Skip to main content

Posts

ಉಪ್ಪಿನ ಹುಡಿ ಎಂಬ ಕರಾವಳಿಯ ಅತ್ಯಂತ ರುಚಿಕರ ಒಣ ಸಿಗಡಿಯ ಚಟ್ನಿ ಬಲ್ಲವನೇ ಬಲ್ಲ ಈ ಉಪ ಖಾದ್ಯ

#  ನೋಡಿ ಕಲಿ ಮಾಡಿ ತಿಳಿ ಎಂಬ ನಾಣ್ಣುಡಿಯOತೆ#     ಕರಾವಳಿಯವರ ನೆಚ್ಚಿನ ಉಪ್ಪಿನ ಹುಡಿ ಎಂಬ ಬಾಯಿ ನೀರು ತರಿಸುವ ಸೀಗಡಿಯ ಚಟ್ನಿಪುಡಿಗಾಗಿ ಅನೇಕರಲ್ಲಿ ಕೇಳಿದ್ದೆ ಆದರೆ ಸೀಗಡಿ ಇದ್ದರೆ ಕೊಬ್ಬರಿ ಸಿಗಲಿಲ್ಲ ಅಥವ ಕೊಬ್ಬರಿ ಸಿಕ್ಕರೆ ಸೀಗಡಿ ಸಿಗಲಿಲ್ಲ ಅಥವ ಎರಡೂ ಇದ್ದಲ್ಲಿ ಅವರ ಹೋಮ್ ಮಿನಿಸ್ಟರ್ಗೆ ಪುರುಸೊತ್ತು ಆಗಿಲ್ಲ ಎಂಬ ಕಾರಣದಿಂದ ಬಹಳ ವಷ೯ದಿಂದ ಈ ಪದಾಥ೯ ಮರಿಚಿಕೆ ಆಗಿತ್ತು.   ಮೊನ್ನೆ ಕಾರವಾರದ ಮೀನು ಮಾರುಕಟ್ಟೆಯಲ್ಲಿ ಒಣ ಸೀಗಡಿ ನೋಡಿದೆ, ಇದನ್ನ ಮಾರಾಟ ಮಾಡುತ್ತಿದ್ದ ಹೆಣ್ಣು ಮಗಳಲ್ಲಿ ಇದರ ಚಟ್ನಿ ಮಾಡುವ ರೆಸಿಪಿ ತಿಳಿದು ಕೊಂಡು ಬಂದು ಇವತ್ತು ಒಣ ಸೀಗಡಿ ನೀರಲ್ಲಿ ತೊಳೆದು ಬಾಂಡಲಿಯಲ್ಲಿ ಹುರಿದು ಒಣ ಕೊಬ್ಬರಿ, ಮೆಣಸಿನ ಪುಡಿ ಮತ್ತು ಉಪ್ಪಿನ ಮಿಶ್ರಣ ಕೊಬ್ಬರಿ ಎಣೆಯ ಜೊತೆ ಹುರಿದು ಮಿಶ್ರ ಮಾಡಿದೆ.    ಅತ್ಯುತ್ತಮ ರುಚಿಕರ ಒಣ ಸೀಗಡಿ ಮೀನಿನ ಚಟ್ನಿಪುಡಿ ಅಥಾ೯ತ್ ಕರಾವಳಿ ಜನರ ಉಪ್ಪಿನ ಹುಡಿ ರೆಡಿ ಆಗಿದೆ.   ಶೇಂದಿಯೋoದಿಗೆ, ಬೀರ್ನೊಂದಿಗೆ ಇದನ್ನ ಹೆಚ್ಚು ಬಳಸುತ್ತಾರೆ, ಊಟದೊಂದಿಗೆ ಈ ಚಟ್ನಿಪುಡಿ ತುಂಬಾ ರುಚಿ. ಮೊಸರನ್ನದ ಜೊತೆ ಒಳ್ಳೆ ಕಾಂಬಿನೇಷನ್.   ನೀವು ಪ್ರಯತ್ನಿಸಿ.

ಹೊಸ ಬಾಳೆ ಮಂಜುನಾಥ ಹೆಗಡೆ ಪಶ್ಚಿಮ ಘಟ್ಟದ ವಿಜ್ಞಾನಿಗಳು, ಇವರನ್ನ ಮಲೆನಾಡಿನ ಆಕಿ೯ಮಿಡಿಸ್ ಅಂತಾನೆ ಕರೆಯಬಹುದು.

ನಿನ್ನೆಯ ಪತ್ರಕತ೯ ತಲವಾಟ ರಾಘವೇಂದ್ರಶಮಾ೯ರ ಪೇಸ್ ಬುಕ್ ಚಚೆ೯ ಹೊಸಬಾಳೆ ಮಂಜುನಾಥಹೆಗಡೆಯವರ ಈ ಪ್ರಾತ್ಯಕ್ಷತೆಗೆ ಕಾರಣ ಆಯಿತು.      ಗೋಕಣ೯ದಿಂದ ಓಂಕಾರ ನಿರಂತರವಾಗಿ ಮರದ ದಂಡ ಸುತ್ತುಸುವುದರಿಂದ ಬರುವ ಕಂಚಿನ ಪಾತ್ರೆ ಖರೀದಿಸಿದ ಬಗ್ಗೆ ಪತ್ರಕರ್ತರಾದ ತಲವಾಟ ರಾಘವೇಂದ್ರ ಶಮಾ೯ರು ಬರೆದಿದ್ದರು, ಇದನ್ನು ಓದಿದಾಗ ನನಗೆ,ನನ್ನ ಬಾಲ್ಯದಲ್ಲಿ ನಮ್ಮ ಹಳ್ಳಿಗೆ  ಬಿಕ್ಷಾಟನೆಗೆ ಬರುತ್ತಿದ್ದ ಜಂಗಮರು ಇಂತಹದೇ ಓಂಕಾರ ಗಂಟೆ ತರುತ್ತಿದ್ದ ಬಗ್ಗೆ ಅದರಿಂದ ಓಂಕಾರ ಬರುಸುತ್ತಿದ್ದ  ಮತ್ತು ಘಂಟೆ ಒಳಗೆ ಮಣಿಗಳು ಕಂಪನದಿಂದ ಕಿಣಿ ಕಿಣಿ ಅಂತ ಕುಣಿಯುವ ವಿಸ್ಮಯ ನೆನಪಾಯಿತು.       ಇದನ್ನುನೋಡಲು ಊರಿನ ಒ೦ದು ವಯಸ್ಸಿನ ಬಾಲಕರಾದ ನಾವೆಲ್ಲ ಇವರು ಊರು ದಾಟುವ ತನಕ ಇವರನ್ನ ಹಿಂಬಾಲಿಸುತ್ತಿದ್ದದ್ದು ನೆನಪಾಗಿ ಪ್ರತಿಕ್ರಿಯೆ ಬರೆದಿದ್ದೆ.   ಇದಕ್ಕೆ ಹೊಸ ಬಾಳೆ ಮಂಜುನಾಥರೂ ಪ್ರತಿಕ್ರಿಯಿಸಿ ಅವರ ಬಾಲ್ಯದಲ್ಲೂ ಈ ಓಂಕಾರದ ಘ೦ಟೆ ಜಂಗಮರನ್ನ ಹಿಂಬಾಲಿಸುತ್ತಿದ್ದನ್ನ ನೆನಪಿಸಿದರು ಮತ್ತು ನಾನು ಮರೆತಿದ್ದ ಈ ಜಂಗಮರ ಇನ್ನೊಂದು ವಿದ್ಯೆ ನೆನಪಿಸಿದರು,ಅದೇನೆಂದರೆ ಒಬ್ಬ ಗಂಟೆ ಜಂಗಮರು ಗೇಟಲ್ಲಿ ನಿಂತು ಹೀಗೆ ಬಾರಿಸುತ್ತಿದ್ದರೆ, ಇನ್ನೊಬ್ಬರು ಮನೆ ಬಾಗಿಲಿಗೆ ಬಂದು ಮನೆಯವರ ಹೆಸರು ಕೇಳಿ (ತಮ್ಮ ದೈಹಿಕ ಸಂಜ್ಞೆ ಮೂಲಕ ಗಂಟೆ ಜಂಗಮರಿಗೆ ಸಂದೇಶ ಕಳಿಸುತ್ತಿದ್ದರೆ ಅದನ್ನು ಅಥ೯ ಮ...

ದೇಶಿ ವಂಶಪಾರಂಪಯ೯ ಕುಂಬಾರಿಕೆಗೆ ಹೊಸ ತನ ನೀಡಿ ಯಶಸ್ವಿ ಆದ ಗುಜರಾತಿನ ಮಿಟ್ಟಿ ಕೂಲ್ ಸಂಸ್ಥೆ ಸ್ಥಾಪಕ ಮನ್ ಸುಕ್ ಬಾಯ್ ಪ್ರಜಾಪತಿ ಸಂಸ್ಥೆಯ ಮಣ್ಣಿನ ನೀರಿನ ಬಾಟಲ್ ನ ನಿಜ ಕಥೆ

#ಬೇಸಿಗೆಯಲ್ಲಿ_ತಣ್ಣನೆ_ನೀರು_ಕುಡಿಯಲು_ಗುಜರಾತಿನ_ಮಿಟ್ಟೀ_ಕೂಲ್_ಮಣ್ಣಿನ_ಬಾಟಲ್.       ಬೆಂಗಳೂರಿನ ಆರುಣ್ ಕುಮಾರ್ ಮತ್ತು ಶಶಿಕುಮಾರ್ ಸಹೋದರರು "ಶ್ರೀ ದಾತ್ರಿ" ಎಂಬ ಬ್ರಾಂಡ್ ನಲ್ಲಿ ಮರದ ಗಾಣದಲ್ಲಿ ಎಣ್ಣೆ ತೆಗೆದು ಮಾರುತ್ತಾರೆ, ಈಗ ಕೆಲ ತಿಂಗಳಿಂದ ಅವರಿಂದ ಖರೀದಿಸುತ್ತೇನೆ, ಇವತ್ತು ನಾಲ್ಕು ಲೀಟರ್ ಎಣ್ಣೆ ಪಾಸ೯ಲ್ ಜೊತೆ ಅತ್ಯುತ್ತಮವಾಗಿ ಪ್ಯಾಕ್ ಮಾಡಿದ ಮಣ್ಣಿನ ಸುಂದರ ಬಾಟಲ್ ಕೂಡ ಕಳಿಸಿದ್ದಾರೆ.   ಇದು ನನಗಾಗಿ ಸಣ್ಣ ಗಿಫ್ಟ್ ಅಂದಿದ್ದಾರೆ, ಇದು ಅಮೇಜಾನ್ ನಲ್ಲಿ ರೂ 550 ಇದೆ, ಇದನ್ನು ಇವರು ಕನಾ೯ಟಕದಲ್ಲಿ 300 ರೂಪಾಯಿಗೆ (ಕೋರಿಯರ್ ಪ್ರತ್ಯೇಕ) ಕಳಿಸುತ್ತಾರಂತೆ.   ಈ ಬಾಟಲ್ ನ ಹಿಂದಿನ ಕಥೆ ಈಗ ಜಗತ್ ಪ್ರಸಿದ್ಧ, ಮಿಟ್ಟೀ ಕೂಲ್ ಅಂದರೆ ಪ್ರಪಂಚದಾದ್ಯಂತ ಪ್ರಖ್ಯಾತಿಗಳಿಸಿದೆ, ವಿದ್ಯುತ್ ಇಲ್ಲದ ಮಣ್ಣಿನ ರೆಪ್ರಿಜರೇಟರ್ ವಿಶ್ವ ಮಾನ್ಯತೆ ಪಡೆದಿದೆ, ಇಲ್ಲಿ ಅಡುಗೆ ಮನೆಯ ಎಲ್ಲಾ ರೀತಿಯ ಅವಶ್ಯಕ ಪಾತ್ರೆ ನವೀನ ರೀತಿಯಲ್ಲಿ ಆಕಷ೯ಕವಾಗಿ ತಯಾರಿಸಿ ಮಾರಾಟ ಮಾಡುತ್ತಾರೆ.   ಇದನ್ನೆಲ್ಲ ಕಂಡು ಹಿಡಿದು ತಯಾರಿಸಿ ಮಾರಾಟ ಮಾಡುವವರು ಕುಂಬಾರಿಕೆ ವೃತ್ತಿ ಜೀವನದ ಕುಟುಂಬದಿಂದ ಬಂದ ಶ್ರೀ ಮನಸುಖ್ ಬಾಯಿ ರಾಘವಜೀ ಬಾಯಿ ಪ್ರಜಾಪತಿ.   ಬಡ ಕುಂಬಾರ ಕುಟುಂಬ ಡ್ಯಾಂ ನಿಮಾ೯ಣದಿಂದ ಮನೆ ಮಠ ಕಳೆದುಕೊಂಡು ಹೊಟ್ಟೆ ಪಾಡಿಗ...

ಪ್ರಸಿದ್ದ ಲೇಖಕ, ಸಂಶೋದಕ ಮತ್ತು ಕಾದಂಬರಿಕಾರ ಅಂಬ್ರಯ್ಯ ಮಠ ಬಿದನೂರು ನಗರದಲ್ಲಿ ವಿಶ್ರಾಂತ ಜೀವನ ಮಾಡುತ್ತಿದ್ದಾರೆ ಅವರು ಬರೆದ ಕೆಳದಿ ಕುಲ ತಿಲಕ ಹಿರಿಯ ವೆಂಕಟಪ್ಪ ನಾಯಕ ರಾಜ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ.

#ಬಿದನೂರು_ನಗರ_ವಾಸಿ_ಸಂಶೋದಕ_ಲೇಖಕ_ಅಂಬ್ರಯ್ಯ_ಮಠ #ಬರೆದ_ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪ_ನಾಯಕ_ಐತಿಹಾಸಿಕ_ಕಾದಂಬರಿ.    ಕೆಳದಿ ರಾಜರಲ್ಲಿ ದೀಘ೯ ಕಾಲದ ಆಡಳಿತ ಮಾಡಿದವರು, ಹೆಚ್ಚು ರಾಜ್ಯ ವಿಸ್ತಾರ ಮಾಡಿದವರು, ಇವತ್ತಿನ ಸಾಗರ ಪಟ್ಟಣ (ಸದಾಶಿವ ಸಾಗರ) ಕಟ್ಟಿದವರು, ಆನಂದಪುರ ಎಂದು ನಾಮಕರಣ, ಚಂಪಕ ಸರಸ್ಸು ನಿಮಿ೯ಸಿದ ರಾಜ ಹಿರಿಯ ವೆಂಕಟಪ್ಪ ನಾಯಕ ಕೆಳದಿ ಇತಿಹಾಸದಲ್ಲಿ ಅಗ್ರಶ್ರೇಯಾಂಕದಲ್ಲಿ ಇದ್ದರೂ ರಾಜ ವೆಂಕಟಪ್ಪ ನಾಯಕರನ್ನ ಉದ್ದೇಶ ಪೂವ೯ಕವಾಗಿ ಕಾಣದ ಕೈಗಳು ಬದಿಗೆ ಸರಿಸಲು ಅನೇಕ ಕಾರಣ ಇದೆ.    ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚು ಮಾಹಿತಿ ಸಾವ೯ಜನಿಕರಿಗೆ ಬೇಕಾಗಿದೆ ಇಂತಹ ಒಂದು ಉಪಯುಕ್ತ ಕೆಲಸ ಮಾನ್ಯ ಅಂಬ್ರಯ್ಯ ಮಠ 2012 ರಲ್ಲಿ #ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪನಾಯಕ ಎಂಬ ಐತಿಹಾಸಿಕ ಕಾದಂಬರಿ ಪ್ರಕಟಿಸಿದ್ದಾರೆ, ಈ ಪುಸ್ತಕ ಮೂರು ತಿಂಗಳಿಂದ ಅನೇಕ ಬಾರಿ ಕೆಲ ಅಧ್ಯಾಯಗಳನ್ನು ಓದಿ ನನಗೆ ಬೇಕಾಗಿದ್ದ ಅನೇಕ ಮಾಹಿತಿ ಮನನ ಮಾಡಿಕೊಂಡೆ.    ಈ ಪುಸ್ತಕ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಜನ ಮತ್ತು ಕೆಳದಿ ಇತಿಹಾಸದ ಬಗ್ಗೆ ತಿಳಿದು ಕೊಳ್ಳುವವರು ಓದಲೇ ಬೇಕು.     ಸಾಗರ ಪಟ್ಟಣ ಕಟ್ಟಿದ ರಾಜ ವೆಂಕಟಪ್ಪ ನಾಯಕರ ಹೆಸರು ಎಲ್ಲಿಯೂ ಸ್ಮಾರಕವಾಗಿ ಸಾಗರದಲ್ಲೇ ಇಲ್ಲ!! ಎಂದರೆ ಅಥ೯ವಾದೀತು ರಾಜ ಮನೆತನದ ಹುನ್ನಾರ, ಅಂತರ್ ಜಾತಿ...

ಕಲ್ಲುಹೂವೆಂಬ ರುಚಿ ಹೆಚ್ಚಿಸುವ ನೈಸಗಿ೯ಕ ಶಿಲಾ ಪುಷ್ಪಾ

#ಕಲ್ಲಲ್ಲಿ_ಹೂವು_ಅರಳಿ_ಕಲ್ಲು_ಹೂವಾಗಿ.     ಕಲ್ಲು ಹೂವು ಕನ್ನಡದಲ್ಲಿ, ಪತ್ತರ್ ಕಾ ಪೂಲ್ ಹಿಂದಿಯಲ್ಲಿ ಮತ್ತು ಇಂಗ್ಲೀಷ್ ನಲ್ಲಿ Block stone flower ಎನ್ನುವ ಈ ಶಿಲೀಂದ್ರ ಅಥವ ಪಂಗಸ್ ಅಥವ ಹಸಿರು ಪಾಚಿ ಮಾಲಿನ್ಯ ರಹಿತ ಪ್ರದೇಶದಲ್ಲಿ ಬಂಡೆ ಕಲ್ಲಿನಲ್ಲಿ ಅರಳುತ್ತದೆ.   ಇದನ್ನು ಹೂವಾದಾಗ ಸಂಗ್ರಹಿಸಿ ಒಣಗಿಸಿ ಮಾರಾಟ ಮಾಡುವ ಶ್ರಮದ ಕೆಲಸ ಇದೆ ಯಾಕೆಂದರೆ ಗುಡ್ಡಗಾಡಿನಲ್ಲಿ ಮಾತ್ರ ಸಿಗುವ ಇದನ್ನು ಸುಲಭವಾಗಿ ಸಂಗ್ರಹಿಸಲು ಸಾಧ್ಯವಿಲ್ಲ.   ಪಶ್ಚಿಮ ಘಟ್ಟದ ಕಳಸ ಭಾಗದಲ್ಲಿ ಇದನ್ನು ಸಂಗ್ರಹಿಸಿ ಮಾರುವವರನ್ನ 20 ವರ್ಷದ ಹಿಂದೆ ನೋಡಿದ್ದೆ, ನಮ್ಮ ದೇಶದ ಮೊದಲ ಕಲ್ಲು ಹೂವಿನ ಗಾಡ೯ನ್ ಉತ್ತರ ಕಾಂಡದ ಕಮೌನ್ ಪ್ರಾಂತ್ಯದ ಮೂನ್ಷಿಯಾರ್ ಬೆಟ್ಟದಲ್ಲಿ ಅರಣ್ಯ ಇಲಾಖೆ ಸಂರಕ್ಷಿಸಿದೆ.   ಇದು ಯುರೋಪು, ಉತ್ತರ ಅಮೇರಿಕಾ ಮತ್ತು ಸೈಬೀರಿಯದಲ್ಲಿ ಮುಖ್ಯ ಆಹಾರ ಆಗಿ ಬಳಸುತ್ತಿದ್ದ ದಾಖಖೆ ಇದೆ.    ಔಷದ, ಆಹಾರ, ಸುಗಂದ ದ್ರವ್ಯ ಮತ್ತು ನೈಸಗಿ೯ಕ ಬಣ್ಣ ತಯಾರಿಯಲ್ಲು ಇದರ ಬಳಕೆ ಇದೆ.    ಆಯುವೇ೯ದದಲ್ಲಿ ನೋವು ನಿವಾರಕ, ಚಮ೯ ರೋಗ ಮತ್ತು ಗಾಯ ಗುಣಪಡಿಸಲೂ ಇದನ್ನ ಬಳಸುತ್ತಾರೆ .    ಇದನ್ನು ಬಹು ಮುಖ್ಯವಾಗಿ ಹೈದ್ರಾಬಾದ್ ಬಿರಿಯಾನಿ ಮತ್ತು ತಮಿಳುನಾಡಿನ ಚೆಟ್ಟಿ ನಾಡು ಮಾಂಸಹಾರಿ ಅಡುಗೆಯಲ್ಲಿ ಬಳಸುತ್ತಾರೆ.    ...

ಜಲ ತಜ್ಞ, ಅದುನಿಕ ಭಗಿರಥ, ಪರಿಸರ ಪ್ರೇಮಿ ಎಂದೆಲ್ಲ ಜನರಿಂದ ಕರೆಯುವ ಲೇಖಕ ಶಿವಾನಂದ ಕಳವೆ ಅವರ ಮಧ್ಯ ಘಟ್ಟ ಕಾದಂಬರಿ ವಿಶೇಷ ಮತ್ತು ವಿಸ್ಮಯವಾದ ಪರಿಸರದ ಜೊತೆಯ ನಿಜ ಕಥೆ

#ಶಿವಾನಂದ_ಕಳವೆ_ಅವರ_ಮದ್ಯಘಟ್ಟ_ಓದುಗರನ್ನ_ಯೋಚಿಸುವಂತೆ_ಮಾಡುವ_ಕಾದಂಬರಿ  #ಪರಿಸರದ_ಮೇಲೆ_ನಾಗರೀಕತೆಯ_ಪ್ರಬಾವ_ಮತ್ತು_ಪರಿಣಾಮಗಳನ್ನ #ಕಳವೆಯವರ_ಸೂಕ್ಷ್ಮ_ದೃಷ್ಟಿಕೋನದಲ್ಲಿ_ಸೆರೆಹಿಡಿದು_ಹೆಣೆದ_ನಿಜಕಥೆ_ಕಾದಂಬರಿ    ಈ ಕಾದಂಬರಿ ಮೊದಲ ಮುದ್ರಣ ಆಗಸ್ಟ್ 2020ಕ್ಕೆ ಆಗಿದ್ದು ನಾಲ್ಕು ತಿಂಗಳಲ್ಲಿ ಮೂರು ಮುದ್ರಣ ಆಗಿದೆ ಅಂದರೆ ಈ ಕಾದಂಬರಿಯ ಜನಪ್ರಿಯತೆ ಅಥ೯ವಾದೀತು.   ಕಾದಂಬರಿ ಕಥಾ ನಾಯಕಿ ಭೂದೇವಿದೂರದ ಕೇರಳದಿಂದ ತನ್ನ ಮಗ ವಾಸುದೇವ ಮತ್ತು ಕಂಕಳ ಕೂಸು ದೇವಕಿ ಜೊತೆ ತನ್ನ ಮಗಳ ಮನೆ ಮಧ್ಯ ಘಟ್ಟದ ಗೋಪಯ್ಯ ಹೆಗ್ಗಡೆ (ಅಳಿಯ) ಮನೆಗೆ ಮಂಗಳೂರು ರೈಲು ನಿಲ್ದಾಣದಲ್ಲಿ ತಲುಪಿದಾಗ ತನ್ನ ಹಣ ಮತ್ತು ಬಟ್ಟೆಯ ಬ್ಯಾಗ್ ಕಳೆದುಕೊಂಡು ಮಂಗಳೂರಿಂದ ಕುಮಟಾ ಮಾಗ೯ವಾಗಿ ಸಾರಿಗೆ ಸಂಪರ್ಕ ಇಲ್ಲದ ಕಾಲದಲ್ಲಿ ಮಲೆಯಾಳಂ ಬಿಟ್ಟು ಬೇರೆ ಭಾಷೆ ಬರದ ಹೆಣ್ಣು ಹತ್ತು ದಿನ ನಡೆದು 9 ನದಿ ದಾಟಿ ಸಿಸಿ೯ ತಲುಪಿ ಅಲ್ಲಿಂದ ಮಧ್ಯ ಘಟ್ಟ ಸೇರಿ ಇಲ್ಲೇ ನೆಲೆ ನಿಲ್ಲುವ ನಿಜ ಜೀವನ ಕಥೆಯನ್ನ ಸ್ವಾರಸ್ಯವಾಗಿ ಕಾಲ ಮಾನದ ಅನೇಕ ಬದಲಾವಣೆ, ಅಭಿವೃದ್ಧಿ ಜೊತೆಗೆ ಪರಿಸರದ ಜ್ಞಾನದೊಂದಿಗೆ ಬರೆದಿದ್ದಾರೆ.   ಈ ಕಾದಂಬರಿ ಮೂರನೇ ಮುದ್ರಣದ ಸಂದಭ೯ದಲ್ಲಿ ಈ ಕಾದಂಬರಿ ಓದಿದವರು ಸಾಂಕೇತಿಕವಾಗಿ ಯಾಣ ಸಮೀಪದ ಮಧ್ಯ ಘಟ್ಟಕ್ಕೆ ಕೆಲವು ಕಿ.ಮಿ ಭೂದೇವಿ ನಡೆದ ಮಾರ್ಗದಲ್ಲಿ ನಡೆದು ಮಧ್ಯ ಘಟ್ಟ ತಲುಪಿ ಈ ಕಾದಂಬರಿ ಬಗ್ಗೆ ಚಚೆ೯ ಮಾಡ...

ಶಿವಮೊಗ್ಗ ಕ್ರಷರ್ ಜೋನ್ ನಲ್ಲಿ ಜಿಲೆಟಿನ್ ಬಾಕ್ಸ್ ಗಳು ಬ್ಲಾಸ್ಟ್ ಆಗಲು ಕಾರಣ ಏನು? ವಾಸ್ತವಕ್ಕೆ ಸಮೀಪದ ಅನಿಸಿಕೆ

#ಶಿವಮೊಗ್ಗ_ಹುಣಸೋಡು_ಬ್ಲಾಸ್ಟ್_ವಾಸ್ತವಗಳು  #ಅದಿಕೃತ_ಅನದಿಕೃತ_ಕಲ್ಲುಗಣಿ_ಸಕಾ೯ರ_ರಾಜಕೀಯ_ಪ್ರಭಾವ_ಅವಘಡ_ಪ್ರದಾನಿ_ಮೋದಿ_ಹೇಳಿಕೆ #ರಾಹುಲ್_ಗಾಂದಿ_ಸಂತಾಪ_ಮಾಜಿ_ಮುಖ್ಯಮಂತ್ರಿ_ಸಿದ್ದರಾಮಯ್ಯ_ಖಂಡನೆ_ಮುಖ್ಯಮಂತ್ರಿ_ಯಡೂರಪ್ಪ_ಸ್ಥಳಕ್ಕೆ     ಹೀಗೆ ಗುರುವಾರ ರಾತ್ರಿ 10 ರಿಂದ 10- 20 PM (ದಿನಾಂಕ 21- ಜನವರಿ 2021) ಕೇವಲ 20 ನಿಮಿಷ ಅವಧಿಯಲ್ಲಿ ಆಗಿರುವ ಘೋರ ದುರಂತದ ಸ್ಪೋಟದಿಂದ ಈ ಕ್ಷಣದವರೆಗೂ ಈ ಘಟನೆ ಬಗ್ಗೆ ಅನೇಕ ವರದಿ ವಿಶ್ಲೇಷಣೆಗಳು ಬರುತ್ತಲೇ ಇದೆ.    ಆಗಿರುವ ಅನಾಹುತ, ನಷ್ಟ,  ಜೀವಹಾನಿಗೆ ಪರಿಹಾರ ಏನು? ಕಾರಣರಾರು? ಶಿಕ್ಷೆ ಏನು? ಎನ್ನುವ ಚಚೆ೯ ಬದಿಗಿಟ್ಟು ಇಡೀ ಪ್ರಕರಣ ನೋಡುವ ಅನಿವಾಯ೯ತೆ ಇದೆ.    ಗ್ರೌಂಡ್ ರಿಯಾಲಿಟಿ ವರದಿ,ಘಟನೆ ಸಮೀಪದ ವಾಸಿ ಆಗಿರುವ ಬರಹಗಾರರಾದ ರಾಜೇಂದ್ರ ಬುರುಡಿಗಟ್ಟೆ ಅವರ ಲೇಖನದಿಂದ ಪೇಸ್ ಬುಕ್ ಓದುಗರಿಗೆ ಗೊತ್ತಾಯಿತು.   ಘಟನೆ ಸ್ಥಳದಿಂದ 3 ಕೀ ಮಿ ದೂರದ ಅಬ್ಬಲಗೆರೆ SR ಪೆಟ್ರೋಲ್ ಪಂಪ್ ಮಾಲಿಕರಾದ ನಿವೃತ್ತ ಕೃಷಿ ಬ್ಯಾಂಕ್ ನ  ಜಿಲ್ಲಾ ವ್ಯವಸ್ಥಾಪಕರಾದ ಹಂದಿಗೋಳ್ ಸಾಹೇಬರು " ಅವತ್ತು ರಾತ್ರಿ ಸಣ್ಣ ಬ್ಲಾಸ್ಟ್ ಶಬ್ದ ನಂತರ ಬೆಳಕು, ಆಕಾಶದೆತ್ತರ ಹೊಗೆ ಏಳುವುದು ನೋಡಿ ಏನೋ ಅನಾಹುತ ಅಂತ ಹೊರ ಬಂದು ನೋಡುತ್ತಿರುವಾಗಲೇ ಕಣ೯ ಕಠೋರವಾದ ಸ್ಪೋಟ ಆಯಿತು, ಪೆಟ್ರೋಲ್ ಪಂಪ್ ಗಾಜುಗಳೆಲ್ಲ ಅದುರಿತು " ಅ...