Skip to main content

3546. ವಿವಾಹಗಳಿಗೆ ಕನ್ಯೆಗಳ ಕೊರತೆ

#ಒಂದು_ಕಾಲದಲ್ಲಿ_ಕನ್ಯೆಯರಿಗೆ_ಸಾಣಿಗೆಯಲ್ಲಿ_ಸಾಣಿಸಿದಂತೆ_ಡಿಮೊರಲ್_ಮಾಡುತ್ತಿದ್ದರು.

#ಆಗ_ಪುರಷರಿಗಿಂತ_ಸ್ತ್ರೀಯರ_ಅನುಪಾತ_ಜಾಸ್ತಿ_ಇತ್ತು.

#ಎಲ್ಲಾ_ಜಾತಿಯ_ಮಾಣಿಗಳಿಗೆ_ಅನ್ವಯಿಸುವ_ಈ_ಹಾಡು

#ಆ_ಕಾಲದಲ್ಲಿ_ಅನೇಕ_ಹೆಣ್ಣುಗಳ_ಕಂಕಣ_ಬಲ_ಕೂಡಿ_ಬರದಂತೆ_ಮಾಡಿತ್ತು ... 

#ಈಗ_ಗಂಡು_ಹೆಣ್ಣಿನ_ಅನುಪಾತದ_ವೃತ್ಯಾಸದಿಂದ_ಕಾಲ_ಬದಲಾಗಿದೆ.. 

#ಅನೇಕ_ಗಂಡುಗಳಿಗೆ_ಕಂಕಣ_ಬಲ_ಒಲಿಯುತ್ತಲೇ_ಇಲ್ಲ.

#ಸುಂದರವಾಗಿ_ರಚಿಸಿ_ಹವಿಗನ್ನಡದಲ್ಲಿ_ಸವಿಯಾಗಿ_ಹಾಡಿದ್ದಾರೆ 

#ಇದು_ಒಂದು_ಕ್ಷಣ_ಎಲ್ಲರನ್ನೂ_ನಿಂತು_ಕೇಳುವಂತೆ_ಮತ್ತು_ಕೇಳಿದ_ಮೇಲೆ_ಪದೇ_ಪದೇ_ಕೇಳುವಂತೆ

#ಆಪ್ತರಿಗೆ_ಶೇರ್_ಮಾಡುವಂತೆ_ಮಾಡುತ್ತಿದೆ.

#ಅಮಿತಾರವಿಕಿರಣ್_ಅವರಿಗೆ_ಶಹಬ್ಬಾಸ್_ಹೇಳಲೇಬೇಕು.


#sexratio #lndia #marriage #lifepartner #castesystem #hindureligion #Amitharavikiran

  ನಮ್ಮನೆ ಮಾಣಿಗೊಂದು ಕೂಸು....

   ಇದು ನಮ್ಮ ದೇಶದ ಪ್ರಸ್ತುತ ಸಮಸ್ಯೆ ಇದಕ್ಕೆ ಪರಿಹಾರ ಮುಂದಿನ ಕೆಲವು ದಶಕಗಳು ಸಾಧ್ಯವೇ ಇಲ್ಲ.

   ಈಗ ದೇಶದಲ್ಲಿ ಸ್ತ್ರೀ ಪುರುಷರ ಅನುಪಾತ 1000 ಪುರುಷನಿಗೆ 952 ಸ್ತ್ರೀ ಇದು 2036ರಲ್ಲಿ 1000 ಪುರುಷನಿಗೆ 982 ಆಗಬಹುದು ಎಂಬ ನಿರೀಕ್ಷೆ ಆದರೆ ಆಗದೆಯೇ ಇರಬಹುದು.

  ಮೊದಲೆಲ್ಲ ಸ್ತ್ರೀಯರ ಸಂಖ್ಯೆ ಹೆಚ್ಚಾಗಿದ್ದಾಗ ಪುರುಷರಿಗೆ ಆಯ್ಕೆ ಸ್ವಾತಂತ್ರ ಇತ್ತು ಆಗ ವಿವಾಹ ವಯಸ್ಸಿನ ಹೆಣ್ಣು ಮಕ್ಕಳನ್ನ ಗೋಳು ಹೊಯ್ದು ಅವರ ಚಾರಿತ್ರ್ಯ ಹರಣ, ವರದಕ್ಷಿಣೆ ಇತ್ಯಾದಿ ಕೆಟ್ಟ ಸಂಪ್ರದಾಯ ಸಮಾಜದಲ್ಲಿ ಸೃಷ್ಟಿ ಆಗಿತ್ತು.

  ಈಗ ಇದಕ್ಕೆ ಸರಿಪೂರ್ಣ ವಿರುದ್ಧವಾಗಿದೆ ವಿವಾಹದ ವ್ಯವಸ್ಥೆ ಆರೆಂಜ್ ಮ್ಯಾರೇಜ್, ವರದಕ್ಷಿಣೆ, ಜಾತಿಯಲ್ಲಿಯೇ ಮದುವೆ ಮತ್ತು ವರನ ಆಯ್ಕೆ ಇಲ್ಲವೇ ಇಲ್ಲ.

   ಪರಸ್ಪರ ಇಷ್ಟ ಪಟ್ಟು ಮದುವೆ ಆದರೆ ಸಂಸಾರಿ ಇಲ್ಲದಿದ್ದರೆ ಜೀವನ ಪೂರ್ತಿ ಬ್ರಹ್ಮಚಾರಿ.

      ರಾಮಾಯಣ ಮಹಾಬಾರತ ಕಾಲದಲ್ಲಿನ ಸ್ವಯಂವರ, ನಿಯೋಗ ಮತ್ತು ಸ್ತ್ರಿ ಯಾವುದೇ ಜಾತಿ ಆದರೂ ವಿವಾಹ ಆಗುತ್ತಿದ್ದ ಕಾಲ ನೆನಪಾಗುತ್ತದೆ.

  ಭಾರತದ 2011 ರ ಜನಗಣತಿಯ ಪ್ರಕಾರ ಒಟ್ಟಾರೆ ಲಿಂಗ ಅನುಪಾತವು1,000 ಪುರುಷರಿಗೆ 943 ಮಹಿಳೆಯರು.

  2001 ಕ್ಕೆ ಹೋಲಿಸಿದರೆ ಇದು ಸುಧಾರಣೆಯಾಗಿದೆ ಆದರೆ ಮಕ್ಕಳ ಲಿಂಗ ಅನುಪಾತ (0-6 ವರ್ಷಗಳು) 919 ಕ್ಕೆ ಕುಸಿಯುತ್ತಿದೆ, ಇದು ನಿರಂತರ ಲಿಂಗ ಪಕ್ಷಪಾತವನ್ನು ಸೂಚಿಸುತ್ತದೆ.

 ಆದರೆ ಕೇರಳವು ಅತಿ ಹೆಚ್ಚು ರಾಜ್ಯ ಲಿಂಗ ಅನುಪಾತವನ್ನು (1084) ಮತ್ತು ಹರಿಯಾಣವು ಅತ್ಯಂತ ಕಡಿಮೆ (879) ಹೊಂದಿದೆ. 

  ಲಿಂಗ ಅನುಪಾತವು ಲಿಂಗ ಸಮಾನತೆಯ ಪ್ರಮುಖ ಸೂಚಕವಾಗಿದ್ದು, ಸಾಮಾಜಿಕ ಪ್ರಗತಿ ಮತ್ತು ಆರೋಗ್ಯ ಸ್ಥಿತಿಗಳನ್ನು ಬಹಿರಂಗಪಡಿಸುತ್ತದೆ.

   ಮಕ್ಕಳ ಲಿಂಗ ಅನುಪಾತದಲ್ಲಿ ಕುಸಿತವು ಭಾರತದಲ್ಲಿ ಲಿಂಗ-ಆಯ್ದ ಗರ್ಭಪಾತಗಳು ಮತ್ತು ಸ್ತ್ರೀ ತಾರತಮ್ಯದ ಬಗ್ಗೆ ಕಳವಳಗಳನ್ನು ಎತ್ತಿ ತೋರಿಸುತ್ತದೆ. 

   ಈ ಸಂದರ್ಭದಲ್ಲಿ ಈ ಹಾಡು ಕೇಳಿ ಕಾಮೆಂಟನಲ್ಲಿ ಅದರ ಲಿಂಕ್ ಕ್ಲಿಕ್ ಮಾಡಿ ಕೇಳಿ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...