Skip to main content

Posts

Blog number 1882. ಸತ್ತಂತಿರುವ ವ್ಯವಸ್ಥೆಯನ್ನು ಬಡಿದೆಬ್ಬಿಸುವ ಶಕ್ತಿ ಪತ್ರಿಕೆ ಮತ್ತು ಪತ್ರಕರ್ತರಿಗೆ ಇದೆ.

#ಮಲೆನಾಡಿನ_ಪತ್ರಕರ್ತರಲ್ಲಿ_ಹೊಸತನದ_ಕೊರತೆ_ಆಗದಿರಲಿ. #ಸುದ್ದಿ_ಆಗದ್ದನ್ನು_ಸುದ್ದಿ_ಮಾಡಲಿ #ಸುದ್ದಿ_ಆಗದ_ಸುದ್ದಿ_ಎಂಬ_ಲೋಪವಾಗದಿರಲಿ #ಸತ್ತಂತೆ_ಇರುವ_ವ್ಯವಸ್ಥೆ_ಬಡಿದೆಚ್ಚರಿಸುವ೦ತ_ಕೆಲಸ_ಪತ್ರಕರ್ತರಿಂದ_ಸಾದ್ಯವಿದೆ #ಪತ್ರಿಕೆ_ಮತ್ತು_ಪತ್ರಕರ್ತರು_ಸ್ಥಳಿಯ_ಸುದ್ದಿ_ಮೂಲಗಳನ್ನು_ಕಡೆಗಾಣಿಸದಿರಲಿ.    ನಾನು ಸಣ್ಣಿಂದನೇ ಪತ್ರಿಕೆಗಳನ್ನು ಓದುತ್ತಾ ಬಂದವನು ಆಗ ಪೇಪರ್ ಯಾವ ಕಾರಣಕ್ಕೂ ಕಾಲಿನಿಂದ ತುಳಿಯಬಾರದಂತ ಸರಸ್ವತಿ ದೇವಿಯಾಗಿದ್ದಳು,ಗೊತ್ತಿಲ್ಲದೆ ಕಾಲು ತಾಗಿಸಿದರೆ ಪಶ್ಚಾತ್ತಾಪದಿಂದ ಅದಕ್ಕೆ ನಮಸ್ಕರಿಸಿ ಕ್ಷಮೆ ಕೇಳುತ್ತಿದ್ದೆವು.    ಆಗೆಲ್ಲ ಪತ್ರಕರ್ತರೆಂದರೆ ಬಡ ಬ್ರಾಹ್ಮಣ ಪುರೋಹಿತರಂತೆ ಸಮಾಜದ ಅಂಕು ಡೊಂಕು ತಿದ್ದ ಬೇಕು, ಸಂವಿಧಾನಕ್ಕೆ ಚ್ಯುತಿ ಬಂದರೆ ಎಚ್ಚರಿಸ ಬೇಕು, ಕಾನೂನು ಸುವ್ಯವಸ್ಥೆ ಕಾಪಾಡಲು ಅವೇಳೆಯಲ್ಲೂ ಎದ್ದು ಬರಬೇಕು ಆದರೆ ಅವನಿಗೆ ಸಂಭಾವನೆ ? ಸಮಾಜದಲ್ಲಿ ಗೌರವ? ಈಗಿನ ರೀತಿ ಇರಲಿಲ್ಲ.   ಈಗ ಎಲ್ಲದೂ ಇದೆ, ಸಂಖ್ಯೆಯೂ ಬರಪೂರ ಆದರೆ ಸುದ್ದಿಯಾಗದ ಸುದ್ದಿಗಳು ಮತ್ತು ಸುದ್ದಿಯ ಬರಗಾಲ ಸೃಷ್ಟಿ ಆಗಿದೆ.   ಈಗ ಪ್ರತಿ ನಿತ್ಯ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಸುದ್ದಿಗಳು ಪತ್ರಿಕಾ ಗೋಷ್ಟಿ - ಶಂಕುಸ್ಥಾಪನೆ - ಸನ್ಮಾನಗಳು ಆದ್ದರಿಂದ ಜನ ಸಾಮಾನ್ಯರಿಗೆ ಉಪಯೋಗ ಆಗುವಂತ ತನಿಖಾ ಲೇಖನಗಳು ಪ್ರಕಟವಾಗುವುದು ತುಂಬಾ ಅಪರೂಪ.    ರಾಜ್ಯ...

Blog number 1881. ಪ್ಯಾಷನ್ ಪ್ರೂಟ್ ಒಳಗಿನ ಸುವಾಸನ ಯುಕ್ತ ರುಚಿಕರ ತಿರಳು... ದಿನಕ್ಕೊಂದು ಪ್ಯಾಷನ್ ಪ್ರೂಟ್ .... ಪ್ರತಿ ಮನೆಯಲ್ಲಿರಲಿ ಈ ಹಣ್ಣಿನ ಬಳ್ಳಿ ....

https://youtu.be/u6fA-WrWJlo?feature=shared #ಪ್ಯಾಷನ್_ಪ್ರೂಟ್_ದಿನಕ್ಕೊಂದು #ಗಟ್ಟಿ_ಕವಚದ_ಹಣ್ಣಿನ_ಒಳಗೆ_ರುಚಿಕರ_ಸುವಾಸನೆಯ_ತಿರುಳು. #ಚಮಚದಿಂದ_ತೆಗೆದು_ನಾಲಿಗೆ_ಮೇಲೆ_ಇಟ್ಟರಾಯಿತು #ಷ್ಯಾಷನ್_ಪ್ರೂಟ್_ಮತ್ತು_ಅದರ_ಸಸಿ_ನೀಡಿದ_ಪ್ರೆಂಚ್_ಪ್ರವಾಸಿ #ಈಗ_ನಮ್ಮ_ಮನೆಯಲ್ಲಿ_ಪ್ಯಾಷನ್_ಫ್ರೂಟ್_ರಾಶಿ #ಹೊಸ_ಸಸಿಗಳು_ತಯಾರಿದೆ.   2014ರಲ್ಲಿ ಫ್ರೆಂಚ್ ಪ್ರವಾಸಿ ಒಬ್ಬರು ಕೊಡೈಕೆನಾಲ್ ನಿಂದ ಗೋವಾಕ್ಕೆ ತೆರಳುವಾಗ ಅವರ ಬೈಕಿನ ಪೆಟ್ರೋಲ್ ಟ್ಯಾಂಕ್ ಲೀಕ್ ಆಗುತ್ತಿದ್ದರಿಂದ ನಮ್ಮಲ್ಲಿ ಅವರು ಅವರ ಮಗ ತಂಗಿದ್ದರು.   ಪುನಃ 2015ರಲ್ಲಿ ಕಾರಿನಲ್ಲಿ ಬಂದು ಹಳೆಯ ಪರಿಚಯದಿಂದ ನಮ್ಮಲ್ಲೇ ತಂಗಿದ್ದರು ಇವರ ಪತ್ನಿ ಗೋವಾದವರು, ಇವರ ಒಡೆತನದ ಮನೆ ಆಸ್ತಿ ಕೊಡೈಕೆನಾಲ್ ನಲ್ಲಿದೆ, ಮಗ ಗೋವಾದಲ್ಲಿ ಹಳೆಯ ಮಾಡೆಲ್ ಬೈಕ್ ಗಳನ್ನು ನವೀಕರಿಸಿ ಬೈಕ್ ರೈಡರ್ ಗಳಿಗೆ ಮಾರಾಟ ಮಾಡುವ ಉದ್ಯೋಗವಂತೆ ಪ್ರತಿ ವರ್ಷ ಕೊಡೈಕೆನಾಲ್ ಗೆ ಬಂದು ಕೆಲ ಕಾಲ ತಂಗುತ್ತಾರೆ ನಂತರ ಗೋವಾ ತಲುಪಿ ಅಲ್ಲಿಂದ ಅವರ ದೇಶಕ್ಕೆ ವಾಪಾಸಾಗುತ್ತಾರೆ.    ಅವರು ನನಗೆ ಈ ಪ್ಯಾಷನ್ ಫ್ರೂಟ್ ತಿನ್ನಲು ನೀಡಿದ್ದರು ಅದೇ ಮೊದಲು ನಾನು ಈ ಹಣ್ಣು ನೋಡಿದ್ದು ಜೊತೆಗೆ ಈ ಹಣ್ಣಿನ ಬಳ್ಳಿಯ ಸಣ್ಣ ಸಸಿ ಒಂದು ನೀಡಿದ್ದರು.    ಈಗ ನಮ್ಮ ಕಾಟೇಜಿನ ಗಾರ್ಡನ್ ನಲ್ಲಿ ಪ್ಯಾಷನ್ ಫ್ರೂಟ್ ನ ನಾಕಾರು ಬಳ್ಳಿ ಕಾಡು ಬಾದಾಮಿ ಮರಕ್ಕೆ ಹಬ್ಬಿ ...

Blog number 1880. 70 ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿನ ಕುಂಸಿ -ಅಯನೂರು - ಹಾರನಳ್ಳಿ ಭಾಗದಲ್ಲಿ ಅಕ್ಷರಶಃ ಜನ ಭಯದಿಂದ ಬದುಕುವಂತೆ ಮಾಡಿದ್ದ ದರೋಡೆಕೋರ .

#ವೀರಪ್ಪನ್_ಕನಾ೯ಟಕ_ತಮಿಳುನಾಡಿಗೆ_ತಲೆನೋವಾದಂತೆ. #70ರ_ದಶಕದಲ್ಲಿ_ಶಿಕಾರಿಪುರ_ಕುಂಸಿ_ಅಯನೂರು_ಬಾಗದಲ್ಲಿ_ಬುಡೆನ್_ಸಾಬ್  #ಜನರಿಗೆ_ಪೋಲಿಸರಿಗೆ_ದೊಡ್ಡ_ಸಮಸ್ಯೆ_ಆಗಿದ್ದ. #ಕೊನೆತನಕ_ಬಡತನದ_ಜೀವನ_ಮಾಡಿದ_ಬುಡನ್_ಸಾಬ್ #ಬುಡನ್_ಸಾಬ್_ಹೆಸರಲ್ಲಿ_ಬೇರೆ_ಕಳ್ಳರು_ದರೋಡೆ_ಮಾಡುತ್ತಿದ್ದರಂತೆ.   ಹಾರನಳ್ಳಿಯ ಬುಡನ್ ಸಾಬ್ ಕುಂಸಿ ಅಯನೂರು ಮತ್ತು ಶಿಕಾರಿಪುರದ ಜನ ಸಾಮಾನ್ಯರನ್ನ ಸುಮಾರು 10 ವಷ೯ ಕಾಲ ಬೀತಿಯಿ೦ದ ಇರುವಂತೆ ಮಾಡಿದ್ದ, ಆತ ಕಳ್ಳತನ ಮಾಡುತ್ತೇನೆ ಅಂದ ಮನೆ ಕಳ್ಳತನ ಮಾಡಿಯೇ ಸಿದ್ದ ಎಂಬ ಪ್ರತೀತಿ.    ಹಗಲಿನಲ್ಲಿ ಬುಡನ್ ಸಾಬ್ ಈ ಕಾಡಿನಲ್ಲಿ ಕ೦ಡಿದ್ದ ಎಂದರೆ ವಾರಗಟ್ಟಲೆ ಆ ಕಾಡಿಗೆ ಕಟ್ಟಿಗೆ ತರಲು ಹೋಗುವ ದೈಯ೯ ಯಾರೂ ಮಾಡುತ್ತಿರಲಿಲ್ಲ.    ಕಟ್ಟುಮಸ್ತು ದೇಹದ ಬುಡನ್ ಸಾಬ್ ಕಳ್ಳ ಬುಡನ್ ಅಂತಲೇ ಕುಖ್ಯಾತಿ ಪಡೆದಿದ್ದ,ಏನೇ ಮಾಡಿದರು ಪೋಲಿಸರಿಗೆ ಅವನನ್ನ ಬಂದಿಸಲಾಗದಿದ್ದದ್ದು ಮತ್ತು ಅವನ ತಡೆ ರಹಿತ ಕಳ್ಳತನ ದರೋಡೆಗಳಿOದ ಶಿಕಾರಿಪುರ, ಕುಂಸಿ ಮತ್ತು ಅಯನೂರಿನ ಸುತ್ತ ಮುತ್ತ ನೂರಾರು ಹಳ್ಳಿಗಳು ಭಯದಿಂದ ಜೀವನ ಸಾಗಿಸುತ್ತಿದ್ದ೦ತು ಸತ್ಯ.    ನಂತರ ಪೋಲಿಸರು ಈತನನ್ನ ಬಂದಿಸಿ ಜೈಲಿಗೆ ಕಳಿಸಿದ ನಂತರ ಇದು ನಿಂತಿತು, ಬುಡನ್ ಸಾಬ್ ನಂತರ ಮನ ಪರಿವತ೯ನೆಗೊಂಡು ರೈತರ ಜಮೀನಿನಲ್ಲಿ ನಾಟಿ -ಕೊಯ್ಲು - ಗುತ್ತಿಗೆ ಕೆಲಸ ಮಾಡುತ್ತಿದ್ದರು, ಅವರ ನಂತರ ಇವರ ಕುಖ್...

Blog number 1879. ಶಿವಮೊಗ್ಗ ಜಿಲ್ಲೆಯಲ್ಲಿ ಸುರಕ್ಷಿತ ವಾಪಾಸು ಮಾರ್ಗ ಮುಚ್ಚಿರುವ ಕಾಡಾನೆಗಳು 68 ದಿನಗಳಿಂದ ಹತಾಶೆಯಿಂದ ನಿದ್ದೆ ಆಹಾರ ಇಲ್ಲದೆ ಸಂಚರಿಸುತ್ತಿದೆ ಇವುಗಳು ತಾಳ್ಮೆ ಕಳೆದುಕೊಂಡರೆ ಜನರ ಜೊತೆ ಸಂಘರ್ಷಕ್ಕೆ ಮುಂದಾಗುವುದು ಶತಃಸಿದ್ಧ ಅಷ್ಟರಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.

#ನಮ್ಮ_ಊರ_ಸುತ್ತಮುತ್ತ_ದಾರಿತಪ್ಪಿದ_ಕಾಡಾನೆಗಳು #ನಿನ್ನೆ_ರಾತ್ರಿ_ಸಾಗರ_ಶಿಕಾರಿಪುರ_ಗಡಿ_ಅಂಬ್ಲಿಗೋಳ_ಡ್ಯಾಂ_ಹಿನ್ನೀರು_ಪ್ರದೇಶದಲ್ಲಿತ್ತು #ಮುಂದಿನ_ದಿನದಲ್ಲಿ_ಅನಾಹುತ_ಸಂಭವಿಸುವ_ಮೊದಲು #ಅರಣ್ಯ_ಇಲಾಖೆ_ಇವುಗಳ_ಸುಗಮ_ವಾಪಾಸಾತಿ_ಮಾರ್ಗ_ತೋರಿಸಬೇಕು #ಕಾಡಾನೆ_ವಾಪಾಸು_ತನ್ನ_ಸ್ಥಳಕ್ಕೆ_ಹೋಗುವ_ಮಾರ್ಗದಲ್ಲಿ_ರೈತರು_ಅರಣ್ಯ_ಇಲಾಖೆಗೆ_ಸಹಕರಿಸ_ಬೇಕು #ಅಕ್ಟೋಬರ್_16ರಿಂದ_ಅಂದರೆ_68_ದಿನಗಳಿಂದ_ದಿಕ್ಕು_ಕಾಣದೆ_ಆತಂತ್ರವಾಗಿದೆ. #ರೈತರ_ಪಟಾಕಿ_ಸಾಕು_ನಾಯಿಗಳ_ಅಡೆತಡೆ_ಕಾಡಾನೆ_ಮಾರ್ಗ_ತಡೆ_ಆಗಿದೆ. #ಶಿವಮೊಗ್ಗ_ಜಿಲ್ಲೆಯ_ಜಿಲ್ಲಾಧಿಕಾರಿಗಳು_ಈ_ಬಗ್ಗೆ_ಸೂಕ್ತ_ಕ್ರಮ_ಕೈಗೊಳ್ಳುವಂತೆ_ವಿನಂತಿಸುತ್ತೇನೆ.    16 ಅಕ್ಟೋಬರ್ 2023 ಅಂದರೆ ಇವತ್ತಿಗೆ 68 ದಿನದ ಹಿಂದೆ ಈ ಕಾಡಾನೆಗಳು ಸಾಗರ ತಾಲೂಕಿನ ಗಡಿ ಭಾಗದ ಹೊಸನಗರ ತಾಲೂಕಿನ ಅರಸಾಳು ಕೆಂಚನಾಲ ಭಾಗದಲ್ಲಿ ಮೊದಲ ಬಾರಿಗೆ ಕಾಣಿಸಿತ್ತು ಆಗ ಕೈರದಮನೆಯಲ್ಲಿ ಸಂಜೆ 6.47 ಕ್ಕೆ ಕಾಡಾನೆ ಮತ್ತು ಅದರ ಮರಿಯ ಪೋಟೋ ಸ್ಥಳಿಯರು ತೆಗೆದಿದ್ದರು ಅದರ ಲೇಖನ ಇಲ್ಲಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದಬಹುದು. https://arunprasadhombuja.blogspot.com/2023/10/blog-number-1792.html    ನಂತರ ಚೊರಡಿ - ಕುಂಸಿ - ಅಯನೂರು ಮುಂತಾದ ಭಾಗದಲ್ಲಿ ಸಂಚರಿಸುತ್ತಿತ್ತು ಮೊನ್ನೆ ನಮ್ಮ ಆನಂದಪುರಂದ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದ  ಪತ್ರೆ ಹೊಂಡ, ಕೆರೆಹಿತ್ತಲು ...

Blog number 1878. ದಂಡಾವತಿ ನದಿ ಆಣೆಕಟ್ಟು ವಿರೋದಿ ಹೋರಾಟ ಸಮಿತಿಯ ಅಧ್ಯಕ್ಷರು, ಎಸ್.ಆರ್.ಹಿರೇಮಠರ ಜನ ಸಂಗ್ರಾಮ ಪರಿಷತ್ ರಾಜ್ಯ ಉಪಾಧ್ಯಕ್ಷರಾದ ವಾಮದೇವ ಗೌಡರು ನನ್ನ ಕಛೇರಿಯಲ್ಲಿ.

#ದಂಡಾವತಿ_ನದಿ_ಆಣೆಕಟ್ಟು_ವಿರೋದಿ_ಹೋರಾಟದ_ದಂಡಾನಾಯಕ #ವಾಮದೇವ_ಗೌಡರು . #ಎಸ್_ಆರ್_ಹಿರೇಮಠರ_ರಾಜ್ಯ_ಭ್ರಷ್ಟಾಚಾರಿ_ವಿರೋದಿ_ಆಂದೋಲನದ_ಜನಸಂಗ್ರಾಮ_ಪರಿಷತ್ತಿನ #ರಾಜ್ಯ_ಉಪಾದ್ಯಕ್ಷರು. #ನಾವೆಲ್ಲ_ಇವರ_ಹೋರಾಟದ_ಸ್ಥಳಕ್ಕೆ_ಹೋಗಿ_ಹೋರಾಟಕ್ಕೆ_ನಮ್ಮ_ಬೆಂಬಲ_ಘೋಷಿಸಿದ್ದ_ನೆನಪುಗಳು #ಹೋರಾಟಗಾರ_ಟಿ_ಆರ್_ಕೃಷ್ಣಪ್ಪರ_ಜೊತೆ_ನನ್ನ_ಕಛೇರಿಗೆ_ಬಂದಾಗಿನ_ಮಾತುಕಥೆ_ನೆನಪುಗಳು   ಅವತ್ತು ಅನಿರೀಕ್ಷಿತವಾಗಿ (18-ಡಿಸೆಂಬರ್ -2016 )  ಸೊರಬದ ವಾಮದೇವ ಗೌಡರು ರಿಪ್ಪನಪೇಟೆಯ ಹೋರಾಟಗಾರರಾದ ಟಿ.ಆರ್.ಕೃಷ್ಣಪ್ಪರ ಜೊತೆ ನನ್ನ ಕಛೇರಿಗೆ ಬಂದಿದ್ದರು.           ಅವರು ಸೊರಬದ ದಂಡಾವತಿ ಆಣೆಕಟ್ಟು ವಿರೋದಿ ಹೋರಾಟ ಸಮಿತಿ ಅಧ್ಯಕ್ಷರು,ಹಾಲಿ ಎಸ್.ಆರ್.ಹಿರೇಮಠರ ರಾಜ್ಯ ಭ್ರಷ್ಟಾಚಾರಿ ವಿರೋದಿ ಆಂದೋಲನದ ಜನಸಂಗ್ರಾಮ ಪರಿಷತ್ ನ ರಾಜ್ಯ ಉಪಾಧ್ಯಕ್ಷರು.      ಚಹಾ ಸ್ವೀಕರಿಸುತ್ತಾ "ದಂಡಾವತಿ ಆಣೆಕಟ್ಟು ವಿರೋದಿ  ಹೋರಾಟದ ಸಂದಭ೯ದಲ್ಲಿ ಅರುಣ್ ಪ್ರಸಾದ್ ನಮ್ಮ ಹೋರಾಟದ ಸ್ಥಳಕ್ಕೆ ಬಂದು ಬೆಂಬಲಿಸಿ ನಿತ್ಯದ ಊಟದ ವೆಚ್ಚಕ್ಕಾಗಿ ದೇಣಿಗೆ ನೀಡಿದ್ದನ್ನ ಮರೆತಿಲ್ಲ, ನಮ್ಮ ಖಚು೯ ವೆಚ್ಚದ ಪಟ್ಟಿ ನೋಡಿದಾಗಲೆಲ್ಲ ಅವರು ನೆನಪಾಗುತ್ತಾರೆ" ಅಂದರು.         ನಾನು ಮರೆತು ಬಿಟ್ಟಿದ್ದೆ ...  ಆ ದಿನ ಸಾಗರದಿಂದ ನಾನು, ಕಾಗೋಡು ಹೋರಾಟದ ನೇತಾರರಾದ ಗಣಪತ...

Blog number 1877. ಹಳೇ ಬೇರು ಹೊಸ ಚಿಗುರಿನ ಜುಗಲ್ಬಂದಿಯ ಗೆಳೆತನದ ಜಿಗಳೆಮನೆ ಗಣಪತಿ ಭಟ್ಟರು ಮತ್ತು ಚಿತ್ರ ಕಲಾವಿದ ನಿರಂಜನ ಕುಗ್ವೆ ಅವರನ್ನು ಜೈಲಿಗೆ ಕಳಿಸಿ ಹೆದರಿಸುವ ಪ್ರಯತ್ನದ ಪ್ರಕರಣಕ್ಕೆ ಆರು ವರ್ಷ ಆಯಿತು ಆದರೆ ಇವರಿಬ್ಬರೂ ಹೆದರಲೇ ಇಲ್ಲ....

#ಸುದ್ದಿಯನ್ನ_ಸುದ್ದಿ_ಮಾಡದ_ಈ_ಸುದ್ದಿ #ಆರು_ವರ್ಷದ_ಹಿಂದಿನ_ನೆನಪು #ಜಿಗಳೆಮನೆ_ಗಣಪತಿಭಟ್ಟರು_ಮತ್ತು_ನಿರಂಜನಕುಗ್ವೆ_ಜೈಲಿಗೆ_ಕಳಿಸಿದ_ಪ್ರಕರಣ #ಇವರದ್ದೇ_ಜಾತಿಯ_ಮಠದವರು_ಇವರಿಗೆ_ಜೈಲಿಗೆ_ಕಳಿಸಿದ್ದು #ಇವರು_ಮಾಡಿದ_ತಪ್ಪು_ಮಠದ_ಅತ್ಯಾಚಾರ_ಅನಾಚಾರ_ವಿರೋದಿಸುವ_ಕೆಲಸ. #ಇವರ_ವಿರುದ್ದ_ಹಾಕಿದ_ಕೇಸು_ನಿಲ್ಲುವುದಿಲ್ಲ_ಅಂತ_ಅವರಿಗೂ_ಗೊತ್ತು #ಆದರೆ_ವಿಚಾರಣೆಗೆ_ಮುನ್ನ_ಜೈಲಿಗೆ_ಕಳಿಸಿ_ಸೇಡು_ತೀರಿಸಿ_ಕೊಳ್ಳುವುದು.    ಇವರಿಬ್ಬರ ಹೆಸರು ಗಣಪತಿ ಭಟ್ಟರು ಜಿಗಳೆಮನೆ ಮತ್ತು ನಿರಂಜನ ಕುಗ್ವೆ ಹಳೆ ಬೇರು ಹೊಸ ಚಿಗುರಿನಂತ ಇವರಿಬ್ಬರ ಜುಗಲ್ ಬಂದಿ.    ಇವರಿಬ್ಬರನ್ನ ಪೇಸ್ ಬುಕ್ನಲ್ಲಿ ಮಾನಹಾನಿ ಮಾಡಿದ್ದಾರಂತ ದೂರು ನೀಡಿಸಿ, ಒಂದು ಶನಿವಾರ ಬಂದಿಸಿ ಭಾನುವಾರದ ಕೋಟ್೯ ರಜಾ ದಿನದ ಲಾಭ ಪಡೆದು ಜೈಲಿಗೆ ಕಳಿಸಿ ತಮ್ಮ ದುರುದ್ದೇಶ ಈಡೇರಿಸಿಕೊಂಡ ಈ ಪ್ರಕರಣದ ಹಿಂದೆ ಇವರ ಸಮಾಜದ ಮಠ ಒಂದರ ಕಾಣದ ಕೈಗಳು ಎನ್ನುವುದು ಬಹಿರಂಗ ಸತ್ಯ.   ಹಿರಿಯರಾದ ಗಣಪತಿ ಭಟ್ಟರು RSS ಪ್ರಚಾರಕರಾಗಿದ್ದವರು, ತುತು೯ ಪರಿಸ್ಥಿತಿ ವಿರೋದಿಸಿ ಜೈಲಿಗೆ ಹೋದವರು, ಇವತ್ತಿನವರೆಗೆ ರಾಜಕೀಯಕ್ಕೆ ಬರದವರು, ಸಾತ್ವಿಕರು, ವರದಳ್ಳಿಯ ಪವಾಡ ಪುರುಷ ಶ್ರೀಧರ ಸ್ವಾಮಿಯವರ ಶಿಷ್ಯರು ಮತ್ತು ವರದಳ್ಳಿ ಶ್ರೀದರ ಆಶ್ರಮದ ಅತೀ ಸಮೀಪದ ಜಿಗಳೆ ಮನೆಯವರು.   ನಿರಂಜನ ಕುಗ್ವೆ ಉದಯೋನ್ಮುಖ ವ್ಯಂಗ್ಯಚಿತ್ರಗಾರರು, ಕಲಾ ಶಿಕ್ಷಕರು ಸಾಗರ ಸಮೀಪದ ...

Blog number 1876. ಪ್ಲಾಸ್ಟಿಕ್ ಕೈ ಚೀಲಕ್ಕೆ ಪರ್ಯಾಯವಾಗಿ ಮೆಕ್ಕೆ ಜೋಳದ ಗಂಜಿಯಿಂದ ತಯಾರಾಗುತ್ತಿರುವ ಮಣ್ಣಿನಲ್ಲಿ ಕರಗುವ ಪರಿಸರ ಸ್ನೇಹಿ ಕೈ ಚೀಲ ನಮ್ಮ ಮಲ್ಲಿಕಾ ವೆಜ್ ಬಳಸುತ್ತಿದೆ.

https://youtu.be/EBI7L_t7PRU?feature=shared #ಮೆಕ್ಕೆ_ಜೋಳದ_ಗಂಜಿಯಿಂದ_ಪ್ಲಾಸ್ಟಿಕ್_ಪಯಾ೯ಯ_ಕ್ಯಾರಿ_ಬ್ಯಾಗ್  #ಹೋಟೆಲ್_ಮಾಲಿಕರ_ಸಂಘಟನೆಗಳು_ಈ_ಕ್ಯಾರಿ_ಬ್ಯಾಗ್_ಗಳಿಗೆ_ಬೆಂಬಲಿಸಬೇಕು #ಇವತ್ತು_ನಮ್ಮ_ಮಲ್ಲಿಕಾ_ವೆಜ್_ಗೆ_ತಲುಪಿದೆ. #ಐ_ಆಮ್_ನಾಟ್_ಪ್ಲಾಸ್ಟಿಕ್ #ಬಯೋಡಿಗ್ರೇಡೇಬಲ್_ಕಾಂಪೋಸ್ಟೇಬಲ್ #ಮೇಡ್_ಪ್ರಮ್_ಕಾರ್ನ್_ಸ್ಟಾರ್ಚ್ #ಎನ್ನುವ_ವಾಕ್ಯದಲ್ಲಿ_ಉದ್ಯಮಿ_ಗಣೇಶ್_ಅಂಗಡಿ_ಹೊಸ_ಉದ್ಯಮ_ಪ್ರಾರಂಬಿಸಿದ್ದಾರೆ.   ಮೊನ್ನೆ ಸಂಜೆ ನನ್ನ ಆಫೀಸಿನ ಟೇಬಲ್ ಮೇಲೆ ಹಸಿರು ಬಣ್ಣದ 16 x 20 ಸೈಜಿನ ಕ್ಯಾರಿ ಬ್ಯಾಗ್ ಇತ್ತು ಅದರ ಮೇಲೆ ಫೋನ್ ನಂಬರ್  98800 44040 ಬರೆದಿತ್ತು.   ನಾನು ಯೋಚಿಸಿದ್ದು ಯಾರೋ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಮಾರಾಟಗಾರರು ಸ್ಯಾಂಪಲ್ ಇಟ್ಟಿದ್ದಾರೆ ಅಂತ ಭಾವಿಸಿ ಕೈಯ ಬೆರಳಿಂದ ಸ್ಪರ್ಶಿಸಿದರೆ ಪ್ಲಾಸ್ಟಿಕ್ ಅಲ್ಲ ಅನ್ನಿಸಿತು ಈ ಕ್ಯಾರಿ ಬ್ಯಾಗ್ ಮೇಲೆ ಐ ಆಮ್ ನಾಟ್ ಪ್ಲಾಸ್ಟಿಕ್ - ಬಯೋಡಿಗ್ರೇಡೇಬಲ್- ಕಾಂಪೋಸ್ಟೇಬಲ್ - ಮೇಡ್ ಪ್ರಮ್ ಕಾರ್ನ್ ಸ್ಟಾರ್ಚ್ ಅನ್ನುವ ವಾಕ್ಯಗಳು ಅಚ್ಚಾಗಿತ್ತು.    ಮೇಲಿನ ಸಂಖ್ಯೆಗೆ ಸಂದೇಶ ಕಳಿಸಿ ವಿವರ ಕೇಳಿದೆ ಸ್ವಲ್ಪ ಸಮಯದ ನಂತರ ಅವರಿಂದ ಫೋನ್ ಬಂತು ಅವರು ಗಣೇಶ್ ಅಂಗಡಿ ಅಂತ ಶಿವಮೊಗ್ಗ ಸಮೀಪದಲ್ಲಿನ ಗಾಜನೂರಿನಲ್ಲಿ ಅಡಿಕೆ ತೋಟ ಇದೆ, ಔಷಧಿಗಳ ಸಗಟು ವ್ಯಾಪಾರವಿದೆ, ಬೆಂಗಳೂರಲ್ಲಿ ಈ ಹೊಸ ಪರಿಸರ ಸ್ನೇಹಿ ಉದ್...