#ಪತ್ರಕರ್ತ_ಎಂ_ನವೀನ್_ಕುಮಾರ್
#ಶಿಕಾರಿಪುರ_ತಾಲ್ಲೂಕು_ಪತ್ರಕರ್ತರ_ಸಂಘದ_ಅಧ್ಯಕ್ಷರು
#ಬಹುಮುಖ_ಪ್ರತಿಭೆ_ಅವರದ್ದು
#ಸದ್ಯದಲ್ಲೇ_ಬಿಡುಗಡೆ_ಆಗಲಿದೆ_ಅವರು_ಬರೆದ_ಪುಸ್ತಕ
#ಬುದ್ದಿವಂತರು_ಬಡವರಾಗುವುದೇಕೆ?
#ಈ_ಪುಸ್ತಕದಲ್ಲಿ_ಇದಕ್ಕೆ_ಪರಿಹಾರವೂ_ಇದೆ.
#Shikaripura #journalist #Naveen #digitalcreator #influencer #writer
ಗೆಳೆಯ ಶಿರಾಳಕೊಪ್ಪದ ಎಂ. ನವೀನ್ ಕುಮಾರ್ ಶಿಕಾರಿಪುರ ತಾಲ್ಲೂಕಿನ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದಾರೆ ಅವರಿಗೆ ಅಭಿನಂದನೆಗಳು.
ಇವರು ಬಹುಮುಖ ಪ್ರತಿಭೆಯ ಅಸಾದಾರಣ ಯುವಕರು, ತಾಳಗುಂದದ ಕನ್ನಡದ ಮೊದಲ ಶಾಸನ ಬೆಳಕಿಗೆ ತರಲು ವಿಶೇಷ ಪ್ರಯತ್ನ ಮಾಡಿದವರು.
ಕನ್ನಡಾಭಿಮಾನಿಗಳು, ಸದಾ ಯುವ ಜನಾಂಗಕ್ಕೆ ಸ್ವಯಂ ಉದ್ಯೋಗ ಇತ್ಯಾದಿ ಸ್ಪೂರ್ತಿ ತುಂಬುವ ಕ್ರಿಯಾಶೀಲರು.
ಅತ್ಯುತ್ತಮ ಓದುಗ- ವಾಘ್ಮಿ ಮತ್ತು ಬರಹಗಾರರೂ ಹೌದು.
ಇವರು ಈಗಾಗಲೇ ವಿದ್ಯಾರ್ಥಿಗಳಿಗೆ, ಸ್ವಯಂ ಉದ್ಯೋಗಿಗಳಿಗೆ ಅನೇಕ ಉಪಯುಕ್ತ ಪುಸ್ತಕ -ಕೈಪಿಡಿಗಳನ್ನ ಬರೆದು ಪ್ರಕಟಿಸಿದ್ದಾರೆ.
ಇವರ ಅಸಂಖ್ಯಾತ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟ ಆಗಿದೆ.
ಸದ್ಯದಲ್ಲೇ ಕನ್ನಡ ನಾಡಿನ ಜನರಿಗೆ ಇವರು ಬರೆದ ವಿಶೇಷ ಪುಸ್ತಕ ಕೈ ಸೇರಲಿದೆ ಈ ಪುಸ್ತಕದ ಶಿರ್ಷಿಕೆ #ಬುದ್ದಿವಂತರೇಕೆ_ಬಡವರು?...
ಇದಕ್ಕೆ ಮುನ್ನುಡಿ ಬರೆದಿದ್ದಾರೆ ಪ್ರಖ್ಯಾತ ಸಾಹಿತಿ ಕುಂ.ವೀರಭದ್ರಪ್ಪನವರು.
ನವೀನ್ ಕುಮಾರ್ ಅವರು ನಮ್ಮ ಮೆದುಳಿಗೇ ಕೆಲಸ ಕೊಡುತ್ತಾರೆ, ತರ್ಕ ಮಾಡಲು ಪ್ರೇರೇಪಿಸುತ್ತಾರೆ ಅಷ್ಟೇ ಅಲ್ಲ ಸೋತರೂ ಎದ್ದು ನಿಂತು ಮತ್ತೆ ಗೆಲ್ಲುವ ಪಾಠ ಹೇಳುತ್ತಾರೆ ಸದ್ಯದಲ್ಲಿ ಬಿಡುಗಡೆ ಆಗಲಿರುವ ಇವರು ಬರೆದ ಪುಸ್ತಕ ಈಗಿನ ತಲೆಮಾರಿಗೆ ದಾರಿ ದೀಪ ಆಗಲಿದೆ.
ನವೀನ್ ಕುಮಾರ್ ಅವರ #ಪೇಸ್_ಬುಕ್ ಲೇಖನ ಒಂದು ಇಲ್ಲಿ Repost ಮಾಡಿದ್ದೇನೆ ಓದಿ ಅವರ ಬರವಣಿಗೆ ಎಷ್ಟು ವಿಭಿನ್ನ ಎನ್ನಲು ಈ ಲೇಖನ ಸಾಕ್ಷಿ.
#ಪತ್ರಕರ್ತ_ನವೀನರ_ಪೇಸ್_ಬುಕ್_ಲೇಖನ...
#ಏನು_ಗೊತ್ತಿಲ್ಲದವರು_Empire_ಕಟ್ಟುತ್ತಾರೆ!
#ಎಲ್ಲಾ_ಗೊತ್ತಿರುವವರು_EMI_ಕಟ್ಟ್ತಾರೆ !
#ಏಕೆ?
#why?...
ಆ ಒಂದು "ಯಕ್ಷ ಪ್ರಶ್ನೆ"
#sciencebehindthemoney (ಹಣದ ಹಿಂದಿರುವ ವಿಜ್ಞಾನ) ಭಾಗ-1
ನಮಸ್ಕಾರ ಸ್ನೇಹಿತರೇ,
ನಾನು ಈ ಪುಸ್ತಕವನ್ನು ಅಥವಾ ನಮ್ಮ ಈ ಪಯಣವನ್ನು ಒಂದು ಸಣ್ಣ ಆದರೆ ಬಹುಶಃ ನಿಮ್ಮ ಜೀವನವನ್ನೇ ಬದಲಿಸಬಲ್ಲ ಒಂದು ಪ್ರಶ್ನೆಯೊಂದಿಗೆ ಆರಂಭಿಸಲು ಬಯಸುತ್ತೇನೆ.
ಮಹಾಭಾರತದಲ್ಲಿ ವನವಾಸದ ಸಮಯದಲ್ಲಿ ಯಕ್ಷನು ಧರ್ಮರಾಯನಿಗೆ ಜೀವನದ ಗಹನವಾದ ಪ್ರಶ್ನೆಗಳನ್ನು ಕೇಳಿದನು.
ಆ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದರಿಂದಲೇ ಪಾಂಡವರು ಬದುಕಿ ಉಳಿದರು.
ಇಂದು 21ನೇ ಶತಮಾನದಲ್ಲಿ, ನಮ್ಮ ಸಮಾಜದ ಪ್ರತಿಯೊಬ್ಬ ಮಧ್ಯಮ ವರ್ಗದ ಮನುಷ್ಯನನ್ನೂ, ಪ್ರತಿಯೊಬ್ಬ ಯುವಕನನ್ನೂ ಕಾಡುತ್ತಿರುವ ಆಧುನಿಕ "ಯಕ್ಷ ಪ್ರಶ್ನೆ" ಒಂದಿದೆ.
ಅದು ನಮ್ಮ ನಿದ್ದೆಗೆಡಿಸಿದೆ ಅದು ನಮ್ಮ ನೆಮ್ಮದಿಯನ್ನು ಕದ್ದಿದೆ
ಆ ಪ್ರಶ್ನೆ ಏನು ಗೊತ್ತೇ?...
ನಮ್ಮ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಗಣಿತದಲ್ಲಿ 100ಕ್ಕೆ 100 ಅಂಕ ಪಡೆದವರು, ತರಗತಿಗೆ ಮೊದಲ Rank ಬಂದವರು, ಎಂಬಿಎ (MBA) ಮತ್ತು ಸಿಎ (CA) ಪದವಿ ಪಡೆದ ಮೇಧಾವಿಗಳು ಜೀವನದ ಆರ್ಥಿಕ ಪರೀಕ್ಷೆಯಲ್ಲಿ ಯಾಕೆ ಪರದಾಡುತ್ತಿದ್ದಾರೆ?...
ಅದೇ ಸಮಯದಲ್ಲಿ... ಶಾಲೆಯ ಮೆಟ್ಟಿಲೇ ಹತ್ತದ ಸಹಿ ಹಾಕಲೂ ಬಾರದ ಲೆಕ್ಕದ ಗಂಧ-ಗಾಳಿ ಗೊತ್ತಿಲ್ಲದ ಎಷ್ಟೋ ಜನರು, ಸಾವಿರಾರು ಕೋಟಿ ರೂಪಾಯಿಗಳ ಸಾಮ್ರಾಜ್ಯವನ್ನು ಕಟ್ಟಿ, ಈ ಮೇಧಾವಿಗಳಿಗೆ ಕೆಲಸ ಕೊಡುತ್ತಿದ್ದಾರಲ್ಲ... ಇದು ಹೇಗೆ ಸಾಧ್ಯ?” ..
ಒಮ್ಮೆ ನಿಮ್ಮ ಸುತ್ತಮುತ್ತ ಕಣ್ಣಾಡಿಸಿ ನೋಡಿ. ಈ ದೃಶ್ಯ ನಿಮಗೆ ಪ್ರತಿದಿನ ಕಾಣಿಸುತ್ತದೆ.
ಒಬ್ಬ ವ್ಯಕ್ತಿ ಇದ್ದಾನೆ—ಅವನ ಹೆಸರು ‘ರಮೇಶ್’ ಎಂದುಕೊಳ್ಳೋಣ, ರಮೇಶ್ ಹತ್ತಿರ ಡಬಲ್ ಡಿಗ್ರಿ ಇದೆ.
ಎಕ್ಸೆಲ್ ಶೀಟ್ (Excel Sheet) ನಲ್ಲಿ ಎಂತಹದ್ದೇ ಕಷ್ಟದ ಲೆಕ್ಕವಿದ್ದರೂ ಕಣ್ಣುಮುಚ್ಚಿ ಬಿಡಿಸುತ್ತಾನೆ ಆತನ ಐಕ್ಯೂ (IQ) ತುಂಬಾ ಹೆಚ್ಚಿದೆ.
ಆದರೆ... ಪ್ರತಿ ತಿಂಗಳ 25ನೇ ತಾರೀಕು ಬಂತೆಂದರೆ ಸಾಕು, ರಮೇಶ್ ಮುಖದಲ್ಲಿ ಬೆವರು ಇಳಿಯುತ್ತದೆ.
ಮನೆ ಬಾಡಿಗೆ, ಸಾಲದ ಕಂತು (EMI), ಮಕ್ಕಳ ಸ್ಕೂಲ್ ಫೀಸ್... ಇವನ್ನೆಲ್ಲಾ ಹೊಂದಿಸಲು ಆತ ಹೈರಾಣಾಗುತ್ತಾನೆ.
ಆತನ ಬ್ಯಾಂಕ್ ಖಾತೆ ಸದಾ ಖಾಲಿ ಆತನ ಮನಸ್ಸು ಸದಾ ಆತಂಕದ ಗೂಡು.
ಇನ್ನೊಂದು ಕಡೆ ನೋಡಿ. ಅಲ್ಲಿ ‘ಶಿವಣ್ಣ’ ಇದ್ದಾನೆ. ಶಿವಣ್ಣನಿಗೆ ‘ಟ್ರಿಗ್ನಾಮೆಟ್ರಿ’ (Trigonometry) ಗೊತ್ತಿಲ್ಲ, ‘ಬ್ಯಾಲೆನ್ಸ್ ಶೀಟ್’ ಓದಲು ಬರುವುದಿಲ್ಲ. ಆತ ಮಾತನಾಡಿದರೆ ಹಳ್ಳಿ ಭಾಷೆ.
ಆದರೆ... ಶಿವಣ್ಣ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಆತ ಒಂದು ಸೈಟ್ ತಗೊಂಡರೆ ಅದರ ಬೆಲೆ ಏರುತ್ತದೆ, ಆತ ಒಂದು ಅಂಗಡಿ ಇಟ್ಟರೆ ಅಲ್ಲಿ ಜನ ಮುಗಿಬೀಳುತ್ತಾರೆ.
ಆತನ ಮುಖದಲ್ಲಿ ಸದಾ ಒಂದು ನೆಮ್ಮದಿಯ ನಗು ಇದೆ ಹಣ ಆತನನ್ನು ಹುಡುಕಿಕೊಂಡು ಹೋಗುತ್ತಿದೆ.
ಈ ವ್ಯತ್ಯಾಸವನ್ನು ನೋಡಿದಾಗ ನಿಮ್ಮ ಮನಸ್ಸಿನಲ್ಲಿ ಆ ಪ್ರಶ್ನೆ ಸುಳಿಯುವುದಿಲ್ಲವೇ?...
“Why? ಎಂತಕ್ಕೆ ಹೀಗೆ?”
ನನಗೂ ಇದೇ ಪ್ರಶ್ನೆ ಕಾಡಿತ್ತು. ವರ್ಷಗಟ್ಟಲೆ ಕಾಡಿತ್ತು
ನಮಗೆ ಬಾಲ್ಯದಿಂದಲೂ ಒಂದು ಸುಳ್ಳನ್ನು ಬಲವಂತವಾಗಿ ಕಲಿಸಲಾಗಿದೆ:
“ಮಗನೇ, ಚೆನ್ನಾಗಿ ಓದು. ಗಣಿತ ಕಲಿ. ಲೆಕ್ಕಚಾರದಲ್ಲಿ ಪಕ್ಕಾ ಇರು. ಆಗ ಮಾತ್ರ ನೀನು ಶ್ರೀಮಂತನಾಗುತ್ತೀಯ.”
ಸ್ನೇಹಿತರೇ, ನಾನು ನೂರಾರು ಪುಸ್ತಕಗಳನ್ನು ಓದಿ, ಮನಶಾಸ್ತ್ರಜ್ಞರನ್ನು ಭೇಟಿಯಾಗಿ, ಯಶಸ್ವಿ ಉದ್ಯಮಿಗಳ ಜೊತೆ ಸಮಯ ಕಳೆದ ನಂತರ ನನಗೆ ಅರ್ಥವಾಯಿತು—ಅದು ಹಸಿ ಸುಳ್ಳು ಎಂದು!
ಸತ್ಯ ಏನು ಗೊತ್ತೇ?
ನಾನು ಈ ಪುಸ್ತಕದ ಮೊದಲ ಮಂತ್ರವನ್ನು ನಿಮಗೆ ನೀಡುತ್ತಿದ್ದೇನೆ. ಇದನ್ನು ನಿಮ್ಮ ಮನಸ್ಸಿನಾಳದಲ್ಲಿ ಅಚ್ಚೊತ್ತಿಕೊಳ್ಳಿ:
“Money is not Mathematics – Money is Science.”
ಹಣ ಎನ್ನುವುದು ಗಣಿತವಲ್ಲ – ಹಣ ಎನ್ನುವುದು ಒಂದು ವಿಜ್ಞಾನ ಆದರೆ ಎಚ್ಚರ! ನಾನು ಹೇಳುತ್ತಿರುವ ವಿಜ್ಞಾನ ನೀವು ಶಾಲೆಯಲ್ಲಿ ಕಲಿತ ಫಿಸಿಕ್ಸ್ (Physics) ಅಥವಾ ಕೆಮಿಸ್ಟ್ರಿ (Chemistry) ಅಲ್ಲ. ಇದು ರಾಕೆಟ್ ಉಡಾಯಿಸುವ ವಿಜ್ಞಾನವಲ್ಲ.
ಇದು “ಮನಸ್ಸಿನ ವಿಜ್ಞಾನ” (The Science of the Mind).
ಇದು “ಭಾವನೆಯ ವಿಜ್ಞಾನ” (The Science of Emotion).
ಇದು “ನಂಬಿಕೆಯ ವಿಜ್ಞಾನ” (The Science of Belief).
ಹೌದು, ಹಣಕಾಸು ಎನ್ನುವುದು ಫಾರ್ಮುಲಾ (Formula) ಅಲ್ಲ, ಅದು ಫೀಲಿಂಗ್ (Feeling).
ಈ ಅಧ್ಯಾಯದಲ್ಲಿ, ನಾವು ಆ ಭಾವನೆಯ ಆಳಕ್ಕೆ ಇಳಿಯಲಿದ್ದೇವೆ.
ಬನ್ನಿ, ಹಣದ ಹಿಂದಿರುವ ಅಸಲಿ ರಹಸ್ಯವನ್ನು ಭೇದಿಸೋಣ.
ಲೇಖಕರು
#ನವೀನ್_ಕುಮಾರ್_ಎಂ
ಸಂಸ್ಥಾಪಕರು ಉದ್ಯಮಮಿತ್ರ.
ಇವರ ಸಂಪರ್ಕ ಸಂಖ್ಯೆ ಮತ್ತು ಪೇಸ್ ಬುಕ್ ಪ್ರೊಪೈಲ್ ಲಿಂಕ್ ಕಾಮೆಂಟ್ ನಲ್ಲಿದೆ ನೋಡಿ.
Comments
Post a Comment