Skip to main content

ಕಾಗೋಡು ಭೂಮಿ ಹೋರಾಟದ ಚಳವಳಿಯ ನೇತಾರ ಗಣಪತಿಯಪ್ಪ

ಕಾಗೋಡು ರೈತ ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪ, ಭಾರತೀಯ ರೈತ ನಾಯಕ ನೆನಪು - 1 . ಕಾಗೋಡು ರೈತ ಹೋರಾಟಕ್ಕೆ 13 - 6 - 1951ರಲ್ಲಿ ಡಾ.ರಾಮಮನೋಹರ ಲೋಹಿಯಾ ಭಾಗವಾಹಿಸಿ ಕಾಗೋಡಿನ ಅರಳಿ ಮರದ ಕಟ್ಟೆಯ ಮೇಲೆ ಮಾಡಿದ ಭಾಷಣ "ನಿಮ್ಮ ಹೋರಾಟ ನ್ಯಾಯಬದ್ದವಾಗಿದೆ ಆದ್ದರಿಂದ ನಿಮಗೆ ನನ್ನ ಬೆಂಬಲ,ನ್ಯಾಯ ಸಿಗುವವರೆಗೆ ಹೋರಾಟ ನಡೆಯಲಿ, ಸರಕಾರ ಭೂಮಾಲಿಕರ ಪರವಹಿಸಿ ಕಳಂಕಿತವಾಗಿದೆ" ಎಂಬ ವಾಕ್ಯದೊಂದಿಗೆ ಉಳುವವನೇ ಹೊಲದೊಡೆಯ ಘೋಷಣೆ ಮಾಡಿ ಕಾಗೋಡು ಒಡೆಯರ ಗದ್ದೆಗೆ ಪ್ರವೇಶಿಸಿದರು.
  ಸೇರಿದ್ದ ಜನಸ್ತೋಮ " ಲೋಹಿಯಾ ಜಿಂದಾಬಾದ್ " " ಸೋಷಿಲಿಸ್ಟ ಪಾಟಿ೯ ಜಿಂದಾಬಾದ್ " " ಗೋಪಾಲ ಗೌಡ ಜಿಂದಾಬಾದ್ " " ಗಣಪತಿಯಪ್ಪ ಜಿಂದಾಬಾದ್' ಘೋಷಣೆ ಮುಗಿಲು ಮುಟ್ಟಿತ್ತು.
  ಇದು ಸ್ವಾತಂತ್ರ ಭಾರತದ ಮೊದಲ ಗೇಣಿ ರೈತ ಚಳವಳಿ ಇದರ ನೇತಾರ ಹೆಚ್.ಗಣಪತಿಯಪ್ಪರು ಸಾಗರದ ಜೈಲಿನಲ್ಲಿದ್ದರು ಕಾಗೋಡಿಗೆ ತೆರಳುವ ಮುನ್ನ ಲೋಹಿಯಾರು ಸಾಗರ ಜೈಲಿಗೆ ತೆರಳಿ ಗಣಪತಿಯಪ್ಪರ ಯೋಗ ಕ್ಷೇಮ ವಿಚಾರಿಸಿ "ಇದೊಂದು ದೇಶದಲ್ಲೇ ಮಹತ್ವಪೂಣ೯ವಾದ ಹೋರಾಟವನ್ನು ಪ್ರಾರಂಬಿಸಿರುವುದು ನಮಗೆಲ್ಲ ಆನಂದವಾಗಿದೆ, ಈ ಹೋರಾಟದಲ್ಲಿ ಜಯ ನಿಮ್ಮದಾಗುತ್ತದೆ, ಭಯ ಪಡಬೇಡಿ" ಎನ್ನುತ್ತಾರೆ.
  ಸತ್ಯಾಗ್ರಹ ಸ್ಥಳದಲ್ಲಿ ಲೋಹಿಯಾರನ್ನು ಪೋಲಿಸರು ಬಂದಿಸಲಾಗದೆ ನಿಸ್ಸಾಹಯಕರಾಗುತ್ತಾರೆ ಆದರೆ ಅವತ್ತಿನ ರಾತ್ರಿ ಪೋಲಿಸರು ಕಾಗೋಡಿನ ದೀವರ ಮನೆಗಳಿಗೆ ನುಗ್ಗಿ ಹೆಂಗಸರು, ಮಕ್ಕಳು ಮತ್ತು ವೃದ್ದರಾದಿಯಾಗಿ ಎಲ್ಲರ ಮೇಲೂ ಲಾಠಿ ಪ್ರಹಾರ, ದೌಜ೯ನ್ಯದ ಹಿಂಸಾಚಾರ ನಡೆಸಿದ್ದು ಸ್ವಾತಂತ್ರ ಭಾರತದ ಒ0ದು ಕಪ್ಪು ಚುಕ್ಕೆ.
   ಅವತ್ತು ರಾತ್ರಿ ಸಾಗರಕ್ಕೆ ಬಂದು ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತಂಗಿದ್ದ ಸಂಸದ ಡಾ. ರಾಮ ಮನೋಹರ ಲೋಹಿಯಾ ಮತ್ತು ಅವರ ಜೊತೆ ಇದ್ದ ಎಂ.ಪಿ. ಈಶ್ವರಪ್ಪ, ಮುಲ್ಕಾ ಗೋವಿಂದ ರೆಡ್ಡಿ, ಖಾದ್ರಿ ಶಾಮಣ್ಣ ಮತ್ತು ಸಾಗರದ ಜಿ.ಆರ್.ಜಿ.ಯವರನ್ನು ಬಂದಿಸಿ ಸಾಗರದ ಪೋಲಿಸ್ ಲಾಕಪ್ ನಲ್ಲಿ ಇಡುತ್ತಾರೆ.
  ಮರುದಿನ ಸಾಗರ ಕೋಟಿ೯ಗೆ ಹಾಜರ್ ಪಡಿಸಿ ಕೇಸು ದಾಖಲಿಸುತ್ತಾರೆ ಇವರ ಮೇಲಿನ ಆಪಾದನೆ "ಡಾ. ಲೋಹಿಯಾರವರು ತಮ್ಮ ಘೋಷಣೆ ಅನುಸಾರವಾಗಿ ತಮ್ಮ 29 ಮಂದಿ ಸಂಗಡಿಗರೊಂದಿಗೆ ಮತ್ತು ನೂರು ಮಂದಿ ಇತರರೊಂದಿಗೆ ಕಾಗೋಡಿನ ಗುರುವೇ ಗೌಡರ ಜಮೀನಿನ ಅತಿಕ್ರಮ ಪ್ರವೇಶ ಮಾಡಿ ಬೇಲಿಯನ್ನು ಕಿತ್ತರೆಂದು, ಕಾನೂನು ವಿರುದ್ದ ಸಭೆ ನಡೆಸಿದರು, ಇದು ಗಣನೀಯ ಅಪರಾದ ಅದಕ್ಕಾಗಿ ಬಂದಿಸಲಾಯಿತು" ಅಂತ.
  ಅವತ್ತೇ ಸಾಗರದಿಂದ ರೈಲಿನಲ್ಲಿ ಬೆಂಗಳೂರಿಗೆ ಒಯ್ದು ಕ್ರೆಸೆಂಟ್ ಹೌಸ್ ನಲ್ಲಿಡುತ್ತಾರೆ, ಲೋಹಿಯಾ ಈ ಭವ್ಯ ಸೆರಮನೆ ವಿರೋದಿಸುತ್ತಾರೆ ಪುನಃ ಜೂನ್ 20 ರಂದು ಸಾಗರದ ಮ್ಯಾಜಿಸ್ಟ್ರೇಟ್ ಕೋಟ್೯ನಲ್ಲಿ ಹಾಜರು ಪಡಿಸಿದಾಗ ಲೋಹಿಯಾ ನ್ಯಾಯಮೂರ್ತಿಗಳನ್ನು ಕುರಿತು " ರೈತರು ತಲೆತಲಾಂತರದಿಂದ ಉಳುಮೆ ಮಾಡಿ ಕೊಂಡು ಬಂದ ಭೂಮಿಯನ್ನು ಊಳಿದರೆ ಅತಿಕ್ರಮ ಪ್ರವೇಶವಾಗುತ್ತದಾ? ಮೈಸೂರು ಲ್ಯಾಂಡ್ ರೆವಿನ್ಯೂ ಕೋಡ್ 79ನೇ ವಿದಿ ಪ್ರಕಾರ ರೈತರಿಗೆ ನೀವು ನ್ಯಾಯದ ರಕ್ಷಣೆ ಕೊಡಬೇಕಾಗಿತ್ತು ಬದಲಾಗಿ ನೀವು ಅಪರಾದ ಮಾಡದ ರೈತರಿಗೆ ಜೈಲು ಶಿಕ್ಷೆ ನೀಡುತ್ತಿದ್ದೀರಿ, ನ್ಯಾಯಾದೀಶರೇ ಕಾನೂನು ಉಲ್ಲಂಘಿಸುತ್ತಿದ್ದೀರಿ ಆದ್ದರಿಂದ ನಾನು ಕಾನೂನು ಭಂಗ ಚಳವಳಿ ಮಾಡಲು ಬಂದಿದ್ದೀನಿ " ಎ೦ದದ್ದು ನ್ಯಾಯಾದೀಶರಿಗೆ ದಿಗಿಲಾಯಿತು ಕೇಸನ್ನು ಜುಲೈ 3ಕ್ಕೆ ಅಡ್ಜನ್೯ ಮಾಡಿದರು.
  ಇದು ದೇಶ ಮತ್ತು ಅಂತರಾಷ್ಟ್ರಿಯ ಸುದ್ದಿ ಆಯಿತು ಡಾ.ಲೋಹಿಯಾ ಬಂದನದ ಅನಾಹುತ ಅರಿತ ಸಕಾ೯ರ ಜೂನ್ 22ಕ್ಕೆ ಲೋಹಿಯಾರ ಮೇಲಿನ ಎಲ್ಲಾ ಕೇಸು ಹಿಂದೆ ತೆಗೆದು ಕೊಂಡು ಜೈಲಿನಿಂದ ಬಿಡುಗಡೆ ಮಾಡುತ್ತದೆ.
  ಲೋಹಿಯಾ ಬಿಡುಗಡೆ ನಂತರ ಸಾಗರ ನ್ಯಾಯಾಲಯದಲ್ಲಿ ಸತ್ಯಾಗ್ರಹಿಗಳಿಗೆ ಅತಿಕ್ರಮ ಪ್ರವೇಶ ಎಂಬುದರ ಮೇಲೆ ಶಿಕ್ಷೆ ನೀಡುವುದು ತಪ್ಪಿತು ಮುಂದೆ ಸತ್ಯಾಗ್ರಹಿಗಳು ಜೈಲುಶಿಕ್ಷೆ ಇಲ್ಲದೆ ಬಿಡುಗಡೆ ಹೊಂದಿದರು ಇದು ಜಮೀನ್ದಾರರಿಗೆ ದೊಡ್ಡ ಸೋಲು ಮತ್ತು ಕಾಗೋಡು ಹೋರಾಟಕ್ಕೆ ದೊಡ್ಡ ಗೆಲುವಾಯಿತು.
  ಶಾಂತವೇರಿ ಗೋಪಾಲಗೌಡರು ಕಾಗೋಡು ಹೋರಾಟ ರಾಷ್ಟ್ರ ಮಟ್ಟದಲ್ಲಿ ಜನರ ಗಮನ ಸೆಳೆಯಲು ಡಾ. ಲೋಹಿಯಾರನ್ನು ಆಹ್ವಾನಿಸಲು ಆಗ ಜೈಲಲ್ಲಿದ್ದ ಗಣಪತಿಯಪ್ಪರಿಂದ ಕೋರಿಕೆ ಪತ್ರ ಪಡೆದು ಲೋಹಿಯಾರನ್ನು ಆಹ್ವಾನಿಸಿದ್ದರು.
(ಮುಂದಿನ ಭಾಗ ಜೆ.ಪಿ.ಯವರು ಕಾಗೋಡು ಹೋರಾಟಕ್ಕೆ ಬೆಂಬಲಿಸಲು ಬಂದದ್ದು)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...