Skip to main content

Posts

ಮರದ ಎಣ್ಣೆ ಗಾಣದಲ್ಲಿ ಶುದ್ಧ ಖಾದ್ಯದ ಎಣ್ಣೆ ತಯಾರಿಸಿ ಜನರಿಗೆ ತಲುಪಿಸುವ ಬೆಂಗಳೂರಿನ ಶ್ರೀ ಧಾತ್ರಿ ಆಯಿಲ್ & ನ್ಯಾಚುರಲ್ಸ್ ನ ಉತ್ಸಾಹಿ ತರಣ ಸಹೋದರರು

#ಗಾಣದಿಂದ_ಶುದ್ಧ_ಖಾದ್ಯ_ಎಣ್ಣೆ_ಮಾಡಿ_ಮಾರಾಟಮಾಡುವ_ಸಹೋದರರು.     ಅರುಣ್ ಕುಮಾರ್ ಮತ್ತು ಶಶಿಕುಮಾರ್ ಸಹೋದರರು ಬೆಂಗಳೂರಿನ ರಾಮಸಂದ್ರದ ಸೂಲಿಕೆರೆ ಮುಖ್ಯ ರಸ್ತೆಯಲ್ಲಿ ಮರದ ಎಣ್ಣೆಗಾಣದಲ್ಲಿ ಶುದ್ಧ ಶೆಂಗಾ ಎಣ್ಣೆ, ಸೂಯ೯ಕಾಂತಿ ಎಣ್ಣೆ, ಎಳ್ಳೆಣ್ಣೆ ಮತ್ತು ಕೊಬ್ಬರಿ ಎಣ್ಣೆ ತೆಗೆದು ರಾಜ್ಯದಾದ್ಯಂತ ಆಸಕ್ತ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ.   ನಿನ್ನೆ ಇವರು ಕಳಿಸಿದ ಶೆಂಗಾ ಎಣ್ಣೆ ಮತ್ತು ಎಳ್ಳೆಣ್ಣೆ ಕೋರಿಯರ್ ನಲ್ಲಿ ಬಂತು ಬಹುಶಃ ನನ್ನ ಬುದ್ದಿ ಬಂದ ಮೇಲೆ ಇಂತಹ ರುಚಿಯ ಮತ್ತು ಇಂತಹ ನೈಸಗಿ೯ಕ ಸುವಾಸನೆಯ ಶೇಂಗಾ ಎಣ್ಣೆ ನಾನು ನೋಡಿಲ್ಲ ಮತ್ತು ತಿಂದಿಲ್ಲ ಇದರ ಬೆಲೆ ಲೀಟರ್ ಗೆ 350.   ಮಾರುಕಟ್ಟೆಯಲ್ಲಿ ರಿಪೈನ್ಡ್ ಶೇಂಗಾ ಎಣ್ಣೆಗೆ ಗರಿಷ್ಟ ರೂ 125 ಕ್ಕೆ ಸಿಗುವಾಗ ಇವರದ್ದೇನ್ರಿ? ಅಂತ ಪ್ರಶ್ನಿಸಬಹುದು, ಇದಕ್ಕೆ ಕಾರಣವೇನು ಅಂತ ನೋಡುತ್ತಾ ಹೋದರೆ ಅಸಲಿ ಚಿತ್ರಣ ಗೊತ್ತಾಗುತ್ತದೆ ಏನೆಂದರೆ 3kg ಶೇಂಗಾ ಬೀಜದಿಂದ ಒ0ದು ಲೀಟರ್ ಶೇಂಗಾ ಎಣ್ಣೆ ಬರುತ್ತದೆ, ಒಂದು ಕೇಜಿ ಶೇಂಗಾ ಬೀಜಕ್ಕೆ ರೂ 120 ಇದೆ, 3kg ಗೆ 360 ಆಗುತ್ತದೆ. ಪ್ರೊಡಕ್ಷನ್ ವೆಚ್ಚ ಪ್ಯಾಕಿಂಗ್ ಗೆ ಪ್ರತ್ಯೇಕ ವೆಚ್ಚ ಆಗುತ್ತದೆ ಆದರೆ ಮಾರುಕಟ್ಟೆಯಲ್ಲಿ ಉತ್ಪಾದನಾ ವೆಚ್ಚಕ್ಕಿಂತ ರೂ 250 ಕಡಿಮೆ ದರದಲ್ಲಿ ಹೇಗೆ ಮಾರಾಟ ಸಾಧ್ಯ?   ಪೆಟ್ರೋಲ್ ಉತ್ಪದನೆಯಲ್ಲಿ ಬರುವ ವೈಟ್ ಆಯಿಲ್ ಎಂಬ ಅಖಾದ್ಯ ಎಣ್ಣೆ ಸಮುದ್ರಕ್ಕ...

ಸಿಸ್ಟರ್ ಪ್ರೇಮಾ ನಮ್ಮನ್ನೆಲ್ಲಾ ಬಾಲ್ಯದಲ್ಲಿ ಎತ್ತಾಡಿಸಿದ ಮತ್ತು ನನ್ನ ಅಜ್ಜಿ,ಅಪ್ಪ ಮತ್ತು ಅಮ್ಮರ ಒಡಾನಾಟದ ನೆನಪು ಮಾಡಿ ನಮ್ಮನ್ನೆಲ್ಲ ನೆನಪಿನ ಲೋಕಕ್ಕೆ ಒಯ್ದಿದ್ದವರು.

#ನಮ್ಮನ್ನೆಲ್ಲ_ಬಾಲ್ಯದಲ್ಲಿ_ಎತ್ತಾಡಿಸಿದ_ನನ್ನ_ತಂದೆ_ತಾಯಿಯ_ಒಡನಾಟದಲ್ಲಿದ್ದ  #ಸಿಸ್ಟರ್_ಪ್ರೇಮಾ.   1960 ರ ದಶಕದಲ್ಲಿ ಅಂದರೆ 60 ವರ್ಷದ ಹಿಂದೆ ನಮ್ಮ ಊರಲ್ಲಿ ಏನಿತ್ತು? ರಂಗನಾಥ ದೇವಸ್ಥಾನ ಮತ್ತು ಮಸೀದಿ ಕೆರೆ ಆಚೆಯ ಆನಂದಪುರಂ ನಲ್ಲಿ ಇದ್ದರೆ ಚಚ್೯ ಇದ್ದಿದ್ದು ನಮ್ಮ ಮನೆ ಸಮೀಪದ ಯಡೇಹಳ್ಳಿಯಲ್ಲಿ.     ಶಿವಮೊಗ್ಗ ಸಾಗರ ರಸ್ತೆ, ತೀಥ೯ಹಳ್ಳಿ ರಸ್ತೆ ಮತ್ತು ಹೊಸ ನಗರ ರಸ್ತೆಗಳು ಡಾಂಬರೀಕರಣ ಆಗಿರಲಿಲ್ಲ, ಊರಲ್ಲಿ ಹುಲ್ಲಿನ ಮನೆಗಳೆ ಎಲ್ಲಾ .      ಕ್ರೈಸ್ತ ದಮ೯ದ ಸುಶೀಲ್ ಬಾಯಮ್ಮ, ಆನಮೇರಿ ಬಾಯಮ್ಮ, ಗಾಡ೯ರಮ್ಮ, ಸಂತಾನ ಬಾಯಮ್ಮ ಹೀಗೆ ಇನ್ನೂ ಐದಾರು ಬಾಯಮ್ಮನವರಿದ್ದರು (ನನ್ನ ತಾಯಿಯ ಗೆಳತನದ ಪರೀದಿಯಲ್ಲಿದ್ದ ಇವರ ಹೆಸರು ಮಾತ್ರ ನೆನಪಿದೆ ಇವರ ಪತಿಯರ ಹೆಸರು ನೆನಪಿಲ್ಲ).   ಸುಶೀಲ್ ಬಾಯಮ್ಮರ ಪುತ್ರಿ ಅವರ ದಮ೯ ಅನುಯಾಯಿ ಆಗಿ ಸಿಸ್ಟರ್ ಆದರು ಅವರಿಗೆ ಹೊಸ ಹೆಸರು ಸಿಸ್ಟರ್ ಪ್ರೇಮಾ ಅಂತಾಯಿತು ನಮ್ಮನ್ನೆಲ್ಲ ಎತ್ತಾಡಿಸಿದ ಹಿರಿಯ ಸಹೋದರಿ ಅಂತಹ ಸಿಸ್ಟರ್ ಪ್ರೇಮಾ ಊರು ತೊರೆದೇ 50 ವರ್ಷ ಆಯಿತು, ಅವರ ಸಂಸ್ಥೆಯ ಅನೇಕ ಕಡೆ  ಕಾಯ೯ನಿವ೯ಹಿಸಿದ್ದಾರೆ ಅಲ್ಲೆಲ್ಲಾ ಅಪಾರ ಶಿಷ್ಯ ವರ್ಗ ಹೊಂದಿದ್ದಾರೆ.     ನಮ್ಮ ಊರಲ್ಲಿ ಅವರ ಸಹೋದರಿಯ ಮನೆ ಇದೆ, ಎರೆಡು ವರ್ಷದ ಹಿಂದೆ ಅವರು ಇಹಲೋಕ ತ್ಯಜಿಸಿದರು, ಅವರ ವರ್ಷದ ತಿಥಿಗೆ ಸಹೋದರಿಯ ಮಗ ರೇಮಂಡ...

"ನಮ್ಮ ಬದುಕಿಗೆ ವಷ೯ಗಳನ್ನು ತುಂಬುವುದು ಮುಖ್ಯವಲ್ಲ - ಬರುವ ಪ್ರತಿ ಹೊಸ ವರ್ಷಗಳಿಗೆ ಜೀವ ತುಂಬುವುದು ಮುಖ್ಯ"

#ನಮ್ಮ_ಬದುಕಿಗೆ_ವಷ೯ಗಳನ್ನು_ತುಂಬುವುದು_ಮುಖ್ಯವಲ್ಲ #ಬರುವ_ಪ್ರತಿ_ಹೊಸ_ವರ್ಷಗಳಿಗೆ_ಜೀವ_ತುಂಬುವುದು_ಮುಖ್ಯ    ಎಂಬ ಅನುಭವಿ ಮಾತಿನಂತೆ 2021 ನನ್ನ ಹೊಸ ಪ್ರಯೋಗ, ಹೊಸ ಜೀವನದ ಅಧ್ಯಾಯ HEALTH TOURISM ಅಂಗವಾಗಿ ವೈದ್ಯೋ ನಾರಾಯಣ ಹರಿ ಆಯುರ್ವೇದ ಕ್ಲೀನಿಕ್ ಇವತ್ತಿಂದ ಪ್ರಾರಂಭ ಆಗಿದೆ.                  #ಮುಂದಿನ_ಗುರಿಗಳು            1. ನಾಟಿ ವೈದ್ಯರ ಸಮಾವೇಶ *ಪಾರಂಪರಿಕಾ/ನಾಟಿ ವೈದ್ಯರಿಗೆ ಜಾಗತಿಕವಾಗಿ ಮಾರುಕಟ್ಟೆ, ಔಷದಗಳ ಸಂಸ್ಕರಣಿ, ಪುಡ್ ಗ್ರೇಡ್ ಪ್ಯಾಕಿಂಗ್ ಗಳ ಬಗ್ಗೆ ಮಾಹಿತಿ ತಜ್ಞರಿಂದ ಕೊಡಿಸುವ ಕಾಯ೯ಕ್ರಮ .             2. ಆನಂದಪುರಂ ಮುಂದಿನ ದಿನದಲ್ಲಿ ಪಶ್ಚಿಮ ಘಟ್ಟದ ಆಯುವೇ೯ದದ ಸಂಕೀಣ೯ (HUB) ಮಾಡುವ ಗುರಿ.  * ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಿಶಿಷ್ಟ ಸಾದನೆಗೈದ ಪಾರಂಪರಿಕಾ / ನಾಟಿ ವೈದ್ಯರುಗಳು ಇಲ್ಲಿ ನಿದಿ೯ಷ್ಟ ದಿನ ಲಭ್ಯವಿದ್ದು ಚಿಕಿತ್ಸೆ ನೀಡುವಂತ ವ್ಯವಸ್ಥೆ.             3. ನ್ಯಾಚುರೋಪತಿ ಚಿಕಿತ್ಸೆ * ಈ ಮೂಲಕ ಸ್ಥೂಲಕಾಯ ನಿವಾರಣೆ.            4. ಸುಗಂದ ಚಿಕಿತ್ಸೆ (Aroma treatment)  * ನವೀನ ಮಾದರಿಯ ಸುಗಂದ ಚಿಕಿತ್ಸೆ ...

ಶಿವಮೊಗ್ಗದ ಹಾಪ್ ಕಾಮ್ಸ್ ವೈನ್ ಶಾಪ್ ನಲ್ಲಿ ಅತ್ಯುತ್ತಮ ವೈನ್ & ಶಾಂಪೇನ್ ಮಾರಾಟಕ್ಕೆ ಇದೆ.

#ಶಾ೦ಪೇನ್‌_ಮತ್ತು_ವೈನ್ #ಕ್ರಿಸ್ಮಸ್_ಮತ್ತು_ನ್ಯೂಇಯರ್   ಕ್ರಿಸ್ಮಸ್ ಮತ್ತು ಹೊಸ ವಷ೯ದ ಶುಭಾಷಯದ ಜೊತೆ ಕೇಕ್ ಜೊತೆ ದ್ರಾಕ್ಷಾರಸ (ವೈನ್), ಕೆಲ ನಮ್ಮ ಆಪ್ತರಾದ  ಊರಿನ ಕ್ರಿಸ್ತ ಬಾಂದವರಿಗೆ ನೀಡಲು ವೈನ್ ಖರೀದಿಸ ಬೇಕಾಗಿತ್ತು.   ಶಿವಮೊಗ್ಗದ ಎಪಿಎಂಸಿ ತರಕಾರಿ ಮಾರುಕಟ್ಟೆ ಸಮೀಪ ( ಶಾಂತವೇರಿ ಗೋಪಾಲ ಗೌಡ ರಸ್ತೆ) ಹಾಪ್ ಕಾಮ್ಸ್ ಪಕ್ಕದಲ್ಲಿ ಸಕಾ೯ರದ ವ್ಯೆನ್ ಶಾಪ್ ನಲ್ಲಿ ಒಳ್ಳೆಯ ವೈನ್ ಮತ್ತು ಶಾಂಪೇನ್ ಗಳು ಮಾರಾಟಕ್ಕೆ ಇದೆ ಅಂತ ಗೊತ್ತಾದ ಮೇಲೆ ಅಲ್ಲಿಂದಲೇ ಖರೀದಿಸಿದೆ.  ದೇಶ ವಿದೇಶದ ಬ್ರಾಂಡ್ ಗಳ ವೈನ್ & ಶಾಂಪೇನ್ ಜೊತೆ ನಮ್ಮ ರಾಜ್ಯದ ದ್ರಾಕ್ಷಿ ಬೆಳೆಗಾರರು ತಯಾರಿಸಿದ ವೈನ್‌ಗಳೂ ಇಲ್ಲಿವೆ. ಕಿಕ್ ಜಾಸ್ತಿ ಇರುವ fortified wine (ಆಲ್ಕೊಹಾಲ್ ಅಂಶ ಹೆಚ್ಚಿರುವ) ಕೂಡ ಇಟ್ಟಿದ್ದಾರೆ.   ವೈನ್ ಮಲೆನಾಡಿನಲ್ಲಿನ ಮದು ಪ್ರಿಯರನ್ನ ಹೇಗೆ ಆಕಷಿ೯ಸಿದೆ ಅಂತ ವಿಚಾರಿಸಿದರೆ ನಿರಾಷೆಯ ಉತ್ತರ ಸಿಕ್ಕಿತು, ಜನ ವಿಸ್ಕಿ ಬ್ರಾಂಡಿ ಕುಡಿಯುವವರು ವೈನ್ ಇಷ್ಟ ಪಡುವುದಿಲ್ಲ.    ದ್ರಾಕ್ಷಿಯನ್ನ ಕೊಳೆ ಹಾಕಿ ಇದಕ್ಕೆ ಸಕ್ಕರೆ ಯಿಸ್ಟ್ ಸೇರಿಸಿ ರಸ ತೆಗೆದು ವೈನ್ ತಯಾರಿಸುತ್ತಾರೆ ಇದರಲ್ಲಿ ನೂರಾರು ಮಾದರಿ ಇದೆ. ಇದೇ ರೀತಿ ಶಾಂಪೇನ್ ಕೂಡ (Sparkling wine) ಆದರೆ ಇದರಲ್ಲೂ ಅನೇಕ ತಕ೯ ಇದೆ "ಶಾಂಪೇನ್ sparkling wine ಒಂದೇ ಆದರೆ ಎಲ್ಲಾ sparkling wine ಶಾಂಪೇ...

ಚೀನಿ ಕಾಯಿ ಎಂಬ ಹೆಸರು ಸಿಹಿ ಕುಂಬಳಕ್ಕೆ ಚೀನಾದಿಂದ ಬಂತಾ? (ಚೀನ ವಿಶ್ವದಲ್ಲೇ ಅತ್ಯದಿಕ ಚೀನಿ ಕಾಯಿ ಬೆಳೆಯುವ ದೇಶ) ಅಥವ ಹಿಂದಿಯ ಸಕ್ಕರೆ (ಚೀನಿ ) ಅಂತಾನೋ ?

#ಚೀನಿಕಾಯಿ_ಹಾಲು_ಬೆಲ್ಲ_ನನ್ನ_ಪೆವರಿಟ್      ಇದು ಅತಿ ಚಿಕ್ಕ ಚೀನಿ ಕಾಯಿ ತಳಿ,ಇದರಲ್ಲಿ ಗರಿಷ್ಟ ಒಂದು ಟನ್ ವರೆಗೆ ಬೆಳೆಯು ತಳಿಯೂ ಇದೆ ಅಂತೆ ಪತ್ರಿಕೆಗಳಲ್ಲಿ ಓದಿದ್ದು.     ಆಪತ್ಪಾಂದವ ಮಿತ್ರ ಗೇರುಬೀಸು ಚೆನ್ನಪ್ಪ ಬೆಳೆದಿದ್ದು ತಂದು ಕೊಟ್ಟಿದ್ದಾನೆ, ಇದು ಬೇಯಿಸಿ ಹಾಲು ಬೆಲ್ಲದೊಂದಿದೆ ತಿನ್ನುವುದು ನನಗೆ ಇಷ್ಟ ಪುನಃ ತಂದು ಕೊಡಲು ಹೇಳಿದ್ದೇನೆ.   ಚೆನ್ನಪ್ಪ ಇದನ್ನು ಖರೀದಿಸುವವರು ಕಡಿಮೆ ಅಂದ, ಯಾಕೆಂದರೆ ಇದು ವಾತಾ ವಾಯು ಇತ್ಯಾದಿ ಕಾರಣದಿಂದ ಬಳಸುವವರು ಇದರಿಂದ ದೂರ.   ಭಾರತೀಯರು ಇದರಿಂದ ಕಡಬು, ಹಲ್ವಾ ಇತ್ಯಾದಿ ಸಿಹಿ ತಿಂಡಿ ಮಾಡುತ್ತಾರೆ ಇದರ ಹೂವು ಮೊಗ್ಗುಗಳಿಂದಲೂ ಇತರೆ ಪದಾಥ೯ ಜ್ಯೂಸ್ ಮಾಡುತ್ತಾರೆ ಆದರೆ ವಿದೇಶದಲ್ಲಿ ಇದು ಹೆಚ್ಚು ಬಳಕೆ ಪೈ ಎಂಬ ಸಿಹಿ ಕಡುಬಿಗೆ.  ಈಗಲೂ ವಿಶ್ವದಲ್ಲಿ ಅತಿ ಹೆಚ್ಚು ಸಿಹಿ ಚೀನಿ ಕಾಯಿ ಬೆಳೆಯುವುದು ಚೀನಾ ದೇಶದಲ್ಲಿ ನಂತರದ ಸ್ಥಾನ ಭಾರತಕ್ಕೆ ಹಾಗಾಗಿ ಇದಕ್ಕೆ "ಚೀನಿ" ಕಾಯಿ ಅಂತ ಹೆಸರಾಗಿರ ಬಹುದಾ?  ಇದರ ಮೂಲ ಉತ್ತರ ಅಮೆರಿಕಾ ಮತ್ತು ಇದರ ಕಾಲಾಮಾ ನ ಕ್ರಿಸ್ತ ಪೂವ೯ 5000 ವರ್ಷ ಅಂದರೆ ಅತ್ಯಂತ ಪುರಾತನ ಸಿಹಿ ಕುಂಬಳ.   ಇದು ವಿಟಮಿನ್ ಮತ್ತು ಮಿನರಲ್ ಗಳನ್ನು ಯಥೇಚ್ಚ ಇರುವ, ಆಂಟಿ ಆಕ್ಸಿಡೆಂಟ್, ಅಸ್ತಮ ಮತ್ತು ಕ್ಯಾನ್ಸರ್ ನಿವಾರಕ, ಬಿಪಿ ಮತ್ತು ಶುಗರ್ ಕಾಯಿಲ...

ಬಿಳಿ ಬಣ್ಣದ ವ್ಯಾಮೋಹ ನಮ್ಮ ಆಹಾರದಲ್ಲಿನ ಪೌಷ್ಠಿಕಾಂಶ ಕೊರತೆಗೆ ಕಾರಣ ಆಗಿದೆ.

#ಕಪ್ಪು_ಉದ್ದಿನಕಾಳು_ಬಳಕೆ_ಕಡಿಮೆ_ಏಕೆ?     ದೋಸೆ,ಇಡ್ಲಿ, ವಡೆ ಮತ್ತು ಹಪ್ಪಳಕ್ಕೆ ಉದ್ದಿನಕಾಳು ಬೇಕೇ ಬೇಕು ಮೊದಲೆಲ್ಲ ಗ್ರಾಮೀಣ ಪ್ರದೇಶದಲ್ಲಿ ರೈತ ಕುಟುಂಬಗಳು ಭೂಮಿ ಫಲವತ್ತೆಗಾಗಿ ಉದ್ದು ಬಿತ್ತುತ್ತಿದ್ದರು ಅದನ್ನೇ ಬಳಸುತ್ತಿದ್ದರು ಆದರೆ ಈಗ ಭೂಮಿ ಫಲವತ್ತತೆಗೆ ಕೆಮಿಕಲ್ ಪಟಿ೯ಲೈಸರ್ ಇರುವುದರಿಂದ ಪುರಾತನವಾದ ಸಾಂಪ್ರದಾಯಿಕ ಸಾವಯವ ಮಾದರಿ ಯಾರಿಗೂ ಬೇಕಾಗಿಲ್ಲ.     ಅದೇ ರೀತಿ ಕಪ್ಪು ಉದ್ದಿನ ಕಾಳು ಬಳಸಿ ಮಾಡಿದ ಇಡ್ಲಿ ದೋಸೆಗಿಂತ ಪಾಲೀಶ್ ಆದ ಉದ್ದಿನಬೇಳೆಯಲ್ಲಿ ಮಾಡಿದ್ದು ಅಚ್ಚ ಬಿಳಿ ಆಗುವುದರಿಂದ ಕ್ರಮೇಣ ಕಪ್ಪು ಉದ್ದಿನಕಾಳು ಬಳಕೆ ಕಡಿಮೆ ಆಗಿದೆ.    ಹೈ ಪ್ರೋಟೀನ್ ವಾಲ್ಯೂ ಇರುವ , ಕೊಲೆಸ್ಟ್ರಾಲ್ ಕಡಿಮೆ ಮಾಡುವ, ಪ್ರೋಟೀನ್ ಯುಕ್ತ, ಕಾಬೊ೯ಹೈಡ್ರೇಡ್ ಹೆಚ್ಚಿರುವ ಏಷ್ಯಾ ಮೂಲದ ಉದ್ದಿನ ಕಾಳು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಳಕೆ ಆಗುತ್ತದೆ.   ತಮಿಳುನಾಡು, ಕೋಸ್ಟಲ್ ಆಂಧ್ರದಲ್ಲಿ ಇದನ್ನು ಮಳೆಗಾಲದ ಮತ್ತು ಬೇಸಿಗೆಯ ಬೆಳೆಯಾಗಿ ಬೆಳೆಯುತ್ತಾರೆ ಈಗಲೂ ದೇಶದಲ್ಲಿ ಅತಿ ಹೆಚ್ಚು ಉದ್ದು ಬೆಳೆಯುವ ಜಿಲ್ಲೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆ (ಗುಂಟೂರು ಮೆಣಸು ಕೂಡ ಪ್ರಸಿದ್ಧಿ).    ಡಯಾಬಿಟೀಸ್ ಇರುವವರು ಉದ್ದು ಹೆಚ್ಚು ಬಳಸಬಹುದೆಂದು ಆಯುವೇ೯ದದಲ್ಲಿ ಹೇಳುತ್ತಾರೆ.   ಕಪ್ಪು ಉದ್ದು ಬೇಳೆ ಮಾಡಿ ಪಾಲೀಶ್ ಮಾಡಿದ ಉದ್...

ಆನಂದಪುರದ ಚಿರಪರಿಚಿತ ಪೇಪರ್ ಕೇಶವ ಭಟ್ಟರ ತಪ್ಪದ ನಿತ್ಯ ಕಾಯಕ

#ಆನಂದಪುರದ_ಪೇಪರ್_ಕೇಶವ_ಭಟ್ಟರು      1981ರಲ್ಲಿ ಆನಂದಪುರದಿಂದ ಸಾಗರಕ್ಕೆ ಸಂಜಯ್ ಮೆಮೋರಿಯಲ್ ಡಿಪ್ಲೋಮ ಕಾಲೇಜಿಗೆ ಪ್ರತಿ ದಿನ ಬೆಳಿಗ್ಗೆ 5.45ಕ್ಕೆ ಶಿವಮೊಗ್ಗದಿಂದ ಬರುತ್ತಿದ್ದ ಕುಮುಟಾಕ್ಕೆ ಹೋಗುವ ಗಜಾನನ ಬಸ್ಸಿನಲ್ಲಿ (ನಾರಾಯಣಪ್ಪ ಎಂಬ ಸೂಪರ್ ಪಾಸ್ಟ್ ಡ್ರೈವರ್ ) ಹೋಗುತ್ತಿದ್ದೆ ಆಗ ಇನ್ನೂ ಶಾಲೆಗೆ ಸೇರದ ಪುಟ್ಟ ಬಾಲಕ ನಿದ್ದೆ ಕಣ್ಣಿನಲ್ಲೇ ಆನಂದಪುರ ಬಸ್ ಸ್ಟಾಂಡ್ ನಲ್ಲಿ ಪೇಪರ್ ಪೇಪರ್ ಅಂತ ಕೂಗುತ್ತಾ ನಿತ್ಯ ಪತ್ರಿಕೆ ಮಾರುವುದು ನೋಡಿ ಕರಳು ಹಿಚುಕಿದಂತೆ ಸಂಕಟ ಆಗುತ್ತಿತ್ತು.        ಆಗಿನಿಂದ ಅಂದರೆ ಸುಮಾರು 40 ವರ್ಷದ ಮೇಲೂ ಕೇಶವ ಭಟ್ಟರು ಇವತ್ತೂ ಆನಂದಪುರರನಲ್ಲಿ ಮನೆ ಮನೆಗೆ ಸೂಯೋ೯ದಯದ ಮುಂಚೆ ತಪ್ಪದೇ ಪತ್ರಿಕೆ ತಲುಪಿಸುವ ಪೇಪರ್ ಏಜೆಂಟ್ ಮತ್ತು #ವಿಜಯವಾಣಿ ಪತ್ರಿಕೆಯ ಆನಂದಪುರದ ಪತ್ರಿಕಾ ವರದಿಗಾರ ಕೂಡ ಹೌದು.      ತಂದೆ ಸಣ್ಣ ವಯಸ್ಸಲ್ಲೇ ತೀರಿ ಹೋಗಿದ್ದು,ತಾಯಿಗೆ ಸಿಗಬೇಕಾದ ಆಸ್ತಿ ಸಿಗದೇ ಹೋದದ್ದು, ಯಾವ ಜಾತಿ ಆದರೇನು ಬಡತನ ಬಂದರೆ ಎಲ್ಲರೂ ದೂರ ಮಾಡುವಂತೆ ಇವರನ್ನೂ ಎಲ್ಲರೂ ದೂರ ಮಾಡಿದರು,ಇವರ ಹವ್ಯಕ ಜಾತಿ ಬಾಂದವರ್ಯಾರು ಈ ಕುಟುಂಬಕ್ಕೆ ಸಹಾಯ ಮಾಡಲಿಲ್ಲ.   ಕೇಶವ ಬೆಳಿಗ್ಗೆ ಪೇಪರ್ ಹಾಕುವುದು, ಬಸ್ಸುಗಳಲ್ಲಿ ಪೇಪರ್, ಸೋಡಾ,ಬಾಳೆಹಣ್ಣು, ಕಡಲೆಕಾಯಿ ಮಾರುತ್ತಾ ಶಾಲೆಗೆ ಹೋಗಿ ವಿದ್ಯಾಬ್ಯಾಸವೂ ...