Skip to main content

Blog number 2326. ಅಡಿಕೆ ಬೆಳೆಗಾರರು ಗುಟ್ಕಾ ಬೆಂಬಲಿಸಬೇಕಾ?

#ಅಡಿಕೆ_ವಿಶೇಷ

#ಅಡಿಕೆ_ಬೆಳೆಗಾರರ_ಸಮಾವೇಶ

ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-6


 ನಮ್ಮ ದೇಶದಲ್ಲಿ ಬಹುತೇಕ ಎಲ್ಲಾ ರಾಜ್ಯಗಳು ಗುಟ್ಕಾ ರದ್ದು ಮಾಡಿದೆ ಅದರ ವಿರುದ್ದ ಆಯಾ ರಾಜ್ಯದ ಉಚ್ಚ ನ್ಯಾಯಾಲಯಗಳಲ್ಲಿ ಸಲ್ಲಿಸಿದ ಮೇಲ್ಮನವಿಗಳನ್ನ ಉಚ್ಚ ನ್ಯಾಯಾಲಯಗಳು ತಿರಸ್ಕರಿಸಿ ಗುಟ್ಕಾ ರದ್ದು ಆದೇಶ ಎತ್ತಿ ಹಿಡಿದಿದೆ.

ಹಾಗಂತ ಗುಟ್ಕಾ ಸಂಪೂರ್ಣ ರದ್ದಾಗಿದೆಯಾ? ಖಂಡಿತಾ ಇಲ್ಲ ಗುಟ್ಕಾ ಕಂಪನಿಗಳು ಹೊಸ ಉಪಾಯ ಕಂಡುಕೊಂಡಿದೆ ಅದೇನೆಂದರೆ ಎರೆಡು ಪ್ರತ್ಯೇಕ ಪೊಟ್ಟಣ ನೀಡುತ್ತದೆ ಒಂದರಲ್ಲಿ ತಂಬಾಕು ರಹಿತ ಬೇರೆ ಎಲ್ಲಾ ಮಸಾಲೆ ಮಿಶ್ರ ಮಾಡಿದ ಅಡಿಕೆ ಪೊಟ್ಟಣ ಇನ್ನೊಂದು ಸಣ್ಣ ಪೊಟ್ಟಣದಲ್ಲಿ ತಂಬಾಕು ಜರ್ದಾ.

ಈ ರೀತಿ ಗುಟ್ಕಾ ನಿಷೇಧ ಆಯಾ ಗುಟ್ಕಾ ತಯಾರಿಕಾ ಕಂಪನಿಗೆ ಏನೂ ಮಾಡಲಾಗಿಲ್ಲ.

ಗುಟ್ಕಾ ಜಾಹಿರಾತು ನಿಷೇದ ಮಾಡಿದ್ದರಿಂದ ಆಯಾ ಗುಟ್ಕಾ ಕಂಪನಿಗಳು ತಮ್ಮದೇ ಬ್ರಾಂಡಿನ ಪಾನ್ ಮಸಾಲ ಜಾಹಿರಾತು ನೀಡುತ್ತಿದೆ.

  ಈ ಗುಟ್ಕಾ ಕಂಪನಿಗಳೇ ಅಡಿಕೆಯ ಬಹುದೊಡ್ಡ ಖರೀದಿದಾರ ಎಂಬ ಪ್ರಚಾರವಿದೆ ಆದ್ದರಿಂದಲೇ ಅಡಿಕೆ ವ್ಯಾಪಾರಸ್ಥರು ಇದನ್ನೇ ಅಡಿಕೆ ಬೆಳೆಗಾರರ ಮನಸ್ಸಿನಲ್ಲಿ ತುಂಬಿದ್ದಾರೆ.

  ಅನೇಕ ಸಂದರ್ಭಗಳಲ್ಲಿ ಅಡಿಕೆ ಬೆಳೆಗಾರರ ಸಮಾವೇಶಗಳು ಗುಟ್ಕಾ ಮಾರಾಟ ಕಂಪನಿಗಳ ಪ್ರಾಯೋಜಕತ್ವ ಪಡೆಯುತ್ತಿದೆ.

   ಗುಟ್ಕಾ ತುಂಬಾಕು ಮಿಶ್ರಣದಿಂದ ಕ್ಯಾನ್ಸರ್ ಬರುತ್ತದೋ? ಅಡಿಕೆಯಿಂದ ಕ್ಯಾನ್ಸರ್ ಬರುತ್ತದೋ? ಎನ್ನುವ ಪ್ರಶ್ನೆಗೆ ಗುಟ್ಕಾ ತಂಬಾಕು ಎಂದು ಹೇಳದಂತ  ವ್ಯವಸ್ಥೆ ಮಾಡಲಾಗಿದೆ.

 ಅಡಿಕೆ ಬೆಳೆಗಾರರ ಬಗ್ಗೆ ಅಷ್ಟೆಲ್ಲ ಕಾಳಜಿ ಹೊಂದಿರುವ ಗುಟ್ಕಾ ಕಂಪನಿಗಳು ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬ ಸಂಶೋದನೆಗೆ ಯಾಕೆ ಹಣ ನೀಡಬಾರದು?.

   ಮುಂದಿನ ದಿನಗಳಲ್ಲಿ ಅಡಿಕೆ ಬಳಸದೇ ತಯಾರಾಗುವ ಗುಟ್ಕಾ ಹೊರಬರಲಿದೆ ಎಂಬ ವದಂತಿ ಇದೆ ಗುಟ್ಕಾದಲ್ಲಿ ಬಳಸುವ ತಂಬಾಕು ಜರ್ದಾನೇ ಅವರಿಗೆ ಮುಖ್ಯ.

#ಗುಟ್ಕಾ_ನಿಷೇದ

ನಮ್ಮ ದೇಶದಲ್ಲಿ ಗುಟ್ಕಾ ಸಂಪೂರ್ಣ ನಿಶೇದ ಮಾಡಿದ ರಾಜ್ಯಗಳು ಮತ್ತು ಆದೇಶದ ದಿನಾಂಕದ ಮಾಹಿತಿ

ಅಂಡಮಾನ್ ಮತ್ತು ನಿಕೋಬಾರ್ 1 ನವೆಂಬರ್ 2012 .

ಆಂಧ್ರಪ್ರದೇಶ 9 ಜನವರಿ 2013 .

ಅರುಣಾಚಲ ಪ್ರದೇಶ 
ಅಸ್ಸಾಂ 
ಬಿಹಾರ 30 ಮೇ 2012.
 ಈ ಕಾನೂನನ್ನು ಪಾಟ್ನಾ ಹೈಕೋರ್ಟ್ ಎತ್ತಿ ಹಿಡಿದಿತ್ತು . 

ಚಂಡೀಗಢ 
ಛತ್ತೀಸ್‌ಗಢ 24 ಜುಲೈ 2012 .

ದೆಹಲಿ 11 ಸೆಪ್ಟೆಂಬರ್ 2012. ಅಕ್ಟೋಬರ್ 2012 ರಂದು, ನಗರ ಮೂಲದ ಗುಟ್ಕಾ ತಯಾರಕರ ಮನವಿಗೆ ಪ್ರತಿಕ್ರಿಯೆಯಾಗಿ ದೆಹಲಿ ಹೈಕೋರ್ಟ್ ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿತು.

ಗೋವಾ 2 ಅಕ್ಟೋಬರ್ 2005.

ಗುಜರಾತ್ 11 ಸೆಪ್ಟೆಂಬರ್ 2012. 100% ರಫ್ತು ಆಧಾರಿತ ಘಟಕಗಳು ನಿಷೇಧದಿಂದ ವಿನಾಯಿತಿ ಪಡೆದಿವೆ. 

ಹಿಮಾಚಲ ಪ್ರದೇಶ 13 ಜುಲೈ 2012 .

ಹರಿಯಾಣ 15 ಆಗಸ್ಟ್ 2012 

ಜಾರ್ಖಂಡ್ 24 ಜುಲೈ 2012 .

ಕೇರಳ 25 ಮೇ 2012.
 ಆಗಸ್ಟ್ 2012 ರಂದು, ಕೇರಳ ಹೈಕೋರ್ಟ್ ನಿಷೇಧವನ್ನು ತಡೆಯಲು ನಿರಾಕರಿಸಿತು. 

ಕರ್ನಾಟಕ 31 ಮೇ 2013.

ಮಧ್ಯಪ್ರದೇಶ 1 ಏಪ್ರಿಲ್ 2012 
ಈ ಕಾನೂನನ್ನು ಮಧ್ಯಪ್ರದೇಶ ಹೈಕೋರ್ಟ್ ಎತ್ತಿ ಹಿಡಿದಿತ್ತು . 

ಮಹಾರಾಷ್ಟ್ರ 20 ಜುಲೈ 2012. 
 ಈ ಹಿಂದೆ 1 ಆಗಸ್ಟ್ 2002 ರಂದು ಮತ್ತು 2008 ರಲ್ಲಿ ಗುಟ್ಕಾ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ಅನ್ಯಾಯದ ವ್ಯಾಪಾರ ಅಭ್ಯಾಸದ ಆಧಾರದ ಮೇಲೆ ರದ್ದುಗೊಳಿಸಿತು.
 ತೀರಾ ಇತ್ತೀಚಿನ ನಿಷೇಧವನ್ನು ಬಾಂಬೆ ಹೈಕೋರ್ಟ್ 15 ಸೆಪ್ಟೆಂಬರ್ 2012 ರಂದು ಎತ್ತಿಹಿಡಿದಿದೆ.

ಮಣಿಪುರ 
ಮಿಜೋರಾಂ 18 ಅಕ್ಟೋಬರ್.

ನಾಗಾಲ್ಯಾಂಡ್ 
ಒಡಿಶಾ 1 ಜನವರಿ 2013 .

ಪಂಜಾಬ್ 26 ಆಗಸ್ಟ್ 2012.

ರಾಜಸ್ಥಾನ 18 ಜುಲೈ 2012 .

ಸಿಕ್ಕಿಂ 17 ಸೆಪ್ಟೆಂಬರ್ 2012

ತಮಿಳುನಾಡು 8 ಮೇ 2013.

ಉತ್ತರ ಪ್ರದೇಶ 1 ಏಪ್ರಿಲ್ 2013.

ಉತ್ತರಾಖಂಡ 1 ಜನವರಿ 2013.

ಪಶ್ಚಿಮ ಬಂಗಾಳ 1 ಮೇ 2013.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...