Skip to main content

3553. ದೂಗೂರು ಕಾಡಿನಿಂದ ಹೊರಬರದ ಕಾಡಾನೆಗಳು

#ಸೊರಬ_ತಾಲ್ಲೂಕಿನ_ದೂಗೂರು_ಕಾಡಿನಿಂದ

#ಹೊರಬರದ_ಎರೆಡು_ಕಾಡಾನೆಗಳು

#ಮೂರು_ದಿನದಿಂದ_ಸಕ್ರೆಬೈಲಿನ_ನಾಲ್ಕು_ಕುಮ್ಕಿ_ಆನೆಗಳು

#ಅನೇಕ_ಅನುಭವಿ_ಮಾವುತರು

#ನೂರಾರು_ಅರಣ್ಯ_ಇಲಾಖೆ_ಸಿಬ್ಬಂದಿ_ಶ್ರಮಿಸುತ್ತಿದ್ದಾರೆ


#wildelephant #elephantcorridor #soraba #duguru #ulavi #barigi #kyasahuru.

   ಭದ್ರಾ ಅಭಯಾರಣ್ಯದ ಕಾಡಾನೆಗಳು ಮಲೆನಾಡಿನಲ್ಲಿ ತಮ್ಮ ಆಹಾರ ಮತ್ತು ಸಂತಾನೋತ್ಪತ್ತಿಗಾಗಿ ಹೊಸ ಕಾರಿಡಾರ್ ವಿಸ್ತರಿಸಿಕೊಂಡು ಮೂರು ವರ್ಷ ಆಗಿದೆ.

  ಅವುಗಳು ಸೊರಬ ತಾಲ್ಲೂಕಿನ ಮೂಲಕ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಭಾಗದ ಕಾಳಿ ಅಭಯಾರಣ್ಯದ ಆನೆಗಳ ಸಂಪರ್ಕಿಸಲು ಪ್ರಯತ್ನದಲ್ಲಿದೆ.

     ಅವುಗಳನ್ನ ಓಡಿಸುವ ಪ್ರಯತ್ನ ಮಾಡದೆ ಅವುಗಳಷ್ಟಕ್ಕೇ ಬಿಟ್ಟಿದ್ದರೆ ಇನ್ನೂ ಕೆಲವು ಕಿಲೋ ಮೀಟರ್ ಮುಂದೆ ಸಾಗಿ ಈ ವರ್ಷವೇ ದಾಂಡೇಲಿ ಅಭಯಾರಣ್ಯ ಸೇರುತ್ತಿತ್ತು ಅಥವ ಅಲ್ಲಿಗೆ ಸೇರಿ ಕೆಲ ದಿನದ ನಂತರ ವಾಪಾಸು ಬರುವ ಸಾಧ್ಯತೆ ಇತ್ತು ಅಥವ ಉಳುವಿ ಕಾಡಿನಿಂದಲೇ ವಾಪಾಸು ಬಂದ ದಾರಿಯಲ್ಲೇ ವಾಪಾಸಾಗಿ ಮುಂದಿನ ವರ್ಷ ಇದೇ ತಿಂಗಳಲ್ಲಿ ಪುನಃ ದಾಂಡೇಲಿ ಅಭಯಾರಣ್ಯಕ್ಕೆ ಹೋಗುವು ಪ್ರಯತ್ನ ಮಾಡುತ್ತಿತ್ತು ಎಂದು ಆನೆಗಳ ತಜ್ಞರು ಮತ್ತು ಅರಣ್ಯ ಇಲಾಖೆಯ ಹೆಸರು ಹೇಳಿಕೊಳ್ಳದ ಕೆಲವು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

   ಇವತ್ತು ಬೆಳಿಗ್ಗೆ  ಥಮ೯ಲ್ ಡ್ರೋನ್ ಕ್ಯಾಮೆರಾದಲ್ಲಿ ದೂಗೂರು ಅರಣ್ಯದಲ್ಲಿ ಕಂಡು ಬಂದ ಆನೆಗಳು ನಂತರ ಎಲ್ಲಿದೆ ಎಂದು ಟ್ರೇಸ್ ಮಾಡಲು ಸಾಧ್ಯವಾಗಲಿಲ್ಲ.

  ಕುಮ್ಕಿ ಆನೆಗಳು,ಮಾವುತರು ಮತ್ತು ನೂರಾರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹರಸಾಹಸ ಪಟ್ಟರು ಮೂರು ದಿನದ ಶ್ರಮ ಈ ಕಾಡಿನಿಂದ ಕಾಡಾನೆ ಹೊರ ಹಾಕಲು ಸಾಧ್ಯವಾಗಲಿಲ್ಲ.

    ಮೂರು ವರ್ಷಗಳಿಂದ ಹೊಸನಗರ ತಾಲೂಕಿನ ಅರಸಾಳು,ಕೆಂಚನಾಲ,ಮಾದಾಪುರ, ಬಸವಾಪುರ, ಗರ್ತಿಕೆರೆ, ಹೆದ್ದಾರಿಪುರ, ಶಿವಮೊಗ್ಗ ತಾಲ್ಲೂಕಿನ ತುಪ್ಪೂರು, ಜೋಡನಳ್ಳ, ಬ್ಯಾಡನಳ್ಳ ಹಾಗೂ ಸಾಗರ ತಾಲೂಕಿನ ಲಕ್ಕವಳ್ಳಿ, ಮೂಡಾಹಗಲು, ಪತ್ರೆಹೊಂಡ, ಗಿಳಾಲಗುಂಡಿ, ಕೊಲ್ಲಿಬಚ್ಚಲು ಡ್ಯಾಮ್,ತಂಗಳವಾಡಿ, ಹೊಸಕೊಪ್ಪ, ಕಣ್ಣೂರು, ಬೈರಾಪುರ, ದಣಂದೂರು, ಅಂಬ್ಲಿಗೋಳ ಡ್ಯಾಮ್, ಕೊರ್ಲಿಕೊಪ್ಟ್ರ ಇಡುವಳ್ಳಿ, ಬರೂರು ಮತ್ತು ಲಾವಿಗೆರೆ ಗ್ರಾಮದಲ್ಲಿ ಸುತ್ತ ಮುತ್ತಲಿನ ಕಾಡಿನಲ್ಲಿ ಕಾಡಾನೆಗಳ ಅನೇಕ ತಂಡ ಸಂಚರಿಸಿದೆ.

    ಆಗ ಅರಣ್ಯ ಇಲಾಖೆ ಈ ರೀತಿ ಯಾವುದೇ ಕುಮ್ಕಿ ಆನೇ ಕರೆಸಿ ವಾಪಾಸು ಕಳಿಸುವ ಪ್ರಯತ್ನ ಮಾಡಿದ ಉದಾಹರಣೆ ಇಲ್ಲ ಆದರೆ ಸೊರಬ ತಾಲೂಕಿನಲ್ಲಿ ಪ್ರವೇಶ ಮಾಡಿದ ತಕ್ಷಣ ಈ ಕಾಡಾನೆಗಳನ್ನ ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನ ಕಾಡಿಗೆ ಓಡಿಸುವ ಪ್ರಯತ್ನ ಮಾಡಿದ್ದಾರೆ.

   ಇದಕ್ಕೆ ಅವರ ಇಲಾಖೆಯ ಕೆಲ ಅಧಿಕಾರಿಗಳು ವಿರೋದ ವ್ಯಕ್ತ ಪಡಿಸಿದ್ದರು, ವನ್ಯಜೀವಿ ಸಂರಕ್ಷಣಾ ಕ್ರಮಗಳನ್ನು ಅನುಸರಿಸದೆ ಅಧಿಕಾರಿಗಳು ರಾಜಕಾರಣಿಗಳಿಗೆ ಅವರ ಕ್ಷೇತ್ರದಿಂದ ಕಾಡಾನೆ ಓಡಿಸಿದ್ದೇವೆ ಎಂಬ ಶಹಬ್ಬಾಸು ಪಡೆಯಲು ಈ ಆತುರದ ಕ್ರಮವೇ ಮುಂದಿನ ದಿನಗಳಲ್ಲಿ ಅಚಾತುರ್ಯಕ್ಕೆ ಕಾರಣ ಆಗಲಿದೆ ಎಂದು ಎಚ್ಚರಿಸಿದ್ದರು ಅವರ ಮಾತು ಹಿರಿಯ ಅಧಿಕಾರಿಗಳು ಕೇಳಲಿಲ್ಲ ಎಂಬ ಸುದ್ದಿ ಹರಡಿದೆ.

   ಏನೇ ಇರಲಿ ಕೆಲ ದಿನಗಳ ಕಾಲ ಈ ಪಟಾಕಿ ಸಿಡಿಸಿ ಅಥವ ಕುಮ್ಕಿ ಆನೆ ಬಳಸಿ  ಈ ಕಾಡಾನೆಗಳ ಓಡಿಸುವ ಕೆಲಸ ತಾತ್ಕಾಲಿಕವಾಗಿ ನಿಲ್ಲಿಸಿ ಇಲ್ಲಿರುವ ಎರೆಡು ಕಾಡಾನೆಗಳು ಅವಾಗಿಯೇ ಭದ್ರಾ ಅಭಯಾರಣ್ಯಕ್ಕೆ ವಾಪಾಸಾಗಲು ಅಥವ ಉತ್ತರದ ದಾಂಡೇಲಿ ಅಭಯಾರಣ್ಯದ ಕಡೆಗೆ ಅವುಗಳು ಸಾಗಲು ಅನುವು ಮಾಡಿಕೊಡುವ ಬಗ್ಗೆ ವನ್ಯಜೀವಿ ಸಂರಕ್ಷಣಾ ಇಲಾಖೆಯ ತಜ್ಞರ ಸಲಹೆ ಅಭಿಪ್ರಾಯ ಪಡೆಯುವುದು ಒಳಿತು.

   ಇಲ್ಲವಾದಲ್ಲಿ ಈ ಕಾಡಾನೆ ಜೀವಕ್ಕೇ ಅಪಾಯವಾಗುವ ಅಥವ ಕಾಡಾನೆ ಹಾಗೂ ಮನುಷ್ಯರ ನಡುವೆ ಸಂಘರ್ಷವಾಗಿ ಯಾರದದ್ದಾದರು ಜೀವಕ್ಕೆ ಅಪಾಯ ಆಗುವ ಸಾಧ್ಯತೆ ಹೆಚ್ಚು ಇದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...