Skip to main content

ಕಳೆದ ವರ್ಷ ಜನರಲ್ಲಿ ಜೀವ ಭಯ ಇತ್ತು ಅವತ್ತು ಕಾಯಿಲೆ ಪೀಡಿತರ ಸಂಖ್ಯೆ ಸಾವಿನ ಸಂಖ್ಯೆ ಕಡಿಮೆ ಇತ್ತು, ಈ ವರ್ಷ ಕಾಯಿಲೆ ಪೀಡಿತರು ಕೆಲವು ಲಕ್ಷ ಸಂಖ್ಯೆ, ಸಾವಿನ ಸಂಖ್ಯೆ ನಾಲ್ಕು ಪಟ್ಟು ಆಗಿದೆ ಆದರೆ ಜನರಲ್ಲಿ ಸಾವಿನ ಭಯ ಮಾತ್ರ ಇಲ್ಲ.

#ಇದು_ಕಳೆದ_ವರ್ಷ_ಇದೇ_ದಿನ_ಬರೆದ_ಪೋಸ್ಟ್
 #ಅವತ್ತು_ಸಾವಿನ_ಭಯ_ಇತ್ತು.
 ಕಳೆದ ವರ್ಷ ಇವತ್ತಿನ ದಿನ ಇಡೀ ದೇಶದಲ್ಲಿ ಕೊರಾನಾ ಹರಡಿದ್ದು 24 942, ಸಾವು 780 ಅವತ್ತು ಕನಾ೯ಟಕ ರಾಜ್ಯದಲ್ಲಿ 489 ಜನರಿಗೆ ಪಾಸಿಟೀವ್ ಮತ್ತು 18 ಜನ ಮೃತರಾಗಿದ್ದರು ಅವತ್ತು ಇಡೀ ದೇಶದಲ್ಲಿ ಲಾಕ್ ಡೌನ್ ಆಗಿತ್ತು, ರೋಗ ನಿರೋದಕ ಚುಚ್ಚುಮದ್ದು ಬಂದಿರಲಿಲ್ಲ.
  
  #ಇವತ್ತು_ಸಾವಿನ_ಭಯ_ಇಲ್ಲ
   ಈ ವಷ೯ ಇವತ್ತಿನ ಸಂಖ್ಯೆ ದೇಶದಾದ್ಯಂತ ಕಾಯಿಲೆ ಪೀಡಿತರು 3,46,786 ಸಾವು 2,694. ಕನಾ೯ಟಕದಲ್ಲಿ 29,438 ಮತ್ತು ಸಾವು 208. ಈಗ ದೇಶದಲ್ಲಿ ಚುಚ್ಚುಮದ್ದು ಲಭ್ಯ, ಲಾಕ್ ಡೌನ್ ಇಲ್ಲ.
  
#ಸ್ವಯ೦_ರೋಗ_ಬರದಂತೆ_ಜನಸಂಪರ್ಕದಿಂದ_ದೂರವಿದ್ದು
#ಮಾಸ್ಕ್_ಸ್ಯಾನಿಟ್ಟೆಸರ್_ಬಳಸುವ_ಕಡ್ಡಾಯ_ಅಭ್ಯಾಸ_ಮುಂದಿನ_ಮೂರು_ತಿಂಗಳು_ಪಾಲಿಸಲೇ_ಬೇಕು


#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_23
#ದಿನಾ0ಕ_26_ಏಪ್ರಿಲ್_2020

*ಮಾಚ್೯ 24 ರಿಂದ ಮೇ 3 ರವರೆಗಿನ 2 ಹoತದ ಲಾಕ್ ಡೌನ್ ನಲ್ಲಿ ಇವತ್ತಿಗೆ 32 ದಿನಗಳಾಯಿತು ಇನ್ನೂ 8 ದಿನ ಬಾಕಿ ಇದೆ.

   ಸಾಧ್ಯವೇ ಇಲ್ಲ ಅಂತ ಬಾವಿಸಿದ್ದು ಅದಾಗಿ ನಡೆದೇ ಹೋಯಿತು, ಸಿನಿಮಾ ಇಲ್ಲದೆ ಸಾಧ್ಯವೆ? ಮಾಲ್ ಇಲ್ಲದೆ ಸಾಧ್ಯವೆ? ಶಾಲೆ ಇಲ್ಲದೆ ಸಾಧ್ಯವೇ? ಹೋಟೆಲ್ ಅಂಗಡಿ ಇಲ್ಲದೆ ಸಾಧ್ಯವೆ? ಬಸ್, ರೈಲು, ವಿಮಾನ ಇಲ್ಲದೆ ಸಾಧ್ಯವೇ? ಅಂತೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
  ಮಧ್ಯದ ಅಂಗಡಿ ಬಂದ್ ಮಾಡಲು ಸಾಧ್ಯವೇ ಇಲ್ಲ ಮದ್ಯ ಮಾರಾಟದ ಲಾಬಿಯ ಶಕ್ತಿಯ ಮುಂದೆ ಸಕಾ೯ರ ಏನೇನೂ ಅಲ್ಲ ಅಂತ ಬಾವಿಸಿದ್ದು ಹುಸಿ ಆಯಿತು.
  ಲಾಕ್ ಡೌನ್ ಮೋದಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಅಪಾದನೆ, ಅವರು ನೀಡಿದ ಕರೆ  ಚಪ್ಪಾಳೆ ತಟ್ಟಿ ಜನರ ಆರೋಗ್ಯಕ್ಕಾಗಿ ದುಡಿಯುವವರಿಗೆ ಬೆಂಬಲಿಸಿ ಎಂದದ್ದು, ರಾತ್ರಿ ದೀಪ ಬೆಳಗಿಸಿ ಒಗ್ಗಟು ಪ್ರದಶಿ೯ಸಿ ಎಂದಿದ್ದು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ದೇಶದಾದ್ಯಂತ ಜನತೆ ಪಕ್ಷಾತೀತವಾಗಿ ಬೆಂಬಲಿಸಿದರು.
   ದೇಶದ ಈ ಸಂಕಷ್ಟದಲ್ಲಿ ಒಗ್ಗಟ್ಟು ಪ್ರದಶಿ೯ಸಿ ಆಳುವ ಸಕಾ೯ರಕ್ಕೆ ಸಹಕರಿಸಿದರೆ ನಮ್ಮ ಜೀವ ಸುರಕ್ಷಿತ ಎಂಬ ತಿಳುವಳಿಕೆ ಸಾವ೯ಜನಿಕರಲ್ಲಿ ಮೂಡಿದೆ.
  ಮಾಚ೯ 26ಕ್ಕೆ ಕನಾ೯ಟಕದಲ್ಲಿ ಕೊರಾನ ವೈರಸ್ ಸೋoಕು 55 ಜನರಿಗೆ ಹರಡಿತ್ತು ಮತ್ತು 2 ಸಾವು ಆಗಿತ್ತು.
  ಇಡೀ ದೇಶದಲ್ಲಿ 18 ಸಾವು ಆಗಿತ್ತು ಮತ್ತು 721 ಜನರಿಗೆ ಸೋ೦ಕು ಹರಡಿತ್ತು.
  ಇವತ್ತು ಅಂದರೆ ಏಪ್ರಿಲ್ 25ಕ್ಕೆ ಇಡೀ ದೇಶದಲ್ಲಿ ಕೊರಾನ ವೈರಸ್ ನಿಂದ 24942 ಜನರಿಗೆ ಸೋ೦ಕು ಹರಡಿದೆ, ಸಾವು 780 ಆಗಿದೆ, ಕನಾ೯ಟಕದಲ್ಲಿ 489 ಜನರಿಗೆ ಸೋ೦ಕು ಮತ್ತು 18 ಸಾವು ಆಗಿದೆ.
  ಅಮೆರಿಕಾದಲ್ಲಿ ಈ ಸೋ೦ಕು ಇವತ್ತಿಗೆ 9 ಲಕ್ಷ ದ 41 ಸಾವಿರದ 478 ಜನರಿಗೆ ಹರಡಿದೆ, 52 ಸಾವಿರದ 948 ಸಾವು ಆಗಿದೆ.
  ಬೇರೆ ದೇಶದ ಜೊತೆ ಹೋಲಿಸಿದರೆ ಭಾರತದಲ್ಲಿ ಇದರ ಪ್ರಮಾಣ ಕಡಿಮೆ ಆದರೂ ಒಂದು ವೇಳೆ ಲಾಕ್ ಡೌನ್ ತೆಗೆದ ಮೇಲೆ ಜನತೆ ಮೈಮರೆತರೆ ಮೇ ತಿಂಗಳ ಅಂತ್ಯದಲ್ಲಿ ಈ ವೈರಸ್ 2 ಲಕ್ಷ ದಾಟಿದರೆ ಸುಮಾರು 90 ಸಾವಿರ ಜನರನ್ನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಡ್ಮಿಟ್ ಮಾಡಬೇಕಾದ ಸಂದಭ೯ ಬರುವ ಸಾಧ್ಯತೆ ತೆಗೆದು ಹಾಕುವ ಹಾಗಿಲ್ಲ.
  ಹಾಗಾದರೆ ನಮ್ಮ ದೇಶದ ಪರಿಸ್ಥಿತಿ ಯಾವ ನಿಯOತ್ರಣಕ್ಕೂ ಸಿಗಲಾರದು, ಹಾಗಾಗದಿರಲಿ, ದೇಶದ ಅದೃಷ್ಟ ಮತ್ತು  ದೇವರ ದಯೆ ಈ ಕೊರಾನ ವೈರಸ್ ದೇಶದಿಂದಲೇ ಅಷ್ಟೆ ಅಲ್ಲ ಪ್ರಪ೦ಚದಿಂದಲೆ ನಿಗ೯ಮಿಸಲಿ ಎಂದು ಹಾರೈಸೋಣ.
  ಸೆಪ್ಟೆ೦ಬರ್ ಅಂತ್ಯದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆಯ ಔಷದಿ ಬಳಕೆಗೆ ಸಿಗಬಹುದಾದ ಪ್ರಯೋಗಗಳು ನಡೆಯುತ್ತಿದೆ ಅಲ್ಲಿನ ವರೆಗೆ ನಾವು ಆದಷ್ಟು ಸ್ವಯಂ ಮತ್ತು ಸ್ವಾವಲಂಬನೆಯಿಂದ ಎಚ್ಚರಿಕೆ ಜೀವನ ನಡೆಸಬೇಕಾಗಿದೆ.
  ಎಲ್ಲದನ್ನು ನಕಾರತ್ಮಕವಾಗಿ ಪರಿಗಣಿಸದೆ ಸಕಾರತ್ಮಕ ಚಿಂತನೆಯ ಒಗ್ಗಟ್ಟು ಕಾಪಾಡಿಕೊಳ್ಳಬೇಕಾದ ಅತಿ ಅನಿವಾಯ೯ತೆ ಇದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ