#ಮಲೆನಾಡಿನಲ್ಲಿ ರಿಯಲ್ ಎಸ್ಟೇಟ್ ಪಾತಾಳಕ್ಕೆ ಇಳಿಯಲಿದೆ, ಜಮೀನು ಖರೀದಿಸುವವರು ಬರಲಿಕ್ಕಿಲ್ಲ, ಕಸ್ತೂರಿ ರಂಗನ್ ವರದಿ ಪ್ರದೇಶದ ವ್ಯಾಪ್ತಿಯ ಜನರ ಜೀವನ ಮಟ್ಟ ಕುಸಿಯಲಿದೆ ಆದರೆ ಇದರಿ೦ದ ಪರಿಸರ ಉಳಿದು ಬೇರೆ ಪ್ರದೇಶದ ಜನ ಜೀವನಕ್ಕೆ ಅನುಕೂಲ ಆಗಲಿದೆ ಕ್ರಮೇಣ ಈ ಭಾಗದ ಜನ ಈ ಪ್ರದೇಶ ತೆರವು ಗೊಳಿಸಿ ಬೇರೆಲ್ಲೊ ಬದುಕು ಕಾಣಬೇಕಾಗುವುದು ಸತ್ಯ, ಯಾರೆಷ್ಟೆ ಸಮಥ೯ನೆ ನೀಡಲಿ ಭೂಮಿ ಉಳಿಸುವ ಈ ಅತ್ಯುತ್ತಮ ಕ್ರಮದಿಂದ ಈ ಭಾಗದ ಜನ ನೆಲೆ ಕಳೆದು ಕೊಳ್ಳಲೇಬೇಕು, ಕೆಲವರು ತ್ಯಾಗಕ್ಕೆ ತಯಾರಿರಬಹುದು, ರಾಜ್ಯದ ಬೆಳಕಿಗಾಗಿ ಶರಾವತಿ ಆಣೆಕಟ್ಟಿನಿಂದ ನಿರಾಶ್ರಿತರಾದ ಮಲೆನಾಡಿಗರಿ೦ದ ರಾಜ್ಯಕ್ಕೆ ಬೆಳಕಾಗಿದ್ದು ಸತ್ಯ ಆದರೆ ನಿರಾಶ್ರಿತರ ನಾಲ್ಕು ತಲೆಮಾರು ಅನುಭವಿಸುತ್ತಿರುವ ನಷ್ಟ ವೇದನೆ ಕಣ್ಣ ಎದುರು ಇದೆ, ಪರಿಸರ ಉಳಿಸಲು ಎಲ್ಲವನ್ನು ಕಳೆದುಕೊಳ್ಳುವವರಿಗೆ ಪರಿಹಾರ ಏನು? ಈ ಬಗ್ಗೆ ಎಲ್ಲೂ ಚಕಾರವಿಲ್ಲ, ಕಸ್ತೂರಿ ರಂಗನ್ ವರದಿ ವಿರೋದಿಸುವ ಕಾಲ ಮಿತಿ ಮೀರಿದೆ ಅದು ಅಲ್ಪ ಸ್ವಲ್ಪ ಮಾಪಾ೯ಡಿನೋಂದಿಗೆ ಜಾರಿ ಅಂತು ಆಗೇ ಆಗುತ್ತದೆ ಈ ಪ್ರದೇಶದ ವಾಸಿಗಳಾದ ನಮ್ಮ ಭವಿಷ್ಯದ ಭದ್ರತೆ ಚಚೆ೯ ಆಗಲೇಬೇಕು. #
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment