ತಂದೆ_ಅವದೂತ_ಹನುಮಂತಪ್ಪರೆಂದು_ಬಹುಜನರಿಗೆ_ಗೊತ್ತಿಲ್ಲ.
#ಚಲನ_ಚಿತ್ರ_ನಟ_ದೊಡ್ಡಣ್ಣರ_ಪರಮಗುರು .

  ಮೈಲಾರಪ್ಪನವರು ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದವರು ಆಗ ಮುಖ್ಯಮಂತ್ರಿ ಆಗಿದ್ದ ಜೆ.ಹೆಚ್.ಪಟೇಲರ ಅತ್ಮೀಯ ಬಳಗದವರು, ಜಮೀನ್ದಾರರು, ಯಾರನ್ನೂ ನೋವಿಸದ ಮಾನವೀಯ ಗುಣ ಹೊಂದಿದವರು ಅವರ ಆಡಳಿತದಲ್ಲಿ ನಾನು ಸಾಗರ ತಾಲ್ಲೂಕಿನ ಅನ೦ದಪುರದಿಂದ ಜಿಲ್ಲಾ ಪಂಚಾಯತ್ ಸದಸ್ಯ.
  ಬಹಳ ಜನಕ್ಕೆ ಗೊತ್ತಿಲ್ಲ ಹೊಳಲೂರಿನ ಅವದೂತರಾದ ಪವಾಡ ಪುರುಷರಾದ ಹನುಮಂತಪ್ಪ ಇವರ ತಂದೆ ಅಂತ.
  ಸಂಸಾರದಿಂದ ವಿಮುಕ್ತರಾಗಿ ಸನ್ಯಾಸ ಸ್ವೀಕರಿಸಿ ಊರಿನ ಗುಡ್ಡದಲ್ಲಿ ನೆಲೆಸಿದ ಅವದೂತ ಹನುಮಂತಪ್ಪರಿಗೆ ಇಡೀ ರಾಜ್ಯದಲ್ಲಿ ಶಿಷ್ಯರಿದ್ದಾರೆ.
  ಚಲನ ಚಿತ್ರ ನಟ ದೊಡ್ಡಣ್ಣ ಕೂಡ ಇವರ ಪಟ್ಟದ ಶಿಷ್ಯ, ದೊಡ್ಡಣ್ಣ ನಮ್ಮಲ್ಲಿ ಬಂದಾಗೆಲ್ಲ  ಅವರ ಬಾಯಲ್ಲಿ ಅವದೂತ ಹನುಮಂತಪ್ಪರ ಬಗ್ಗೆ ಒಂದಲ್ಲ ಒ೦ದು ನೆನಪು ಮಾತಾಡುತ್ತಾರೆ, ದೊಡ್ಡಣ್ಣ ಪ್ರತಿ ಹುಣ್ಣಿಮೆಗೆ ತಪ್ಪದೆ ಅವದೂತರ ಗದ್ದುಗೆ (ಶಿವಮೊಗ್ಗದಿಂದ 15 ಕಿ.ಮಿ.ದೂರದ ಹೊಳಲೂರಿಗೆ) ಗೆ ಹೋಗುತ್ತಾರೆ ಅವತ್ತು ಅಲ್ಲಿ ನಡೆಯುವ ಪೂಜೆ, ಭಜನ ಮತ್ತು ಸಾಮೂಹಿಕ ಬೋಜನದಲ್ಲಿ ಭಾಗವಹಿಸುತ್ತಾರೆ.
     ಆಗ ದೊಡ್ಡಣ್ಣರಿಗೆ ಭದ್ರಾವತಿಯಲ್ಲಿ ಸಣ್ಣ ಕೆಲಸ, 
 ಹವ್ಯಾಸಿ ನಾಟಕ ಕಲಾವಿದ, ಅಣ್ಣ ಮತ್ತು ತಾಯಿ ಇವರಿಗೆ ಮದುವೆ ಮಾಡಲು ಕನ್ಯೆ ಹುಡುಕಲು ಪ್ರಾರಂಬಿಸುತ್ತಾರೆ ಆದರೆ ಅವದೂತರು ದೊಡ್ಡಣ್ಣನಿಗೆ ಗಾಜಿನ ಕಣ್ಣಿನ ಕನ್ಯೆ ಸಿಗುತ್ತಾಳೆ ಅಂದಿದ್ದ ಭವಿಷ್ಯದಂತೆಯೇ ಅವರ ಮದುವೆ ಆಗುತ್ತದೆ.
   ಹವ್ಯಾಸಿ ನಾಟಕದ ನಟ ದೊಡ್ಡಣ್ಣ ರಾಜ್ಯದ ಪ್ರಖ್ಯಾತ ಪ್ರಸಿದ್ದ ನಟನಾಗುತ್ತಾರೆ ಅಂದಾಗ ಆ ಕಾಲದಲ್ಲಿ ದೊಡ್ಡಣ್ಣನವರೇ ನಂಬಿರಲಿಲ್ಲ ಆದರೆ ಅದು ಸತ್ಯವಾಯಿತು.
   ಅವದೂತ ಹನುಮಂತಪ್ಪರ ಬಲ ಕಾಲಿನಲ್ಲಿ ಹುಣ್ಣಾಗಿದೆ ಎಂಬ ಸುದ್ದಿ ಕೇಳಿ ಆಗ ಪ್ರವದ೯ಮಾನದ ಜನಪ್ರಿಯ ನಟರಾದ ದೊಡ್ಡಣ್ಣ ಹೊಳಲೂರು ಆಶ್ರಮಕ್ಕೆ ದೌಡಾಯಿಸುತ್ತಾರೆ ಮತ್ತು ಚಿಕಿತ್ಸೆಗೆ ಬೆಂಗಳೂರಿನ ದುಬಾರಿ ಸುಸಜ್ಜಿತ ಆಸ್ಪತ್ರೆಗೆ ಸೇರಿಸುವ ಉದ್ದೇಶದಿಂದ ಬರುತ್ತಾರೆ ಆದರೆ ಅವದೂತರು ಯಾವುದೇ ಕಾರಣಕ್ಕೂ ಚಿಕಿತ್ಸೆಗೆ ಒಪ್ಪುವುದಿಲ್ಲ ಆದರೆ ಇಡೀ ಭಕ್ತ ಸಮುದಾಯದ ಒತ್ತಾಯದಂತೆ ದೊಡ್ಡಣ್ಣರ ಜೊತೆ ಬೆಂಗಳೂರಿಗೆ ಹೋಗಿ ಆಸ್ಪತ್ರೆ ಸೇರುತ್ತಾರೆ.
    ಬೆಳಿಗ್ಗೆಯೇ ಮುಖ್ಯ ವೈದ್ಯಾದಿಕಾರಿ ಗಾಭರಿಯಿಂದ ದೊಡ್ಡಣ್ಣರನ್ನ ಕರೆಯುತ್ತಾರೆ ಅಲ್ಲಿ ವೈದ್ಯರು " ನಿನ್ನೆ ಇವರ ಬಲಗಾಲಿನ ಹುಣ್ಣಿನ ಎಲ್ಲಾ ಪರೀಕ್ಷೆ ಮಾಡಿದ ದಾಖಲೆಗಳಿದು ಆದರೆ ಇವತ್ತು ಅವರ ಬಲಗಾಲಿನಲ್ಲಿ ಏನೂ ಇಲ್ಲ ಈಗ ಎಡಗಾಲಿನಲ್ಲಿ ಹುಣ್ಣು ಇದೆ " ಎಂದರಂತೆ !
  ದೊಡ್ಡಣ್ಣ ಅವದೂತರಿಗೆ ಇದನ್ನು ತಿಳಿಸಿದಾಗ ಮುಗಳು ನಗೆಯಿಂದ ಅವದೂತರು "ದೊಡ್ಡ (ಅವರು ದೊಡ್ಡಣ್ಣನ ವನ್ನು ಯಾವಾಗಲೂ ದೊಡ್ಡ ಅಂತಲೇ ಕರೆಯುವುದು) ನನ್ನ ವಾಪಾಸ್ ಕರೆದು ಕೊಂಡು ಹೋಗು ಏನು ಇರೊಲ್ಲ" ಅಂದರಂತೆ ಅವರ ಅಪೇಕ್ಷೆಯಂತೆ ವಾಪಾಸ್ ಕರೆತಂದರಂತೆ ಕಾಲಲ್ಲಿ ಹುಣ್ಣೆ ಇರಲಿಲ್ಲವಂತೆ!
  ಮೈಲಾರಪ್ಪರಲ್ಲಿ ಅವರ ತಂದೆ ಅವದೂತರಾದ ಬಗ್ಗೆ ಕೇಳಿದಾಗ ಅವರು ಹೇಳಿದ್ದು " ಅವರು ಸತ್ಪುರುಷರು ಯಾರು ಏನೇ ಸಹಾಯ ಕೇಳಿ ಬಂದರು ಹೋಗಿ ಜನರ ಬಾಯಿ ಸಿಹಿ ಮಾಡು ನಿನ್ನ ಕೆಲಸ ಆಗುತ್ತೆ" ಅನ್ನುತ್ತಿದ್ದರಂತೆ.
    ಅದನ್ನು ನಾನು ನನ್ನ ಜೀವನದಲ್ಲಿಅಳವಡಿಸಿಕೊಂಡಿದ್ದೇನೆ ಮತ್ತು ಆಚರಿಸುತ್ತಿದ್ದೇನೆ ಪ್ರತ್ಯಕ್ಷವಾಗಿ ಅವದೂತ ಹನುಮಂತಪ್ಪರನ್ನು ನೋಡಿಲ್ಲ ಆದರೆ ಅವರ ವಾಕ್ಯ ನನ್ನ ಜೀವನದಲ್ಲಿ ಅಳವಡಿಸಿ ಆಚರಿಸುತ್ತಾ ಅವರನ್ನು ಸ್ಮರಿಸುತ್ತೇನೆ.
  ಕಳೆದ 2019 ರ ನವೆಂಬರ್ 10 ರಂದು ನನ್ನ ಮಗಳ ಮದುವೆಗೆ ಆಮಂತ್ರಣವನ್ನು  ಮೈಲಾರಪ್ಪರಿಗೆ ಅಂಚೆ ಮೂಲಕ ಕಳಿಸಿದೆ ಆದರೆ ಅವರು ಬರುವ ಬಗ್ಗೆ ಯಾವ ನಿರೀಕ್ಷೆಯೂ ಇರಲಿಲ್ಲ ಯಾಕೆಂದರೆ ಪ್ರತ್ಯಕ್ಷ ಹೋಗಿ ಕರೆದರೂ ಅನೇಕ ಕಾರಣದಿಂದ ಬರಲಾಗುವುದಿಲ್ಲ ಆದರೆ ಆಶ್ಚಯ೯ ಅಂದರೆ ಸುಮಾರು 20 ವರ್ಷದ ನಂತರ (ನನ್ನ ಅವರ ಬೇಟಿ) ಮೈಲಾರಪ್ಪನವರು ನನ್ನ ಮಗಳು ಮತ್ತು ಅಳಿಯನನ್ನು ಅವರ ದಾಂಪತ್ಯ ಜೀವನಕ್ಕಾಗಿ ಆಶ್ರೀವಾದ ಮಾಡಲು ಬಂದಿದ್ದು ನನ್ನ ಸೌಭಾಗ್ಯ.
  ಅವದೂತರಾದ ಹನುಮಂತಪ್ಪರೇ ಇದಕ್ಕೆ ಪ್ರೇರಣೆ ಅಂತ ಬಾವಿಸಿದ್ಧೇನೆ.
  #ಶಿವಮೊಗ್ಗ_ಜಿಲ್ಲೆಯ_ಅವದೂತ_ಹನುಮಂತಪ್ಪರ_ಬಗ್ಗೆ_ಪುಸ್ತಕ_ಬರೆದು_ಪ್ರಕಟಿಸುವ_ನನ್ನ_ಹಂಬಲ_ಈಡೇರಲಿ_ಅಂತ_ಆಶಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ