Skip to main content

3534. ಆನಂದಪುರಂನ ರೈತ ಬಂದು ಸಂಸ್ಥೆಯ ನಾಲ್ಕು ಕಾರ್ಮಿಕರ ಕೊಲೆ

#ಆ_ಕರಾಳ_ರಾತ್ರಿ_ನಡೆದ_ನಾಲ್ಕು_ಕೊಲೆಗಳು.
#ರಾಜ್ಯದಲ್ಲೇ_ಸೆನ್ಸೇಶನಲ್_ಸುದ್ದಿ_ಆಗಿತ್ತು.

#ತೀರ್ಥಹಳ್ಳಿ_ಸಂಕದಹೊಳೆ

#ಹೊಸನಗರದ_ವಾರಂಬಳ್ಳಿಯಲ್ಲಿ_ನಡೆದ

#ನಾಲ್ಕು_ಕಾರ್ಮಿಕರ_ಕೊಲೆ!?

#ಆನಂದಪುರಂ_ರೈತ_ಬಂದು_ಗ್ರಾಮೋದ್ಯೋಗಕ್ಕೆ_ಕಪ್ಪು_ಚುಕ್ಕೆ_ಆದ_ಘಟನೆ

#ಕೊನೆ_ಕ್ಷಣದಲ್ಲಿನ_ಪೋನ್_ಕರೆ_ಮುಖ್ಯ_ಗುಮಸ್ತರಾಗಿದ್ದ_ರಾಮಭಟ್ಟರ_ಜೀವಉಳಿಸಿತು.

#ಹಣದಾಸೆಗೆ_ಕೊಲೆಮಾಡಿದವರು_ಗ್ರಾಮೋದ್ಯೋಗದ_ಮಾಜಿ_ಡ್ರೈವರ್_ಗಳು.

#Anandapuram #Raithabhandhu #Gramodyoga #Subbannanayak #shivapura #Hebri #Ramabhat #sankadahole #varamballi

   1983 ರಲ್ಲಿ ಆನಂದಪುರಂ ರೈತ ಬಂಧು ಗ್ರಾಮೋದ್ಯೋಗದ ನಾಲ್ಕು ಕಾಮಿ೯ಕರ ಕೊಲೆ ರಾಜ್ಯದಲ್ಲೇ ಸೆನ್ಸೇಷನಲ್ ಸುದ್ದಿ ಮತ್ತು ಆತಂಕಕ್ಕೆ ಕಾರಣ ಆಗಿತ್ತು.

   ತೀರ್ಥಹಳ್ಳಿಯ ಪೋಲಿಸ್ ಠಾಣೆಗೆ ಬೆಳ್ಳ೦ಬೆಳಗೆ ಆ ದಿನ ದಿನಾಂಕ 28- ಆಗಸ್ಟ್ - 1983 ಬಂದ ಮಾಹಿತಿ ತೀರ್ಥಹಳ್ಳಿ  ಆನಂದಪುರಂ ರಸ್ತೆಯ ಸಂಕದ ಹೊಳೆ ಹತ್ತಿರ ಲಾರಿ ಅಪಘಾತವಾಗಿ ಇಬ್ಬರು ಮೃತರಾಗಿದ್ದಾರೆಂಬುದು.

  ಪೋಲಿಸ್ ಸಬ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ದಾವಿಸಿದ ಮೇಲೆ ಅವರು ಗಮನಿಸಿದ್ದು ಇದು ಅಪಘಾತವಲ್ಲ ಕೊಲೆ! ಅಂತ.

   ಈ ಲಾರಿ ಆನಂದಪುರಂನ ರೈತ ಬಂದು ಗ್ರಾಮೋದ್ಯೋಗದ ಸುಬ್ಬಣ್ಣ ನಾಯ್ಕರಿಗೆ ಸೇರಿದ್ದು ಅಂತ ಖಚಿತಪಡಿಸಿಕೊಳ್ಳುತ್ತಾರೆ.

   ಮೇಲು ನೋಟಕ್ಕೆ ಹಣಕ್ಕಾಗಿ ಅಥವ ದ್ವೇಷವೋ ಜಗಳವೋ ಆಗಿ ಲಾರಿ ಒಳಗಿನ ಮರದ ಕಟ್ಟೆಯಿಂದ ತಲೆಗೆ ಹೊಡೆದು ಕೊಂದ ಕೊಲೆ ಎಂದು ಅಂದಾಜಿಸುತ್ತಾರೆ.

  ತಕ್ಷಣ ಆನಂದಪುರಂ ರೈತ ಬಂದು ಗ್ರಾಮೋದ್ಯೋಗಕ್ಕೆ ಮಾಹಿತಿ ನೀಡಿ ಸಂಬಂದಪಟ್ಟವರಿಗೆ ಬರುವಂತೆ ತಿಳಿಸುತ್ತಾರೆ.
 
  ತಕ್ಷಣ ಆನಂದಪುರಂನಿಂದ ರೈತ ಬಂದು ಗಾಮೋದ್ಯೋಗದ ಅಕ್ಕಿ ಗಿರಣಿ ವ್ಯವಸ್ಥಾಪಕರಾದ ಶಂಕರ್ ನಾಯಕ್ ಎಂಬುವವರು ಬರುತ್ತಾರೆ.

   ಅವರು ಈ ಲಾರಿ ತಮ್ಮ ಸಂಸ್ಥೆಯದ್ದೆಂದು ಮತ್ತು ಕೊಲೆಯಾದ ಇಬ್ಬರಲ್ಲಿ ಒಬ್ಬ ತಮ್ಮ ಸಂಸ್ಥೆಯ ಲಾರಿ ಡ್ರೈವರ್ ಇನ್ನೊಬ್ಬರು ರೈಟರ್ ಅಂತ ಗುರುತಿಸುತ್ತಾರೆ.
 
  ಮಹಜರ್ ಮುಂತಾದದ್ದು ಮುಗಿಸಿ ತೀರ್ಥಹಳ್ಳಿ ಠಾಣಿಗೆ ಸಬ್ ಇನ್ಸ್ಪೆಕ್ಟರ್ ತಲುಪಿ ಸ್ವಲ್ಪ ಸಮಯದಲ್ಲಿ ಬಂದ ಇನ್ನೊಂದು ಮಾಹಿತಿ ಸಬ್ ಇನ್ಸ್ ಸ್ಪೆಕ್ಟರ್ ಗೆ ನಿಜಕ್ಕೂ ಆತಂಕವಾಗುತ್ತದೆ.

   ಅದೇನೆಂದರೆ ಆರಗದಿಂದ ಮುಂದೆ #ವಾರಂಬಳ್ಳಿಯಲ್ಲಿ #ರೈತಬಂದು ಗ್ರಾಮೋದ್ಯೋಗದ ಇನ್ನೊಂದು ಲಾರಿ ಅಪಘಾತವಾಗಿ ಇಬ್ಬರು ಮೃತರಾಗಿದ್ದಾರೆ ಅಂತ.

   ಆದರೆ ಅಪರಾದ ಶಾಸ್ತ್ರ ಓದಿ ತರಬೇತಿ ಪಡೆದ ಸಬ್ ಇನ್ಸ್ಪೆಕ್ಟರ್ ಗೆ ಇದೂ ಕೊಲೆ ಇರಬಹುದು ಅನ್ನಿಸಿದರೂ, ಇಲ್ಲಿ ಕೊಲೆ ಮಾಡಿದವರು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅಪಘಾತ ಆಗಿರಬಾರದೇಕೆ ಅನ್ನಿಸುತ್ತದೆ.

  ಈ ಘಟನೆ ನಡೆದ ಸ್ಥಳ ಹೊಸ ನಗರ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ಠಾಣಾಧಿಕಾರಿಗೆ ಮಾಹಿತಿ ನೀಡಿ ಆನಂದಪುರಂನ ಅಕ್ಕಿ ಗಿರಣಿ ಮ್ಯಾನೇಜರ್ ಶಂಕರ್ ನಾಯಕರನ್ನು ಬರಲು ತಿಳಿಸಿ ಹೋಗುತ್ತಾರೆ.
 
  ವಾರಂಬಳ್ಳಿಯಲ್ಲಿಯೂ ಸಂಕದಹೊಳೆಯಲ್ಲಿಯ ಜೋಡಿ ಕೊಲೆ ಇಲ್ಲಿ ಪುನಾರವರ್ತನೆ ಆಗಿದ್ದು ಗೊತ್ತಾಗುತ್ತದೆ.

     ಕೊಲೆ ಆದ ಡ್ರೈವರ್ ಮತ್ತು ರೈಟರ್ ಮತ್ತು ಲಾರಿ ಆನಂದಪುರಂ ರೈತ ಬಂದು ಗ್ರಾಮೋದ್ಯೋಗದ ಮಾಲಿಕರಾದ ಸುಬ್ಬಣ್ಣ ನಾಯಕರಿಗೆ ಸೇರಿದ್ದೆಂದು ಮ್ಯಾನೇಜರ್ ಶಂಕರ್ ನಾಯಕರು ದೃಡಪಡಿಸುತ್ತಾರೆ.

  ಈಗಿನ ಹಾಗೆ ಸೆಲ್ ಫೋನ್, ಟಿವಿ ಇರದಿದ್ದರೂ ಸುದ್ದಿ ಜನರಿಂದ ಜನರಿಗೆ ಬಾಯಿಂದ ಬಾಯಿಗೆ ಹರಡಿ ಸುಬ್ಬಣ್ಣ ನಾಯಕರಿಗೆ ಸೇರಿದ ಎರೆಡು ಲಾರಿ ಅಕ್ಕಿ ಮಾರಾಟ ಮಾಡಿ ಆಗುಂಬೆ ಮಾರ್ಗದಲ್ಲಿ ಬರುವಾಗ ತೀರ್ಥಹಳ್ಳಿ ದಾಟಿದ ಮೇಲೆ ರಾತ್ರಿ 2 ರಿಂದ ಬೆಳಗಿನ ಜಾವ 6ರ ಒಳಗೆ ನಾಲ್ಕು ಜನ ಕಾರ್ಮಿಕರನ್ನು ಕೊಲೆ ಮಾಡಿ ಲಕ್ಷಾಂತರ ರೂಪಾಯಿ ದರೋಡೆ ಮಾಡಿದ್ದಾರೆ ಎಂಬ ಸುದ್ದಿ ರಾಜ್ಯದಾದ್ಯಂತ ಸನ್ಸೇಷನಲ್ ಸುದ್ದಿ ಆಗುತ್ತದೆ.

  ರೈತ ಬಂದು ಗ್ರಾಮೋದ್ಯೋಗ ಮಿನಿ ಲಾರಿ ನೊಂದಾವಣಿ ಸಂಖ್ಯೆ CNS 4477 ಮತ್ತು MEG 6999 ಲಾರಿ ಚಲಾಯಿಸುತ್ತಿದ್ದ ಡ್ರೈವರ್ ಗಳಾದ  #ಎ_ಎಸ್._ಲೋಕೇಶ್ ಮತ್ತು #ಶಿವಪ್ಪ ಹಾಗೂ ರೈಟರ್ ಗಳಾದ #ಮಂಜುನಾಥ ಮತ್ತು #ವಿಶ್ವನಾಥ_ರೈ ಕೊಲೆಯಾದವರು.

   ಈ ಎರೆಡು ಜೋಡಿ ಕೊಲೆ ಮಾಡಲು ಬಳಸಿದ್ದು ಲಾರಿಗೆ ಆ ಕಾಲದಲ್ಲಿ ನಿಂತಾಗ ಚಕ್ರಕ್ಕೆ ತಡೆಗಾಗಿ ನೀಡುತ್ತಿದ್ದ ಮರದ ಕಟ್ಟೆ ಎಂಬ ಮರದ ತುಂಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾರೆ.

   ನಂತರ ಪೋಲಿಸರು ಇದನ್ನು ಹೈ ಪ್ರೊಪೈಲ್ ಕೇಸಾಗಿ ಪರಿಗಣಿಸಿ ತನಿಖೆ ನಡೆಸಿದಾಗ ಸಿಕ್ಕಿಬಿದ್ದಿದ್ದು ಇಬ್ಬರು ಕೊಲೆಗಾರರು.
  
  ಇವರಿಬ್ಬರೂ ಈ ಮೊದಲು ಸುಬ್ಬಣ್ಣನಾಯಕರ ರೈತ ಬಂಧು ಗ್ರಾಮೋದ್ಯೋಗದ ಅಕ್ಕಿ ಗಿರಣಿ ಸಂಸ್ಥೆಯಲ್ಲೇ ಡ್ರೈವರ್ ಆಗಿದ್ದವರು.

   ನಂತರ ಇವರಿಬ್ಬರು ಡ್ರೈವರ್ ಗಳು ಪಾಲುದಾರರಾಗಿ ದೊಡ್ಡ ಲಾರಿ ಒಂದನ್ನು ಖರೀದಿಸಿದ್ದರು.

   ಇವರಿಗೆ ಹಣದ ಅಡಚಣೆ ಇದ್ದಿತ್ತು ಅದಕ್ಕಾಗಿ ಹಣಕ್ಕಾಗಿ ಈ ಕೊಲೆ ನಡೆಸುತ್ತಾರೆ.
 
  ಶಿವಮೊಗ್ಗ ನ್ಯಾಯಾಲಯದಲ್ಲಿ ಜೀವಾವದಿ ಶಿಕ್ಷೆಗೆ ಒಳಗಾದ ಕೆ.ಟಿ. ಮೊಹಮದ್ ಮತ್ತು ಟಿ.ಎಸ್.ಚಂದ್ರಶೇಖರ್ ಆಲಿಯಾಸ್ ಚಂದ್ರ ಶಿಕ್ಷೆ ಮುಗಿಸಿ ಈಗ ಸಜ್ಜನರಾಗಿ ಜೀವನ ಮಾಡುತ್ತಿದ್ದಾರೆ.

   ನ್ಯಾಯಾಲಯದ ಆದೇಶದಲ್ಲಿ ಅಡಕ ಆಗಿರುವ ಪೋಲಿಸರ ತನಿಖೆ ಮಹಜರ್ ಪ್ರಕಾರ ಹಿಂದಿನ ದಿನ ಈ ಎರೆಡೂ ಲಾರಿಗಳು ಕೇರಳದಲ್ಲಿ ಅಕ್ಕಿ ಮಾರಾಟ ಮಾಡಿ, ಲೈನ್ ಸೇಲ್ ಮಾಡಿ ತಂದ ಹಣ ರೈಟರ್ ಗಳು ಮಂಗಳೂರಿನ ಈ ಸಂಸ್ಥೆಯ ಕಚೇರಿಗೆ ತಲುಪಿಸುತ್ತಾರೆ.

    ಅಲ್ಲಿ ಮುಖ್ಯ ಗುಮಸ್ಥರಾಗಿದ್ದ ಈಗ ಸುಬ್ಬಣ್ಣ ನಾಯಕರ ಶಿವಪುರದ ಅಕ್ಕಿ ಗಿರಣಿ ಖರೀದಿಸಿ ನಡೆಸುತ್ತಿರುವ ರಾಮ ಭಟ್ಟರು ಲೆಖ್ಖ ಪರೀಶಿಲಿಸಿ ನಂತರ ರೂಪಾಯಿ ಬಂಡಲ್ ಗಳನ್ನು ಮಾಡುವ ಸಂದರ್ಭದಲ್ಲಿ ಈ ಮಾಜಿ ಕೆಲಸಗಾರರು ಅಲ್ಲಿಗೆ ಬರುತ್ತಾರೆ.

    ಅವರ ಲಾರಿ ಕೂಡ ಮಂಗಳೂರಿಗೆ ಬಾಡಿಗೆ ಬಂದಿರುವುದಾಗಿ ಅವರು ರಾಮ ಭಟ್ಟರಿಗೆ ತಿಳಿಸುತ್ತಾರೆ.

  ಎರೆಡೂ ಮಿನಿ ಲಾರಿಗಳು ಹೆಬ್ರಿ ಸಮೀಪದ #ಶಿವಪುರದಲ್ಲಿನ ಸುಬ್ಬಣ್ಣ ನಾಯ್ಕರ ಮಿಲ್ ಗೆ ಹೋಗಿ ಅಲ್ಲಿಂದ ಆಗುಂಬೆ ಘಾಟಿಯ ಮುಖಾಂತರ ಆನಂದಪುರಂಗೆ ಹೋಗುವುದು ನಡೆದು ಬಂದ ಪದ್ಧತಿ.

     ಅದರಂತೆ ಅವತ್ತು ಈ ಎರೆಡು ಲಾರಿಗಳು ಶಿವಪುರಕ್ಕೆ ಹೋಗಿ ಅಲ್ಲಿಂದ ಆನಂದಪುರಂಗೆ ಹೊರಡುವ ಕೊನೆ ಕ್ಷಣದಲ್ಲಿ ಆನಂದಪುರಂ ಗ್ರಾಮೋದ್ಯೋಗದಿಂದ ಬಂದ ಒಂದು ಪೋನ್ ಕರೆ ರಾಮ ಭಟ್ಟರು ಶಿವಪುರದಲ್ಲೇ ಉಳಿಯಬೇಕು, ಆನಂದಪುರಂ ನಿಂದ ಅಕ್ಕಿ ತುಂಬಿದ ಇನ್ನೆರೆಡು ಲಾರಿ ಕೇರಳಕ್ಕಾಗಿ ಹೊರಟಿದೆ ಅದರಲ್ಲಿ ರಾಮ ಭಟ್ಟರು ಕೇರಳಕ್ಕೆ ಹೋಗಿ ಅಕ್ಕಿ ಮಾರಾಟ ಮಾಡಿ ಬರಬೇಕೆಂದು ಸ್ವತಃ ಸುಬ್ಬಣ್ಣ ನಾಯಕರೇ ತಿಳಿಸಿದ್ದರಿಂದ ರಾಮ ಭಟ್ಟರು ಈ ಆನಂದವುರಂಗೆ ಹಣದ ಜೊತೆ ಹೊರಟವರು ತಮ್ಮ ಪ್ರಯಾಣ ರದ್ದು ಮಾಡುತ್ತಾರೆ.

   ಆದ್ದರಿಂದ ಆನಂದಪುರಂಗೆ ಹೊರಟ ಒಂದು ಮಿನಿ ಲಾರಿಯವರ ಹತ್ತಿರ 65 ಸಾವಿರ ಮತ್ತು ಇನ್ನೊಂದು ಮಿನಿ ಲಾರಿ ಹತ್ತಿರ 50 ಸಾವಿರ ನೀಡಿ ಶಿವಪುರದಲ್ಲೇ ಆನಂದಪುರಂನಿಂದ ಬರುವ ಲಾರಿಗೆ ಕಾಯುತ್ತಾ ಉಳಿಯುತ್ತಾರೆ.

   ಈ ಎರೆಡೂ ಮಿನಿ ಲಾರಿ ಹೆಬ್ರಿ ದಾಟುವಾಗ ಈ ಇಬ್ಬರು ಕೊಲೆಗಾರರು ಈ ಲಾರಿಗೆ ಕೈ 
ಮಾಡುತ್ತಾರೆ.

   ತಮ್ಮ ದೊಡ್ಡ ಲಾರಿ ಆಗುಂಬೆ ದಾರಿಯಲ್ಲಿ ಬರಲಾಗದು ಅದಕ್ಕೆ ಅದನ್ನು ಹುಲಿಕಲ್ ಮಾರ್ಗದಲ್ಲಿ ಕಳಿಸಿದ್ದು ಸ್ವಲ್ಪ ರಿಪೇರಿ ಇರುವುದರಿಂದ ಡ್ರೈವರ್ ನಿಧಾನವಾಗಿ ಬರುತ್ತಾನೆ.

   ನಮಗೆ ಸ್ವಲ್ಪ ಅರ್ಜೆಂಟ್ ಇರುವುದರಿಂದ ನಿಮ್ಮ ಜೊತೆ ಅಗುಂಬೆ ಮೇಲೆ ಬರುವುದಾಗಿ ಹೇಳುತ್ತಾರೆ.

    ತಮ್ಮ ಸಂಸ್ಥೆಯ ಹಳೆಯ ಪರಿಚಿತ ಡ್ರೈವರ್ ಗಳೇ ಈಗ ಲಾರಿ ಖರೀದಿಸಿ ಮಾಲಿಕರೂ ಆಗಿರುವುದರಿಂದ ವಿಶೇಷ ಗೌರವದಿಂದ ಇವರು ಅವರನ್ನು ಜೊತೆಗೆ ಕರೆ ತರುತ್ತಾರೆ.

   ನಂತರ ತೀರ್ಥಹಳ್ಳಿ ದಾಟಿದ ಮೇಲೆ ಇವರ ಸಂಚಿಗೆ ಕೊಲೆಯಾಗಿ ಜೀವ ಕಳೆದುಕೊಳ್ಳುತ್ತಾರೆ.

  ಕೊಲೆ ಮಾಡಿದವರು ಬೆಳ್ಳಂಬೆಳಗೆ ನಗರ ತಲುಪಿ ಅಲ್ಲಿಂದ ಕುಂದಾಪುರ ತಲುಪಿ ತಮ್ಮ ಲಾರಿಯಲ್ಲಿ ಹುಲಿಕಲ್ ಘಾಟಿ ಮೂಲಕ ಬರುವುದರಿಂದ ರಾತ್ರಿ ಇವರು ಮಾಡಿದ ಕೊಲೆ ಗೊತ್ತಾಗುವುದಿಲ್ಲ ಮತ್ತು ಇವರನ್ನು ನೋಡಿದ್ದ ನಾಲ್ಕು ಜನರನ್ನು ಮುಗಿಸಿರುವುದರಿಂದ ಸಾಕ್ಷಿ ಸಬೂತು ಇಲ್ಲ ಅಂತ ಬಾವಿಸಿರುತ್ತಾರೆ.
 
  ಆದರೆ ಪೋಲಿಸ್ ತನಿಖೆಯಲ್ಲಿ ಕೊಲೆ ಮಾಡಿದ್ದು ಒಪ್ಪಿಕೊಳ್ಳುತ್ತಾರೆ.

   ಅವತ್ತು ಮಂಗಳೂರು ಆಫೀಸಿನಲ್ಲಿ ಕೇರಳದಿಂದ ಅಕ್ಕಿ ಮಾರಾಟದ ಹಣ ಎಣಿಸುವಾಗಲೇ ಅದನ್ನು ಎಗುರಿಸುವ ನಿರ್ಧಾರ ಇವರು ಮಾಡುತ್ತಾರೆ.

    ಶಿವಪುರದಿಂದ ಬಂದ ಲಾರಿಯಲ್ಲಿ ರಾಮ ಭಟ್ಟರು ಇರುವುದಿಲ್ಲ ಆದರೆ ಪ್ರತಿ ಲಾರಿಯಲ್ಲಿ ಒಬ್ಬ ಡ್ರೈವರ್ ಮತ್ತು ಒಬೃ ರೈಟರ್ ಮಾತ್ರ ಇರುತ್ತಾರೆ.

    ಆದರೆ ಎರೆಡೂ ಲಾರಿಯನ್ನು ಇವರು ದೋಚಲೇ ಬೇಕಾಗಿತ್ತು, ಎರೆಡೂ ಲಾರಿಯವರು ಇವರನ್ನ ನೋಡಿರುತ್ತಾರೆ.

    ಹೆಬ್ರಿಯಿಂದ ತೀರ್ಥಹಳ್ಳಿಯ ಪಡಿಯಾರರ ರಾತ್ರಿ ಕ್ಯಾಂಟೀನ್ ತನಕ ಇವರೇ ಲಾರಿ ಚಲಾಯಿಸುತ್ತಾರೆ.

  ಪಡಿಯಾರ್ ಕ್ಯಾಂಟೀನ್ ನಲ್ಲಿ ಚಹಾ ಕುಡಿದು ಹೊರಟಾಗ ಒ0ದು ಲಾರಿಯವರು ಸ್ವಲ್ಪ ನಿದ್ದೆ ಮಾಡಿ ಬರುವುದಾಗಿ ಅಲ್ಲೇ ಲಾರಿ ನಿಲ್ಲಿಸುತ್ತಾರೆ. 

  ಮೊದಲ ಲಾರಿಯನ್ನು ಇವರೇ ಚಲಾಯಿಸುತ್ತಾರೆ ಲಾರಿಯಲ್ಲಿದ್ದ ಡ್ರೈವರ್ ಮತ್ತು ರೈಟರ್ ಗೆ ವಿಪರೀತ ನಿದ್ದೆ #ಸ೦ಕದಹೊಳೆಗೆ ಬರುವುದರಲ್ಲಿ ನಿದ್ದೆಯಲ್ಲಿದ್ದ ಇಬ್ಬರ ತಲೆಗೆ ಮರದ ಕಟ್ಟೆಯಿಂದ ಬಡಿದು ಸಾಯಿಸಿ ಬೆಡ್ ಶೀಟ್ ಹೊದಿಸಿ ಲಾರಿ ರಸ್ತೆ ಬದಿಗೆ ನಿಲ್ಲಿಸಿ ಹಿಂದಿನಿಂದ ಬರುವ ಇನ್ನೊಂದು ಲಾರಿಗೆ ಕಾಯುತ್ತಾರೆ.

   ಸ್ವಲ್ಪ ತಡವಾಗಿ ಬಂದ ಆ ಲಾರಿಗೆ ಕೈ ಮಾಡಿ ಹತ್ತುತ್ತಾರೆ, ಅವರಿಗೆ ಈ ಲಾರಿಯವರು ಸ್ವಲ್ಪ ನಿದ್ದೆ ಮಾಡಿ ಬರ್ತಾರಂತೆ ಅನ್ನುತ್ತಾರೆ.

    ಮತ್ತು ಇವರೇ ಈ ಲಾರಿಯನ್ನು ಒಡಿಸುತ್ತಾರೆ, ಲಾರಿ ಚಾಲಕ ಮತ್ತು ರೈಟರ್ ನಿದ್ದೆ ಮಾಡುತ್ತಾರೆ, ನಿದ್ದೆಯಲ್ಲೇ ಅವರ ತಲೆಗೂ ಮೊದಲ ಲಾರಿಯವರನ್ನ ಕೊಂದಂತೆ ಮರದ ಕಟ್ಟೆಯಿಂದ ಹೊಡೆದು ಕೊಂದು ಹಣದೊಂದಿಗೆ ಪರಾರಿ ಅಗುತ್ತಾರೆ.

 ಇಡೀ ನ್ಯಾಯಾಲಯದ ಕಲಾಪ ಮುಖ್ಯ ಸಾಕ್ಷಿ #ರಾಮಭಟ್ಟರ ಹೇಳಿಕೆಯಿಂದ ಇವರಿಬ್ಬರಿಗೆ ಶಿಕ್ಷೆ ಆಗುತ್ತದೆ.

  ಕೊನೆಯ ಕ್ಷಣದ ಆ ಟೆಲಿಫೋನ್ ಕರೆ ಬರದೇ ಇದ್ದರೆ ರಾಮ ಭಟ್ಟರನ್ನೂ ಇವರು ಕೊಲ್ಲದೇ ಬಿಡುತ್ತಿರಲಿಲ್ಲ ಈ ದುಷ್ಟ ಕೊಲೆಗಾರರು.

  (ಶಿವಮೊಗ್ಗದ ಸೆಷೆನ್ ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ 37/83 ಮತ್ತು 11/ 84 ರ ತೀರ್ಪು ಆದರಿಸಿ)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...