Skip to main content

3541.ಉಂಡೆ ಕಡಬು

#ನಾ_ಹ್ಯಾಂಗ_ಮರೆಯಲಿ_ಉಂಡೆಕಡಬು.

#ಮತ್ತೆ_ಮತ್ತೆ_ಉಂಡೇ_ಕಡಬು.

#ಪಶ್ಚಿಮಘಟ್ಟದ_ಮಲೆನಾಡು_ಕರಾವಳಿಯಲ್ಲಿ_ಮಾತ್ರ_ಚಿರಪರಿಚಿತ_ಉಂಡೆಕಡುಬು.

#ಸಸ್ಯಹಾರ_ಮಾಂಸಹಾರಕ್ಕೂ_ಬಳಕೆ.


#malenadu #westernghats #desifoods #foodbloggers #shivamogga #kodagu #chikkamagalore #karavali #undekadabu 

   ಮಲೆನಾಡಿನ ಮಕ್ಕಳು ಉಂಡೆಕಡುಬು ಎಂದರೆ ಉರಿದು ಬೀಳುವುದು ಏಕೆ?

   ಇತ್ತೀಚಿನ #ಮಲ್ನಾಡು_ಕಾರ್ಟೂನ್ ನಲ್ಲಿ "ಅಮ್ಮಾ ... ಇವತ್ತೇನೆ ?"...ಅನ್ನೋ #ಉಂಡೆ_ಕಡಬು ಪ್ರಸಂಗ ಬಾರೀ ವೈರಲ್ಲೂ ಆಗಿತ್ತು.

  ಅಕ್ಕಿ ತುರಿ ಉಪ್ಪಿನೊಂದಿಗೆ ಬೇಯಿಸಿ ಉಂಡೆ ಕಟ್ಟಿ ಇಡ್ಲಿ ಪಾತ್ರೆಯಲ್ಲಿಟ್ಟರೆ ಆಯಿತು ಅದಾಗೆ ಬೆಂದು ಉಂಡೆ ಕಡಬು ಆಗುವ ಸುಲಭ ಅಡಿಗೆಗೆ ಗೃಹಿಣಿಯರು ಹೆಚ್ಚು ಅವಲಂಬಿಸಿರುತ್ತಾರೆ.

   ಬೇರೆ ಉಪಹಾರ ತಯಾರಿಸುವುದು ಶ್ರಮದಾಯಕ ಅದು ಅವರಿಗೆ ಇಷ್ಟ ಇರುವುದಿಲ್ಲ.

  ಮಲೆನಾಡಿನ ಕೃಷಿಕರ ಮನೆಯಲ್ಲಿ ನಿತ್ಯ ಉಪಹಾರ ಅಕ್ಕಿ ಉಂಡೆ ಕಡಬು ಇದಕ್ಕೆ ನಂಜಿಕೊಳ್ಳುವ ವ್ಯಂಜನ ಮಾತ್ರ ಬದಲಾಗುತ್ತದಾರಿಂದ ಈ ಭಾಗದ ಮಕ್ಕಳು ಉಂಡೆ ಕಡಬು ಅಂದರೆ ಉರಿದು ಬೀಳುತ್ತಾರೆ.

   ಹಳ್ಳಿಯಿಂದ ಪೇಟೆ ಶಾಲೆಗೆ ಬರುವ ಮಕ್ಕಳ ಟಿಪನ್ ಡಬ್ಬಿಯಲ್ಲಿರುವ  ಉಂಡೆ ಕಡುಬು ಪೇಟೆ ಮಕ್ಕಳಿಂದ ಟ್ರೋಲ್ ಆಗುವುದೂ ಒಂದು ಕಾರಣ.

   ಉಂಡೆ ಕಡಬು ಪಶ್ಚಿಮ ಘಟ್ಟದಲ್ಲಿನ ಮಲೆನಾಡಿನ ಕೆಲ ಪ್ರದೇಶದಲ್ಲಿ ಈ ಪರಿ ಖ್ಯಾತಿ (ಕುಖ್ಯಾತಿ) ಪಡೆಯಲು ಕಾರಣ ಏನಿರಬಹುದು?

  ತಾವು ಬೆಳೆಯುವ ಅಕ್ಕಿ ಕಾರಣವಾ?.... ಇಡ್ಲಿ, ದೊಸೆ ಮತ್ತು ರೊಟ್ಟಿಯಷ್ಟು ಶ್ರಮ ಇಲ್ಲವ೦ತನಾ?...

   ರಾತ್ರಿ ಬಳಸಿ ಉಳಿದ ಚಟ್ನಿ, ಸಾರು, ಮೀನು ಮತ್ತು ಮಾಂಸದ ಅಡುಗೆಗೆ ಒಳ್ಳೆ ಕಾಂಬಿನೇಷನ್ ಅಂತಾನಾ?...

   ಹೀಗೆ ಹತ್ತು ಹಲವು ಪ್ರಶ್ನೆಗಳಿದೆ.

  ಕರಾವಳಿ ಪ್ರದೇಶದಲ್ಲಿ ಇದಕ್ಕೆ ಬೇರೆ ಹೆಸರಲ್ಲಿ ಕರೆಯುತ್ತಾರೆ ಮತ್ತು ಅವರವರ ಪದ್ದತಿಯಂತೆ ಬಿನ್ನ ಬಿನ್ನ ರೆಸಿಪಿಗಳಿದೆ ಈ ಉಂಡೆ ಕಡುಬಿಗೆ .

   ಇತ್ತೀಚಿನ #ಮಲ್ನಾಡು_ಕಾರ್ಟೂನ್ ನಲ್ಲಿ "ಅಮ್ಮಾ ... ಇವತ್ತೇನೆ ?"....
  ಅನ್ನೋ ಉಂಡೆ ಕಡಬು ಪ್ರಸಂಗ ಬಾರೀ ವೈರಲ್ಲೂ ಆಗಿತ್ತು.

  ಈಶಾನ್ಯ ಭಾರತ, ಗುಜರಾತ್ ಮತ್ತು ಪಂಜಾಬ್ ಅಡುಗೆಯಲ್ಲಿ ಅಕ್ಕಿಯ ಬೇರೆ ರೀತಿ ಕಡಬು ಇದೆ.

   ಆದರೆ ನಮ್ಮ ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡಿನ ಶಿವಮೊಗ್ಗ - ಚಿಕ್ಕ ಮಗಳೂರು - ಕೊಡಗು ಭಾಗದ ಈ ಉಂಡೆ ಕಡಬು ಬೇರೆಲ್ಲೂ ಕಾಣಬರುವುದಿಲ್ಲ.

    ಹಾಗಾಗಿ ಇದು ಈ ಭಾಗದ Signature receipe ಮತ್ತು exclusive ತಿಂಡಿಯೇ ಸರಿ.

   ಮಲೆನಾಡಿನ ಕೃಷಿಕರ ಮನೆಯಲ್ಲಿ ನಿತ್ಯ ಉಪಹಾರ ಅಕ್ಕಿ ಉಂಡೆ ಕಡಬು.

   ಇದಕ್ಕೆ ನಂಜಿಕೊಳ್ಳುವ ವ್ಯಂಜನ ಮಾತ್ರ ಬದಲಾಗುತ್ತದಾರಿಂದ ಈ ಭಾಗದ ಮಕ್ಕಳು ಉಂಡೆ ಕಡಬು ಅಂದರೆ ಉರಿದು ಬೀಳುತ್ತಾರೆ.

  ಉಪಹಾರದ ಏಕತಾನತೆ ಒಂದಾದರೆ,ಶಾಲಾ ಸಹಪಾಟಿಗಳು ಕಾಲೆಳೆಯುವುದು, ಇವರ ಟಿಫನ್ ಬಾಕ್ಸ್ ನಲ್ಲಿ ಯಾವತ್ತೂ ಉಂಡೆ ಕಡಬು ಎನ್ನುವುದು ಇವರಿಗೆ ಕೀಳರಿಮೆ ಅನ್ನಿಸಿದೆ.

   ಆದರೆ ಮಳೆಗಾಲದಲ್ಲಿ ಚಳಿಗಾಲದಲ್ಲಿ ಬೆಳಿಗ್ಗೆ ಬೆಳಿಗ್ಗೆ ಬಿಸಿ ಬಿಸಿ ಉಂಡೆ ಕಡಬು ನೀಡುವ ರುಚಿ - ಘಮ- ತೃಪ್ತಿ ಮಾತ್ರ ನಂಬರ್ ಒನ್ ಎನ್ನುವುದು ಎಲ್ಲರಿಗೂ ಗೊತ್ತು.

     ಈ ಉಂಡೇ ಕಡಬುನಿಲ್ಲಿ ತರಹೇವಾರಿ ರುಚಿ -ಬಣ್ಣ - ಘಮ ನಾವು ಬೆಳೆಯುವ ನೂರಾರು ತಳಿಯ ಅಕ್ಕಿಯಿಂದ ಬದಲಾಗುತ್ತಿರುತ್ತದೆ.

   ಜಾತಿ ಮತ್ತು ಅಂತಸ್ತುಗಳಿಗೆ ಅನುಗುಣವಾಗಿ ಅದರ ಅಕೃತಿ ಮತ್ತು ಅದರ ಜೊತೆ ತುಪ್ಪ -ಬೆಲ್ಲ - ಬೆಣ್ಣೆ ಸೇರುತ್ತದೆ.
 
  ಮಾಂಸಹಾರಿಗಳಲ್ಲೂ ಅವರ ಅಂತಸ್ತಿಗೆ ತಕ್ಕಂತೆ ತರಹಾವಾರಿ ಮಾಂಸಗಳ ಖಾದ್ಯ ಜೊತೆ ಆಗುತ್ತದೆ.

#ಸುಲಭ_ರೆಸಿಪಿ 
ಅಕ್ಕಿ ತುರಿ ಉಪ್ಪಿನೊಂದಿಗೆ ಬೇಯಿಸಿ ಉಂಡೆ ಕಟ್ಟಿ ಇಡ್ಲಿ ಪಾತ್ರೆಯಲ್ಲಿಟ್ಟರೆ ಆಯಿತು ಅದಾಗೆ ಬೆಂದು ಉಂಡೆ ಕಡಬು ಆಗುವ ಸುಲಭ ಅಡಿಗೆಗೆ ಗೃಹಿಣಿಯರು ಹೆಚ್ಚು ಅವಲಂಬಿಸಿರುವುದರಿಂದ ಬೇರೆ ಉಪಹಾರ ತಯಾರಿಸುವ ಶ್ರಮ ಅವರಿಗೆ ಇಷ್ಟ ಇರುವುದಿಲ್ಲ.

  ಮಡಿಕೆರೆ, ಚಿಕ್ಕಮಗಳೂರು ಭಾಗದ ಹೊಂ ಸ್ಟೇ ಗೆ ಬರುವ ಪ್ರವಾಸಿಗಳಿಂದ ಈ ಮಲೆನಾಡ ಕ್ಯೂಸಿನ್ ಉಂಡೆ ಕಡಬು ಪಂದಿ ಕರಿ, ಉಂಡೆ ಕಡಬು ಚಿಕನ್, ಉಂಡೆ ಕಡಬು ಕಳಲೆ ಪಲ್ಯಕ್ಕೆ ಹೆಚ್ಚು ಬೇಡಿಕೆ ಉಂಟಂತೆ.

  ಇದೊಂದು ರೀತಿ ಬ್ರೆಡ್ ರೀತಿ ಎಲ್ಲಾ ರೀತಿ ಆಹಾರಕ್ಕೂ ಹೊಂದುತ್ತದೆ.

  ಇವತ್ತು ನಮ್ಮ ಮನೇನಲ್ಲಿ "ಎಂತ ತಿಂಡೀನೆ" ಅಂದಾಗ ಉಂಡೆ ಕಡಬು ಅನ್ನೋ ಉತ್ತರ ಕೇಳಿ ಬಂದಾಗ ಇದೆಲ್ಲ ನೆನಪಾಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...