#ವೀರಪ್ಪನ್_ಕನಾ೯ಟಕ_ತಮಿಳುನಾಡಿಗೆ_ತಲೆನೋವಾದಂತೆ.
#70ರ_ದಶಕದಲ್ಲಿ_ಶಿಕಾರಿಪುರ_ಕುಂಸಿ_ಅಯನೂರು_ಬಾಗದಲ್ಲಿ_ಬುಡೆನ್_ಸಾಬ್
#ಜನರಿಗೆ_ಪೋಲಿಸರಿಗೆ_ದೊಡ್ಡ_ಸಮಸ್ಯೆ_ಆಗಿದ್ದ.
#ಕೊನೆತನಕ_ಬಡತನದ_ಜೀವನ_ಮಾಡಿದ_ಬುಡನ್_ಸಾಬ್_ಹೇಳುತ್ತಿದ್ದದ್ದು
#ಬುಡನ್_ಸಾಬ್_ಹೆಸರಲ್ಲಿ_ಬೇರೆ_ಕಳ್ಳರು_ದರೋಡೆ_ಮಾಡುತ್ತಿದ್ದರಂತೆ
#Harnallibudan #veerappan #shivamogga #ayanuru #kumsi #shikaripura #robbery
#ಹಾರನಳ್ಳಿಯ_ಬುಡನ್ ಸಾಬ್ ಕುಂಸಿ, ಅಯನೂರು ಮತ್ತು ಶಿಕಾರಿಪುರದ ಜನ ಸಾಮಾನ್ಯರನ್ನ ಸುಮಾರು 10 ವಷ೯ ಕಾಲ ಬೀತಿಯಿ೦ದ ಇರುವಂತೆ ಮಾಡಿದ್ದ.
ಆತ ಕಳ್ಳತನ ಮಾಡುತ್ತೇನೆ ಅಂದ ಮನೆ ಕಳ್ಳತನ ಮಾಡಿಯೇ ಸಿದ್ದ ಎಂಬ ಪ್ರತೀತಿ ಇತ್ತು ಆ ಕಾಲದಲ್ಲಿ.
ಹಗಲಿನಲ್ಲಿ ಬುಡನ್ ಸಾಬ್ ಈ ಕಾಡಿನಲ್ಲಿ ಕ೦ಡಿದ್ದ ಎಂದರೆ ವಾರಗಟ್ಟಲೆ ಆ ಕಾಡಿಗೆ ಕಟ್ಟಿಗೆ ತರಲು ಹೋಗುವ ದೈಯ೯ ಯಾರೂ ಮಾಡುತ್ತಿರಲಿಲ್ಲ.
ಕಟ್ಟುಮಸ್ತು ದೇಹದ ಬುಡನ್ ಸಾಬ್ ಕಳ್ಳ ಬುಡನ್ ಅಂತಲೇ ಕುಖ್ಯಾತಿ ಪಡೆದಿದ್ದ.
ಏನೇ ಮಾಡಿದರು ಪೋಲಿಸರಿಗೆ ಅವನನ್ನ ಬಂದಿಸಲಾಗದಿದ್ದದ್ದು ಮತ್ತು ಅವನ ತಡೆ ರಹಿತ ಕಳ್ಳತನ ದರೋಡೆಗಳಿOದ ಶಿಕಾರಿಪುರ, ಕುಂಸಿ ಮತ್ತು ಅಯನೂರಿನ ಸುತ್ತ ಮುತ್ತ ನೂರಾರು ಹಳ್ಳಿಗಳು ಭಯದಿಂದ ಜೀವನ ಸಾಗಿಸುತ್ತಿದ್ದ೦ತು ಸತ್ಯ.
ನಂತರ ಪೋಲಿಸರು ಈತನನ್ನ ಬಂದಿಸಿ ಜೈಲಿಗೆ ಕಳಿಸಿದ ನಂತರ ಇದೆಲ್ಲ ಕಳ್ಳತನ ನಿಂತಿತು.
ಜೈಲು ಶಿಕ್ಷೆಯ ನಂತರ ಬುಡನ್ ಸಾಬ್ ಮನ ಪರಿವತ೯ನೆಗೊಂಡು ರೈತರ ಜಮೀನಿನಲ್ಲಿ ನಾಟಿ -ಕೊಯ್ಲು - ಗುತ್ತಿಗೆ ಕೆಲಸ ಮಾಡುತ್ತಿದ್ದರು.
ಬುಡನ್ ಸಾಬ್ ಇವರ ಈ ಕುಖ್ಯಾತಿಗೆ ನೊಂದಿದ್ದ ಇವರ ಹೆಂಡತಿ ಮತ್ತು ಮಕ್ಕಳ ಕುಟುಂಬ ಇವರನ್ನ ತೊರೆದು ಬೇರೆ ಕಡೆ ವಲಸೆ ಹೋದರು ಅಂತ ಸುದ್ದಿ ಇತ್ತು.
ಹಾರನಳ್ಳಿಯ ಮುಕ್ತಿಯಾರ್ ಎಂಬ ಗೆಳೆಯರು ನಮ್ಮ ಮಲ್ಲಿಕಾ ವೆಜ್ ಗೆ ತರಕಾರಿ, ತೆಂಗಿನಕಾಯಿ ಸರಬರಾಜು ಮಾಡುತ್ತಾರೆ.
ಅವರ ಹತ್ತಿರ ಬುಡನ್ ಸಾಬ್ ರ ಬಗ್ಗೆ ವಿಚಾರಿಸಿದಾಗ ಅವರು ಹೇಳಿದ್ದು ಪೋಲಿಸರು ಇವರ ಉಪಟಳ ಖಾಯಂ ತಡೆಯಲು ಕಾಲಿನ ನರ ಒಂದನ್ನ ಜಖಂ ಮಾಡಿದ್ದರಿಂದ ಬುಡನ್ ಸಾಬ್ ತನ್ನ ದರೋಡೆ ಕಳ್ಳತನ ಅನಿವಾಯ೯ವಾಗಿ ಬಿಡಬೇಕಾಯಿತು ಅಂತೆ.
ಆತನ ಕುಖ್ಯಾತಿ ದರೋಡೆ ಪ್ರಮಾಣಕ್ಕೂ ಅವನ ಜೀವನ ಕ್ರಮಕ್ಕೂ ಅಜಗಜಾoತರ ಇತ್ತು.
ಕೊನೆ ತನಕ ಬಡತನ ಇತ್ತು, ಆಸ್ತಿ ಇರಲಿಲ್ಲ, ಆಗೆಲ್ಲ ಕೃಷಿ ಗುತ್ತಿಗೆ ಮಾಡಿಸಲು ಬರುತ್ತಿದ್ದ ಬುಡನ್ ಸಾಬ್ ಗೆ ಅಷ್ಟೆಲ್ಲ ದರೋಡೆ ಮಾಡಿದ್ದು ಏನು ಮಾಡಿದಿಯಾ? ಅಂದರೆ "ನನ್ನ ಹೆಸರಲ್ಲಿ ಬೇರೆ ಕಳ್ಳರ ಗುಂಪು ದರೋಡೆ ಕಳ್ಳತನ ಮಾಡಿ ಹಣ ಬಂಗಾರ ಮಾಡಿಕೊಂಡು ನನ್ನನ್ನ ಬಲಿಪಶು ಮಾಡಿದರು" ಅಂತಿದ್ದನಂತೆ.
ಏನೇ ಇರಲಿ 70 ರ ದಶಕದಲ್ಲಿ ಈ ಭಾಗದಲ್ಲಿ ಜನರ ನೆಮ್ಮದಿ ಕೆಡಿಸಿದ್ದ ಕಳ್ಳ ಬುಡನ್ ಕುಖ್ಯಾತಿ ಅಂತಿOತದ್ದಲ್ಲ.
Comments
Post a Comment